11 ಅಕ್ಟೋಬರ್ 2012

ಇಲ್ಲಿ ರೇಖೆಯೇ ಚಿತ್ರವಾಗುತ್ತದೆ . . .. . .!




 ‘ಒಮ್ಮೆಯೂ ರಬ್ಬರ್ ಬಳಸದೆ ಮಕ್ಕಳು ಚಿತ್ರ ಬಿಡಿಸುತ್ತಾರೆ’ ಅಂತ  ಕಲಾವಿದ ಮೋಹನ್ ಸೋನಾ, ಮಕ್ಕಳು ಬಿಡಿಸಿದ್ದ ಒಂದಷ್ಟು  ಚಿತ್ರಗಳನ್ನು  ಅತಿಥಿಗಳಿಗೆ ವಿವರಿಸುತ್ತಾ  ಸಾಗುತ್ತಿದ್ದರು. ಒಂದರಿಂದ  ಮತ್ತೊಂದು ಚಿತ್ರ ಅತ್ಯಂತ ವಿಶಿಷ್ಠವಾಗಿತ್ತು. ಇದೆಲ್ಲಾ ಎಳೆಯ ಮಕ್ಕಳು ಬಿಡಿಸಿದ ಚಿತ್ರ, ಎನ್ನುವಾಗ ಆ ಮಕ್ಕಳ ಒಳಗೆ ಇರುವ ಮುಗ್ದತೆ ತರೆದು ಕಾಣುತ್ತಿತ್ತು. ಇದೆಲ್ಲಾ ಕಂಡ್ಡದ್ದು  ಬಾಲವನದಲ್ಲಿ.

ಪುತ್ತೂರಿನ ಬಾಲವನದಲ್ಲಿ  ಡಾ.ಶಿವರಾಮ ಕಾರಂತರ ಜನ್ಮದಿನವನ್ನು  ಆಚರಿಸಲಾಗುತ್ತಿತ್ತು. ಅದೇ ಹೊತ್ತಿಗೆ ಕಾರಂತ ಪ್ರೀತಿಯ ಮಕ್ಕಳಿಗೂ ಚೂರು ಜಾಗ ಕಲ್ಪಿಸಲಾಗಿತ್ತು. ಇದುವರೆಗೆ ಇಲ್ಲದ ಚಿತ್ರಪ್ರದರ್ಶನ ಇಂದು  ಕಂಡುಬಂದಿತು. ನೋಡುವಾಗ ಸಾಮಾನ್ಯ ಎನಿಸಿದರೂ , ಆ ಚಿತ್ರದಲ್ಲಿ ಅಭಿವ್ಯಕ್ತಗೊಳ್ಳುವ ಸಂಗತಿಗಳು  ನಿಜಕ್ಕೂ  ಅಚ್ಚರಿ ಮೂಡಿಸುತ್ತಿತ್ತು. ಕಾರಣ ಅಲ್ಲಿ  ಇದ್ದ ಮಕ್ಕಳು  5 ವರ್ಷದಿಂದ 14 ವಯಸ್ಸಿನ ಪುಟಾಣಿಗಳು.  ಕಳೆದ ಸುಮಾರು  ಎರಡು ವರ್ಷದಿಂದ ಬಾಲವನದಲ್ಲಿ  ಕಲಾವಿದ ಮೋಹನ ಸೋನಾ ಹಾಗೂ  ಚಂದ್ರ ಸೌಗಂಧಿಕಾ ಇವರ ನೇತೃತ್ವದಲ್ಲಿ  ಮಕ್ಕಳಿಗಾಗಿ ಚಿತ್ರ ತರಬೇತಿ ಪ್ರತೀ  ಭಾನುವಾರ    ನಡೆಯುತ್ತಲೇ ಇದೆ. ಕಳೆದ 2 ವರ್ಷದಿಂದ ಭಾನುವಾ ರದಂದು  ಬೆಳಗ್ಗೆ 9 ರಿಂದ ಮಧ್ಯಾಹ್ನದ ವರೆಗೆ   ತರಬೇತಿ ನಡೆಯುತ್ತಿತ್ತು. ಈಗ 26 ಪುಟಾಣಿಗಳು ಇಲ್ಲಿದ್ದಾರೆ.

ಕಾನ್ಸೆಪ್ಟ್ ಮಾತ್ರಾ ; ಚಿತ್ರ ರಚನೆಯೇ ಅಚ್ಚರಿ . .! :

 ಸಾಮಾನ್ಯವಾಗಿ  ಚಿತ್ರ ರಚಿಸುವ ವೇಳೆ ಹತ್ತಾರು ಬಾರಿ ಉಜ್ಜಿ , ತಿದ್ದಿ ತೀಡಿ ಬರೆಯಬೇಕಾಗುತ್ತದೆ. ಆದರೆ ಇಲ್ಲಿ  ಹಾಗಿಲ್ಲ. ಒಮ್ಮೆ ಬರೆದ ಗೆರೆಯನ್ನು  ಅಳಿಸುವ ಹಾಗಿಲ್ಲ,. ಏಕೆಂದರೆ ಪ್ರಕೃತಿಯಲ್ಲಿ ನೇರ ಸರಿಯಾದ ರೇಖ್ಹೆಯೇ ಇಲ್ಲ , ಇನ್ನು ರಬ್ಬರ್ ಬಳಕೆ ಇಲ್ಲವೇ ಇಲ್ಲ , ಏಕೆಂದರೆ ಪರಿಸರ ಎಂದಿಗೂ ತನ್ನ ಸೃಷ್ಠಿಯನ್ನು ಅಳಿಸುವುದಿಲ್ಲ , ನಿಲ್ಲಿಸುವುದಿಲ್ಲ. ಇನ್ನು
ಪ್ರತಿಯೊಂದು ಮಗುವಿನಲ್ಲೂ ಅದರದ್ದೇ   ಆದ ಸಾಮರ್ಥ್ಯ ಇರುತ್ತದೆ , ಮತ್ತು ಅದರ ಮನಸ್ಸಿನ ಒಳಗೆ ಅನೇಕ ವಿಚಾರಗಳೂ   ಇರುತ್ತದೆ , ಇದು  ತಾನಾಗಿಯೇ ಹೊರಬರಬೇಕು ಎಂಬುದು  ಮೋಹನ್ ಸೋನಾ ಹಾಗೂ ತಂಡದ ಉದ್ದೇಶ.  . ಹೀಗಾಗಿ  ಒಂದು ರೇಖೆ ಮತ್ತೊಂದಕ್ಕೆ ಸಹಕಾರಿ ಆಗುತ್ತದೆ.


ಮಕ್ಕಳೇ 57 ಬಗೆಯ ಬಣ್ಣ ತಯಾರಿಸಿದರು.  ..! :



ಇದಂತೂ ಅಚ್ಚರಿಯ ಸಂಗತಿ. ಇಲ್ಲಿ  ಮಕ್ಕಳು ಬಿಡಿಸುವ ಯಾವ ಚಿತ್ರಕ್ಕೂ ಪೇಟೆಯಿಂದ ಬಣ್ಣ ತರುವ ಹಾಗಿಲ್ಲ.ಪರಿಸರದಲ್ಲಿ ಲ‘ವಾಗುವ ಬಣ್ಣಗಳೇ ಚಿತ್ರದ ಬಣ್ಣಗಳು. ಇದಕ್ಕಾಗಿ  ಗ್ರಾಮೀಣ ಪ್ರದೇಶಕ್ಕೆ ವಿದ್ಯಾರ್ಥಿಗಳು ಹೋದಾಗ  ಬೇಂಗ ಮರದ ತೊಗಟೆಯಲ್ಲಿ  ಬರುವ ಕೆಂಪು ಬಣ್ಣ , ತೇಗದ ಮರದ ಎಲೆಯಲ್ಲಿ  ಬರುವ ಕೆಂಪು ಬಣ್ಣ ಇದನ್ನೆಲ್ಲಾ ಪ್ರಾತ್ಯಕ್ಷಿಕೆ ರೂಪದಲ್ಲಿ  ತೋರಿಸಿ ,  ಚಿತ್ರಕ್ಕೆ ಹೊಂದಿಕೆಯಾಗುವ ಬಣ್ಣವನ್ನು  ರಚನೆ ಮಾಡುವಂತೆ ಮಕ್ಕಳಿಗೆ ತಿಳಿಸಲಾಗಿತ್ತು. ಹೀಗಾಗಿ ಮಕ್ಕಳು  ಚಿತ್ರಕ್ಕಾಗಿ ಪೆನ್ನು , ಪೆನ್ಸಿಲ್ ಜೊತೆಗೆ ವಿವಿಧ  ಗಿಡಗಳ ಎಲೆಗಳು , ಸುಣ್ಣ , ಕಾಡಿಗೆ , ಹುಲ್ಲು , ಸೊಪ್ಪು  ಇತ್ಯಾದಿಗಳ ರಸ ತೆಗೆದು ಚಿತ್ರಕ್ಕೆ ಹಚ್ಚುತ್ತಿದ್ದಾರೆ. ಈಗ ಸುಮಾರು  ೫೭ ಬಗೆಯ  ಬಣ್ಣವನ್ನು  ಇದೇ ರೀತಿ  ಗಿಡಗಳ ಎಲೆಗಳಿಂದಲೇ ತಯಾರು ಮಾಡುತ್ತಿದ್ದಾರೆ.ಇದೆಲ್ಲಾ ಮಕ್ಕಳ ಮನಸ್ಸಿನ ಒಳಗೆ ಅಡಗಿರುವ ಸಂಶೋಧಕ ಗುಣ , ಇಡೀ ಚಿತ್ರದ ಮೂಲಕ ಮಕ್ಕಳ ವಯಸ್ಸು  ಹಾಗೂ ಮನಸ್ಸನ್ನು ಅರ್ಥ ಮಾಡಿಕೊಳ್ಳು ಸಾಧ್ಯವಿದೆ ಅಂತಾರೆ ಮೋಹನ ಸೋನಾ.

ಏನೆಲ್ಲಾ ಚಿತ್ರ ಬಿಡಿಸಿದರು ಮಕ್ಕಳು . . :

ಇದು ಇನ್ನೊಂದು ಅಚ್ಚರಿ. ಸಾಮಾನ್ಯವಾಗಿ ಮಕ್ಕಳ ಮನಸ್ಸಿನ ಒಳಗಿನ ಚಿಂತನಾ ಚಟುವಟಿಕೆ ಇಲ್ಲಿ  ಅನಾವರಣಗೊಂಡಿದೆ. ಕಲಾವಿದರ ತಂಡ ಕೇವಲ ಗ್ರಾಮೀಣ ಪ್ರದೇಶಕ್ಕೆ ತೆರಳಿ ಮಕ್ಕಳಿಗೆ ವಿಚಾರ ತಿಳಿಸಿ ನಂತರ ಚಿತ್ರ ಬರೆಯುವುದಕ್ಕೆ ಹೇಳುತ್ತದೆ. ಈ ಸಂದರ್ಭದಲ್ಲಿ  ಮಕ್ಕಳು  ಬಿಡಿಸಿದ ಚಿತ್ರ ಅಚ್ಚರಿಯಾಗುತ್ತದೆ. ಮನೆಯಲ್ಲಿ  ಅಮ್ಮ  ಅಕ್ಕಿ  ಕಡೆಯುವ ಚಿತ್ರ , ಆ ಬೀಸುವ ಕಲ್ಲಿನ ಪಕ್ಕ  ಕುಳಿತಿರುವ ಬೆಕ್ಕು , ಅಲ್ಲೇ ನೀರಿನ ಪಾತ್ರೆ. ಅದಾದ ನಂತರ ಇನ್ನೊಂದು ಚಿತ್ರ ರಬ್ಬರ್ ಟ್ಯಾಪಿಂಗ್ , ತಲೆಯಿಂದ ಹೇನು ಹೆಕ್ಕುವುದು , ಲಗೋರಿ ಆಟ , ಹಟ್ಟಿ , ಸೈಕಲ್ ರಿಪೇರಿ , ಮದುಮಗಳ ಸಿಂಗಾರ , ಅಡುಗೆ. . ಹೀಗೇ ಒಂದಕ್ಕಿಂತ ಮತ್ತೊಂದು ಭಿನ್ನ.

ತಂಡದಲ್ಲಿ  ಯಾರೆಲ್ಲಾ ಇದ್ದಾರೆ :

ಈ ಕಲಾವಿದ ತಂಡದಲ್ಲಿ  ಯಾವುದೇ ಶುಲ್ಕ ಇಲ್ಲದೆ , ಕಲಾವಿದರು ಭಾಗವಹಿಸುತ್ತಾರೆ. ಮೋಹನ್ ಸೋನಾ , ಚಂದ್ರ ಸೌಗಂಧಿಕ , ಎಂ.ಜಿ.ಕಜೆ , ಕುಸುಮಾಧರ ಸೋನಾ , ಗಂಗಾಧರ ನಾಯ್ಕ್  ಕೆಲಸ ಮಾಡುತ್ತಿದ್ದಾರೆ.