15 ಮೇ 2008

ಜಾನಪದ ಮಕ್ಕಳ ಮೇಳ...




ಸುಳ್ಯ ತಾಲೂಕಿನಲ್ಲಿ ಈ ಬಾರಿ ಮಕ್ಕಳ ವಿಶೇಷ ಬೇಸಿಗೆ ಶಿಬಿರವೊಂದು ನಡೆಯಿತು. ರಾಜ್ಯದಲ್ಲಿ ಬಹುಶ: ಅಂತಹ ಶಿಬಿರ ನಡೆದಿರಲಿಕ್ಕಿಲ್ಲ.ಅಲ್ಲಿ ಸುಮಾರು 20 ರಿಂದ 30 ಮಕ್ಕಳಿದ್ದರು.ಮಕ್ಕಳಿಗೆ ಜಾನಪದ ಕಲೆ - ಸಂಸ್ಕೃತಿಯ ಅರಿವು ಮೂಡಿಸುವುದು, ಜಾನಪದೀಯ ವಸ್ತುಗಳ ಮತ್ತು ಔಷಧೀಯ ಸಸ್ಯಗಳ ಪರಿಚಯ,ಪರಿಸರದ ಸಂರಕ್ಷಣೆಯ ಅರಿವು,ಸ್ವಚ್ಛತೆ,ಆರೋಗ್ಯ ರಕ್ಷಣೆ ಬಗ್ಗೆ ಮಾಹಿತಿ ಸೇರಿದಂತೆ ಸೃಜನಾತ್ಮಕ ಕಲೆಗಳ ಜಾನಪದೀಯ ಆಟಗಳನ್ನು ಕಲಿಸಲಾಗುತ್ತಿತ್ತು.ಇದರ ಜೊತೆಗೆ ಮಕ್ಕಳಿಗೆ ಜಾನಪದ ಹಾಡು ,ಕುಣಿತ ಇತ್ಯಾದಿಗಳನ್ನು ಹೇಳಿಕೊಡಲಾಗುತ್ತಿತ್ತು.

ಇದರ ಜೊತೆಗೆ ಮಕ್ಕಳಲ್ಲಿ ಆತ್ಮ ಸ್ಥೈರ್ಯ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜಾನಪದ ಶಿಬಿರವಾದ್ದರಿಂದ ಇತರ ಎಲ್ಲಾ ಮಕ್ಕಳ ಶಿಬಿರಕ್ಕಿಂತ ಇದು ಭಿನ್ನವಾಗಿತ್ತು.ಮಕ್ಕಳ ಸೃಜನಶೀಲತೆ ಬೆಳೆಸಲು ಇಂತಹ ಕಾರ್ಯಕ್ರಮಗಳು ಇಂದು ಅನಿವಾರ್ಯ.ಕೇವಲ ಪುಸ್ತಕದ "ಹುಳ"ಗಳು ಸಾಲದು.ಆಂತರಿಕವಾಗಿ ಬೆಳೆಯಲು ಮಕ್ಕಳಿಗೆ ಇಂತಹ ಶಿಬಿರಗಳು ಸಹಕಾರಿ.ಇಂದಿನ ಶಿಕ್ಷಣ ಪದ್ಧತಿಯಲ್ಲಿ ಇಂತಹ ಶಿಬಿರಗಳು ಅನಿವಾರ್ಯ ಕೂಡಾ...



ಶಿಬಿರದಲ್ಲಿ...




ಕಂಸಾಳೆ ನೃತ್ಯ ತರಬೇತಿಯಲ್ಲಿ ವಿದ್ಯಾರ್ಥಿಗಳು...




ವಿರಾಮದ ವೇಳೆಯ ಆಟ....

2 ಕಾಮೆಂಟ್‌ಗಳು:

ತೇಜಸ್ವಿನಿ ಹೆಗಡೆ ಹೇಳಿದರು...

ಮಹೇಶ್,

ತುಂಬಾ ಶ್ಲಾಘನೀಯ ಕಾರ್ಯಕ್ರಮ. ಉತ್ತಮ ಲೇಖನದ ಮೂಲಕ ಕಾರ್ಯಕ್ರಮದ ವರದಿಯನ್ನು ನೀಡಿರುವಿರಿ.

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ತೇಜಸ್ವಿನಿಯವರೇ
ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು.