15 ಜನವರಿ 2010

ಆತ್ಮಾವಲೋಕನ.....

ಮಲೆಯಾಳ ಚಾನೆಲ್ ನಲ್ಲಿ ಗಿಟಾರ್ ವಾದನದ ಲೈವ್ ಪ್ರಸಾರವಾಗುತ್ತಿತ್ತು.ಹಾಗಾಗಿ ಚಾನೆಲ್ಲನ್ನು ನೋಡುತ್ತಾ ಇದ್ದೆ. ಮತ್ತೂ ನೋಡಿದಾಗ ಅದೊಂದು “ಯುವ ಕಲೋತ್ಸವ” ನೇರಪ್ರಸಾರದ ಕಾರ್ಯಕ್ರಮ.

ಮತ್ತೂ ಕೆಲ ಕಾಲ ಆ ಚಾನೆಲ್ ನೋಡುತ್ತಿದ್ದಾಗ ಇನ್ನೂ ಅಚ್ಚರಿಯಾಗಿತು. ಚಾನೆಲ್ಲಿನ ಅಷ್ಟೂ ನ್ಯೂಸ್ ರೀಡರ್‌ಗಳು ಅಲ್ಲಿದ್ದರು. ಆ ಕಲೋತ್ವವ ಮುಗಿಯುತ್ತಿದ್ದಂತೆ ಇಡೀ ಕಾರ್ಯಕ್ರಮದ ಅವಲೋಕನ ನಡೆಯುತ್ತಿತ್ತು.ಯುವಕರ ಈ ಹಿಂದಿನ ಸಾಧೆನೆಗಳ ಪುನರಾವಲೋಕನ ನಡೆಯುತ್ತಿತ್ತು.

ನನ್ನ ಗೆಳೆಯನೊಬ್ಬ ಈ ಕುರಿತಾಗಿ ಹೇಳಿದ ,ಎಲ್ಲಾ ಮಲೆಯಾಳ ಚಾನೆಲ್ಲುಗಳು ಮಾತ್ರವಲ್ಲ ಮಾಧ್ಯಮಗಳು ಯುವಕಲೋತ್ಸವ (ಅಂದರೆ ಇಲ್ಲಿನ “ಯುವಜನ ಮೇಳ”) ಕುರಿತಾಗಿ ಸಮಗ್ರವಾಗಿ ವರದಿ ಮಾಡುತ್ತವೆ.ಚಾನೆಲ್ಲುಗಳಂತೂ ನೇರಪ್ರಸಾರ ಮಾಡುತ್ತವೆ. ಏನೇ ”ಗಂಭೀರ”ವಾದ ಸುದ್ದಿ ಇದ್ದರೂ ಕಲೋತ್ಸವದ ನೇರಪ್ರಸಾರ ಬಿಡುವುದಿಲ್ಲ ಎಂದು ಆತ ಹೇಳಿದ.

ಇದು ನೋಡಿದ ಬಳಿಕ ನನಗನ್ನಿಸಿತು .

ಇತ್ತೀಚೆಗೆ ಸುಳ್ಯದಲ್ಲಿ ರಾಜ್ಯ ಮಟ್ಟದ ಯುವಜನಮೇಳ ನಡೆದಿತ್ತು.ಬಹುಶ: ಅದು ದೊಡ್ಡ ಸಂಗತಿಯೆ ಆಗಿರಲಿಲ್ಲ.ಸಂಘಟಕರೂ ಹಾಗೆಯೇ ಕಾರ್ಯಕ್ರಮದ ಪ್ರಚಾರದ ವ್ಯವಸ್ಥೆಯನ್ನೂ ಮಾಡಿರಲಿಲ್ಲ.ಮಾಧ್ಯಮಗಳೂ ಹಾಗೆಯೇ ದೊಡ್ಡ ಸಂಗತಿಯೇ ಮಾಡಿರಲಿಲ್ಲ. ಯುವಜನ ಮೇಳವೆಂದರೆ ಅದು ಯುವಕರ ಸಾಧನೆ, ಕಲೆಯ ಪ್ರದರ್ಶನ ವೇದಿಕೆ.

ನೀವು ಬೇಕಾದರೆ ನೋಡಿ... ಪತ್ರಿಕೆಗಳಲ್ಲಿ, ಭಾಷಣಗಳಲ್ಲಿ ಯುವಜನತೆ.. ಹಾದಿ ತಪ್ಪಿದೆ.... ಹಾಗೆ.... ಹೀಗೆ.... ಅಂತೆಲ್ಲಾ ಭಾಷಣ ಬಿಗಿಯುತ್ತಾರೆ.ಇಂತಹ ಸಂಗತಿಗಳ ಬಗ್ಗೆ ಯೋಚಿಸಿಯೇ ಇಲ್ಲ.ನನಗನ್ನಿಸಿದ ಪ್ರಕಾರ ಸುಳ್ಯದ ಯುವಜನ ಮೇಳದ ಸುದ್ದಿ ಒಂದು ಕ್ಯಾಮಾರದಲ್ಲ್ಲಿ ಸ್ವಲ್ಪ ಬಂದಿದೆ.ಉಳಿದಾವ ಕ್ಯಾಮಾರಾಗಳು ಆನ್ ಆಗಿಯೇ ಇಲ್ಲ.ಆನ್ ಆದ ಕ್ಯಾಮಾರಾದ ಚಿತ್ರಗಳು ಬಂದೇ ಇಲ್ಲ್ಲ. “ಭಯಂಕರ” ಕ್ಯಾಮಾರಾಗಳೂ ಸುದ್ದಿಸ್ಪೋಟಿಸಲೇ ಇಲ್ಲ..!!. ನಮ್ಮಲ್ಲಿ ಕ್ರೈಂ ಗಳಿಗೆ ಬೇಕಾದಷ್ಟು ಜಾಗವಿದೆ. ಆದರೆ ಇಂತಹ ಹಬ್ಬಗಳ ಬಗ್ಗೆ ಏಕೆ ಗಮನಹರಿಸುವುದಿಲ್ಲ ಎನ್ನುವುದು ನಾಕಾಣೆ. ಮಲೆಯಾಳ ಚಾನೆಲ್ಲುಗಳೂ , ಮಾಧ್ಯಮಗಳೂ ಕ್ರೈಂಗಳಿಗೆ ಆದ್ಯತೆ ನೀಡುವುದರ ಜೊತೆಗೆ ಇಂತಹ ಕಾರ್ಯಕ್ರಮಗಳಿಗೂ ಆದ್ಯತೆ ನೀಡುತ್ತವೆ.ನಮ್ಮಲ್ಲಿ ಏಕೆ ಹೀಗೆ..?. ಅದೇ ಗಡಿವಿವಾದದ ನೇರ ಪ್ರಸಾರ, ಕೊಳವೆಬಾವಿಂಯಿಂದಲೇ ನೇರಪ್ರಸಾರ ಮಾಡುವ ಕ್ಯಾಮಾರಾಗಳು ಈ ಕಡೆಯೂ ಗಮನಹರಿಸಿದರೆ ಒಳ್ಳೆಯದಲ್ವೇ..? ಏನಂತೀರಿ..??

08 ಜನವರಿ 2010

ನೆನಪುಗಳ ಹಿಂದೆ . .

ನೆನಪುಗಳು ಹಿಂದೋಡಿತು . . . .

ಆದರೆ ಈಗ ಆ ವಸ್ತುಗಳು ಕಳೆದು ಹೋಗಿದೆ , ಮತ್ತೆ ಸಿಗಲಾರದು ಎಂದು ಅನಿಸಿದೆ.ಅದು ನಿಜವೂ ಹೌದು.ಆ ವಸ್ತು ಮತ್ಯಾವುದೂ ಅಲ್ಲಬಾಲ್ಯ.
ಆ ಬಾಲ್ಯದ ಪೀಕಲಾಟಗಳು, ಆಟಗಳು ಎಲ್ಲವೂ ಕಣ್ಣ ಮುಂದೆ ಬಂದವು. ಆದರೆ ಕಾಲ ಮತ್ತೆ ಬರುವುದಿಲ್ಲ....., ನೆನಪುಗಳು ಮತ್ತೆ ಬರುತ್ತದೆ... ಕಾಡುತ್ತದೆ.... ಇದಕ್ಕೆ ಕಾರಣವಾದದ್ದು ಯಾವುದು ಗೊತ್ತಾ..?. ಉಜಿರೆಯ ತುಳು ಗ್ರಾಮ.






ಅಲ್ಲಿ ಒಂದಿಬ್ಬರು ಚಿಕ್ಕ ಮಕ್ಕಳು ಹಾಳೆಯ ಮೇಲೆ ಆಟವಾಡುತ್ತಿದ್ದರು, ಗಾಲಿ ಚಕ್ರದ ಮೇಲೆ ಎಳೆದಾಡುತ್ತಿದ್ದರು.ಯಾವುದೇ ಮತ್ಸರವಿಲ್ಲದೆ ಆತನೊಬ್ಬನೇ ಸುಮಾರು ಹೊತ್ತು ತನ್ನ ಗೆಳೆಯನ್ನು ಎಳೆದಾಡುತ್ತಲೇ ಇದ್ದ.ಸುಸ್ತಾಗಿ ಆತ ಕುಳಿತು ಇನ್ನೊಬ್ಬ ಎಳೆಯುತ್ತಾನೆ.ನಾವು ಕೂಡಾ ಬಾಲ್ಯದಲ್ಲಿ ಆಡುತ್ತಿದ್ದ ಆಟಗಳು ಅದೇ. ಇಂದಿನಂತೆ ಕಂಪ್ಯೂಟರ್, ಮೊಬೈಲ್ ನಂತಹ ಆಧುನಿಕವಾದ ಯಾವುದೇ ವ್ಯವಸ್ಥೆ ಇರಲಿಲ್ಲ. ನನ್ನ ಅಣ್ಣನಲ್ಲಿದ್ದ ಒಂದು ಸೈಕಲ್ ಹಾಗೂ ಅಣ್ಣ ನಮೆಗೆಲ್ಲರಿಗೂ ಡ್ರೈವಿಂಗ್ ಸ್ಕೂಲ್ ತರ. ಹಾಗೆಯೇ ಶಾಲೆಗೆ ಹೋಗುವಾಗಲೂ ಯಾರೊಬ್ಬರಲ್ಲಾದರೂ ಸೈಕಲ್ ಇದ್ದರೆ ಅದರ ಜೊತೆ ನಮ್ಮ ಓಟ. ಅದೂ 4- 5 ಕಿಲೋ ಮೀಟರ್ ದೂರ..!!. ಇನ್ನೂ ಒಂದಿತ್ತು.ನಮ್ಮ ಊರಿಗೆ ಸೈಕಲ್ ನಲ್ಲಿ ಬ್ರೆಡ್ , ಐಸ್ ಕ್ಯಾಂಡಿ ಮಾರಾಟ ಮಾಡಿಕೊಂಡು ಬರುವವರಿದ್ದರು. ಆ ಸೈಕಲನ್ನು ಒಂದಷ್ಟು ದೂರ ತಳ್ಳಿದರೆ ಕೊನೆಗೆ ಯಾವುದಾದರೊಂದು ಐಟಂ ಕೊಡುತ್ತಿದ್ದ ಅದೇ ಖುಷಿ. ಆ ಆಸೆಗಾಗಿಯೇ ಸೈಕಲ್ ತಳ್ಳಿದ್ದೂ ಇದೆ. ಅದೂ ಅಲ್ಲ ಆಗೆಲ್ಲಾ ಶಾಲೆಗೆ ಹೋಗೋದೆಂದ್ರೆ 4 - 5 ಕಿಲೋ ಮೀಟರ್ ದೂರ ನಡಿಗೆ ಗ್ಯಾರಂಟಿ. ನಾನು ಪ್ರತೀ ದಿನ 10 ಕಿಲೋ ಮೀಟರ್ ದೂರ ನಡೀತಾ ಇದ್ದೆ. ಆಗ ನಾವೆಲ್ಲಾ ಒಂದಿಷ್ಟು ಗೆಳೆಯರು ಸೇರಿಕೊಡು ಜೊತೆಯಾಗಿ ಹೋಗೋ ಸಂಪ್ರದಾಯ.

ಆದರೆ ಈಗ ಕಾಲ ಹಾಗಿಲ್ಲ.ಮನೆಯಂಗಳದಿಂದಲೇ ಶಾಲಾ ಬಸ್ಸಿಗೆ ಹತ್ತಿ ಶಾಲಾ ಕ್ಲಾಸಿನ ಎದುರೇ ಇಳಿಯುವ ಯುಗ ಇದು.ಹಾಗಾಗಿ ಗೆಳೆಯರೂ ಇಲ್ಲ, ಆಟವೂ ಇಲ್ಲ, ಕಷ್ಟವೂ ಇಲ್ಲ.ಅದಕ್ಕಿಂತಲೂ ಹೆಚ್ಚಾಗಿ ಬದುಕಿನ ಒಳನೋಟಗಳು ಇಲ್ಲ. ಆದರೆ ಪೀಕಲಾಟವೊಂದಿದೆ. ಇಂದಿನ ದಿನಕ್ಕೆ ಈ ವ್ಯವಸ್ಥೆಗಳೆಲ್ಲಾ ಅನಿವಾರ್ಯವೆನ್ನಿ.

ಹಾಗಾಗಿ ನನಗನ್ನಿಸಿದ್ದು ಕೇವಲ ಹತ್ತಿಪ್ಪತ್ತು ವರ್ಷದಲ್ಲೇ ಏನೊಂದು ಬದಲಾವಣೆಯಾಗಿದೆ.ಹಾಗಿದ್ದರೆ ಒಂದು ಶತಮಾನದ ಹಿಂದಿನ ಕಾಲ ಹೇಗಿದ್ದಿರಬಹುದು..?. ಅದರ ಒಂದು ತುಣುಕು ಬಹುಶ: ಉಜಿರೆಯಲ್ಲಿ ದರ್ಶನವಾಗಿದೆ.ಅದು ಎಷ್ಟು ಅನಿವಾರ್ಯವೋ ಗೊತ್ತಿಲ್ಲ ಮತ್ತು ಅದು ಇಂದಿನ ದಿನದಲ್ಲಿ ಉಳಿದುಕೊಳ್ಳುತ್ತದೆ ಎಂದೂ ಅಲ್ಲ ಆದರೂ ಒಮ್ಮೆ ನೆನಪುಗಳು ಮರುಕಳಿಸಿದೆಯಲ್ಲಾ ಅಷ್ಟು ಸಾಕು....


06 ಜನವರಿ 2010

ಇಳಿ ಹೊತ್ತು . .




ಸಂಜೆಯ ಹೊತ್ತಿನಲ್ಲಿ ಎಲ್ಲವೂ ರಂಗುರಂಗಾಗಿದೆ..

ಎಲ್ಲಾ ಆಟಗಳಿಗೂ ಒಂದು "ಬಂಧ"ವಿರುತ್ತದೆ..

ಎಲ್ಲವನ್ನೂ ಅವಲೋಕಿಸುವ ಸಮಯವೂ ಅದು . . ..

ಹಾಗಾಗಿ ಎಲ್ಲಕ್ಕೂ ಬೇಕು ಎಚ್ಚರ

ಇಂದಿಗೂ ಅದು . .. . ..

ಶಾಲೆ ಬಿಟ್ಟು ಕಾಲೇಜು ಹತ್ತಿ ಅಲ್ಲಿಂದಲೂ ಇಳಿದು ಬಂದು ವೃತ್ತಿ-ಪ್ರವೃತ್ತಿಯ ಬದುಕಿನ ನಡುವೆ ಬದುಕುತ್ತಿರುವ ಈ ಸಮಯದಲ್ಲಿ ಅದ್ಯಾಕೋ ಏನೋ ಶಾಲಾ ಜೀವನ ನೆನಪಾಯಿತು.ಅಲ್ಲೋನೋ ಒಂದು ಸುಂದರ ಕ್ಷಣವಿದೆ. ಆ ಮುಗ್ದ ಮನಸ್ಸುಗಳಿಗೆ ಒಂದಿನಿತೂ ಮತ್ಸರವಿಲ್ಲ.ತನ್ನ ಗೆಳೆಯ ಅದ್ಯಾವುದೋ ನಾಟಕದಲ್ಲಿ ಭಾಗವಹಿಸುತ್ತಾನೆ ಎಂದಾದರೆ ಈತನಿಗೂ ಅದೇನೋ ಖುಷಿ.ಅಂದು ಇಡೀ ದಿನ ಮಕ್ಕಳಿಗೆಲ್ಲಾ ಸಂಭ್ರಮವೋ ಸಂಭ್ರಮ.ಅಂತಹ ಸಂಭ್ರಮದ ಕ್ಷಣದಲ್ಲಿ ಪಾಲ್ಗೊಳ್ಳಲು ಹೋಗಬೇಕೆನಿಸಿತು. ಅದಕ್ಕೆ ಸರಿಯಾಗಿ ಅವಕಾಶವೂ ಸಿಕ್ಕಿತು.

ಅಲ್ಲಿ ಮಕ್ಕಳ ಸಾಹಸ ಕ್ರೀಡಾ ಕೂಟಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು.ಅಂದರೆ ಮಕ್ಕಳ ಡ್ಯಾನ್ಷ್ , ನಾಟಕಕ್ಕಿಂತ ಮಕ್ಕಳದ್ದೇ ಸಾಹಸ ಕ್ರೀಡೆಗಳಿಗೆ ಆದ್ಯತೆ ನೀಡಲಾಗಿತ್ತು.ಅದರ ಜೊತೆಗೆ “ಸತ್ಯ ಹರಿಶ್ಚಂದ್ರ”ಎಂಬ ರೂಪಕವನ್ನು ಕೂಡಾ ನಡು ನಡುವೆ ಜೋಡಿಸಿದ್ದರು.ಮೇಲ್ನೋಟಕ್ಕೆ ಇದೊಂದು ಬೋರಿಂಗ್ ಅಂತ ಅನಿಸಿದರೂ ಮಕ್ಕಳು ಈ ರೂಪಕವನ್ನು ಚೆನ್ನಾಗಿ ನಿರೂಪಿಸಿದ್ದರು.

ನಿಜಕ್ಕೂ ಹರಿಶ್ಚಂದ್ರ ನಾಟಕ ಯಾವ ಕಾಲಕ್ಕೂ ಸೂಕ್ತವಾದ್ದು ಮತ್ತು ಅದರ ಒಳನೋಟ ಎಷ್ಟು ಚೆನ್ನಾಗಿದೆ.ಆದರೆ ಇಂದ್ಯಾವ ನಾಟಕಗಳೂ ಹಾಗೆ ಕಾಣಿಸುತ್ತಿಲ್ಲ.ಎಲ್ಲೋ ಒಂದಷ್ಟು ಕಾಲ ಜನರ ಮನಸ್ಸಿನಲ್ಲಿ ಓಡಾಡಿ ಮತ್ತೆ ಮರೆಯಾಗಿ ಬಿಡುತ್ತದೆ.ಆದರೆ ಇದು ಹಾಗಲ್ಲ.ಎಲ್ಲೋ ಇಲ್ಲೇ ಆ ಘಟನೆ ನಡೆಯುತ್ತಿದೆ ಎನ್ನುವ ಹಾಗೆ ಭ್ರಮಿಸಬೇಕಾಗುತ್ತದೆ.ಅನೇಕರು ಈ ನಾಟಕವನ್ನು ನೋಡಿ ಕಣ್ಣೀರು ಸುರಿಸಿದ್ದೂ ಇದೆ.ಆ ನಾಟಕದ ಪ್ರೆಸೆಂಟೇಶನ್ ಕೂಡಾ ಅದೇ ರೀತಿ ಇರಬೇಕು.

ದುರದೃಷ್ಠ ನೋಡಿ.....,

"ಸತ್ಯ"ದ ನಾಟಕ ನೋಡಿ ಇತ್ತ ಕಡೆ ಬರಬೇಕಾದ್ರೆ ಸುಳ್ಳಿನ ಮೇಲೆ ಸುಳ್ಳು ಹೇಳುವ ಮಂದಿ ಕಾಣುತ್ತಾರೆ.ಎಂತಹಾ ಜನ ನಾವಲ್ಲ? ಅಲ್ಲಿ ಕಣ್ಣಿರು ಸುರಿಸಿ ಇಲ್ಲಿ ನಾವೇ ನಾಟಕ ಮಾಡುವ ಸನ್ನಿವೇಶ.

ಕಾಲವೇ ಹಾಗೆ ಮಾಡುತ್ತಾ? ಗೊತ್ತಿಲ್ಲ.!