09 ಮಾರ್ಚ್ 2008

ನಿನ್ನೆಯ ಮತ್ತು ಇಂದಿನ ಮಹಿಳೆ...



ಮಹಿಳಾ ದಿನಾಚರಣೆ ಮುಗಿಯಿತು.

ಅನೇಕ ಪತ್ರಿಕೆಗಳಲ್ಲಿ,ದೂರದರ್ಶನಗಳಲ್ಲಿ ಮಹಿಳೆಯರಿಗಾದ ಅನ್ಯಾಯ,ಶೋಷಣೆಗಳದ್ದೇ ಮಾತು.ಈ ನಡುವೆ ಕೆಲ ಸಾಧನೆಗಳ ವಿಶ್ಲೇಷಣೆಯೂ ನಡೆಯುತ್ತಲಿತ್ತು.ಇದೆಲ್ಲದರ ಬಳಿಕ ಇಂದು ... ನಾಳೆ...?

ಮಹಿಳಾ ದಿನಾಚರಣೆಯಂದು ಮಾತ್ರಾ ಇಡೀ ಜಗತ್ತು ಮಹಿಳೆಯರತ್ತ ಚಿತ್ತ ಹರಿಸಿದರೆ ಮತ್ತೆ ನೆನಪಾಗುವುದು ಮುಂದಿನ ವರ್ಷವೇ.ಬೇಕಾದರೆ ನೀವು ಗಮನಿಸಿ ನೋಡಿ.. ಒಂದು ನೆಮ್ಮದಿಯೆಂದರೆ ಅಂದಾದರೂ ನೆನಪಿಸಿಕೊಳ್ಳುತ್ತಾರಲ್ಲಾ.ಇಂದು ಪ್ರತಿದಿನ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುತ್ತವೆ.ಅದರಲ್ಲಿ ಕೆಲವೇ ಕೆಲವು ಮಾತ್ರಾ ಹೊರಪ್ರಪಂಚಕ್ಕೆ ಬರುತ್ತಿದೆ.ಉಳಿದವೆಲ್ಲಾ ಮಾನ ,ಮರ್ಯಾದೆಯ ಹೆಸರಲ್ಲಿ ಮನೆ - ಮನದೊಳಗೇ ಬತ್ತಿ ಹೋಗುತ್ತಿದೆ. ಪ್ರತಿಯೊಬ್ಬ ಮಹಿಳೆ ಕೂಡಾ ಇಂದು ಸಾಮಾಜಿಕ ಜವಾಬ್ದಾರಿಗಳನ್ನು ಹೊರುವಷ್ಟು ಶಕ್ತಿವಂತಳಾಗಿದ್ದಾಳೆ.ಆದರೂ ಅನ್ಯಾಯಗಳನ್ನು ಪ್ರತಿಭಟಿಸುವ ದೊಡ್ಡ ಶಕ್ತಿ ಅವಳಲ್ಲಿ ಬೆಳೆದಾಗ ಮಾತ್ರಾ ಮಹಿಳಾ ದಿನಾಚರಣೆಯಂತಹುಗಳು ಅರ್ಥ ತರಬಲ್ಲುದು.

ಭಾರತವು ಮಹಿಳೆಗೆ ಅಂದಿನಿಂದಲೇ ಉನ್ನತ ಸ್ಥಾನ ನೀಡಿದೆ.ಇಲ್ಲಿ "ಮಾತೃ ದೇವೋ ಭವ" ಅತ್ಯಂತ ಶಕ್ತಿಶಾಲಿಯಾಗಿದೆ. ಆದರೂ ಅದನ್ನು ಆಚರಿಸುವವರಾರು ಎಂದು ಪ್ರಶ್ನಿಸುವವರಿರಬಹುದು.ಅದಕ್ಕೆ ಇಂದಿನ ಸಮಾಜ ,ಮಾಧ್ಯಮ ,ಪರಿಸರವೇ ಕಾರಣ. ಅಂದು ಹೇಳಿದ ಮಾತು ನೆನಪಾಯಿತು. ಯಾವಾಗ ಮಹಿಳೆ ನಡು ರಾತ್ರಿಯಲ್ಲಿ ಒಬ್ಬಂಟಿಯಾಗಿ ರಸ್ತೆಯಲ್ಲಿ ನಡೆದಾಡುವ ದಿನ ಬರುತ್ತೋ ಅಂದು ನಿಜವಾದ ಸ್ವಾತಂತ್ರ್ಯ ಬಂದಂತಾಗುತ್ತದೆ , ಮಹಿಳಾದಿನಾಚರಣೆಗೆ ಅರ್ಥ ಬರುತ್ತದೆ. ಇದಲ್ಲದೆ ಪ್ರತೀ ವರ್ಷ ಮಹಿಳಾ ದಿನಾಚರಣೆಯಂದು ಮಹಿಳೆಯರಿಗಾದ ಅನ್ಯಾಯವನ್ನು ಹಂಚಿ ಕೊಂಡು ಸುಮ್ಮನಾಗಬೇಕಾಗಬಹುದು. ಅನುದಿನವೂ ಮಹಿಳಾ ದಿನಾಚರಣೆಯಾದಾಗ ಮಹಿಳೆಯ ದಾರಿ ಸುಗಮವಾಗಬಹುದು.

3 ಕಾಮೆಂಟ್‌ಗಳು:

ಬಾನಾಡಿ ಹೇಳಿದರು...

ಕೊನೆಪಕ್ಷ ಹೆಂಗಸರು ಒಂದು ದಿನವಾದರೂ ಅವರಷ್ಟಕ್ಕೆ ಗಂಡಸರನ್ನು ಬಿಟ್ಟು ದಿನಾಚರಣೆಮಾಡ್ತಾರಲ್ಲ ಮಾರಾಯ.
http://banadi.blogspot.com/

ಬಾನಾಡಿ

Sushrutha Dodderi ಹೇಳಿದರು...

ಪ್ರಿಯರೇ,

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಬ್ಲಾಗಿಗೆ ಭೇಟಿ ನೀಡಿದ ಬಾನಾಡಿಯವರಿಗೆ ಹಾಗೂ ಸುಶ್ರುತರವರಿಗೆ ಧನ್ಯವಾದಗಳು.