27 ಫೆಬ್ರವರಿ 2008

ಶಿರಾಡಿಯಲ್ಲೂ ಈಗ "ಬಿಸಿ..ಬಿಸಿ"

ಆರಂಭದ ರಸ್ತೆ

ದುರಸ್ತಿಯ ಸಿದ್ದತೆ..



ಮತ್ತೆ ಶಿರಾಡಿ ನೆನಪಾಗಿದೆ....

ಶಿರಾಡಿ ಘಾಟ್ ಕಾಮಗಾರಿಯು ಎ.30 ರೊಳಗೆ ಪೂರ್ಣಗೊಳ್ಳಬೇಕಿದೆ.ಹಾಗೆಂದು ಕೇಂದ್ರ ಭೂಸಾರಿಗೆ ಸಚಿವ ಮುನಿಯಪ್ಪ ಕೂಡಾ ಹೇಳಿದ್ದರು.
ಇದಕ್ಕಾಗಿ ಕೆಲಸಗಳು ಭರದಿಂದ ಸಾಗಬೇಕಾದರೆ ಕಚ್ಚಾ ವಸ್ತುಗಳ ಪೂರೈಕೆ ಸಲೀಸಾಗಬೇಕು.ಆದರೆ ಮೊನ್ನೆ ಒಂದೆರಡು ದಿನದ ಲಾರಿ ಮುಷ್ಕರದಿಂದಾಗಿ ಶಿರಾಡಿಯ ಭರದ ಕಾಮಗಾರಿ ಬ್ರೇಕ್ ಬಿದ್ದಿದೆ.

ಶಿರಾಡಿ ರಸ್ತೆಯ ದುರವಸ್ಥೆಯನ್ನು "ಹಾಡಿ ಹೊಗಳಿದ" ಬಳಿಕ ದುರಸ್ಥಿ ಕಾಮಗಾರಿಯು ಆರಂಭಗೊಂಡು ಸುಮಾರು 50 ಕ್ಕೂ ಮಿಕ್ಕಿದ ಕಾರ್ಮಿಕರು ರಾಜ್ಯದ ವಿವಿಧ ಪ್ರದೇಶಗಳಿಂದ ಆಗಮಿಸಿ 3 - 4 ತಂಡಗಳಲ್ಲಿ ಕೆಲಸಕ್ಕೆ ತೊಡಗಿದರು. ಗುತ್ತಿಗೆದಾರರು ,ಇಲಾಖಾ ಅಭಿಯಂತರರು ಆಗಾಗ ಶಿರಾಡಿಗೆ ಆಗಮಿಸಿ ಕಾಮಗಾರಿಗಳ ವೀಕ್ಷಣೆ ನಡೆಸುವ ಕಾರ್ಯದಲ್ಲಿ ನಿರತರಾಗಿದರು. ಈ ನಡುವೆ ಕೆಲವು ಘನವಾಹನಗಳು ಇದೇ ಮಾರ್ಗದಲ್ಲಿ ಚಲಿಸಿ ಕಾಮಗಾರಿಯ ಪ್ರಗತಿಗೆ ತೊಂದರೆಯುಂಟು ಮಾಡಿದ್ದೂ ಆಯಿತು."ಘನ ವಾಹನಗಳ ಸಂಚಾರಕ್ಕೆ ನಿಷೇಧವಿದೆ" ಎಂದರೂ ಕೆಲವೊಂದು ಘನ ವಾಹನಗಳು ಚಲಿಸುವುದು ಮಾಮೂಲಾಗಿದೆ ಎಂದು ಕೆಲಸದಲ್ಲಿ ನಿರತರಾಗಿರುವ ಕಾರ್ಮಿಕರು ಹೇಳುತ್ತಾರೆ.ಇದರಿಂದ ಕಾಮಗಾರಿಗೆ ತೊಂದರೆಯಾಗುತ್ತದೆ ಎನ್ನುತ್ತಾರೆ ಕಾರ್ಮಿಕರು.

ಈಗ ಒಂದೆರಡು ದಿನಗಳಿಂದ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ವಿಳಂಬವಾದ್ದರಿಂದ ಇಲ್ಲಿ ಸಮಸ್ಯೆಯಾಗಿದೆ.ಲಾರಿ ಮುಷ್ಕರದಿಂದಾಗಿ ವಸ್ತುಗಳ ಸಾಗಾಟಕ್ಕೆ ತೊಂದರೆಯಾಗಿ, ಕಾಮಗಾರಿ ನಿಧಾನವಾಗಿದೆ.ಆದರೆ ಮಂಗಳವಾರದಿಂದ ಲಾರಿಗಳ ಸಂಚಾರ ಆರಂಭಗೊಂಡ ಹಿನ್ನೆಲೆಯಲ್ಲಿ ಕಚ್ಚಾ ವಸ್ತುಗಳ ಪೂರೈಕೆಗೆ ಅನುಕೂಲವಾಗಿದೆ.ಸಾಕಷ್ಟು ವಸ್ತುಗಳ ಪೂರೈಕೆಯಾದ ತಕ್ಷಣ ಮತ್ತೆ ಕಾಮಗಾರಿ ಆರಂಭಬಹುದು ಎಂದು ಕಾರ್ಮಿಕರು ಹೇಳುತ್ತಾರೆ.ಈಗ ಒಂದು ಬದಿಯಿಂದ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿದೆ.ಸುಮಾರು 7 ರಿಂದ 10 ತಿರುವುಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ ಎನ್ನುವುದು ಕಾರ್ಮಿಕರ ಮಾತು.ಈ ನಡುವೆ ಕಾರ್ಮಿಕರು ಸಿಟ್ಟುಗೊಂಡಿದ್ದರು. ಅವರ ಶೈಲಿಯಲ್ಲೇ ಹೇಳುವುದಾದರೆ " ಏನ್ರಿ ಸಾರ್ ನಮ್ಗೆ ಎರಡು ದಿನದಿಂದ ಕೆಲ್ಸ ಇಲ್ರೀ ಹಿಂಗಾಗಿ ಪಗರ ಇಲ್ಲಿ ಸಾರ್.... ನಾವು ಹಿಂಗಾದ್ರೆ ಊರ್ಗೆ ಹೋಗ್ತೀವಿ...." ಅಂತಾರೆ.

ಎ.30 ರ ಒಳಗಾಗಿ ಶಿರಾಡಿ ಘಾಟ್ ವಾಹನ ಸಂಚಾರಕ್ಕೆ ಮುಕ್ತಗೊಳಿಸಬೇಕಾದ ಹಿಮ್ಮೆಲೆಯಲ್ಲಿ ರಸ್ತೆ ದುರಸ್ತಿಗೆ ಅಗತ್ಯವುಳ್ಳ ಕಚ್ಚಾವಸ್ತುಗಳನ್ನು ಮುಷ್ಕರ ಸೇರಿದಂತೆ ಇನ್ನಿತರ ಬಂದ್ ಸಮಯದಲ್ಲೂ ಸರಬರಾಜಾಗುವಂತೆ ಸಂಬಂಧಿತರು ವ್ಯವಸ್ಥೆಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸುತ್ತಾರೆ.ಈಗಾಗಲೇ ಶಿರಾಡಿ ಘಾಟ್ ರಸ್ತೆಯ ಬಂದ್ ಆದ ಹಿನ್ನೆಲೆಯಲ್ಲಿ ಪ್ರತಿದಿನ ಬೆಂಗಳೂರು - ಮಂಗಳೂರು ಹೆದ್ದಾರಿಯಿಂದಾಗಿ ಲಕ್ಷಾಂತರ ರೂ ನಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ದುರಸ್ಥಿ ಕಾರ್ಯವು ಭರದಿಂದ ಸಾಗಿ ಮಾರ್ಚ್ ಅಂತ್ಯದ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳುವಂತೆ ಪ್ರಯತ್ನಿಸಬೇಕಾಗಿದೆ.

[ಚಿತ್ರಗಳು ಹಳೆಯದು..]

ಕಾಮೆಂಟ್‌ಗಳಿಲ್ಲ: