06 ಫೆಬ್ರವರಿ 2008

ಸುಬ್ರಹ್ಮಣ್ಯ ಜೇಸೀಯಿಂದ ಜನೋಪಯೋಗಿ ಕಾರ್ಯಕ್ರಮ...




ಜೇಸೀಐ ಸುಬ್ರಹ್ಮಣ್ಯ ಕುಕ್ಕೆಶ್ರೀ ವತಿಯಿಂದ ಜೇಸೀ ದಿ.ಕುಮಾರ ನಾಯರ್ ಸ್ಮರಣಾರ್ಥ ನಿರಂತರ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರದ ಸಪ್ತಾಹವು ಸುಬ್ರಹ್ಮಣ್ಯದಲ್ಲಿ ನಡೆಯಿತು.

ತರಬೇತಿ ಸಪ್ತಾಹವನ್ನು ಕೃಷಿಕ ಕೆ.ವಿ.ಸುಧೀರ್ ಉಧ್ಘಾಟಿಸಿದರು.ನಂತರದ ದಿನಗಳಲ್ಲಿ ಯಶಸ್ಸು ಕನಸಲ್ಲ,ಮಾನವೀಯ ಸಂಬಂಧಗಳು,ಮೌಲ್ಯಾಧಾರಿತ ಶಿಕ್ಷಣ,ಪರೀಕ್ಷಾ ಪೂರ್ವತಯಾರಿ,ಯಶಸ್ಸು,ಪರಿಣಾಮಕಾರಿ ಸಂಹನ ಹಾಗೂ ಪರಿಣಾಮಕಾರಿ ಭಾಷಣ ಕಲೆಯ ಬಗ್ಗೆ ತರಬೇತಿಯನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಜೇಸೀ ವಲಯ ತರಬೇತುದಾರರಾದ ಸವಿತಾರ ಮುಡೂರು, ವಿಮಲಾರಂಗಯ್ಯ, ಚಂದ್ರಶೇಖರ ಕುಕ್ಕುಪುಣಿ, ರಾಜೇಶ್ ಕೆಡಿಂಜೆ, ಸೋಮಶೇಖರ ನೇರಳ, ಬಿ.ವಿಠಲ ರಾವ್, ಹಾಗೂ ಕೃಷ್ಣ ಮೋಹನ್ ಆಗಮಿಸಿದರು.

ಇದೇ ಸಂದರ್ಭದಲ್ಲಿ ಅನುಗ್ರಹ ಮಾಸಪತ್ರಿಕೆ ಮತ್ತು ಸ್ವಪ್ನ ಸಾಕಾರ ಗೃಹ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಜೇಸೀ ಅಧ್ಯಕ್ಷ ಚಂದ್ರಶೇಖರ ನಾಯರ್, ಕಾರ್ಯದರ್ಶಿ ರೋಹಿತ್, ಜೇಸೀರೆಟ್ ಅಧ್ಯಕ್ಷೆ ಸ್ವಪ್ನಾ ವೆಂಕಟೇಶ್,ಜೇಜೇಸಿ ಅಧ್ಯಕ್ಷೆ ಅಲಕಾ ಎಂ.ಜಿ, ಮೊದಲಾದವರು ಭಾಗವಹಿಸಿದ್ದರು.ವಿವಿಧ ಕಾರ್ಯಕ್ರಮಗಳನ್ನು ಸುಬ್ರಹ್ಮಣ್ಯದ ವಿವಿಧ ಕಾಲೇಜು,ಶಾಲೆಗಳಲ್ಲಿ ನಡೆಸಲಾಗಿತ್ತು.

ಕಾಮೆಂಟ್‌ಗಳಿಲ್ಲ: