13 ಮೇ 2008
ಇನ್ನಿಲ್ಲವಾದಳು "ಇಂದುಮತಿ...".
ಕುಕ್ಕೆ ಸುಬ್ರಹ್ಮಣ್ಯದ ಆನೆ 52 ರ ಹರೆಯದ ಇಂದುಮತಿಯು ಸೋಮವಾರದಂದು ತಡ ರಾತ್ರಿ ಅಸುನೀಗಿತು.ಮಂಗಳವಾರದಂದು ಅಪರಾಹ್ನ 3.15ರ ಸುಮಾರಿಗೆ ಇಂದುಮತಿಯ ದೇಹವನ್ನು ಸುಬ್ರಹ್ಮಣ್ಯದ ನಕ್ಷತ್ರವನದಲ್ಲಿ ದಹಿಸಲಾಯಿತು.
1969 ರಲ್ಲಿ ತಿತಿಮತಿಯಿಂದ ಕುಕ್ಕೆಗೆ ಆಗಮಿಸಿದ ಇಂದುಮತಿಗೆ ಆಗ 12ರ ಹರೆಯ.ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಡತಗಳ ಪ್ರಕಾರ ಇದು ಮೊದಲ ಆನೆ.ಈ ಮೊದಲು ಸುಬ್ರಹ್ಮಣ್ಯದಲ್ಲಿ ಆನೆ ಇತ್ತಾದರೂ ಅದು ಮಠದಿಂದ ಸಾಕಲ್ಪಟ್ಟಿತ್ತು ಎಂದು ತಿಳಿದುಬರುತ್ತದೆ.
1969 ರಲ್ಲಿ ಅಂದಿನ ಕರ್ನಾಟಕ ಸರಕಾರದ ಅರಣ್ಯ ಸಚಿವ ಹನುಮಂತಪ್ಪ ಮತ್ತು ಅರಣ್ಯ ಇಲಾಖಾ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಇಂದುಮತಿಯನ್ನು ದೇವಳಕ್ಕೆ ಹಸ್ತಾಂತರಿಸಿದ್ದರು.
ಇಂದುಮತಿಯು ಅತ್ಯಂತ ಸೌಮ್ಯ ಸ್ವಭಾವದಿಂದ ಜನ ಮಾನಸದ ಹೃದಯ ಗೆದ್ದಿದ್ದಳು.ಹೀಗಾಗಿ ಆನೆಯ ಸಾವಿನಿಂದ ಅನೇಕ ಭಕ್ತಾದಿಗಳು ತೀರಾ ವಿಷಾದ ವ್ಯಕ್ತಪಡಿಸಿದರು.
ಕುಕ್ಕೆಯಲ್ಲಿ ಜಾತ್ರಾ ಸಮಯ ಹಾಗೂ ಅತಿಥಿಗಳ ಆಗಮನದ ವೇಳೆ ಆನೆಗೆ ವಿಶೇಷ ಮೆರುಗು ಇದೆ.
ಇತ್ತೀಚೆಗೆ ಇಂದುಮತಿಗೆ ಕಾಲಿನಲ್ಲಿ ವೃಣ ಕಂಡು ಬಂದು ನಡೆದಾಡಲು ಕಷ್ಟವಾಗಿತ್ತು. ಈ ಸಂದರ್ಭದಲ್ಲಿ ನುರಿತ ವೈದ್ಯರಿಂದ ಚಿಕಿತ್ಸೆ ನಡೆದು ಕೊಂಚ ಸುಧಾರಿಸಿತ್ತು.ಆದರೆ ದೇವಳದ ಒಳಾಂಗಣದಲ್ಲಿ ನಡೆದಾಡುತ್ತಿರಲಿಲ್ಲ.ಮೊನ್ನೆ ಭಾನುವಾರದಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದಿತು.ತಕ್ಷಣವೇ ಸಂಬಂಧಿತರು ಹಾಗೂ ಸ್ಥಳೀಯರು ವೈದ್ಯರನ್ನು ಕರೆಸಿದರು ಚಿಕಿತ್ಸೆ ನೀಡಲು ಆರಂಭಿಸಿ ಹಾಸನದಿಂದ ಕ್ರೇನ್ ತರಿಸುವ ಕೆಲಸ ನಡೆಯಿತು.ಇದರೊಂದಿಗೆ ಇನ್ನೊಂದು ಆನೆಯನ್ನು ಸಕಲೇಶಹುರದಿಂದ ತರಿಸಿ ಇಂದುಮತಿಯನ್ನು ಮೇಲೆತ್ತುವ ಪ್ರಯತ್ನ ನಡೆಸಲಾಯಿತು.ಆದರೆ ಇದೆಲ್ಲಾ ಸಿದ್ಧತೆ ನಡೆಯುವ ಹೊತ್ತಿಗೆ ಸೋಮವಾರ ತಡರಾತ್ರಿ ಇಹಲೋಕ ಸೇರಿತು. ಬಳಿಕ ಮರುದಿನ ಮಂಗಳವಾರದಂದು ಇಂದುಮತಿಯನ್ನು ಕ್ರೇನ್ ಬಳಸಿ ವಿಶೇಷ ಲಾರಿಯಲ್ಲಿ ಶವವನ್ನಿರಿಸಿ ಸುಬ್ರಹ್ಮಣ್ಯದ ರಥಬೀದಿಯಲ್ಲಿ ವಾಲಗದೊಂದಿಗೆ ಮೆರವಣಿಗೆಯಲ್ಲಿ ಸಾಗಿ ನಕ್ಷತ್ರವನದಲ್ಲಿ ಅರಣ್ಯ ಇಲಾಖಾ ಕಾನೂನು ಪ್ರಕಾರ ದಹಿಸುವ ಕಾರ್ಯ ನಡೆಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಪರವಾಗಿ ಗಂಧದ ಕೊರಡನ್ನು ಚಿತೆಗೆ ಸಮರ್ಪಿಸಲಾಯಿತು.ಆನೆಯ ದಹನದ ಸಂದರ್ಭದಲ್ಲಿ ಸಾವಿರಾರು ಜನ ಸಾಕ್ಷಿಯಾದರು.
ಇಂದುಮತಿಯ ಜಾಗಕ್ಕೆ ನೂತನ ಆನೆ ಈ ಮೊದಲೇ ತರಲಾಗಿತ್ತು.ಇನ್ನು ಸಂಪೂರ್ಣ ಜವಾಬ್ದಾರಿ ನೂತನ ಆನೆ "ಯಶಸ್ವಿ"ಯ ಮೇಲಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
4 ಕಾಮೆಂಟ್ಗಳು:
ಇಂದುಮತಿಗೆ ಶ್ರದ್ಧಾಂಜಲಿ!
ನಿಜಗಾಗಲೂ ಸಲ್ಲಬೇಕು. ನಿಮಗೆ ಧನ್ಯವಾದಗಳು ಬಾನಾಡಿಯವರೇ.
chikkadindale aneyannu nodidda namage yeno onthara namma aane yemba avinaa baava sambanda beledittu...innilla yennuvaaga besaravaguttade..
Sharath.A
9741688556
ಹೌದು ಶರತ್ ಅವರೇ, ಅದೊಂದು ಅವಿನಾಭಾವ ಸಂಬಂಧ.ಅವ್ಯಕ್ತವಾದದ್ದು.ಕಮೆಂಟಿಸಿದ್ದಕ್ಕೆ ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ