14 ಮಾರ್ಚ್ 2008

"ಮೊಬೈಲ್" ಪ್ರತಿಭಟನೆ..!




ಮೊಬೈಲ್ ಸೇವೆ ಒದಗಿಸುವಂತೆ ಪ್ರತಿಭಟನೆ...!.

ನಿಜ... ಹಳ್ಳಿಗಳಲ್ಲಿಂದು ಮೊಬೈಲ್ ಸೇವೆಯ ಜರೂರು ಇದೆ.ಇಡೀ "ಜಗತ್ತೇ ಈಗ ಕೈಯೊಳಗಿರುವ" ವೇಳೆ ಹಳ್ಳಿಗಳೂ ಮುಂದುವರಿಯುವ ಬಯಕೆಯನ್ನು ವ್ಯಕ್ತಪಡಿಸುತ್ತಾ 'ನಗರ'ವಾಗಿ ಪರಿವರ್ತನೆಯಾಗುತ್ತಿದೆ.ಈ ಸಂದರ್ಭದಲ್ಲಿ ಅಲ್ಲಿ ಮೊಬೈಲ್ ಸೇವೆಗಳ ಅಗತ್ಯವಿದೆ.ದಿನನಿತ್ಯದ ಸಂಶೋಧನೆಗಳ ಪ್ರಕಾರ ಮೊಬೈಲ್ ಸಿಗ್ನಲ್ ಅಥವಾ ರೇಡಿಯೇಶನ್ ಜೀವಕ್ಕೆ ಹಾನಿ ಎಂಬ ಸಂದೇಶಗಳು ಬರುತ್ತಿದ್ದರೂ ಅದನ್ನು ಬದಿಗಿಟ್ಟು ಮೊಬೈಲ್ ಸೇವೆಯೇ ತುರ್ತು ಎಂಬುದು ಇಂದಿನ ವಿದ್ಯಮಾನದ ಸಂದೇಶ.ಅನೇಕ ಜೀವರಾಶಿಗಳಿಗೆ ತೊಂದರೆಯಿದೆ ಎಂದರೂ ಈಗ ಅದು ಲೆಕ್ಕಕ್ಕಿಲ್ಲ.

ಮೊಬೈಲ್ ಈಗ ಯಾರಿಗೆ ಬೇಡ ಹೇಳಿ.ಹುಟ್ಟಿದ ಮಗುವಿನಿಂದ ಹಿಡಿದು ವೃದ್ಧರವರೆಗೆ ಮೊಬೈಲ್ ಅನಿವಾರ್ಯವಾಗಿ ಬಿಟ್ಟಿದೆ.ಇನ್ನು ವರ್ಷ ತುಂಬಿರದ ಮಗು ಅಳುವುದನ್ನು ನಿಲ್ಲಿಸಲು ಮೊಬೈಲ್ ಹಾಡು ಪರಿಣಾಮ ಬೀರುತ್ತದೆ.ಬಾಲಕರಿಗೆ ಆಟದ ವಸ್ತುವಾದರೆ ಯುವಕರಿಗೆ ಹರಟುವುದಕ್ಕೆ ಸುಲಭ ಮಾರ್ಗವಾಗುತ್ತದೆ.ವೃದ್ಧರಿಗೆ ತುರ್ತು ಸಂದರ್ಭದಲ್ಲಿ ಅನುಕೂಲವಾಗುತ್ತದೆ. ಹೀಗೆಯೇ ಈಗ ಮೊಬೈಲ್ ಯುಗವಾಗಿ ಪರಿವರ್ತನೆಯಾಗಿದೆ,ಸುಮಾರು 10 ವರ್ಷಗಳ ಹಿಂದೆ ದೂರದಲ್ಲಿ ಮೊಬೈಲ್ ಸದ್ದು ಕೇಳಿಸುತ್ತಿತ್ತು.ಮೊಬೈಲ್ ಇದ್ದವರು "ದೊಡ್ಡ' ಜನ.ಆಗ ಒಳ ಬರುವ ಕರೆಗಳಿಗೂ ಶುಲ್ಕವಿತ್ತು. ದಿನಗಳೆದಂತೆ ಹಳ್ಳಿಯತ್ತಲೂ ಮೊಬೈಲ್ ದಾಪುಗಾಲು ಹಾಕಿತು.ಇಂದು ಮೊಬೈಲ್ ಇಲ್ಲದವ ಬರೀ "ಸಣ್ಣವ" ಎಂಬ ಭಾವನೆ ಬೆಳೆದಿದೆ. ಅದರಲ್ಲೂ ಇಂದು ಕಲರ್ ಮೊಬೈಲ್ ಸೆಟ್ಟು ಹೋಗಿ ಕ್ಯಾಮಾರಾ ಇರುವ ಸೆಟ್ಟಾದರೆ ಮಾತ್ರಾ ಮರಿಯಾದೆ.ಇಲ್ಲಾಂದ್ರೆ ಆತನದು ಮೊಬೈಲೇ ಅಲ್ಲ ಎಂಬ ಮಟ್ಟಕ್ಕೆ ಬೆಳೆದಿದೆ.ಮೊನ್ನೆ ಮೊನ್ನೆ ಹಳ್ಳಿಯಲ್ಲೂ ಬೆಟ್ಟಗಳ ಮೇಲೆ ಹತ್ತಿ ಮೊಬೈಲ್ ಮೂಲಕ ಮಾತನಾಡುತ್ತಿದ್ದರು.ಈಗ ಹಳ್ಳಿ ಹಳ್ಳಿಯಲ್ಲಿ "ಟವರ್" ಆಗಿದೆ ಸಂಪರ್ಕವಾಗಿಲ್ಲ.ಹಾಗಾಗಿ ಪ್ರತಿಭಟನೆಗಳು ಶುರುವಾಯಿತು.

ಮೊಬೈಲ್ "ಜೀವನ"ದಿಂದ ಒಳಿತಾದವುಗಳು ಕೆಲವೇ ಕೆಲವು ಸಂಗತಿಗಳಿರಬಹುದು.ಆದರೆ ಅದೆಷ್ಟೋ ಅನಾಹುತಗಳು ನಡೆದು ಹೋಗಿದೆ.ಅದರಲ್ಲೂ ಯುವಕರು "ಮೊಬೈಲ್" ಬದುಕಿಗೆ ಹೊಂದಿಕೊಂಡ ಪರಿಣಾಮವಾಗಿ ಈಗಾಗಲೇ ಅನೇಕ ಪ್ರಕರಣಗಳು ಪೊಲೀಸ್ ಇಲಾಖೆಯಲ್ಲಿ ದಾಖಲಾಗಿದೆ.ಕೆಲವು ಅತ್ಯಂತ ಭಯ ಹುಟ್ಟಿಸುತ್ತದೆ.

ಅಂತಹ ಕೆಲ ಘಟನೆಗಳು ಇಲ್ಲಿವೆ...

ಪ್ರಕರಣ - 1

ಶಾಲಾ ಅಧ್ಯಾಪರು ವಿವರಿಸಿದ ಘಟನೆ.
ಬಾಲಕ 6 ನೇ ತರಗತಿ.ಶಾಲೆಯಲ್ಲಿ ಮೊಬೈಲ್ ಕಡ್ಡಾಯವಾಗಿ ನಿಷೇಧವಿದೆ.ಆದರೂ ಬಾಲಕ ಮೊಬೈಲ್ ಮೂಲಕ ಹುಡುಗಿಯೊಬ್ಬಳ ಮನೆಗೆ ಆಗಾಗ ಫೋನ್ ಮಾಡತೊಡಗಿದ. ಹುಡುಗಿಯ ಮನೆಯಿಂದ ಪೊಲೀಸ್ ದೂರು ಹೋಯಿತು.ನಂಬರ್ ಪತ್ತೆ ಹಚ್ಚಿ ಬಂಧಿಸಲು ಹೋದಾಗ ಮೊಬೈಲ್ 40 ವರ್ಷದ ವ್ಯಕ್ತಿಯೊಬ್ಬರಲ್ಲಿತ್ತು.ನಂತರ ವಿಚಾರಿಸಿದಾಗ ಬಾಲಕ ಮನೆಯಲ್ಲಿದ್ದ ಮೊಬೈಲ್ ಆಗಾಗ ಶಾಲೆಗೆ ತರುತ್ತಿದ್ದ.ಅದೂ ಚಡ್ಡಿಯೊಳಗೆ ಇರಿಸಿ ಶಾಲೆಗೆ ತರುತ್ತಿದ್ದ ವಿಷಯ ಬಹಿರಂಗವಾಯಿತು.

ಪ್ರಕರಣ - 2

ಆತ ಇನ್ನೂ 4 ನೇ ತರಗತಿ.ತಂದೆಯ ಬಳಿ ಮೊಬೈಲ್ ಇತ್ತು.ಆದರೆ ಕಲರ್ ಅಲ್ಲ ಕ್ಯಾಮಾರಾ ಇಲ್ಲ.ಬಾಲಕ ತಂದೆಯನ್ನು ಒತ್ತಾಯಿಸಿದ್ದು ಕಲರ್ ಮತ್ತು ಕ್ಯಾಮಾರ ಇರುವ ಮೊಬೈಲ್ ಸೆಟ್ಟು ಬೇಕೆಂದು. ತಂದೆ ಈ ಬಗ್ಗೆ ಗಮನ ಹರಿಸಿಲ್ಲ. ಬಾಲಕ ಊಟ, ಓದು ಬಿಟ್ಟ.ಕೊನೆಗೆ ತಂದೆ ಸೋತು ನೂತನ ಸೆಟ್ಟು ಕರೀದಿಸಿಯೇ ಬಿಟ್ಟರು.

ಪ್ರಕರಣ -3

ಅದು ಡಿಗ್ರಿ ಕಾಲೇಜು.ಕಾಲೇಜಿನ ಹುಡುಗ - ಹುಡುಗಿಯರಲ್ಲಿ ಮೊಬೈಲ್ ಇದೆ.ಎಲ್ಲವೂ ಕ್ಯಾಮಾರಾ ಸೆಟ್ಟು.ಬಾಲಕರು ವಿದ್ಯಾರ್ಥಿನಿಯರ ಚಿತ್ರಗಳನ್ನು ಸೆರೆ ಹಿಡಿದು ಇನ್ನಿತರ ಕಾರ್ಯಗಳಲ್ಲಿ ದುರುಪಯೋಗಪಡಿಸಿಕೊಡರು.ವಿಷಯ ತಿಳಿದು ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿದರು.
ಹೀಗೇ ಅನೇಕ ಸಂಗತಿಗಳು ಯುವಕ ಯುವತಿಯರಿಂದ ನಡೆದು ಹೋಗುತ್ತವೆ

ಎಳೆಯ ಮಕ್ಕಳು ಅನುಕರಣೆ ಮಾಡುವುದರಲ್ಲಿ ಮುಂದಿದ್ದಾರೆ.ಅಮ್ಮ-ಅಪ್ಪ ಹೇಳುವ ಎಂದು ಮೊದಲು "ಹಲೋ" ಎನ್ನುತ್ತಾರೆ.ತಂದೆ ಮೊಬೈಲ್ ನ್ನು ಒಂದು ಕಿವಿಯಲ್ಲಿರಿಸಿ ಮಾತನಾಡುತ್ತಾ ಆ ಕಡೆ ಈ ಕಡೆ ಹೋಗುವುದನ್ನು ನೋಡುವ ಎಳೆಯ ಮಕ್ಕಳು ನಂತರ ಹಾಗೆಯೇ ತಾವೂ ಮಾಡುತ್ತಾರೆ.ಆಗ ಮೊಬೈಲ್ ಬೇಕೇ ಬೇಕು.

ಹೀಗೆಯೇ ಮೊಬೈಲ್ ಜಗತ್ತು ಮುಂದುವರಿಯುತ್ತಾ ಇತ್ತೀಚೆಗೆ ಸ್ಪೋಟದ ಸಂದರ್ಭದಲ್ಲೂ ಉಗ್ರರು ಬಳಸಿಕೊಳ್ಳುತ್ತಾರೆ ಎಂಬುದನ್ನು ಪೊಲೀಸ್ ಮೂಲಗಳು ಹೇಳುತ್ತಿರುವುದನ್ನು ನೋಡಿದರೆ ಆತಂಕವಾಗುತ್ತದೆ.

ಅಂತೂ ಅನೇಕ ಅವಘಡಗಳಿಗೆ ,ಮುಂದಿನ ಭವಿಷ್ಯಕ್ಕೆ ಮೊಬೈಲ್ ಅಪಾಯಕಾರಿ ಅಂತ ನಮಗೆ ತಿಳಿದಿದ್ದರೂ ಇಂದು ಮೊಬೈಲ್ ಮಾತ್ರಾ ಅನಿವಾರ್ಯವಾಗಿಬಿಟ್ಟಿದೆ.ಜೀವನದ ಭಾಗವೇ ಆಗಿ ಹೋಗಿದೆ.ಅದನ್ನು ಬಿಟ್ಟಿರಲು ಸಾಧ್ಯವಾ?.

ಕೊನೆಯ ಮಾತು : ಮೊಬೈಲ್ನಿಂದ ಅಪಾಯವಿದೆ ಅಂತ ಅರಿದ್ದರೂ ನಮಗೆ ಹಾನಿಯಿದೆ ಎಂದರೂ ನಾವು ಮೊಬೈಲ್ "ಬಿಡೆವು". ಮೂರ್ಖರು ನಾವೇನಾ...!?.

4 ಕಾಮೆಂಟ್‌ಗಳು:

Hari ಹೇಳಿದರು...

Hello Sir,

Where is the explanation about Guthigar programme?

ರಾಧಾಕೃಷ್ಣ ಆನೆಗುಂಡಿ. ಹೇಳಿದರು...

ಬನ್ನಿ, ಭೇಟಿಯಾಗೋಣ.
ಮತ್ತೊಂದು ಕನಸು ನನಸಾಗಲು ಹೊರಟಿದೆ. ಬಹುದಿನಗಳಿಂದ ಅಂದುಕೊಂಡಿದ್ದು.

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ! ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ.

ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ.

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಹರಿಯವರು ಹೇಳಿದಂತೆ ಗುತ್ತಿಗಾರು ಕಾರ್ಯಕ್ರಮದ ಬಗ್ಗೆ ಹೇಳಿರಲಿಲ್ಲ.ಜನರಲ್ ಆಗಿ ಹಳ್ಳಿಯ ಬಗ್ಗೆ ಹೇಳಿದ್ದೆ. ಗುತ್ತಿಗಾರಲ್ಲಿ ಏನಾಯಿತೆಂದರೆ.....BSNL ಮೊಬೈಲ್ ಟವರ್ ಆಗಿ ಸುಮಾರು 1 ವರ್ಷವಾಯಿತು.ಇನ್ನೂ ಚಾರ್ಜ್ ಆಗಿರಲಿಲ್ಲ ಹಾಗಾಗಿ ಮೊನ್ನೆ ನಾಗರೀಕರೆಲ್ಲ ಸೇರಿ ಪ್ರತಿಭಟನೆ ನಡೆಸಿ ,ಮೊಬೈಲ್ ಕೇಂದ್ರಕ್ಕೆ ಮುತ್ತಿಗೆ ಹಾಕಿದರು.ಆಗ ಅಧಿಕಾರಿಗಳು ಬಂದು ಸಂತೈಸಲು ಪ್ರಯತ್ನಿಸಿದಾಗ ಜನ ಸುಮ್ಮನಾಗಲಿಲ್ಲ ಮೇಲಾಧಿಕಾರಿಗಳೇ ಬರಬೇಕೆಂದರು.ಹಾಗಾಗಿ ದಿನ ಮುಂದೆ ಹೋಗಿದೆ.ಮತ್ತೆ ಮೇಲಾಧಿಕಾರಿಗಳು ಮಾ.17 ರಂದು ಗುತ್ತಿಗಾರಿಗೆ ಬರುತ್ತಾರೆ.ಅಲ್ಲಿಯವರೆಗೆ ವಿಶ್ರಾಂತಿ.

ವಿನಾಯಕ ಕೆ.ಎಸ್ ಹೇಳಿದರು...

ವರದಿ ಮಸ್ತ್ ಮಜವಾಗಿದೆ.