09 ಫೆಬ್ರವರಿ 2008

ಸಿಟಿ ಅಂದ್ರೆನೇ ತಲೆ ನೋವು... ಟ್ರಾಫಿಕ್ ಅಂದ್ರೆ ಇನ್ನಷ್ಟು....



ಮಿತ್ರ ವಿನಾಯಕ ಕೆಲ ದಿನಗಳ ಹಿಂದೆ ಊರಿಗೆ ಬಂದಿದ್ದ.

ಬೆಂಗಳೂರಿಗೆ ಉದ್ಯೋಗಕ್ಕಾಗಿ ತೆರಳಿದ 6 ತಿಂಗಳ ಬಳಿಕ ಮನೆಗೆ ಬಂದಿದ್ದ.ಹಿಂದಿನ ಸ್ನೇಹವನ್ನು ಆತ ಮರೆತಿರಲಿಲ್ಲ. ಹೇಗಿದ್ರೂ "ನಮ್ಮೂರ" ಹುಡುಗ ಅಲ್ವಾ ಬೆಂಗಳೂರಿಗೆ ಹೋದ ಮೇಳೆ ಆತನ ಹಾವ-ಭಾವ,ಮಾತಿನ ಶೈಲಿ ಬದಲಾಗಿರಲಿಲ್ಲ.ಹಾಗಾಗಿ ಕೊಂಚ ನೆಮ್ಮದಿಯಾಯಿತು.ಸುಮ್ಮನೆ ಕೇಳಿದೆ ಹೇಗಿದೆ ಕೆಲ್ಸ,ಹೇಗಿದೆ ಬೆಂಗ್ಳೂರು?.ಅಷ್ಟೇ ಪ್ರಾಮಾಣಿಕವಾಗಿ ವಿನಾಯಕ ಹೇಳಿದ " ಬೇಡ ಮಾರಾಯ.ಸಾಕಗಿ ಹೋಯ್ತು.ದಿನವಿಡೀ ಕೆಲ್ಸ್ ಕೆಲ್ಸ್..ಫ್ರೆಂಡ್ಸ್ ಗಳೊದಿಗೆ ಒಂದಿಷ್ಟು ಮಾತಾಡೋಕು ಸಮಯವಿಲ್ಲ.ರಾತ್ರಿ ಹಗಲೆನ್ನದೆ ಕೆಲಸ.ಒಂದು ರೀತಿಯಲ್ಲಿ ನಗರದ ಜನರಿಗೆ ಹಗಲು ರಾತ್ರಿಯ ವ್ಯತ್ಯಾಸವೇ ಗೊತ್ತಿಲ್ಲ.ಒಂದೊಂದು ಪ್ರದೇಶದಲ್ಲಿ ಮಧ್ಯರಾತ್ರಿಯೂ ಹಗಲು ವೇಳೆ ಇದ್ದಷ್ಟೇ ಜನ ಇರುತ್ತಾರೆ.ನನಗಂತೂ ನೆಮ್ಮದಿಯೇ ಇಲ್ಲವಾಗಿದೆ.ಅದಕ್ಕಿಂತಲೂ ಹೆಚ್ಚಾಗಿ ಅಲ್ಲಿ ಶುದ್ದ ಗಾಳಿ,ಮನಸ್ಸುಗಳ ಕೊರತೆಯಿದೆ,ಮಾತ್ರವಲ್ಲ ಇಲ್ಲಿನಂತೆ ಬೆಳೆಯಲು ಸಾಧ್ಯವಿಲ್ಲ" ಅಂತ ಹೇಳುತ್ತ ನಾನು ಈಗ ಇಲ್ಲಿನ ಶುದ್ದ ಗಾಳಿಯನ್ನು ತುಂಬಾ ಸೇವಿಸಿಕೊಂಡು ಹೋಗುತ್ತೇನೆ ಎಂದು ವಿವರಿಸುತ್ತಲೇ ಹೋದ.ಆತನಿಗೆ ಕೇವಲ 6 ತಿಂಗಳಲ್ಲೇ ಹಾಗೆ ಅನ್ನಿಸಲು ಕಾರಣ ಬೇರೆಯೇನಿಲ್ಲ ಚಿಕ್ಕಂದಿನಿಂದಲೂ ಆತ ಬೆಳೆದದ್ದು ಹಳ್ಳಿಯಲ್ಲೇ..!.ಈಗ ಅದರಲ್ಲಿ ಅಚ್ಚರಿಯೇನಿಲ್ಲ ಹಳ್ಳಿಯ ಮಂದಿಗೆ ನಗರಕ್ಕೆ ಹೋದರೆ ಹಾಗೆ ಅನ್ನಿಸದೆ ಇರದು.ಇನ್ನು ಒಂದು ವರ್ಷದಲ್ಲಿ ಆತನೂ ನಗರದ ಬದುಕಿಗೆ "ಹೊಂದಿಕೊಡರೆ" ಆಗಲೂ ಅಚ್ಚರಿಯಿಲ್ಲ.ಈಗ ನನಗನ್ನಿಸುತ್ತದೆ ಇದ್ದುದರಲ್ಲಿ ನಾನು ಧನ್ಯ..!. ಏಕೆ ಗೊತ್ತಾ ನಾನಿನ್ನೂ ಇಲ್ಲೇ ಇದ್ದೇನಲ್ಲಾ..! ಶುದ್ದ ಗಾಳಿ,ಒಂದಿಷ್ಟು ಶುದ್ದ ಜನ,ಶುದ್ದ ಮನಸ್ಸು ಸಿಗುತ್ತಲ್ಲಾ.ಹಣದ ವಿಚಾರ ಬಿಡಿ..

ಇಂದು ನನ್ನಂತಹ ಅನೇಕ ಯುವಕರು ಹಳ್ಳಿಯ ಬೇರನ್ನು ಬಿಟ್ಟು ನಗರದ ಬಳ್ಳಿಯ ಕಡೆಗೆ ಹೋಗುವಾಗ ನಾನು ಇಲ್ಲೇ ಇದ್ದೇನಲ್ಲಾ ಅಂತ ಅನೇಕ ಬಾರಿ ಅನ್ನಿಸಿತ್ತು.ಆರಂಭದಲ್ಲಂತೂ ಹಳ್ಳಿ ಬೇಡ ನಗರವೇ ವಾಸಿ ಎಂದು ಕೆಲಸದ ಹುಡುಕಾಟ ಆರಂಭಿಸಿದ್ದೆ.ಮನಸ್ಸು ತೊಳಲಾಟದಲ್ಲಿತ್ತು.ಒಮ್ಮೆ ಅವಕಾಶವೂ ಸಿಕ್ಕಿತು.ಮತ್ತೆ ಮನಸ್ಸು ಬೇಡ ಎಂದಿತು ಹಳ್ಳಿಯಲ್ಲೇ ಉಳಿದೆ..!

ಈಗ ಹಳ್ಳಿಯ ಕಡೆಗೆ ನೋಡಿದರೆ ಅಲ್ಲಿ ಯುವಕರ ದಂಡೇ ಕಡಿಮೆಯಾಗುತ್ತಿದೆ.ಅಲ್ಲಿ ಮೊದಲಿನ ಆರ್ಭಟದ ಚಟುವಟಿಕೆ ಈಗ ಕಾಣುತ್ತಿಲ್ಲ.ಸಭೆ ಸಮಾರಂಭಗಳಲ್ಲಿ ತಲೆ ಕೂದಲು ಬೆಳ್ಳಗಾದವರೇ ಕಾಣಸಿಗುತ್ತಾರೆ.ಅಂತಹವರ ನಡುವೆ ನನ್ನಂತಹ ಕೆಲ ಹುಡುಗರು ಸಿಗುತ್ತಾರೆ.ಇಂದಿನ ನನ್ನ ಮಿತ್ರರು ಹಳ್ಳಿಯನ್ನು ಬಿಟ್ಟು ನಗರವನ್ನು ಸೇರಲೂ ಕಾರಣವಿದೆ.ಇಲ್ಲಿ ಸೌಲಭ್ಯಗಳಲ್ಲಿ,ಹಣ ಸಂಪಾದನೆಯ ದಾರಿಗಳು ಸುಲಭವಲ್ಲ ಎಂದೆಲ್ಲಾ ಚಿಂತಿಸಿ "ಸುಲಭ"ದ ದಾರಿಯನ್ನು ಅರಸುತ್ತಾರೆ.ಅದಕ್ಕೆ ತಕ್ಕಂತೆ ನಮ್ಮ ಸಮಾಜದಲ್ಲಿ ಅದನ್ನೇ ಮಾತನಾಡುತ್ತಾರೆ.ಇನ್ನು 10 ವರ್ಷಗಳ ನಂತರ ಹೇಗಪ್ಪಾ?.ಹಳ್ಳಿ ಅಂದರೆ ಕಷ್ಟ....! ಹೀಗೇ ಮಾನಸಿಕವಾಗಿ ನನ್ನ ಮಿತ್ರರನ್ನು ದುರ್ಬಲರಾನ್ನಾಗಿಸುತ್ತಾ ಹೋಗುತ್ತಾರೆ.ಇನ್ನೊಂದು ನೋಡಿ ಒಬ್ಬರು,ನಿನಗೇನು ಕೆಲಸ? ಏನು ಕೃಷಿಯಲ್ಲೇ ಇದ್ದಿ ? ಬೇರೆ ಕೆಲಸ ನೋಡಿಲ್ವಾ.? ಅಂತ ಕೇಳುತ್ತಾರೆ.ಅವರಿಗೆ ನಾನು ಹೇಳುವುದು, ಸ್ವಾಮಿ ಕೃಷಿಯೂ ಒಂದು ಕೆಲಸವೇ. ಆದರೆ ಫಲ ಮಾತ್ರ ಇಂದಿನಿಂದ ನಾಳೆಗಲ್ಲ ವರ್ಷದ ಬಳಿಕ.ಅದನ್ನು ಅರ್ಥ ಮಾಡಿಕೊಳ್ಳಿ.ಕೃಷಿಕ ಎಂದಿಗೂ ನಿರುದ್ಯೋಗಿಯಲ್ಲ ,ಆತ ಸೋಮಾರಿಯೂ ಅಲ್ಲ.ಆತ ನಿಮಗಿಂತ ಭಿನ್ನ.ಆತ "ಸ್ವತಂತ್ರ" ಎಂದು ಛೇಡಿಸುತ್ತೇನೆ.ನನ್ನ ಮಿತ್ರರಿಗೆ ಇಂತಹವರ ಮಾತು ಮನಸ್ಸನ್ನು ನಾಟಿತು ಅವರು ನಗರದ ಹಾದಿ ಹಿಡಿದರು.ತಪ್ಪಿಲ್ಲಾ ಬಿಡಿ ನಮ್ಮ ಸಮಾಜವೇ ಅವರನ್ನು ಹಾಗೆ ಮಾಡಿದ್ದು.

ಆದ್ರೆ ಈಗ ಹಳ್ಳಿ ಬದಲಾಗುತ್ತಿದೆ.ಹಳ್ಳಿ ಅಂದ್ರೆನೇ ನೆಮ್ಮದಿ.ಈಗ ಯಂತ್ರಗಳು ಬಂದಿದೆ,ತಾಂತ್ರಿಕ ವ್ಯವಸ್ಥೆ ಬಲಗೊಡಿದೆ,ಸೌಲಭ್ಯಗಳು ನಗರಕ್ಕಿಂತ ಏನು ಕಮ್ಮಿ ಎನ್ನುವಷ್ಟು ಬರತೊಡಗಿದೆ.ಮನೆಯಿಂದಲೇ ಜಗತ್ತನ್ನು ಅಂತರ್ ಜಾಲದ ಮೂಲಕ ಸುತ್ತಾಡಬಹುದು,ಅಮೇರಿಕಾದ ಮಿತ್ರನಲ್ಲಿ ಚಾಟ್ ಮಾಡಬಹುದು, ಇನ್ನು ಮೊಬೈಲ್,ಟಿವಿ,ಕಾರು ಕಡಿಮೆ ವೆಚ್ಚದಲ್ಲಿ ಲಭ್ಯವಾದರೆ ಬಹುರೂಪಿ ಬಂಗ್ಲೆ.... ಹೀಗೆ ಏನು ಬೇಕು ಎಲ್ಲವೂ ಇಲ್ಲಿ ಈಗ ಲಭ್ಯ.ಅದಕ್ಕಿಂತ ಹೆಚ್ಚು ಮಾನಸಿಕವಾದ ನೆಮ್ಮದಿ,ಕುಟುಂಬದವರೊಂದಿಗಿನ ಒಡನಾಟ... ಮಿತ್ರರೊಂದಿಗಿನ ಓಡಾಟ... ಹರಟೆಗೆ ಸಮಯ... ಶುದ್ದ ಗಾಳಿ... ಮನಸ್ಸುಗಳು... ಇದೆಲ್ಲವೂ ನಗರದಲ್ಲಿ ಸಾಧ್ಯನಾ..? ಹಾಗಾಗಿ ಹಳ್ಳಿ ಅಂದ್ರೆ ಅದೇ ಸ್ವರ್ಗ ಅಂತ ನನ್ನ ಇನ್ನೊಬ್ಬ ಮಿತ್ರ ಹೇಳಿದ್ದು ಹೌದು ಅಂತ ಅನ್ನಿಸಿತು.ಇಲ್ಲಿ ಕೆಲವೊಂದು ತೊಂದರೆಗಳಿವೆ ಬಿಡಿ.ಅದೆಲ್ಲಾ ಏನೂ ಮಹಾ ಅಲ್ಲ.ನಗರದ ಬದುಕು ನೋಡಿದ್ರೆ ಅದು ಸಮಸ್ಯೆಯೇ ಅಲ್ಲ.ಇಲ್ಲಿ 5 ಕಿ ಮೀ ಹೋಗಲು 5 ನಿಮಿಷ ಸಾಕಾದರೆ ನಗರದಲ್ಲಿ ಏನಿಲ್ಲವೆಂದರೂ 30 ನಿಮಿಷ ಗ್ಯಾರಂಟಿ..!.ಅಲ್ಲೆಲ್ಲಾ ಟ್ರಾಫಿಕ್... ಟ್ರಾಫಿಕ್....!.ಅದೂ ಬೇರೆ ತಲೆ ನೋವು.ತುರ್ತಾಗಿ ಹೋಗಲಿದ್ದರೆ ದೇವರೇ ಗತಿ..!ಇನ್ನು ಕರೆಂಟ್ ಕೈ ಕೊಟ್ರೆ ಗೋವಿಂದ ... ನೀರಿಲ್ಲಾಂದ್ರೆ ಶಿವ .. ಶಿವಾ.. ಮೊಬೈಲ್ ಇಲ್ಲಾಂದ್ರೆ ಬದುಕೇ ಇಲ್ಲ..ದಿನಸಿ ,ತರಕಾರಿಗಳ ಬೆಲೆ ಏರಿದ್ರೆ ಅಯ್ಯೋ...! ಹೇಗಿದೆ ಬದುಕು..?.

ನನ್ನ ಮಿತ್ರೆರೇ ಒಂದು ಗಮನಿಸಿ,ನನ್ನ ಪರಿಚಿತರೊರ್ವರು ಬೇಕಾದವರೊಬ್ಬರು ನಗರಪ್ರದೇಶದಲ್ಲಿ ಉದ್ಯೋಗದಲ್ಲಿದ್ದಾರೆ.ಈಗ ಅವರು ನೂತನವಾಗಿ ಸ್ಥಳವೊಂದನ್ನು ಖರೀದಿಸುವ ಯೋಚನೆಯಲ್ಲಿದ್ದಾರೆ.ಅವರು ನಗರದಲ್ಲಿ ಹತ್ತಾರು ವರ್ಷಗಳಿಂದ ಬದುಕುತ್ತಿದ್ದವರು.ಈಗ ಜಾಗ ನೋಡುವುದೆಲ್ಲಿ ಗೊತ್ತಾ.? ಅಚ್ಚರಿಯಾಗಬಹುದು... ಹಳ್ಳಿಯ ಪ್ರಶಾಂತವಾದ ಸ್ಥಳವನ್ನು...!. ಇನ್ನೊಬ್ಬರು ಈಗಾಗಲೇ ಖರೀದಿಸಿದ್ದಾರೆ. ತಿಂಗಳಿಗೊಮ್ಮೆ ಬೆಂಗಳೂರಿನಿಂದ ಬರುತ್ತಿದ್ದಾರೆ.ಈಗ ಅವರು ಹೇಳುವುದು ಏನು ಗೊತ್ತಾ This is permanent asset..!

ಮಿತ್ರರೇ ನಗರದಲ್ಲಿ ಸಂಪಾದಿಸಿ..ಆದರೆ ಹಳ್ಳಿಯ ಸೊಗಡನ್ನು ಮರೆಯಬೇಡಿ.ಮತ್ತೆ ಹಳ್ಳಿಗೇ ಬನ್ನಿ ನೀವು ಕ್ರಿಯಾಶೀಲರಾದರೇ ಹಳ್ಳಿಯಲ್ಲೇ ಚಿಕ್ಕದೊಂದು ಉದ್ಯೋಗವನ್ನೂ ಮಾಡಬಹುದು.ಇಲ್ಲವಾದರೆ ಸಂಘಟನೆಗಳಲ್ಲಿ ದುಡಿಯಬಹುದು ಆ ಮೂಲಕ ನಮ್ಮ ಕೆರಿಯರ್ ರೂಪಿಸಬಹುದು ಅಲ್ವಾ.? ಹಣ ಇರಲಿ.... ನೆಮ್ಮದಿಯೂ ಬೇಕಲ್ವಾ..!

ಮಿತ್ರ ವಿನಾಯಕನನ್ನು ನಾನು ನೆನಪಿಸಿಕೊಂಡದ್ದು ಅವನ ಚಟುವಟಿಕೆಗೆ,ಈಗಲೂ ನನಗೂ ಅವನಿಗಿರುವ ಮಿತ್ರತ್ವದ ಬಗ್ಗೆ ಆತನಿಗೆ ಹಳ್ಳಿಯ ಮೇಲಿರುವ ಪ್ರೀತಿಯ ಬಗ್ಗೆ. ವಿನಾಯಕ ನಗರದಲ್ಲಿದ್ದರೂ ನನ್ನ ಬಗ್ಗೆ ಅಂದರೆ ಹಳ್ಳಿಯ ಬಗ್ಗೆ ಚಿಂತಿಸುತ್ತಾನಲ್ಲ ನನಗೆ ಅದು ಖುಶಿ ಕೊಟ್ಟಿತು. ವಿನಾಯಕ ನನ್ನನ್ನು ಮತ್ತೆ ಮತ್ತೆ ನೆನಪಿಸಿದೆಯಲ್ಲಾ Hatsoff And also Good luck.

1 ಕಾಮೆಂಟ್‌:

Hari ಹೇಳಿದರು...

Dear Mahesh,

Excellent...not sure there are so many words there than these, but i can say excellent article....about a best frined...

I think both of you scared about citi life as per my understanding especially in Bangalore.

But tell me Mahesh,
There are so many students investing for their education, obisously they have to grab or afford one job to get some written right? So the first option is "Bangalore".

Let me explian about my case,
Really i left native due to (I can specify) internal politics in the society.It dose' nt men that am leaving parents alone there. So please don' t realy too much on society.If am wroong you have to correct me.