ನಿನ್ನೆ ಸಂಸತ್ತಿನ ಒಳಗೆ ಇಬ್ಬರು ನುಗ್ಗಿ ಅಲ್ಲಿ ನಡೆಸಿದ ದಾಂಧಲೆಯ ಬಗ್ಗೆ ಸುದ್ದಿಯಾಯಿತು. ನಿಜಕ್ಕೂ ಅದು ಭದ್ರತಾ ವೈಫಲ್ಯ, ಎರಡು ಮಾತೇ ಇಲ್ಲ. ಇಡೀ ದೇಶದ ಹೃದಯಭಾಗ ಅದು, ಅಲ್ಲಿನ ನಡೆಯುವ ಸಣ್ಣ ವೈಫಲ್ಯವೂ ಬಹುದೊಡ್ಡ ಸಂಗತಿಯೇ ಆಗಿದೆ. ಆದರೆ ಈ ಘಟನೆ ನಡೆದ ಕೆಲವೇ ಹೊತ್ತಲ್ಲಿ ಅದೊಂದು ತೇಲಿ ಹೋದ ಸಂಗತಿಯಾಯಿತು..!. ರಾಜಕೀಯ ದಾಳಿಯಾಗಿ ಬಿಟ್ಟಿತು. ಇದು ಈ ದೇಶದ ವೈಫಲ್ಯ, ಈ ದೇಶದ ಜನರ ದೌರ್ಭಾಗ್ಯ.
ಈಚೆಗೆ ಕ್ಯಾಪ್ಟನ್ ಪ್ರಾಂಜಲ್ ಹುತಾತ್ಮರಾದರು. ನನ್ನ ಕಣ್ಣ ಮುಂದೆ ಈಗ ಈ ಘಟನೆ ಬಂದು ನಿಂತಿತು. ಹೀಗೆಲ್ಲಾ ಭದ್ರತಾ ವೈಫಲ್ಯಗಳು ನಡೆದಾಗಲೂ ರಾಜಕೀಯ ಮಾಡುತ್ತಿರುವಾಗ, ಮೊನ್ನೆ ಮೊನ್ನೆ ಹುತಾತ್ಮರಾದ ಪ್ರಾಂಜಲ್ ಅಂತಹವರ ಬಲಿದಾನಗಳನ್ನು , ಆ ಕುಟುಂಬ.. ತಂದೆ, ತಾಯಿ, ಪತ್ನಿ ಬಂದು ಸೆಲ್ಯೂಟ್ ಮಾಡುವ ಸ್ಥಿತಿ.. ಇದೆಲ್ಲಾ ಒಂಥರಾ ನೋವು.
ಸಂಸತ್ತಿನ ಒಳಗಿನ ಘಟನೆಯ ನಂತರ ಗಮನಿಸಿ, ಎಲ್ಲಾ ಸಂಸದರು ಓಡಿದರು, ರಾಹುಲ್ ಗಟ್ಟಿಯಾಗಿ ನಿಂತರು...!, ಎಲ್ಲಾ ಸಂದರು ಓಡಿದರು ನಳಿನ್ ಸಹಿತ ಇತರರು ಹಿಡಿದರು..!. ಇವರನ್ನೆಲ್ಲಾ ಏಕೆ, ಗಡಿಭಾಗಕ್ಕೆ ಕಳುಹಿಸಬಾರದು.? ವೈಫಲ್ಯವನ್ನು ಮುಚ್ಚಲು ಇವರು ರಾಜಕೀಯವಾಗಿ ಹೀಗೆ ಚರ್ಚೆ ಮಾಡಿವಾಗ, ಟ್ರೋಲ್ ಮಾಡುವಾಗ ಹೀಗೆ ಅನಿಸುತ್ತದೆ. ಇದನ್ನೂ ರಾಜಕೀಯ ಮೈಲೇಜ್ ಪಡೆಯಲು ಯತ್ನಿಸುವ ಇಂತವರಿಗೂ ನಾವೆಲ್ಲಾ ಓಟು ಹಾಕುವ ಮೂರ್ಖರು ಅಲ್ವೇ...?.
ಹೌದು, ಇವರಿಗೆಲ್ಲಾ ಮುಂದೆ ಅಧಿಕಾರ ಮುಖ್ಯ. ಈ ಅಧಿಕಾರಕ್ಕಾಗಿ ಭದ್ರತಾ ವೈಫಲ್ಯವೂ ಸಂಗತಿಯೇ ಅಲ್ಲ, ಅದನ್ನೂ ರಾಜಕೀಯ ದಾಳವಾಗಿ ಎಸೆದು ಬಿಡುವ ಈ ದೇಶವನ್ನು, ಅವರ ಹಿಂಬಾಲಕರನ್ನು ಏನು ಅಂತ ಹೇಳುವುದು ಎನ್ನುವ ಯೋಚನೆಯಲ್ಲಿ ಇರುವಾಗಲೇ, ನನ್ನ ಸಣ್ಣ ಮಗ ಕೆಲವು ಸಮಯಗಳಿಂದ ನನಗೂ ಈ ದೇಶದ ಸೇನೆಯ ಕ್ಯಾಪ್ಟನ್ ಆಗಬೇಕು, ಟೆರರಿಸ್ಟ್ಗಳನ್ನು ಸಾಯಿಸಬೇಕು ಅಂತ ಹೇಳುತ್ತಿದ್ದ, ಮೊನ್ನೆ ಕ್ಯಾಪ್ಟನ್ ಪ್ರಾಂಜಲ್ ಹುತಾತ್ಮರಾದಾದ ಆ ವಿಡಿಯೋವನ್ನು ನೋಡುತ್ತಾ ಛೆ... ಛೆ ಎನ್ನುತ್ತಿದ್ದ ಹಾಗೂ ದೇಶ ಸೇವೆ ಇತ್ಯಾದಿಗಳ ವಿಡಿಯೋ ಆತ ನೋಡುತ್ತಿದ್ದ.. ಆತನಿಗೆ ಏನೆನ್ನಿಸಿತೋ ಗೊತ್ತಿಲ್ಲ, ನಾನೂ ಕೇಳಿಲ್ಲ. ನನಗಂತೂ ಈ ವ್ಯವಸ್ಥೆಯಲ್ಲಿ ಬೇರೆ ಮಾದರಿಯ ದೇಶ ಸೇವೆ ಮಾಡಿಸಬಹುದು ಅಂತ ಅನಿಸಿದೆ..!.
ಹದಗೆಟ್ಟ ವ್ಯವಸ್ಥೆಗೆ ರಾಜಕೀಯವೇ ಕಾರಣ. ಅದರಲ್ಲೂ ದೇಶ , ಸೇವೆ ಎನ್ನುವವರೂ ಕಡು ಭ್ರಷ್ಟವಾಗುತ್ತಿರುವುದು ಇನ್ನೂ ವಿಷಾದ..!.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ