11 ಫೆಬ್ರವರಿ 2008

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ....



ಈಶ್ವರಪ್ಪ ಕುಟುಂಬ..



ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸೋಮವಾರದಂದು ಕುಟುಂಬ ಸಮೇತರಾಗಿ ಭೇಟಿ ನೀಡಿದರು.ಇದೇ ವೇಳೆ ಅವರು ದೇವಳದಲ್ಲಿ ಆಶ್ಲೇಷ ಬಲಿ ಸೇವೆ ಹಾಗೂ ತಮ್ಮ ಮೊಮ್ಮಗನಿಗೆ ನಾಣ್ಯದ ತುಲಾಭಾರ ನೆರವೇರಿಸಿದರು.

ಈ ಸಂದರ್ಭದಲ್ಲಿ ನಾನು ಈಶ್ವರಪ್ಪನವರಲ್ಲಿ ಮಾತನಾಡಿದೆ.ವಿವಾದಗಳು ,ಭಿನ್ನಮತಗಳ ಬಗ್ಗೆ ಮಾತನಾಡಲಿಲ್ಲ ಅಷ್ಟು ಸಮಯ ಇದ್ದಿರಲಿಲ್ಲ ನನಗೂ ತುರ್ತು.. ಅವರಿಗೂ ಹಾಗೆ..,ಅವರಲ್ಲಿ ಕೇಳಿದ್ದು ಇಂದಿನ ರಾಜಕೀಯ ಪರಿಸ್ಥಿತಿಯ ಬಗ್ಗೆ.ಅವರ ತುರ್ತಿನ ನಡುವೆ ಕೇವಲ ಒಂದೆರಡು ನಿಮಿಷಗಳ ಕಾಲ ಮಾತ್ರಾ ಮಾತಿಗೆ ಸಿಕ್ಕರು.ಅದರ ಸಾರಾಂಶ ಇಷ್ಟು...

* ಚುನಾವಣೆಗೆ ಮುನ್ನ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಆಗ್ರಹ

* ಮರುವಿಂಗಡಣೆಯಾದರೆ ಪರಿಶಿಷ್ಠ ಜಾತಿ ಹಾಗೂ ಪಂಗಡದವರಿಗೂ ಪ್ರಾತಿನಿಧ್ಯ ದೊರೆಯುತ್ತದೆ

*ಕೇಂದ್ರ ಸಚಿವ ಸಂಪುಟದಲ್ಲಿ ಈ ವಿಚಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳದೆ ವಿಳಂಬ ಏಕೆ?

* ಕ್ಷೇತ್ರ ಮರುವಿಂಗಡಣೆ ವಿಳಂಬಕ್ಕೆ ಕಾಂಗ್ರೇಸ್ ಕಾರಣ

*ಚುನಾವಣೆ ಮುಂದೂಡಿಕೆಗೆ ಕಾಂಗ್ರೇಸ್ ಈ ತಂತ್ರ ಅನುಸರಿಸುತ್ತಿದೆ

* ಚುನಾವಣೆ ವಿಳಂಬದಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಟಿತ

* ಹಾಗಾಗಿ ಕೇಂದ್ರವು ತಕ್ಷಣವೇ ಕ್ಷೇತ್ರ ಮರುವಿಂಗಡಣೆಗೆ ಕ್ರಮ, ಸಚಿವ ಸಂಪುಟದಲ್ಲಿ ತೀರ್ಮಾನ ಮತ್ತು ನಿರ್ಣಯ ತೆಗೆದುಕೊಳ್ಳಲು ಒತ್ತಾಯ

* ಒಟ್ಟಿನಲ್ಲಿ ಚುನಾವಣೆ ವಿಳಂಬ ಸಲ್ಲದು

ಕೊನೆಯ ಮಾತು : ಸುಬ್ರಹ್ಮಣ್ಯದಲ್ಲಿ ಕೆ.ಎಸ್.ಈಶ್ವರಪ್ಪನವರು ದೇವಳದ ಒಳಾಂಗಣಕ್ಕೆ ಹೋಗಿ ಸಂಕಲ್ಪ ಮಾಡಿಸಿ
ಸಂಪುಟ ನರಸಿಂಹ ಸ್ವಾಮಿ ಮಠಕ್ಕೂ ಭೇಟಿ ನೀಡಿದ ಬಳಿಕ ಹೊರಬಂದು ಅಲ್ಲಿ ಸುಮ್ಮನೆ ನಿಂತಿದ್ದರು.ಒಬ್ಬ ಯಾತ್ರಾರ್ಥಿ ಬಂದು "ಸರ್ ನೀವು ಫಿಲ್ಮ್
ಇಂಡಸ್ಟ್ರಿಯವರಾ"ಅಂತ ಪ್ರಶ್ನಿಸಿದ.ಆಗ ಈಶ್ವರಪ್ಪನವರು "ಅಲ್ಲ ನಾನು ಎಕ್ಸ್ ಮಿನಿಸ್ಟ್ರು ಕಣಯ್ಯಾ.."ಅಂದರು.ಜೊತೆಗೆ ಇದ್ದವರು "ಮಾಜಿ ಮಂತ್ರಿಗಳು.."ಅಂದರು.ಆ ಯಾತ್ರಾರ್ಥಿ ಏಕೆ ಹಾಗೆ ಪ್ರಶ್ನಿಸಿದನೋ ಗೊತ್ತಿಲ್ಲ.ನನಗಂತೂ ಆಗ ಅನ್ನಿಸಿತು ನಮ್ಮ ರಾಜಕೀಯ ಈಗ ನಿಜಕ್ಕೂ ಹಾಗೇ
ಅಲ್ವಾ..? ಮೊನ್ನೆ ಮೊನ್ನೆ ಹಾಗೇ ಅನ್ಸಿತ್ತು..!.ಅದೊಂದು ಫಿಲ್ಮ್ ಇಂಡಸ್ಟ್ರೀ ತರವೇ. ದುಡ್ಡು ಹಾಕಿದ್ದನ್ನು ತೆಗೆಯುದು ಅಷ್ಟೇ..! ಇನ್ನೊಂದು ಅಂಶ ಅಂದರೆ ನಮ್ಮ ರಾಜಕೀಯದ ಮಂದಿಯನ್ನು ಜನ ಅಧಿಕಾರದ ನಂತರ ಮರೆಯುತ್ತಾರೆ ಅನ್ನೋದಕ್ಕೆ ಬೇರೆ ಸಾಕ್ಷಿ ಬೇಕಾ..?.

ಕಾಮೆಂಟ್‌ಗಳಿಲ್ಲ: