24 ಫೆಬ್ರವರಿ 2008

"ಬೆಲೆ" ಬಾಳುವ ಸುಬ್ರಹ್ಮಣ್ಯದ "ಅಭಯ ಗಣಪ"

ಮೊದಲಿನ ಗಣಪ....



ಈಗಿನ ಗಣಪ....



ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ದೇಶದ ಅತೀ ಎತ್ತರ ಹಾಗೂ ವಿಶಿಷ್ಠ ಶೈಲಿಯ ಕುಕ್ಕೆ ಶ್ರೀ ಅಭಯ ಗಣಪತಿ ವಿಗ್ರಹಕ್ಕೆ ಭಾನುವಾರದಂದು ಬೆಳ್ಳಿ ಕವಚ ತೊಡಿಸಲಾಯಿತು.ಇದನ್ನು ಬೆಂಗಳೂರಿನ ದಾನಿಯೊಬ್ಬರು ಕೊಡ ಮಾಡಿದ್ದರು.ಇದರ ಒಟ್ಟು ಬೆಲೆ ಸುಮಾರು 88ಲಕ್ಷ.ಆದರೆ ಒಂದು ವಿಶ್ಯ ಗೊತ್ತಾ?.ಕುಕ್ಕೆ ಸುಬ್ರಹ್ಮಣ್ಯದ ಬಹುತೇಕ ಮಂದಿಗೆ ಈ ವಿಶ್ಯವೇ ಗೊತ್ತಿರಲಿಲ್ಲ.ಕಾರಣ ಯಾರೊಬ್ಬರಿಗೂ ಮಾಹಿತಿ ನೀಡಿರಲಿಲ್ಲ.ತಮ್ಮೂರಿನ ದೇವಸ್ಥಾನಕ್ಕೆ ಭಕ್ತರೊಬ್ಬರು ದಾನ ನೀಡುತ್ತಾರೆಂದರೆ ಜನರಿಗೆ ಸಂಭ್ರಮವಲ್ಲವೇ? ಆದರೂ ಏಕೆ ಹೇಳಿಲ್ಲ ಎಂಬುದೇ ಪ್ರಶ್ನೆಯಾಗಿ ಉಳಿದಿದೆ.

ಈ ಅಭಯ ಗಣಪನ ಗುಡಿಯು ಕುಕ್ಕೆ ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದ ಆಡಳಿತಕ್ಕೊಳಪಟ್ಟಿದೆ.ಶ್ರೀ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಗುಡಿಯ ಅಭಿವೃದ್ಧಿಗೆ ಮಾರ್ಗದರ್ಶನ ನೀಡುತ್ತಾರೆ.ಗಣಪನ ಗುಡಿಯು ದಕ್ಷಿಣ ಭಾರತಲ್ಲಿ ಅತ್ಯಂತ ವಿಶಿಷ್ಥವಾಗಿದೆ. ನೇಪಾಳ ಶೈಲಿಯನ್ನು ಹೊಂದಿದ ಈ ಗುಡಿಯು ಸುಬ್ರಹ್ಮಣ್ಯದ ಕ್ಷೇತ್ರದ ಸನಿಹದಲ್ಲೇ ಇದೆ. ಗುಡಿಯನ್ನು ನಿರ್ಮಿಸಿ 3 ವರ್ಷಗಳು ಸಂದಿವೆ.

ಪ್ರಕೃತ ಬೆಂಗಳೂರಿನ ಉದ್ಯಮಿ ಜಯರಾಮ ರೆಡ್ಡಿಯವರು ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳ ಸಮ್ಮುಖದಲ್ಲಿ 140 ಕೆ.ಜಿಯ ಸುಮಾರು 88 ಲಕ್ಷ ಬೆಲೆ ಬಾಳುವ ರಜತ ಕವಚವನ್ನು ದಾನವಾಗಿ ಭಾನುವಾರ ನೀಡಿದರು.

ಈ ರಜತ ಕವಚದಲ್ಲಿ ಗಣಪನ ತಲೆ ಕಿರೀಟ ಭಾಗಗಳನ್ನೊಳಗೊಂಡು 28 ಕೆ.ಜಿ ಯಿದ್ದು ಗಣಪನೊ ವಿಗ್ರಹದ ವಿವಿಧ ಭಂಗಿಯಾನುಸಾರ ಒಟ್ಟು 12 ಕವಚಗಳಿವೆ. ಅವುಗಳನ್ನು ಜೋಡಿಸಲಾಗಿದೆ.

ಇದು ಊರಿನ ಜನರಿಗೆ ಸಂಭ್ರಮದ ಕ್ಷಣವಾಗಬೇಕಾಗಿತ್ತು. ಆದರೆ ವಿಷಯವನ್ನು ಪ್ರಚಾರಪಡಿಸದೆ ಸಾಕಷ್ಟು ಜನರಿಗೆ ಗೊತ್ತೇ ಇರಲಿಲ್ಲ. ಒಂದು ವೇಳೆ ದಾನಿಗಳಿಗೆ ಪ್ರಚಾರದ ಹುಚ್ಚು ಇಲ್ಲ ಎಂದಾಗಿದ್ದರೆ ಕೆಲವು ಪ್ರಸಾರವಿರುವ ಪತ್ರಿಕೆಗಳಿಗೆ ಮಾತ್ರಾ ಕಾರ್ಯಕ್ರಮದ ಬಳಿಕ ಫೋಟೊವನ್ನು ನೀಡುವ ಅಗತ್ಯವಿರಲಿಲ್ಲ. ಪ್ರಚಾರದ ಅವಶ್ಯಕತೆಯಿದೆ ಎಂಬುದಂತೂ ಗ್ಯಾರಂಟಿ. ಆದರೆ ಊರಿನ ಮಂದಿಗೆ ಮಾತ್ರಾ ಹೇಳುವ ಕೆಲಸವನ್ನು ಮಾಡದಿರುವುದು ಸರಿಯಲ್ಲ.ದೇವರಿಗೆ ಊರಿನ ಜನ ಹಾಗೂ ಪರಊರಿನ ಜನ ಎಂಬ ಬೇದವಿಲ್ಲ ನಿಜ.ಆದರೆ ಅಷ್ಟೂ ಮೊತ್ತದ ವಸ್ತುವನ್ನು ನಾಳೆ ಕಾಯಬೇಕಾಗಿರುವುದು "ಭಗವಂತನಲ್ಲ" , ಉದ್ಯಮಿಗಳಂತೂ ಅಲ್ಲ. ಅದಕ್ಕೆ ಬೇಕಾಗಿರುವುದು ಊರಿನ "ಜನ".

ಒಟ್ಟಿನಲ್ಲಿ ಅಭಯ ಗಣಪನಿಗೆ ಬೆಳ್ಳಿಯ ಕವಚ ಅತ್ಯಂತ ಚೆನ್ನಾಗಿ ಕಾಣಿಸುತ್ತದೆ..........

ಉದ್ಯಮದಿಂದ " ಹರಿದು" ಬರುವ ಹಣ ಹೀಗಾದರೂ ಮುಗಿಯಲಿ...... ಭಗವಂತನ ಚಿಂತೆ ನಿತ್ಯವಿರಲಿ ಎಂದು ದಾನಿಗಲಿಗೆ ಹಾರೈಸೋಣವಲ್ಲಾ......

ಕಾಮೆಂಟ್‌ಗಳಿಲ್ಲ: