ಈ ವಾರದಲ್ಲಿ ಎರಡು ಘಟನೆಗಳು ನಡೆದವು. ಎರಡೂ ಘಟನೆಗಳೂ ರಾಜಕೀಯವಾಗಿಯೇ ಚರ್ಚೆ ಆಯಿತು..!. ವಾಸ್ತವದ ಕಡೆಗೆ ನೋಡಬೇಕಿತ್ತು.
ಭವಾನಿ ರೇವಣ್ಣ ಅವರ ಕಾರಿಗೆ ಬೈಕ್ ಡಿಕ್ಕಿಯಾಯಿತು. ಘಟನೆಯ ನಂತರ ಭವಾನಿ ಅವರು ಅತ್ಯಂತ ಕೆಟ್ಟದಾಗಿ ನಡೆದುಕೊಂಡರು ಎನ್ನುವುದು ಹಾಗೂ ಅಹಂಕಾರದ ಪರಮಾವಧಿ ಅಂತ ಎಲ್ಲರೂ ಹೇಳಿದರು. ಅದು ನಿಜವೂ ಹೌದು. ಜವಾಬ್ದಾರಿ ಹುದ್ದೆಯಲ್ಲಿ ಇರುವವರು ಹಾಗೆ ಮಾತನಾಡಬಾರದು. ಘಟನೆಯ ನಂತರ ನಡದುಕೊಳ್ಳುವ ರೀತಿಯೂ ಬಹುಮುಖ್ಯ.
ಆದರೆ, ಈ ಘಟನೆಯ ಆಚೆಗೆ ನೋಡಿದರೆ, ನಮ್ಮ ತಪ್ಪೇ ಇಲ್ಲದ ಸಂದರ್ಭ ಯಾವ ವ್ಯಕ್ತಿಯಾದರೂ ಸಿಟ್ಟಾಗುತ್ತಾನೆ. ಬೈಕ್ ಸವಾರ ರಾಂಗ್ ಸೈಡಲ್ಲಿ ಬಂದು ಡಿಕ್ಕಿ ಹೊಡೆದ ಎನ್ನುವುದು ಆ ವಿಡಿಯೋದ ಮೂಲಕ ತಿಳಿಯುತ್ತದೆ. ಸಹಜವಾಗಿಯೇ ನಮಗೂ ಸಿಟ್ಟು ಬರುತ್ತದೆ. ನಾನೂ ಕೂಡಾ ನನ್ನ ವಾಹನಕ್ಕೆ ಹಿಂದಿನಿಂದ ಇನ್ನೊಂದು ವಾಹನ ಡಿಕ್ಕಿ ಹೊಡೆದಾಗವೂ ಮಾಡಬೇಕಾದ ಕೆಲಸ ಮಾಡಿದ್ದಿದೆ. ಅದು ಬಿಡಿ, ಸ್ವಲ್ಪ ಅಡ್ಡ ಬಂದರೆ ಕಾರಿನ ಗ್ಲಾಸ್ ಬಂದ್ ಮಾಡಿ ಬೈಯುವವರು ಎಷ್ಟು ಜನ ಇಲ್ಲ. ಇಲ್ಲೂ ಹಾಗೇ ಸಣ್ಣ ವಾಹನದ್ದು ತಪ್ಪಿಲ್ಲ..!. ಏನೇ ಆದರೂ ಶಿಕ್ಷೆ ದೊಡ್ಡ ವಾಹನಕ್ಕೆ...!. ದೊಡ್ಡವರಿಗೇ...!. ಈಗಲೂ ದ್ವಿಚಕ್ರ ವಾಹನದಲ್ಲಿ ಹೋಗುವವರು ಎಡಕ್ಕೆ ಸಿಗ್ನಲ್ ಹಾಕಿ ಬಲಕ್ಕೆ ಹೋಗುವವರು ಇದ್ದಾರೆ...! ಹೈವೇಯಲ್ಲಿ ಎಲ್ಲಿ ಹೋಗಬೇಕು ಎಂದು ಇನ್ನೂ ಅರಿವು ಇಲ್ಲದವರು ಇದ್ದಾರೆ. ದ್ವಿಚಕ್ರ ಮಾತ್ರ ಅಲ್ಲ, ಇತರ ವಾಹನದಲ್ಲೂ ಚಾಲಕ ಬಿಟ್ಟು ಇತರ ಎಲ್ಲರೂ ಸಿಗ್ನಲ್ ನೀಡುವುದು ಕಂಡಿದ್ದೇವೆ...!. ಆದರೆ ಇಲ್ಲಿ ಭವಾನಿ ಅವರ ವಾಹನ ತಪ್ಪಿಲ್ಲ. ಸಹಜವಾಗಿಯೇ ತಪ್ಪಿಲ್ಲದ ಕಾರಣ ಸಿಟ್ಟಾಗಿದ್ದಾರೆ. ಆ ಸಿಟ್ಟಿನಲ್ಲಿ ವಾಹನ ಬೆಲೆ, ಅದು ಇದು ಎಲ್ಲಾ ಬಂದಿದೆ..!. ಅದೊಂದು ಬೇಡ ಇತ್ತು. ಅಹಂಕಾರ ಅಷ್ಟೇ... ಆದರೆ ವಾಸ್ತವ ವಿಷಯ...! ಅದು ಅಲ್ಲಿಗೇ ತಣ್ಣಗಾಯಿತು..!. ರಾಂಗ್ ಸೈಡಿಂದ ಬಂದದ್ದು...!!?
ಈಗ ಗೂಳಿಹಟ್ಟಿ ಶೇಖರ್ ಅವರದು..!. ಜಾತಿಯ ಲಿಂಕ್ನ್ನು ತಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಂದೆ ತಂದಿರಿಸಿದ್ದು, ಈಗ ರಾಷ್ಟ್ರೀಯ ಸ್ವಯಂಸೇವಕ ಸಂಘವೇ ಹೇಳಿಕೆ ಕೊಡುವ ಹಾಗೆ ಮಾಡಿದ್ದು. ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಹತ್ತಿರದಿಂದ ತಿಳಿದಿರುವ ಎಲ್ಲರಿಗೂ ಗೊತ್ತಿದೆ, ಅಲ್ಲಿ ಜಾತಿ ಕೇಳಿ ಕೆಲಸ ಇಲ್ಲ ಎಂದು. ಆದರೆ ಗೂಳಿಹಟ್ಟಿ ಅವರು ಬಿಜೆಪಿ ಜೊತೆ ಲಿಂಕ್ ಮಾಡಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನೋಡಿದರೆ ಅವರಿಗೆ ಹಾಗೆ ಕಂಡದ್ದು ತಪ್ಪಲ್ಲ..!. ಅಲ್ಲದೇ ಇದ್ದರೆ ಅಲ್ಲಿ ಜಾತಿಯ ವಿಷಯವೇ ಇರುವುದಿಲ್ಲ. ಕೆಲವು ಕಡೆ ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಒಂದೇ ಎನ್ನುವ ಪರಿಸ್ಥಿತಿ ಇರುವುದು ಹೀಗಾಗಲು ಕಾರಣ ಎಂದು ಈಚೆಗೆ ಮಾತನಾಡುತ್ತಿದ್ದ ಹಿರಿಯರೊಬ್ಬರು ಹೇಳಿದ್ದರು. ಅದು ಸತ್ಯವಾದ ವಿಷಯ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ