29 ಫೆಬ್ರವರಿ 2008

ದುನಿಯಾ ವಿಜಯ್ ಸುಬ್ರಹ್ಮಣ್ಯದಲ್ಲಿ....



ಚಿತ್ರ ನಟ ದುನಿಯಾ ವಿಜಯ್ ಕುಕ್ಕೆ ಸುಬ್ರಹ್ಮಣ್ಯದಲ್ಲಿ....

ಹೌದು.. ಅವರು ಸುಬ್ರಹ್ಮಣ್ಯ ದೇವರಲ್ಲಿ ತನ್ನ ಅಭಿವೃದ್ಧಿಯನ್ನು ಪ್ರಾರ್ಥಿಸಿಕೊಂಡು ಸಮಾಜದ ಬಗ್ಗೆಯೂ ಸ್ವಲ್ಪ ನೋಡಿದರು... ಸಾಮಾಜಿಕ ಸಂಘಟನೆಯಲ್ಲೂ ಕಾಣಿಸಿಕೊಂಡರು.... ಅಶಕ್ತರಿಗೆ ದೇಣಿಗೆಯನ್ನೂ ನೀಡಿದರು.ಅದುವೇ ವಿಜಯ್ ಅವರ ಸ್ಪೆಷಲ್.

ಶುಕ್ರವಾರದಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ವಿಜಯ್ ಅವರು ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಜೇಸೀಐಗೆ ಭೇಟಿ ನೀಡಿ ಜೇಸೀ ವತಿಯಿಂದ ತಯಾರಿಸಿರುವ ಸುಬ್ರಹ್ಮಣ್ಯ ಕ್ಷೇತ್ರ ಮಾಹಿತಿ ಹಾಗೂ ರಸ್ತೆ ಮಾಹಿತಿ ಕೈಪಿಡಿಯನ್ನು ಬಿಡುಗಡೆಗೊಳಿಸಿದರು.ಇದೇ ವೇಳೆ ಜೇಸೀರೆಟ್ ವತಿಯಿಂದ ಪ್ರಕಟವಾಗುವ ಮಾಸಿಕ ಪತ್ರಿಕೆ "ಸ್ವಪ್ನ ಸಾಕಾರ"ವನ್ನು ಕೂಡಾ ಬಿಡುಗಡೆಗೊಳಿಸಿದ ವಿಜಯ್ ನಂತರ ಸುಬ್ರಹ್ಮಣ್ಯ ಜೇಸೀ ಮೂಲಕ ಅಂಗವಿಕಲರೊಬ್ಬರಿಗೆ 10 ಸಾವಿರದ ಚೆಕ್ ನೀಡಿದರು. ಬಳಿಕ ಮಾತನಾಡಿದ ಅವರು ಸಮಾಜ ಸೇವೆ ನನಗಿಷ್ಟ ,ಬಡವರ ಕಣ್ಣೀರನ್ನು ಒರೆಸುವ ಪ್ರಯತ್ನ ಮಾಡುವೆ ಎಂದರು. ಈ ಸಂದರ್ಭದಲ್ಲಿ ಜೇಸೀ ಅಧ್ಯಕ್ಷ ಚಂದ್ರಶೇಖರ ನಾಯರ್, ಜೇಸೀರೆಟ್ ಅಧ್ಯಕ್ಷೆ ಸ್ವಪ್ನಾ ವೆಂಕಟೇಶ್ , ಜೇಸೀ ಕಾರ್ಯದರ್ಶಿ ,ತರಬೇತುದಾರರಾದ ವಿಮಲಾ ರಂಗಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

ಈ ಸುದ್ದಿ ನನಗೆ ವಿಶೇಷ ಎನಿಸಿದ್ದು ಯಾಕೆಂದರೆ ಚಲನಚಿತ್ರ ನಟನೊಬ್ಬ ಸುಬ್ರಹ್ಮಣ್ಯ ದೇವರ ದರ್ಶನದ ಜೊತೆಗೆ ಸಮಾಜ ಬಗ್ಗೆಯೂ ಚಿಂತಿಸುತ್ತಾನಲ್ಲಾ , ಅಶಕ್ತರಿಗೆ ಸಹಾಯ ಹಸ್ತ ಚಾಚುತ್ತಾರಲ್ಲ ಅದು ಅಭಿನಂದನಾರ್ಹ.ಇಂದು ಇಂತಹ ಚಿತ್ರ ನಟರ ಅವಶ್ಯಕತೆಯಿದೆ. ಅಂತಹವರಿಗೆ ಜೇಸೀಯಂತಹ ಸಂಘಟನೆಗಳು ದಾರಿ ದೀಪವಾಗಲಿ.

ಕಾಮೆಂಟ್‌ಗಳಿಲ್ಲ: