

ನೀವಿದನ್ನು ನಂಬಿ ... ನಂಬಲೇಬೇಕು ಕೂಡಾ...
ಅಬ್ಬಾ....!
ಸುಬ್ರಹ್ಮಣ್ಯ - ಪುತ್ತೂರು ರಸ್ತೆಗೆ ಡಾಮರೀಕರಣಕ್ಕೆಮಂಗಳವಾರದಂದು ಚಾಲನೆ ನೀಡಲಾಯಿತು.ಈ ರಸ್ತೆಯು ಮರುಡಾಮರೀಕರಣಗೊಳ್ಳದೆ ಸುಮಾರು 42 ವರ್ಷ ಕಳೆದಿದೆ. ಹಾಗಾಗಿ ಈಗ ನಂಬಿ ಅಂತ ನಾನು ಹೇಳಿದ್ದು.
ಡಾಮರೀಕರಣವನ್ನು ಸುಬ್ರಹ್ಮಣ್ಯದಿಂದ ಸುಮಾರು 25 ಕಿ ಮೀ ದೂರದಿಂದ ಆರಂಭಗೊಂಡಿದ್ದು ಸುಬ್ರಹ್ಮಣ್ಯದ ಕಡೆಗೆ ಆಗಮಿಸುತ್ತಿದೆ.ಅದರಾಚಗೆ ಇನ್ನೊಬ್ಬರು ಗುತ್ತಿಗೆದಾರರು ಡಾಮರೀಕರಣ ಮಾಡುತ್ತಾರೆ.
ಅಂದು ರಸ್ತೆ ಸರಿಯಿಲ್ಲ ಎಂದು ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಪಂಜ ಜೇಸೀ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿದೆ ರಸ್ತೆ ತಡೆ ಹಾಗೂ ಪ್ರತಿಭಟನೆ ಮಾಡಲಾಗಿತ್ತು. ಆಗ ಅಧಿಕಾರಿಗಳು ಮರುಡಾಮರೀಕರಣದ ಭರವಸೆ ನೀಡಿದ್ದರು.
ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಗುಂಡ್ಯ - ಸುಬ್ರಹ್ಮಣ್ಯ ಬಹುತೇಕ ಸುಧಾರಿಸಿದೆ. ಆದರೆ ಉಪ್ಪಿನಂಗಡಿ-ಕಡಬ ರಸ್ತೆ ಮಾತ್ರಾ ಹದಗೆಟ್ಟಿದೆ. ಅದೊಂದು ದುರಸ್ಥಿಯಾದರೆ ಸುಬ್ರಹ್ಮಣ್ಯ ಸಂಪರ್ಕವು ಭಕ್ತರಿಗೆ ಸ್ವಲ್ಪ ನೆಮ್ಮದಿಯಾದೀತು.
ಈಗ ಜನಪ್ರತಿನಿಧಿಗಳಿಲ್ಲ ಹಾಗಾಗಿ ಅಭಿನಂದನೆ ಬೇಕಾಗಿಲ್ಲ ಅದೊಂದು ನೆಮ್ಮದಿ.
ಅಂತೂ ಡಾಮರೀಕರಣ ಶುರುವಾಯಿತಲ್ಲಾ... ಅದರಿಂದಲೇ "ಕನಸೊಂದು" ಶುರುವಾಗಿದೆ..........!!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ