12 ಫೆಬ್ರವರಿ 2008

ಮಾಯದ ಮಳೆಯೇ ಏನು ನಿನ್ನ ಲೀಲೆ....



ಎರಡು ದಿನಗಳ ಹಿಂದೆ ಊರಿನ ವಾತಾವರಣ ಸರಿ ಇರಲಿಲ್ಲ.

ಮಂಗಳವಾರ ಮಧ್ಯಾಹ್ನ ತುಂತುರು ಹನಿ ಬೀಳಲಾರಂಭಿಸಿತು.ಒಂದೆರಡು ಗಂಟೆಗಳ ಕಾಲ ಊರಿಡೀ ಹನಿ ಹನಿ ಮಳೆ ಇಳೆಗೆ ಸೇರಿತು.ಸ್ವಲ್ಪ ಹೊತ್ತಿನಲ್ಲೇ ಭುವಿಯಿಂದ ಭಾನಿನವರೆಗೆ ಮಣ್ಣಿನ ವಾಸನೆ ಹಬ್ಬಿತು.ಅಷ್ಟು ಹೊತ್ತು ಮಳೆ.....ಮಾಯದ ಮಳೆ......ತುಂತುರು ಮಳೆ......

ಸುಳ್ಯ ತಾಲೂಕಿನಾದ್ಯಂತ ಮಾತ್ರವಲ್ಲ ದ.ಕ.ಜಿಲ್ಲೆಯಾದ್ಯಂತ ಮಂಗಳವಾರ ಮಧ್ಯಾಹ್ನ ಮಳೆ ಜಿನುಗಿತು.ನಗರದ ದ್ವಿಚಕ್ರ ಸವಾರರು "ನೆನೆ"ದು ಸಾಗಿದರೆ ,ಸಭೆ ಸಮಾರಂಭಗಳು ತುರಾತುರಿಯಲ್ಲಿ ನಡೆಯಿತು.ಹಳ್ಳಿಯ ಕೃಷಿಕರು ಮಾತ್ರಾ ಕಂಗಾಲು.ಹೊಲದ ಬೆಳೆ ಬಿದ್ದು ಹೋಗುವ ಆತಂಕ.ಅಡಿಕೆ ತೋಟದ ಕೃಷಿಕರಿಗೆ ಅಂಗಳದಲ್ಲಿದ್ದ ಅಡಿಕೆ ರಾಶಿ ಮಾಡಿ ಮುಚ್ಚುವ ತುರಾತುರಿ.ಆದರೂ ಕೊನೆಗೆ ಒಂದು ಸ್ವಲ್ಪ ಒದ್ದೆಯೇ.ಇನ್ನೊಂದೆಡೆ ತೋಟದ ಹಿಂಗಾರಕ್ಕೆ ಬೀಳುವ ಹೊಡೆತದ ಚಿಂತೆ.ಹೀಗೆ ಅನಿರೀಕ್ಷಿತ ಮಳೆ ಎಲ್ಲರಿಗೂ ಒಮ್ಮೆ ಶಾಕ್ ನೀಡಿದರೆ ರಬ್ಬರ್ ಬೆಳೆಗಾರನಿಗೆ ಮಾತ್ರಾ ಒಮ್ಮೆ ಸ್ವಲ್ಪ ನೆಮ್ಮದಿಯಾಯಿತು.... ಹಾ... ಮಳೆ ...... ಎಂದು ಉದ್ಗರಿಸಿದ.

ಹಳ್ಳಿಯ ಅಜ್ಜಿ ಹೇಳುತ್ತಿದ್ದರಂತೆ "ಪುಯಿಂತೆಲ್ಟ್ ಬರ್ಸ ಬತ್ಂಟ ಪುಚ್ಚೆಗ್ಲಾ ಗಂಜಿ ಇಜ್ಜಾಂತೆ ಆವು". (ಮಕರ ಮಾಸದಲ್ಲಿ ಮಳೆ ಬಂದರೆ ಬೆಕ್ಕಿಗೂ ಅನ್ನ ಇಲ್ಲದಂತಾಗುವುದು).ಇದು ಅಪಾಯಕಾರಿ ಮಳೆ ಎನ್ನುವುದಕ್ಕೆ ಈ ಗಾದೆ.

ಅಬ್ಬಾ ಪ್ರಕೃತಿಯ ಲೀಲೆ ಏನು..?

ಕಾಮೆಂಟ್‌ಗಳಿಲ್ಲ: