05 ಫೆಬ್ರವರಿ 2008

ನಮ್ಮ ರೈತರು ಈಗಲೂ ಸ್ವಾಭಿಮಾನಿಗಳು....



ಆಹಾರ ಭದ್ರತೆಗೆ ಧಕ್ಕೆ ಉಂಟಾಗುತ್ತಿದೆ ಎಂಬ ಸಂಗತಿ ಈಗ ನಗರದ ಮಂದಿಗೆ ಅರ್ಥವಾಗತೊಡಗಿದೆ.ಇದಕ್ಕೆ ಕಾರಣವೇನು ಎಂಬುದನ್ನು ಈಗಲೇ ಸರಿಯಾಗಿ ಚಿಂತಿಸತೊಡಗಿದ್ದಾರೆ.ಜನಪ್ರತಿನಿಧಿಗಳು ಜಾಗೃತರಾಗಬೇಕಾದ್ದು ಈಗ ಅನಿವಾರ್ಯವಾಗಿದೆ.

ಇಡೀ ದೇಶಕ್ಕೆ ಹಾಗೂ ಇಲ್ಲಿನ ಜನರಿಗೆ ಬೇಕಾದ ಗೋಧಿ,ಭತ್ತ ಹಾಗೂ ಇನ್ನಿತರ ಧಾನ್ಯಗಳನ್ನು ಅತ್ಯಂತ ರಸಭರಿತವಾಗಿ ಬೆಳೆಯುವವನು ರೈತ.ಹಾಗಾಗಿ ಆತನೇ ಈ ದೇಶದ ಬೆನ್ನೆಲುಬು ಎಂಬುದರಲ್ಲಿ ಎರಡು ಮಾತಿಲ್ಲ.ಒಂದು ವೇಳೆ ಆತನ ಬೆಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದರೆ ಅದು ದೇಶದ ಮೇಲೆ ಪರಿಣಾಮ ಬೀರುವುದು ಗ್ಯಾರಂಟಿ.ಆಗಲೂ ನಮ್ಮ ನಾಯಕರು ಎಚ್ಚೆತ್ತುಕೊಳ್ಳದಿದ್ದರೆ ದೇಶದ ಆಹಾರದ ಕೊರತೆ,ಭದ್ರತೆಗೆ ಧಕ್ಕೆ ಗ್ಯಾರಂಟಿ.

ಕರ್ನಾಟಕದಲ್ಲಿ ಕಬ್ಬು ಬೆಳೆಗಾರರು ಅನುಭವಿಸಿದ ಸಂಕಷ್ಟದಂತೆ ಉತ್ತರಪ್ರದೇಶದ ಹಳ್ಳಿಯ ರೈತರಿಗೂ ಈಗ ಆದದ್ದು ಇದೇ.ಅಲ್ಲಿನ ಕಬ್ಬು ಹಾಗೂ ಗೋಧಿ ಬೆಳೆಗಾರರು ಈಗ ತೀವ್ರ ಸಂಕಷ್ಟದಲ್ಲಿದ್ದಾರೆ.ಕಬ್ಬು ಬೆಳೆದು ಕಾರ್ಖಾನೆಗೆ ಕೊಂಡೋದರೆ ಅಲ್ಲಿನ ತಾಂತ್ರಿಕ ತೊಂದರೆ ರೈತರ ಮೇಲೆ ಪರಿಣಾಮ ಬೀರಿದೆ.ಇದರಿಂದ ಗೋಧಿಯನ್ನು ಅರೆಯಲು ಸಾಧ್ಯವಾಗದೆ ಬಾಕಿಯಾಗಿ ಉಳಿದಿದೆ.ಗಮನಿಸಿ ನೋಡಿ ದೇಶಕ್ಕೆ ಅಂದಾಜಿನ ಪ್ರಕಾರ ಸುಮಾರು 75 ರಿಂದ 77 ಮಿಲಿಯನ್ ಟನ್ ಗೋಧಿಯ ಅವಶ್ಯಕತೆ ಇದೆ.ಅದೆಲ್ಲವನ್ನೂ ನಮ್ಮ ರೈತರು ನೀಡುತ್ತಾರೆ ಮತ್ತೆ ಕಡಿಮೆಯಾದರೆ ಮಾತ್ರಾ ತರಿಸಲಾಗುತ್ತದೆ. ಆದರೆ ಈಗಿನ ಅಂದಾಜಿನ ಪ್ರಕಾರ ಸುಮಾರು 7 ಮಿಲಿಯನ್ ಟನ್ ಕೊರತೆ ಉಂಟಾಗುವ ಸಾಧ್ಯತೆಯಿದ್ದು ಇದನ್ನು ಹೊರ ದೇಶದಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.ಹೀಗಾದರೆ ಸುಮಾರು 10 ಸಾವಿರ ಕೋಟಿ ರೂ ಗಳ ಮೌಲ್ಯದ ಗೋಧಿಯನ್ನು ತರಿಸಬೇಕಾಗಬಹುದು...!.ಆದರೆ ವಿದೇಶಗಳಲ್ಲಿ ಅಲ್ಲಿನ ಅವಶ್ಯಕತೆಗನುಗುಣವಾಗಿ ಗೋಧಿಯನ್ನು ಬೆಳೆಯುವ ಕಾರಣ ಅಲ್ಲೂ ಗೋಧಿಗೆ ಬೆಲೆ ಏರಿಕೆ ಕಂಡು ಬಂದರೆ ಇಲ್ಲೂ ಅದರ ಪರಿಣಾಮ ಬೀರುವುದು ಗ್ಯಾರಂಟಿ.ಇದೆಲ್ಲದರೆ ಪರಿಣಾಮ ದೇಶದ ಆಹಾರ ಭದ್ರತೆಯ ಮೇಲೆ ತೀವ್ರ ಪರಿಣಾಮ.

ಹಳ್ಳಿಯ ರೈತನಿಗೆ ಇದೆಲ್ಲದರ ಚಿಂತೆ ಬೇಡ ಏಕೆಂದರೆ ಇಂತಹ ವ್ಯವಸ್ಥೆಯಿಂದ ತನಗೆ ಲಾಭವಾಗದಿರಬಹುದು ಆದರೆ ಹೊಟ್ಟೆಹೊರೆಯಲು ಚಿಂತೆಯಿಲ್ಲ. ಆತನಿಗೆ ಅವಶ್ಯಕತೆಯುಳ್ಳ ಧವಸಗಳನ್ನು ಆತನೇ ಬೆಳೆದಿರುತ್ತಾನೆ.ಸರಕಾರದಿಂದ ಕೃಷಿಕರಿಗೆ ಯಾವುದೇ ಸಹಕಾರ ,ಪ್ರೋತ್ಸಾಹಗಳನ್ನು ನೀಡದೇ ಇದ್ದುದರ ಪರಿಣಾಮದಿಂದ ಈಗ ಇಂತಹ ಘಟನೆಗಳು ನಡೆಯುತ್ತವೆ.

ಈಗ ಸಂಕಷ್ಟಗಳನ್ನು ಎದುರಿಸಬೇಕಾದವರು ನಗರದ ಮಂದಿ ಹಾಗು ಜನನಾಯಕರು.ಹಾಗಾಗಿ ರೈತ ಇಂದಿಗೂ ದೇಶದ ಬೆನ್ನೆಲುಬಾಗಿಯೇ ಉಳಿದಿದ್ದಾನೆ. ಆತನೇ ಈ ದೇಶದ ಆರ್ಥಿಕ ವ್ಯವಸ್ಥೆಯ ಹಾಗು ಆಹಾರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ.ನಗರದ ಐಟಿ - ಬಿಟಿ ಉದ್ಯಮಿಗಳಿಗೆ ನೀಡಿದಷ್ಟೇ ಮಹತ್ವ ಹಳ್ಳಿಯ ರೈತನಿಗೂ ನೀಡಬೇಕು ಎನ್ನುವುದು ತಿಳಿಯುವುದು ಇಂತಹ ಸಂದರ್ಭಗಳಲ್ಲಿ.

ಒಂದು ತುಲನಾತ್ಮಕ ವಿಚಾರವನ್ನು ನಾನು ಓದಿದ್ದೆ ಅದನ್ನು ಇನ್ನೊಮ್ಮೆ ನೆನಪಿಸಿ ನಿಮ್ಮ ಮುಂದಿಡುತ್ತೇನೆ.ಆಗ ನಮ್ಮ ರೈತರ ಸ್ವಾಭಿಮಾನ ಏನು ಎಂಬುದು ಅರ್ಥವಾಗಬಹುದು.

1970 ರಲ್ಲಿ 1 ಕಿಲೋ ಭತ್ತದ ಹಾಗು ಗೋಧಿಯ ಸರಾಸರಿ ಬೆಲೆ ಕೇವಲ 60 ಪೈಸೆ.ಅದೇ ಸಮಯದಲ್ಲಿ ಕೂಲಿಯಾಳುಗಳ ಸಂಬಳ 3 ರೂ, ಸರಕಾರಿ ನೌಕರರ ಸಂಬಳ ಮಾಸಿಕವಾಗಿ 90 ರೂ, 1 ಗ್ರಾಂ ಚಿನ್ನದ ಬೆಲೆ 15 ರೂ, 50 ಕಿಲೋ ಸಿಮೆಂಟಿನ ಬೆಲೆ 5 ರೂ. ಅದುವೇ 7 ರ ಹೊತ್ತಿಗೆ 1 ಕಿಲೋ ಗೋಧಿ,ಭತ್ತದ ಸರಾಸರಿ ಬೆಲೆ 6 ರಿಂದ 10 ರೂ ಚಿನ್ನದ ಬೆಲೆ ನಿಮಗೆ ಗೊತ್ತೇ ಇದೆ.ಸಿಮೆಂಟಿನ ಬೆಲೆ 230 ರೂ, ಇನ್ನು ಸರಕಾರಿ ನೌಕರರ ಸಂಬಳದ ಬಗ್ಗೆ ಹೇಳಬೇಕಾಗಿಲ್ಲ.

ಹಾಗಾದರೆ ನಿಜವಾಗಲೂ ಕೃಷಿಯುತ್ಪನ್ನಗಳ ಬೆಲೆ ಏರಿಕೆಯಾಗಿದೆಯೇ?ಇತರ ವಸ್ತುಗಳ ಬೆಲೆ ಏರಿದ ಅನುಪಾತದಲ್ಲಿ ಕೃಷಿಯುತ್ಪನ್ನಗಳ ಬೆಲೆಯೇರಿಕೆಯಾಗಿದ್ದರೆ ಅವುಗಳ ಬೆಲೆಯ ಬಗ್ಗೆ ಲೆಕ್ಕ ಹಾಕಿ.ಈಗ ರೈತರು ಬೆಳೆದ ಉತ್ಪನ್ನಗಳಿಗೆ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ.ಅದರಲ್ಲಿ ತೆಂಗು,ಅಡಿಕೆ,ಕಾಳುಮೆಣಸು,ಕಾಫಿ,ಕಬ್ಬು,ತರಕಾರಿ,ರಾಗಿ ಸೇರಿದಂತೆ ಹಲವು ರೈತರು ಸೇರುತ್ತಾರೆ.ಆದರೂ ಇಂದು ರೈತರು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ ಕೆಲವು ಪ್ರದೇಶಗಳನ್ನು ಹೊರತುಪಡಿಸಿ.ಅಲ್ಲಿಯ ಸಮಸ್ಯೆ ಬೆಲೆ ಕುಸಿತ.ಇದರಿಂದಾಗಿ ರೈತ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ.ಇಂದಿನ ಪರಿಸ್ಥಿತಿ ನೋಡಿದರೆ 1 ಕಿಲೋ ಗೋಧಿ,ಭತ್ತದ ಬೆಲೆ 30 ರಿಂದ 40 ರೂ ಇರಬೇಕಾಗಿತ್ತು.ಆದರೆ ಇಂದಿಗೂ ಅವುಗಳ ಬೆಲೆ 10 ರಿಂದ 12 ಆದರೂ ರೈತರು ನೆಮ್ಮದಿಯಿಂದಿದ್ದಾರೆ.ಅದು ನೋಡಿ ರೈತರ ಸ್ವಾಭಿಮಾನ.ಅವರ ಋಣ ಭಾರವನ್ನು ತೀರಿಸಲು ಸಾಧ್ಯವೇ?.

ಸರಕಾರಗಳು ಯಾವುದೇ ಸರಕಾರಿ ನೌಕರರಿಗೆ ನಿವೃತ್ತ ವೇತನ ನೀಡುತ್ತದೆ.ಅಂತಹ ವೇತನ ಸುಮಾರು 5000 ಕೋಟಿ ರೂ ಆದರೆ ಸರಕಾರವು ಕೃಷಿಗೆ ನೀಡುವ ಸಹಾಯಧನ ಎಷ್ಟು ಗೊತ್ತೇ? ಕೇವಲ 10 ಸಾವಿರ ಕೋಟಿ.ಅದು ದೇಶದ ಸುಮಾರು 75 ಕೋಟಿ ರೈತರಿಗೆ..!?

ಆದರೂ ರೈತರು ಧೃತಿಗೆಡಲಿಲ್ಲ.ಈಗ ನಮ್ಮ ರೈತರ ಮೇಲೆ ಅಭಿವೃದ್ಧಿ ಹೆಸರಲ್ಲಿ ನಿರಂತರ ಧಾಳಿ ನಡೆಯುತ್ತಿದೆ.ಹೀಗಾಗಿ ಅವರು ದಿಕ್ಕೆಟ್ಟಿದ್ದಾರೆ. ಸರಕಾರಗಳು ಸುಮ್ಮನಾಗಿವೆ.ನೂರಾರು ವರ್ಷಗಳಿಂದ ಅದೇ ಹೊಲದಲ್ಲಿ,ತೋಟದಲ್ಲಿ ದುಡಿದು ಏಕಾಏಕಿ ಹೊಲವನ್ನು ಇನ್ನಾವುದೋ ಅಭಿವೃದ್ಧಿ ಕಾರ್ಯಗಳಿಗೆ ಬಿಡಬೇಕು ಎನ್ನುವುದು ಯಾವ ನ್ಯಾಯ?ಇನ್ನೊಂದಡೆ ಸರಕಾರಗಳು ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆಯನ್ನು ನೀಡಲು ಪ್ರಯತ್ನಿಸದೆ ಇನ್ನಾವುದೋ ತಂತ್ರದಲ್ಲಿ ಮುಳುಗುತ್ತದೆ.ಅದಕ್ಕೆಲ್ಲಾ ಉತ್ತರವಾಗಿ ಇಂದು ಚಿಕ್ಕ ಶಾಕ್ ರೈತರು ನೀಡಲಾರಂಭಿಸಿದ್ದಾರೆ.ಸರಕಾರ, ಈ ದೇಶ ಅವರಿಗೆ ಏನು ಉತ್ತರ ನೀಡೀತು?.

ಅದಕ್ಕೆ ಸರಿಯಾಗಿ ನಮ್ಮ ಕೃಷಿ ಸಚಿವರುಗಳು ಇರುತ್ತಾರೆ ರೈತರನ್ನು ಉದ್ಧರಿಸಲು ಅಲ್ಲ.... ಮುಗಿಸಲು ... ಮಾನಗೆಟ್ಟವರು...

ಕಾಮೆಂಟ್‌ಗಳಿಲ್ಲ: