
ಇಲ್ಲಿ ಒಂದೆರಡು ಪ್ರಕರಣಗಳನ್ನು ನಿಮ್ಮ ಮುಂದೆ ಇಡ್ತೇನೆ... ಇದು ಕಟ್ಟುಕತೆಯಲ್ಲ... ನಮ್ಮೂರಿನ ,ನಮ್ಮ ನಡುವಿನ ಸತ್ಯ ಸಂಗತಿಗಳು. ಹಳ್ಳಿಯ ನನಗೆ ನಿಜಕ್ಕೂ ಅಚ್ಚರಿ ಹಾಗೂ ಆತಂಕವಾಗುತ್ತಿದೆ.ಸಮಾಜದಲ್ಲಿ ಹೀಗೂ ನಡೆಯುತ್ತದಾ..?. ಇಂಥವರೂ ಇದ್ದಾರಾ..?
ನಿಮಗೇನೆನ್ನಿಸುತ್ತದೆ ಎನ್ನುವುದನ್ನ ನನ್ನ Email ID puchhappady@yahoo.co.in ಗೆ ತಿಳಿಸಿ. ಅದು ಇನ್ನೊಂದು ಮಂಥನಕ್ಕೆ ಕಾರಣವಾಗಬಹುದು......!.
- ಒಂದು ಹಳ್ಳಿ.
ಅಲ್ಲಿನ ಕುಟುಂಬವೊಂದರಲ್ಲಿ 5 ಜನ. ತಂದೆ ತಾಯಿ, 2 ಗಂಡು, 1 ಹೆಣ್ಣು ಮಕ್ಕಳು.ತಂದೆ ಸಾಮಾನ್ಯ ಸ್ಥಿತಿವಂತರು.ಮಕ್ಕಳೆಲ್ಲರಿಗೂ ಉತ್ತಮ ವಿದ್ಯಾಭ್ಯಾಸ ಕೊಡಿಸಿದರು.ಎಲ್ಲರೂ ಉದ್ಯೋಗದ ಹಾದಿ ಹಿಡಿದರು.ಮದುವೆಯೂ ಆಯಿತು.ತಂದೆಯ ಆಸ್ಥಿಯಲ್ಲಿ ಸಮಪಾಲು ನಡೆಯಿತು. ಅದಾದ ನಂತರ ಅಣ್ಣ- ತಮ್ಮರ ಒಳಗೊಳಗೆ ಒಂದು ಪೈಪೋಟಿ ಸುರುವಾಯಿತು .ಏನು ಗೊತ್ತಾ..? ತಂದೆ ನನ್ನ ಬಳಿ ... ನನ್ನ ಬಳಿ ಎಂಬ ಚರ್ಚೆ. ಆ ಚರ್ಚೆ ಹಿಂದೆ ಸ್ವಾರ್ಥವೂ ಇತ್ತು.ಏಕೆ ಗೊತ್ತಾ? ತಂದೆಯ ಹೆಸರಲ್ಲಿ ಜೀವ ವಿಮೆಯಿತ್ತು.ಅದೂ ಸುಮಾರು ಒಂದೆರಡು ಲಕ್ಷ ಅಲ್ಲ.ಸುಮಾರು 20 ಲಕ್ಷಕ್ಕಿಂತಲೂ ಹೆಚ್ಚಿತ್ತು. ಹಾಗಾಗಿ ತಂದೆ ಸತ್ತರೆ ಅದು ಸಿಗುತ್ತಲ್ಲಾ ಎಂಬ ಆಸೆ.ಸರಿ ಅದು ಕೊನೆಗೆ ತಂದೆಯ ಬೇಡಿಕೆಯಂತೆ ಹಿರಿಮಗನಲ್ಲಿ ಉಳಿಯುವ ಮಾತುಕತೆಯಾಯಿತು. ಆಗಲೆ ಸುರುವಾಗಿದ್ದು ವಿವಾದ. ಮನೆಯೊಳಗೆ ಕೋಲಾಹಲ. ಅದು ಗೊತ್ತಲ್ಲ.. ಅಲ್ಲಿ ನಿಜವಾದ ಪ್ರೀತಿಯಿರಲಿಲ್ಲ.. ಅಲ್ಲಿದ್ದದ್ದು ಸ್ವಾರ್ಥ.ಹಾಗಾಗಿ ಜಗಳ ಬಂದೇ ಬರುತ್ತೆ.ಸ್ವಲ್ಪ ಸಮಯದ ನಂತರ "ಅಕಾಲಿಕ"ವಾಗಿ ತೀರಿಕೊಂಡ್ರು. ಹಾಗೆ ತೀರಿಕೊಂಡರೆ ಮಾತ್ರಾ ಅಲ್ಲವೇ ದುಡ್ಡು ಸಿಗೋದು?. ನಂತರ ಊರಿಡೀ ಸುದ್ದಿ ಹಬ್ಬಿತು.ಆದರೆ ಮಕ್ಕಳಿಗೆ ದುಡ್ಡಿ ಸಿಕ್ಕಿತಲ್ಲಾ?.
- ಇದು ಇನ್ನೊಂದು ಘಟನೆ.
ಅವರಿಗೆ ಏಕೈಕ ಪುತ್ರ.5 ಜನ ಪುತ್ರಿಯರು.ತನ್ನ ಮಗನ ವಿದ್ಯಾಭ್ಯಾಸಕ್ಕಾಗಿ ಅವರು ಮನೆ ಮನೆ ಅಲೆದು 10 ರೂ ವಿನಿಂದ ಹಿಡಿದು 100 ರೂ ವರೆಗೆ ಕೇಳಿಕೊಂಡು.ಸುಮಾರು 15 ವರ್ಷ ಓದಿಸಿದರು.ಆತನಿಗೆ ಉದ್ಯೋಗ ಸಿಕ್ತು.ಅತ್ಯುನ್ನತ ಹುದ್ದೆಗೆ ಏರಿದ.ಹುದ್ದೆಗೆ ಏರುತ್ತಿದ್ದಂತೆಯೇ ವರ್ಷಕ್ಕೊಮ್ಮೆ ಊರಿಗೆ ಬರುತ್ತಿದ್ದ ಆತ ಎರಡು ವರ್ಷಕ್ಕೊಮ್ಮೆ ಬಂದ.ಮತ್ತೆ ಮತ್ತೆ...... ಈಗ ತಂದೆ ಹಾಸಿಗೆ ಹಿಡಿದಿದ್ದಾರೆ. ಮಗನ ನೆನಪಾಗುತ್ತೆದೆ. ಆತ ಮೊನ್ನೆ ಬಂದಿದ್ದ ಅಂತ ನೆನಪಿಸಿ.. ಆತ ಫೋನ್ ಮಾಡಿದರೆ ಸಾಕು ಡಾಕ್ಟು ಬಂದು ನೋಡುತ್ತಾರೆ.ಅಂತ ಹಾಸಿಗೆಯಿಂದಲೂ ಮಗನ ಮೇಲೆ ಗೌರವ ತೋರುತ್ತಾರೆ.ಆದರೆ ಆತ ಇಂದಿಗೂ ಆ ಮನೆಗೆ ಬಂದಿಲ್ಲ.ಮನೆಗೆ ಕನಿಷ್ಠ ದೂರವಾಣಿ ಸಂಪರ್ಕವನ್ನೂ ಮಾಡಿಸಿಲ್ಲ. ಆಸ್ಪತ್ರೆಗೆ ದಾಖಲಾಗಿರುವಾಗ ದೂರವಾಣಿಯ ಮೂಲಕ ಮಾತನಾಡಿ ಹುಶಾರಾರುತ್ತೀರಾ ಅಂತ ಸಂತೈಸಿದ್ದಾನೆ. ನೀವು ಅದೆಲ್ಲಾ ಬಿಡಿ. ಆತ ನಗರಕ್ಕೆ ತೆರಳಿ ಸುಮಾರು ೨೫ ವರ್ಷವಾಗಿರಬಹುದು ಒಮ್ಮೆಯೂ ತಂದೆ-ತಾಯಿಯನ್ನು ನಗರ ತೋರಿಸಲೆಂದು ಕರಕೊಂಡು ಹೋಗಿಲ್ಲ...!?
ಇದೆರಡು ಪ್ರಕರಣಗಳಲ್ಲ.ಇಂತಹುದೇ ಕೆಲ ಪ್ರಕರಣಗಳು ನೆನಪಿನ ಪಟಲದಲ್ಲಿದೆ.ಆದರೆ ಅದು ಕೆಲವೊಮ್ಮೆ ಮತ್ತೆ ಮತ್ತೆ ಕಾಡುತ್ತಲ್ಲಾ ಆಗ ಹೊರಹಾಕಿಬಿಡಬೇಕೆನ್ನಿಸಿತು. ಇದು ಹಳ್ಳಿಯೊಳಗಿನ ಕತೆ. ಹಾಗಾದರೆ ನಗರದಲ್ಲಿ....??
ಯಾವಾಗ ನಾವು ಕಾರ್ಪೋರೇಟ್ ಸಂಸ್ಕೃತಿಯ ಭಾಗವಾದೆವೋ ಅಂದಿನಿಂದ ಇಂತಹ ಪ್ರಕರಣಗಳೂ ಹೆಚ್ಚಲು ಆರಂಭವಾಯಿತೇನೋ..?.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ