04 ಫೆಬ್ರವರಿ 2008
ಸಕಲೇಶಪುರ - ಬಿ ಸಿ ರೋಡ್ ರಸ್ತೆಗೆ 61 ಕೋಟಿ ರೂ
ಮುನಿಯಪ್ಪರಿಂದ ಆನೆಯ ದರ್ಶನ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕೇಂದ್ರ ಭೂ ಸಾರಿಗೆ ಸಚಿವ ಕೆ.ಎಚ್.ಮುನಿಯಪ್ಪ ಸೋಮವಾರದಂದು ಆಗಮಿಸಿ ಪೂಜೆ ಸಲ್ಲಿಸಿದರು.ಇದೇ ವೇಳೆ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಾಂಶ ಇಲ್ಲಿದೆ.
* ಸಿ ಆರ್ ಎಫ್ ನಿಂದ ಸಕಲೇಶಪುರ - ಶಿರಾಡಿ-ಬಿ ಸಿ ರೋಡ್ ರಸ್ತೆಗೆ 61 ಕೋಟಿ ಬಿಡುಗಡೆ.ಇದರಲ್ಲಿ ಪೂರ್ತಿ ಡಾಮರೀಕರಣ,ಅಗತ್ಯವಿದ್ದೆಡೆ ಕಾಂಕ್ರೀಟ್ ರಸ್ತೆಯೊಂದಿಗೆ ಗುಣಮಟ್ಟವನ್ನು ಕಾಯ್ದುಕೊಳ್ಳುವುದು.ಈ ಕಾಮಗಾರಿಯನ್ನು ರಾಜ್ಯದ ಎನ್.ಎಚ್.ಇಲಾಖೆಯ ವತಿಯಿಂದ ಮಾಡಲಾಗುತ್ತದೆ.
* ಶಿರಾಡಿ ಘಾಟಿ ರಸ್ತೆಯನ್ನು ಮಳೆಗಾಲದ ಮುನ್ನ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲು ಸೂಚನೆ. ವಿಳಂಬಕ್ಕೆ ಮಳೆಗಾಲದ ಅವಧಿ ಕಾರಣ.
*ಶಿರಾಡಿ ಘಾಟಿಯಲ್ಲಿ ಘನ ವಾಹನ ಇನ್ನೂ 2 ತಿಂಗಳ ಓಡಾಟ ನಿಲುಗಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಹಾಸನ ಮತ್ತು ಮಂಗಳೂರು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಸೂಚನೆ.ಲಘು ವಾಹನಗಳಿಗೆ ಪ್ರವೇಶದ ಅವಕಾಶ.
* ಸುಬ್ರಹ್ಮಣ್ಯ ಸಂಪರ್ಕ ರಸ್ತೆಗಳ ಬಗ್ಗೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಭೆ ಕರೆದು ಚರ್ಚೆ.
* ರಸ್ತೆ ವಿಚಾರದಲ್ಲಿ ರಾಜ್ಯಕ್ಕೆ ಅನುದಾನ ಕಡಿಮೆಯಾಗದಂತೆ ತರಿಸಲಾಗಿದೆ.ಅತ್ಯಂತ ಮುತುವರ್ಜಿಯಿಂದ ಕೆಲಸ.
*ರೈಲ್ವೇಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿರುವುದು ನಿಜ.ಈ ಬಗ್ಗೆ ಲಾಲೂ ,ವೇಲು ಅವರಿಗೆ ಹೇಳಿದ್ದೇನೆ.ಸರಿಪಡಿಸಲು ಒತ್ತಾಯಿಸಿದ್ದೆನೆ.
*ರೈಲ್ವೇ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ
* ಮಳೆಗಾಲದ ನಂತರ ಬೆಂಗಳೂರು-ಮಂಗಳುರು ರೈಲು ಓಡಾಟ.ಅದುವರೆಗೆ ಈಗಿನಂತೆ ಮಂಗಳೂರು-ಬೆಂಗಳೂರು ರೈಲು ಓಡಾಟ.
ಈ ಸಂದರ್ಭದಲ್ಲಿ ರಾಜ್ಯ ಹೆದ್ದಾರಿ ಇಲಾಖಾ ಮುಖ್ಯ ಅಭಿಯಂತರ ಬಿಸ್ಸೇ ಗೌಡ ,ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಮೊದಲಾದವರು ಉಪಸ್ಥಿತರಿದ್ದರು
ಕೊನೆಯ ಮಾತು : ಮಾಧ್ಯಮದ ಮಿತ್ರರೊಬ್ಬರು ಸಚಿವರಲ್ಲಿ ರಾಜ್ಯಕ್ಕೆ ರಸ್ತೆಯ ಬಗ್ಗೆ ಕೇಂದ್ರದಿಂದ ಎಷ್ಟು ಅನುದಾನ ಬಂದಿದೆ ಎಂದು ಕೇಳಿದರು.ಸಚಿವರು ಮೆಲ್ಲನೆ ಹೇಳಿದ್ದು ಈಗ ಲೆಕ್ಕ ಇಲ್ಲ ಅದನ್ನು ಬೆಂಗಳೂರಲ್ಲಿ ಪ್ರೆಸ್ ನಲ್ಲಿ ಹೇಳ್ತೇನೆ ಎಂದರು.
ಮಿತ್ರರೊಂದಿಗೆ ಮತ್ತೆ ನಾವು ಮಾತನಾಡಿದೆವು ಅಷ್ಟೂ ಅನುದಾನ ಬಂದಿದೆಯಂತೆ....! ಹಾಗಾಗಿಯೇ ರಾಜ್ಯದ ರಸ್ತೆ ಇಷ್ಟೂ ಸೂಪರ್....!?
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ