04 ಡಿಸೆಂಬರ್ 2023

ಮಾದರಿಯಾದ ಸುಳ್ಯದ ನಾಮಾಮಿ ಕಾರ್ಯ

ಸುಳ್ಯದ ನಾಮಾಮಿ ಬಳಗವು ಕೃಷಿ ವಲಯಕ್ಕೆ, ಗಿಡ ಆಸಕ್ತರಿಗೆ ಮಾದರಿಯಾಗುವಂತಹ ಕೆಲಸವೊಂದನ್ನು ಮಾಡಿದೆ. ಒಂದು ಅಳಿದು ಹೋಗುವ ಗಿಡದ ರಕ್ಷಣೆಯಲ್ಲಿ ಮಾಡಿರುವ ಕೆಲಸ ದಾಖಲಾಗಬೇಕು.

ನಾಮಾಮಿ ಬಳಗವು ಅಪರೂಪದ ಗಿಡಗಳ ಉಳಿಸುವ ಕೆಲಸ ಮಾಡುತ್ತಿತ್ತು. ಈಚೆಗೆ ಹೀಗೇ ಮಾತನಾಡಿವ ವೇಳೆ "ನಾಯಿಕಿತ್ತಳೆ" ಬಗ್ಗೆ ಯಾರೋ ಮಾತನಾಡಿದರು. ಈಗ ಅದು ಕಾಣೆಯಾಗುತ್ತಿದೆ ಎಂದೂ ಚರ್ಚೆಯಾಯಿತು. ತಕ್ಷಣವೇ ಕೆಲಸ ಶುರು ಮಾಡಿದ ತಂಡವು ನಾಯಿ ಕಿತ್ತಳೆ ಗಿಡಗಳನ್ನು ಹುಡುಕಲು ಆರಂಭಿಸಿತು. ಜೊತೆಗೆ ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅವರೂ ಜೊತೆಯಾದರು. ಕಿತ್ತಳೆಯ ಹಿಂದೆ ಹೋದಂತೆಯೇ ಅನೇಕ ಮಾಹಿತಿಗಳು ದೊರೆತವು. ಅಪರೂಪದ ತಳಿಗಳು ಇರುವುದು  ತಿಳಿಯಿತು. ಈ ಎಲ್ಲಾ ಆಯ್ಕೆಯ ನಂತರ ಸಿಹಿಯಾಗಿರುವ ನಾಯಿಕಿತ್ತಳೆ ಹಣ್ಣಿನ ಮರಗಳನ್ನು ಹುಡುಕಿ ಕಸಿ ಕಟ್ಟಿ ಗಿಡ ಅಭಿವೃದ್ಧಿ ಮಾಡಿದರು. ಇದೆಲ್ಲಾ ಮೂರು ತಿಂಗಳಿನಲ್ಲಿ ನಡೆದ ಕೆಲಸ...!. ಈಗ ಈ ಗಿಡಗಳ ಲೋಕಾರ್ಪಣೆ ನಡೆಯಿತು.ನಾನೂ ಈ ಕಾರ್ಯಕ್ರಮದಲ್ಲಿ ಕೇಳುಗನಾಗಿ, ಗಿಡ ಪಡೆಯುವ ಕೃಷಿಕನಾಗಿ ಭಾಗವಹಿಸಿದೆ. ಅಂದರೆ ಒಂದಷ್ಟು ಮನೆಗಳಲ್ಲಿ ನಾಯಿಕಿತ್ತಳೆ ಗಿಡ ಬೆಳೆಯಲು ಆರಂಭವಾಗುತ್ತಿದೆ. ಒಂದು ಪುಟ್ಟ ಬಳಗ ಮಾಡಿರುವ ಬಹುದೊಡ್ಡ ಕೆಲಸ ಇದು. 



ಇನ್ನೂ ಬಹಳ ಆಸಕ್ತಿ ಇದೆ ಇಲ್ಲಿ. ಗಿಡ ಲೋಕಾರ್ಪಣೆಯ ವೇಳೆ ಬಹುತೇಕ ಆಸಕ್ತರು ಬಂದಿದ್ದರು. ಒಬ್ಬರು ಸಿಟ್ರಸ್‌ ವಿಭಾಗದಲ್ಲಿ ಅದರೆ ಕಿತ್ತಳೆ ವಿಭಾಗದಲ್ಲಿ ಅನೇಕ ವೆರೈಟಿ ಇರುವು ಬಗ್ಗೆ ಮಾತನಾಡಿದರು. ವಿದೇಶದಲ್ಲಿದ್ದ ಅವರು ಈಗ ಕೃಷಿಯಲ್ಲಿದ್ದಾರೆ, ಇಂತಹ ಆಸಕ್ತಿಗಳನ್ನು ಮುಂದುವರಿಸಿದ್ದಾರೆ. ಇನ್ನೊಬ್ಬರು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ, ಸದ್ಯ ವರ್ಕ್‌ ಫ್ರಂ ಹೋಂ. ಅವರೂ ಈ ನಾಯಿಕಿತ್ತಳೆ ಗಿಡಕ್ಕಾಗಿ ದೂರದಿಂದ ಬಂದಿದ್ದರು..!. ಇಷ್ಟೇ ಅಲ್ಲ, ನಾಮಾಮಿ ತಂಡದ ಪ್ರಮುಖ ಸದಸ್ಯ ಜಗದೀಶ 74 ವರ್ಷದ ಸಕ್ರಿಯ ಯುವಕ...!. ನಮ್ಮಂತಹ ಯುವಕರಿಗೆ ಉತ್ಸಾಹ ತುಂಬುವ, ಇನ್ನಷ್ಟು ಕೆಲಸ ಕೃಷಿ ಬೆಳವಣಿಗೆಯಲ್ಲಿ ಮಾಡಬೇಕು ಎನ್ನುವ ಆಸಕ್ತಿಯನ್ನು ಹೆಚ್ಚಿವ ಹಾಗಿದೆ ಅವರ ಕೆಲಸಗಳು...

ಇಂತಹ ತಂಡಗಳು ಅಲ್ಲಲ್ಲಿ ಇನ್ನಷ್ಟು ಹೆಚ್ಚಾಗಬೇಕು, ಇಲ್ಲಿ ಜನ ಮುಖ್ಯ ಅಲ್ಲ, ಕೇವಲ ಐದು ಜನ ಇದ್ದರೂ ಸಾಕು, ಯಶಸ್ಸು ಇರುವುದು ಸಕ್ರಿಯ ಪಾಲ್ಗೊಳ್ಳುವಿಕೆಯಲ್ಲಿ. ನಮಗೂ ಇಂತಹ ತಂಡ ಜೊತೆ ಇರುವುದಕ್ಕೆ, ಕೃಷಿ ಬೆಳವಣಿಗೆಯ ಬಗ್ಗೆ, ಹೊಸ ಸಾಧ್ಯತೆಗಳ ಬಗ್ಗೆ ಚರ್ಚಿಸುವುದಕ್ಕೆ ಆಸಕ್ತಿ...


ಕಾಮೆಂಟ್‌ಗಳಿಲ್ಲ: