31 ಮಾರ್ಚ್ 2008

ಮಳೆ ಬಂತು ಇಳೆ ತಂಪಾಯ್ತು... ಆದ್ರೆ...?



ಮಳೆಯಿಂದ ಇಳೆ ತಂಪಾಯಿತು... ಮತ್ತೆ ಕಾದು ಕೆಂಪಾಯಿತು...... ಮತ್ತೆ ಮಣ್ಣಿನ ಕಂಪು ಪಸರಿಸಿತು........

ಈಗ ಒಂದು ಪ್ರಶ್ನೆ ಉದ್ಭವಿಸಿದೆ.

ಅಂದು ಮಳೆ ಬಿತ್ತನೆಯ ಮೂಲಕ ಮಳೆ ಬರಿಸಿದವರು ಈಗ ಮಳೆಯನ್ನು ನಿಲ್ಲಿಸಬಲ್ಲರೇ?

ಯಾಕೆಂದರೆ ಈಗಲೇ ಮಳೆಗಾಲದ ಅಬ್ಬರ ಆರಂಭವಾಗಿದೆ.ರೈತರು ಬೆಳೆದ ಬೆಳೆಗಳೆಲ್ಲಾ ನಾಶವಾಗುತ್ತಿದೆ.ಹಾಗಾಗಿ ಈಗ ಮಳೆ ನಿಲ್ಲಿಸಲು ತಂತ್ರವಿದೆಯೇ ಅಂತ ಹಳ್ಳಿಯ ರೈತರು ಪ್ರಶ್ನಿಸುತ್ತಿದ್ದಾರೆ. ಅಂದು ಪ್ರಕೃತಿಯೊಂದಿಗೆ ಆಟವಾಡಿದ ವಿಜ್ಞಾನವು ಈಗ ಕಟ್ಟುಕತೆಯನ್ನು ಹೇಳುತ್ತಾ ಈ ಬಾರಿ ಮಳೆ ಬೇಗವಿದೆ , ಹವಾಮಾನದ ವೈಪರೀತ್ಯವೇ ಮಳೆಗೆ ಕಾರಣ ಮಳೆ ಇನ್ನು ಎರಡು ದಿನದಲ್ಲಿ ಕಡಿಮೆಯಾಗಲಿದೆ ಎಂದು ಹೇಳಿದ ಮರುದಿನವೇ ಧಾರಾಕಾರ ಮಳೆ ಸುರಿಯುತ್ತದೆ.ಇದು ಪ್ರಕೃತಿ ಮತ್ತು ವಿಜ್ಞಾನದ ವೈರುಧ್ಯ. ಹಾಗಾಗಿ ಇಂದು ಹಳ್ಳಿಯ ಮಂದಿ ವಿಜ್ಞಾನದ ಕಡೆಗೆ ಒಲವಿದ್ದರೂ ವಿಜ್ಞಾನಿಗಳ ಮಾತಿಗೆ ಆಸಕ್ತಿ ತೋರುತ್ತಿಲ್ಲ. ಅದು ಕೃಷಿ ವಿಜ್ಞಾನಿಗಳನ್ನೂ ಹೊರತಾಗಿಲ್ಲ.

ಇಂದು ಪರಿಸರದ ತೀರಾ ಹದಗೆಟ್ಟಿದೆ ಅನ್ನುವುದಕ್ಕೆ ಈಗಿನ ಅಕಾಲ ಮಳೆಯೇ ಸಾಕ್ಷಿ. ಇದಕ್ಕೆ ತಕ್ಕಂತೆ ಕೆಲವು ಯೋಜನೆಗಳು ಪ್ರಾಕೃತಿವಾಗಿ ರಚನೆಗೊಂಡ ಕೆಲವು ಅಡ್ಡಗೋಡೆಗಳನ್ನು ಸರಕಾರವು ರಾಜಕೀಯ ಉದ್ದೇಶಕ್ಕಾಗಿ ಬಲಿತೆಗೆದುಕೊಳ್ಳತ್ತಿದೆ. ಇದೆಲ್ಲದರ ಪರಿಣಾಮವಾಗಿ ಇಂದು ಅಕಾಲ ಮಳೆಯಂತಹ ಪರಿಸ್ಥಿತಿ ಕಂಡುಬಂದಿದೆ.ಹಳ್ಳಿಯಲ್ಲಿ ಪಶ್ಚಿಮದಿಂದ ಮೋಡ ಕವಿದು ಮಳೆ ಆರಂಭವಾಯಿತೆಂದರೆ ಮಳೆಗಾಲವೆಂದೇ ಅರ್ಥ ಎಂದು ಭಾವಿಸಿಕೊಳ್ಳುತ್ತಾರೆ. ಇದುವರೆಗಿನ ಕಾಲ ಪದ್ದತಿಯಲ್ಲಿ ಇದು ನಿಜವಾಗಿತ್ತು. ಆದರೆ ಈ ವರ್ಷ ಹೇಗೆ ಎಂಬುದು ಇದುವರೆಗೆ ಗೊತ್ತಿಲ್ಲ.ಯಾರೇ ಒಬ್ಬ ಅಜ್ಜಿಯಲ್ಲಿ ಕೇಳಿ ಇದುವರೆಗಿನ ಅವರ ನೆನಪಲ್ಲಿ ಮಾರ್ಚ್ ವೇಳೆಗೆ ಹೀಗೆ ಸತತ ಮಳೆ ಸುರಿದ ಬಗ್ಗೆ ತಿಳಿದಿದೆಯಾ? ಎಂದರೆ ಅವರು ಸ್ಪಷ್ಟವಾಗಿ ಇಲ್ಲ ಅಂತಲೇ ಹೇಳುತ್ತಾರೆ.

ಹಾಗಾದ್ರೆ ಇದೇನು ಈ ಬಾರಿ ಮಳೆ.ಗ್ಲೋಬಲ್ ವಾರ್ಮಿಂಗ್ ಪರಿಣಾಮವಾ?.ಹೆಸರು ಯಾವುದಾದರೂ ಕೊಡೋಣ. ನಮ್ಮ ಪರಿಸರ ಈಗ ಮೊದಲಿನಂತಿಲ್ಲ ಅಂತ ಹೇಳಲು ನಾವೇ ಸಾಕಲ್ವೆ.ಹೀಗೆ ಮಳೆ ಸುರಿದರೆ ಮುಂದಿನ ಪರಿಣಾಮವೇನು? ಅಂತ ಯೋಚಿಸುತ್ತಿರುವಾಗಲೇ ಒಂದು ಸುದ್ದಿ ಬಂದಿದೆ. ಸದ್ಯದಲ್ಲೇ ಅಕ್ಕಿಯ ಬೆಲೆ 20 ರೂ ದಾಟಲಿದೆ.

ಈಗ ಹೀಗೆ ಮಳೆ ಸುರಿದರೆ ರೈತರು ಬೆಳೆದ ಭತ್ತವೂ ನಾಶವಾದರೆ.ಅಕ್ಕಿಯ ಬೆಲೆಯ ಬಗ್ಗೆ ಯೋಚಿಸಬೇಕಾಗಬಹುದು.ಮೊನ್ನೆ ಮಿತ್ರರೊಬ್ಬರು ಹೇಳುತ್ತಿದ್ದರು ಈಗ ಭತ್ತವನ್ನು ಇತರ ರಾಜ್ಯಗಳಿಂದ ಹೇರಳವಾಗಿ ತರಿಸಿಕೊಳ್ಳುತ್ತೊದ್ದಾರಂತೆ .ಯಾಕಂದ್ರೆ ಇಲ್ಲಿ ಭತ್ತದ ಉತ್ಪಾದನೆ ಕುಂಟಿತವಾಗಿ ಅಗತ್ಯಕ್ಕೆ ತಕ್ಕಂತೆ ಪೂರೈಕೆಯಾಗುತ್ತಿಲ್ಲವೆಂದು ಅವರು ವಿವರಿಸುತ್ತಿದ್ದರು.ಇಂತಹ ಸಮಯದಲ್ಲಿ ಮಳೆಯ ಕಾಟದಿಂದಾಗಿ ಇದ್ದ ಭತ್ತದ ಪೈರು ನಾಶವಾದರೆ ಮುಂದಿನ ಭವಿಷ್ಯದ "ವಿಷ್ಯ" ಏನು ಎಂಬುದರ ಬಗ್ಗೆ ಚಿಂತಿಸಬೇಕಾಗಬಹುದು.

ಮಳೆಯೇ ಏನು ನಿನ್ನ ಲೀಲೆ....!!!?

ಕಾಮೆಂಟ್‌ಗಳಿಲ್ಲ: