11 ಮೇ 2008

ಪ್ರಚಾರದ ಅಬ್ಬರದಲ್ಲಿ "ಮೋದಿ" ಮೋಡಿ...




ಚುನಾವಣಾ ಕಣ ಸಿದ್ಧವಾಗಿದೆ.

ಚುನಾವಣಾ ಪ್ರಚಾರಕ್ಕೆ ವಿವಿಧ ನಾಯಕರು ಆಗಮಿಸುತ್ತಿದ್ದಾರೆ.ಕರಾವಳಿಯಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಬೇಕೆಂದು ಬಿ ಜೆ ಪಿ ಪ್ರಯತ್ನಿಸಿದರೆ ಕಾಂಗ್ರೇಸ್ ತನ್ನ ಪ್ರಾಬಲ್ಯವನ್ನು ಮೆರೆಯಲು ಹವಣಿಸುತ್ತಿದೆ, ಜೆಡಿಎಸ್ ಕೂಡಾ ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ.

ಹಾಗಾಗಿ ಚುನಾವಣಾ ಪ್ರಚಾರಕ್ಕೆ ರಾಷ್ಟ್ರೀಯ ನಾಯಕರೂ ಆಗಮಿಸುತ್ತಿದ್ದಾರೆ.ಇಂದು ಸುಳ್ಯ ತಾಲೂಕಿಗೆ ಮಾಜಿ ಪ್ರದಾನಿ ದೇವೇ ಗೌಡ ಮತ್ತು ಗುಜರಾತ್ "ಸಿಎಂ" ನರೇಂದ್ರ ಮೋದಿ ಆಗಮಿಸಿದ್ದಾರೆ.

ಇಂದಿನ ಅಬ್ಬರದ ಚುನಾವಣಾ ಪ್ರಚಾರದಲ್ಲಿ ಕೆಲ ನಾಯಕರು ಏನನ್ನು ಹೇಳುತ್ತಾರೆ ಎಂಬುದೇ ಸ್ಪಷ್ಟವಿರುವುದಿಲ್ಲ. ಕಾರ್ಯಕರ್ತರಿಗೆ ,ಮತದಾರರಿಗೆ ಗೊಂದಲವೋ ಗೊಂದಲ..

ಆದರೆ ಮೋದಿಯವರ ಮಾತುಗಳಲ್ಲಿ ಅದೇನೋ ಸತ್ಯ ಕಂಡುಬಂದಿತ್ತು.ಕೇವಲ ಮಾತನಾಡಿದರೆ ಸಾಲದು ಕೆಲಸವೂ ಆಗಬೇಕು ಎಂಬುದು ಅವರ ನಿಲುವು ಅಂತ ಅಂತರಾಳದಲ್ಲಿ ಗುಡುಗುಟ್ಟುತ್ತಿತ್ತು.ಅವರ ಭಾಷಣವನ್ನು ಅವರ ರೀತಿಯಲ್ಲೇ ಹೇಳಿವುದಾದರೆ....

ನನ್ನ ಗುಜರಾತಿನಲ್ಲಿ ಅಡಿಕೆ ಬೆಳೆಗಾರರಿಲ್ಲ ,ರಬ್ಬರ್ ಬೆಳೆಗಾರರಿಲ್ಲ ಆದರೂ ನನ್ನಲ್ಲಿ ಅಡಿಕೆ ಉತ್ಪನ್ನಗಳ ಮಳಿಗೆಗಳಿವೆ, ರಬ್ಬರ್ ಕಾರ್ಖಾನೆಗಳಿವೆ. ಆ ಮೂಲಕ ನನ್ನ ಜನರಿಗೆ ಉದ್ಯೋಗ ದೊರಕಿಸಿ ಕೊಟ್ಟಿದ್ದೇನೆ ನಿಮ್ಮಲ್ಲಿಯ ಉತ್ಪನ್ನಗಳಿಗೆ ಬೆಲೆ ದೊರಕಿಸಲು ಅದು ಕಾರಣವು ಆಗಿರಬಹುದು.ಆದರೆ ಕಳೆದ 50 ವರ್ಷಗಳಿಂದ ಇಲ್ಲಿ ಕಾಂಗ್ರೇಸ್ ಆಡಳಿತವಿದೆ, ಕರಾವಳಿ ಜಿಲ್ಲೆಯಲ್ಲಿ ,ರಾಜ್ಯದಲ್ಲಿ, ಅಡಿಕೆ ,ರಬ್ಬರ್ ಬೆಳೆಯುತ್ತಿದೆ ಇಲ್ಲಿನದ್ದೇ ಆದ ಅಡಿಕೆ ,ರಬ್ಬರ್ ಕಾರ್ಖಾನೆಗಳು ಏಕಿಲ್ಲ?.ಒಂದು ವೇಳೆ ಅದು ಇದ್ದಿದ್ದರೆ ಇಲ್ಲಿನ ಅದೆಷ್ಟೋ ಜನರಿಗೆ ಉದ್ಯೋಗ ಸಿಗುತ್ತಿತ್ತು ,ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿತ್ತು.ರೈತರು ನೆಮ್ಮದಿಯಿಂದಿರುತ್ತಿದ್ದರು. ಪರಿಸ್ಥಿತಿ ಹಾಗಿಲ್ಲ. ಇಲ್ಲಿನ ಕಾಂಗ್ರೇಸ್ ಗುಜರಾತ್ ಬಗ್ಗೆ ಮಾತನಾಡುತ್ತಾ ಕರ್ನಾಟಕವನ್ನು ಗುಜರಾತನ್ನಾಗಿಸಬೇಡಿ ಎನ್ನುತ್ತಲ್ಲಾ ಅದಕ್ಕೆ ಈಗ ಏಕೆ ಗುಜರಾತ್ ನೆನಪಾಗುತ್ತದೆ.ಕರ್ನಾಟಕದ ಅಭಿವೃದ್ಧಿ ನೆನಪಾಗಬೇಕಾದ ಈ ಸಂದರ್ಭದಲ್ಲಿ ಗುಜರಾತ್ ಏಕೆ ನೆನಪಾಗುತ್ತದೆ. ಅದಕ್ಕೆ ಬೇಕಾಗಿರುವುದು ಅಭಿವೃದ್ಧಿಯಲ್ಲ ಕೇವಲ ಗಲಭೆಗಳು ಮಾತ್ರಾ.ತಾಕತ್ತಿದ್ದರೆ ಕರ್ನಾಟಕವನ್ನು ಗುಜರಾತನ್ನಾಗಿಸಿ ಇಡೀ ದೇಶಕ್ಕೆ ಮಾದರಿಯಾಗಿಸಿ ಎನ್ನುವಾಗ ಮೋದಿಯವರ ಮಾತಿನಲ್ಲಿ ದೃಢತೆಯಿತ್ತು.ಇಂದು ಗುಜರಾತ್ ಅಭಿವೃದ್ಧಿಯಾಗಲು ಕಾರಣ ಅಲ್ಲಿನ ರೈತರಿಗೆ ಅಗತ್ಯವಾದ ಎಲ್ಲಾ ಕೆಲಸಗಳನ್ನು ಮಾಡಲಾಗಿದೆ ಎನ್ನುವ ಮೋದಿಯವರ ಮಾತಿನಲ್ಲಿ ಎಲ್ಲೋ ಒಂದು ಸತ್ಯ ಕಂಡುಬಂತು... ಹೀಗೆಯೇ ಅವರ ಮಾತಿನ ಮೋಡಿ ಹರಿಯುತ್ತಲೇ ಇತ್ತು...

ಇದೆಲ್ಲವನ್ನು ಕೇಳಿದ ಮೇಲೆ ಕೊನೆಗೆ ಮತ್ತೆ ಉದ್ಭವಿಸುವ ಪ್ರಶ್ನೆ ಕರ್ನಾಟಕದಲ್ಲಿ ಗುಜರಾತ್ ನಂತೆ ಅಭಿವೃದ್ಧಿ ಸಾಧ್ಯವಾ....? ಅಂಥ ಯೋಜನೆಗಳು ಇಲ್ಲಿ ಬರಬಹುದೇ...? ಅನುಷ್ಠಾನಗೊಂಡಾವೇ....?

ಉತ್ತರ ಈಗ ದೊರಕಲಾರದು ಅಲ್ಲವೇ.... ಹಾಗಾಗಿ ಒಮ್ಮೆ ಬದಲಾವಣೆಯಾಗಲಿ .... ನೋಡೋಣ...... ಮತ್ತೆ ಇಳಿಸೋಣ......



ಮೋದಿ ಹೀಗೆ ಮಾತನಾಡಿದರೆ ...
ಇನ್ನೊಂದು ಕಡೆ ಮಾತನಾಡಿದ ಮಾಜಿ ಪ್ರದಾನಿಗಳ ಮಾತಿನಲ್ಲಿ ಯಾವುದೇ ಉತ್ಸಾಹ ಇದ್ದಂತೆ ಕಂಡುಬರಲಿಲ್ಲ.ಅವರು ಎಂದಿನ ಶೈಲಿಯಲ್ಲೇ ವರಸೆ ಮಾಡಿದರು.ಕೆಲವೊಮ್ಮೆ ಕಂಡದ್ದು ಹೀಗೆ....

ಕಾಮೆಂಟ್‌ಗಳಿಲ್ಲ: