06 ಮಾರ್ಚ್ 2008

"ರಾಜ್ಯ"ಪಾಲನೆಗೆ "ಕೃಷ್ಣಾ"ರ್ಪಣ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೃಷ್ಣ ದಂಪತಿಗಳು..




ಹೈಟೆಕ್ ಮುಖ್ಯ ಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಮತ್ತೆ ರಾಜ್ಯ ರಾಜಕೀಯ ಪ್ರವೇಶಕ್ಕೆ ಅಣಿಯಾಗಿದ್ದಾರೆ.ಈಗಾಗಲೇ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜ್ಯದ ಕೆಲ ರಾಜಕೀಯ ಮುಖಂಡಜಿಗೆ ಇದು ನುಂಗಲಾರದ ತುತ್ತಾಗಿದೆ.

ಮುಖ್ಯಮಂತ್ರಿಯಾಗಿದ್ದಾಗ ಹಳ್ಳಿಗರ ,ರೈತರ ಮನಗೆಲ್ಲದ ಕೃಷ್ಣ ನಗರದ ಅಭಿವೃದ್ಧಿಗೆ ದುಡಿದರು.ನಗರವನ್ನು ಸಿಂಗಾಪುರವನ್ನಾಗಿಸಲು ಪ್ರಯತ್ನಿಸಿದರು. ಮತ್ತೆ ಅವರ ಸರಕಾರವು ಸಂಪೂರ್ಣ ಬಲದಿಂದ ಅಧಿಕಾರಕ್ಕೆ ಬರಲಿಲ್ಲ.ಸಮ್ಮಿಶ್ರ ಪರ್ವ ಆರಂಭವಾಯಿತು. ಪರೋಕ್ಷವಾಗಿ ರೈತರನ್ನು ಅವಗಣಿಸಿದ್ದೇ ಅವರ ಅಧಿಕಾರ ಮುಗಿಯಲು ಕಾರಣವಾಯಿತು ಎಂದರೆ ತಪ್ಪಾಗದು.ಬಳಿಕ ಕಾಂಗ್ರೇಸಿನ "ಹೈಕಮಾಂಡ್" ರಾಜಕೀಯದಿಂದ ರಾಜ್ಯಪಾಲರಾಗಿ ಕರ್ನಾಟಕದ ಸಕ್ರಿಯ ರಾಜಕಾರಣದಿಂದ ಮರೆಯಾದರು.

ನಂತರವೂ ಅವರ ಕನಸು ರಾಜ್ಯದತ್ತಲೇ ಇತ್ತು.ಇದಕ್ಕೆ ಸಾಕ್ಷಿ ಎಂಬಂತೆ ಕೃಷ್ಣ ದಂಪತಿಗಳು ೨೦೦೭ರಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ವೇಳೆ ದೇವಸ್ಥಾನದಲ್ಲೂ ಅವರು ಪ್ರಾರ್ಥಿಸಿದ್ದು ಸಕ್ರಿಯ ರಾಜಕಾರಣಕ್ಕೆ ಮರಳುವ ಬಗ್ಗೆಯೇ. ಆಗಲೇ ದೇವರ ಮೊರೆ ಹೋಗಿದ್ದ ಕೃಷ್ಣ ನಂತರ ಹೋಮ ಹವನಾದಿಗಳನ್ನೂ ನೆರವೇರಿಸಿದ್ದರು.ಈಗ ಅವರ ಕನಸು ನನಸಾಗಿದೆ ಮುಂದಿನ ರಾಜಕೀಯದ ಹಾದಿ ಹೇಗಿದೆ ಎನ್ನುವುದು ಕಾದು ನೋಡಬೇಕು.
ರೈತರು ಅವರ ಹಿಂದಿನ ಆಡಳಿತದ ಬಗ್ಗೆ ಈಗ ಯಾವ ನಿಲುವು ತಾಳಿದ್ದಾರೆ ಎನ್ನುವುದರ ಮೇಲೆ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ ಎಂದರೆ ತಪ್ಪಾದೀತೇ..?.

ಕಾಮೆಂಟ್‌ಗಳಿಲ್ಲ: