19 ಏಪ್ರಿಲ್ 2008

ದೇವರ "ಪ್ರತಿಷ್ಠೆ" - ಸ್ವ"ಪತಿಷ್ಠೆ"ಯೇ...?



ಏನೇಕಲ್ ಬ್ರಹ್ಮಕಲಶೋತ್ಸವದ 4 ನೇ ದಿನ.ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀಗಳು ಆಶೀರ್ವಚನ ನೀಡುತ್ತಿದ್ದರು.

ಅವರು ತಮ್ಮ ಆಶೀರ್ವಚನದಲ್ಲಿ ಒಂದು ಮಾತನ್ನು ಉಲ್ಲೇಖಿಸಿದರು."ಧರ್ಮವೆಂದರೆ ಸ್ವಚ್ಚ ನಡೆ-ನುಡಿ.ಆದರೆ ಇಂದು ಅದರ ಕೊರತೆ ಕಂಡುಬಂದು ಸಮಾಜದಲ್ಲಿ ಭಗವಂತನ ಅನುಗ್ರಹ ಸಿಗುತ್ತಿಲ್ಲ,ಧರ್ಮವೂ ಜಾಗೃತಿಯಾಗುತ್ತಿಲ್ಲ ಎನ್ನುತ್ತಾ ,ಇಂದು ದೇವಾಲಯಗಳಲ್ಲಿ ಬ್ರಹ್ಮಕಲಶೋತ್ಸವಗಳು ನಡೆದಂತೆ ಅಂತರಂಗದಲ್ಲೂ ತನು-ಮನ ಶುದ್ಧದ ಕೆಲಸ ನಡೆಯಬೇಕು ಎಂದರು.

ಎಂತಹ ಸತ್ಯವಾದ ಮಾತು...

ಯಾವುದೇ ದೇವಸ್ಥಾನವಿರಲಿ ನೀವು ಗಮನಿಸಿ ನೋಡಿ. ದೇವಸ್ಥಾನದಲ್ಲಿ ದೇವರ ಬಿಂಬ ಪ್ರತಿಷ್ಠೆಯಾದಂತೆ ಇಲ್ಲಿ ಆಡಳಿತ ಮಂಡಳಿ ಇರಬಹುದು ಆಥವಾ ಅದಕ್ಕೆ ಸಂಬಂಧಿಸಿದವರ ಮನದಲ್ಲೂ ಒಂದು "ಪ್ರತಿಷ್ಥೆ" ನಡೆಯುತ್ತದೆ.ಕೊನೆಗೆ ಅದು "ರಾಜಕೀಯ" ತಿರುವು ಪಡೆಯುತ್ತದೆ. ಯಾವ ದೇವಸ್ಥಾನವನ್ನು ಊರಿನ ನೆಮ್ಮದಿ,ಶಾಂತಿಗಾಗಿ ಜೀರ್ಣೋದ್ಧಾರ ಮಾಡಲಾಯಿತೋ ಅದರಿಂದಲೇ ಮತ್ತೆ ಅಶಾಂತಿ ಶುರುವಾದ ಸಂಗತಿಗಳು ನಮ್ಮ ಮುಂದೆ ಎಷ್ಠಿಲ್ಲ? ಊರಿಗೆ ಒಂದು ಉತ್ತಮ ಸಂದೇಶ ನೀಡಬೇಕಾದ ಕೇಂದ್ರದಿಂದಲೇ ಅನಾಗರೀಕ ಸಂದೇಶ ಬರುತ್ತದೆ.ಅದು ನಂತರ ಜಾತಿ-ಮತದ ರೂಪವೂ ಪಡೆಯುತ್ತದೆ. ಹೀಗಾದಾಗ ಅದು ಮತ್ತೆ ಅದೇ ದೇವಸ್ಥಾನ ಅಜೀರ್ಣಕ್ಕೆ ಬಂದು ನಿಲ್ಲುತ್ತದೆ.ಮತ್ತೆ ಹೊಸ ಬ್ರಹ್ಮಕಲಶ ಶುರುವಾಗುತ್ತದೆ.....!

ಇಂತಹ ಒಂದು ಸಂದರ್ಭದಲ್ಲಿ ಇನ್ನೊಬ್ಬ ಸ್ವಾಮೀಜಿ ಹೇಳುತ್ತಾರೆ ದೇವಸ್ಥಾನದಲ್ಲಿ ದೇವರ ಪ್ರತಿಷ್ಠೆಯಾದ ನಂತರ ನಮ್ಮ ಪ್ರತಿಷ್ಠೆಯನ್ನು ಬಿಡಬೇಕು ಆಗ ಮಾತ್ರಾ ಆ ದೇವಾಲಯ, ಅಂತಹ ದೇವಾಲಯಗಳು ಊರಿಗಿಡೀ ನೆಮ್ಮದಿ ನೀಡಲು ಸಾಧ್ಯ ಎನ್ನುವ ಮಾತು ಇನ್ನೊಂದು ಕಟುಸತ್ಯ.ಆದರೆ ಏನೇಕಲ್ 2 ನೇ ವರ್ಗಕ್ಕೆ ಸೇರಿರುತ್ತದೆ ಅಲ್ಲಿನ ದೇವರ ಪ್ರತಿಷ್ಠೆ ಮಾತ್ರಾ ನಡೆದಿದೆ ಎಂಬ ನಂಬಿಕೆ ಮತ್ತು ವಿಶ್ವಾಸ ನಮ್ಮದು.

ಇಂದು ಅಂದರೆ ಶುಕ್ರವಾರ ದೈವಗಳ ಪ್ರತಿಷ್ಠೆಯು ನಡೆಯಿತು

ಕಾಮೆಂಟ್‌ಗಳಿಲ್ಲ: