14 ಮೇ 2008

"ಜಾತಿ" ರಾಜ"ಕಾರಣ".....!



ಎಂಥಾ ರಾಜಕೀಯ...!?.

ಇಂದಿನ ಪರಿಸ್ಥಿತಿಯಲ್ಲಿ ಉತ್ತಮ ರಾಜಕಾರಣ ನಿರೀಕ್ಷಿಸುವುದು ದೊಡ್ಡ ತಪ್ಪು.ಯಾಕೆಂದ್ರೆ ಈಗಿರುವುದು ಜಾತಿ ರಾಜಕಾರಣ.ಹೀಗಾಗಿ ಅಭಿವೃದ್ಧಿ ರಾಜಕಾರಣ ಎಂದೋ ದೂರವಾಗಿಬಿಟ್ಟಿದೆ.ಇದರಿಂದಾಗಿ ಮುಂದೆ ಸಮಾಜದಲ್ಲಿ ಅಶಾಂತಿ ಉಂಟಾದರೂ ಅಚ್ಚರಿಯಿಲ್ಲ.

ಈ ದೇಶದಲ್ಲಿ ಸ್ವಾತಂತ್ರ್ಯ ಲಭ್ಯವಾಗುವವರೆಗೆ ಇದ್ದದ್ದು ಒಂದು ಗುರಿಯೆಡೆಗಿನ ಹೋರಾಟ.ನಂತರ ನಮ್ಮ ದೇಶದ ಸರಕಾರ ಬಂದ ಬಳಿಕ ಅಭಿವೃದ್ಧಿ ಕಾರ್ಯ ಆರಂಭವಾಯಿತು. ಬಳಿಕ ವಿವಿಧ ಪಕ್ಷಗಳ ಉದಯವಾಯಿತು.ಆಗಲೇ ಆರಂಭವಾದದ್ದು ತಮ್ಮ ಪಕ್ಷ ಅಧಿಕಾರರಕ್ಕೆ ಬರಬೇಕೆಂಬ ಒಂದೇ ಗುರಿಯ ಹೋರಾಟ.ಆರಂಭದ ಗುರಿಯ ದಾರಿ ಬದಲಾಯಿತು.ಗುರಿ ಕವಲೊಡೆಯಿತು. ಹೀಗಾಗಿ ದೇಶದ ಸಿದ್ದಾಂತದ ಹಳಿ ತಪ್ಪಿತು. ತಮ್ಮದೇ ಆದ ಪಕ್ಷದ ಸಿದ್ದಾಂತ ಬಂತು. ಅದರ ಬಳಕೆ ಇತ್ತೀಚಿನವರೆಗೂ ಕೆಲ ಪಕ್ಷಗಳು ಅನುಸರಿಸಿಕೊಂಡು ಬರುತ್ತಿದ್ದವು.ಇನ್ನೂ ಕೆಲವು ಓಲೈಕೆಗೆ ತೊಡಗಿಕೊಂಡಿದ್ದವು.ತಮ್ಮ ಪಕ್ಷ ಗೆಲ್ಲಬೇಕೆಂಬ ಉದ್ದೇಶದಿಂದಲೂ ಕೆಲ ಓಲೈಕೆ ತಂತ್ರಗಳ ಬಳಕೆಯಾಯಿತು.

ಸರಿ ಇದೆಲ್ಲವೂ ತೊಂದರೆಯಿರಲಿಲ್ಲ.ತಮ್ಮ ಪಕ್ಷಕ್ಕಾಗಿ ನಡೆಯುತ್ತಿತ್ತು.ಆದರೆ ಇತ್ತೀಚಿನ ದಿನಗಳಲ್ಲಿ ಆತಂಕಕಾರಿ ರಾಜಕಾರಣ ನಡೆಯುತ್ತಿದೆ.ತಮ್ಮ ಪಕ್ಷ ಗೆಲ್ಲಬೇಕೆಂಬ ಉದ್ದೇಶದಿಂದ ಜಾತಿಯೆಂಬ ಭಾವನಾತ್ಮಕವಾದ ಸಂಗತಿಯನ್ನು ಮುಂದಿಟ್ಟುಕೊಂಡು ಓಟು ಗಳಿಸುವ ಪ್ರಯತ್ನ ನಡೆಸುತ್ತಿದೆ. ಪಕ್ಷದಿಂದ ಟಿಕೆಟ್ ಕೊಡುವಾಗಲೂ ಜಾತಿ ಪ್ರಮುಖ ಪಾತ್ರ ವಹಿಸುತ್ತಿದೆ.ಹೀಗಾಗಿ ಒಂದು ಜಾತಿಗೆ ಪಕ್ಷದಿಂದ ಟಿಕೆಟ್ ಸಿಕ್ಕಿ ಇನ್ನೊಂದು ಜಾತಿಗೆ ಸಿಕ್ಕಿಲ್ಲವಾದರೆ ಆ ಪಕ್ಷದ ಇನ್ನೊಂದು ಜಾತಿಯ ನಾಯಕ ತನ್ನ ಜಾತಿಯವರನ್ನು ಹಾಗೂ ತನಗೆ ಬೆಂಬಲಿಸುವವರೊಂದಿಗೆ ಚುನಾವಣೆಗೆ ಸ್ಪರ್ಧಿಸುತ್ತಾನೆ. ಆದರೆ ಎಲ್ಲೂ ತಾನು ಜಾತಿಯರನ್ನುಸೇರಿಸಿಕೊಂಡಿದ್ದೇನೆಂದು ಹೇಳುವುದಿಲ್ಲ.ನನಗೆ ಟಿಕೆಟ್ ಕೊಡದ ಕಾರಣ ಬಂಡಾಯ ಅಂತಾನೆ.

ಹೀಗಾಗಿ ಜಾತಿ ಜಾತಿಯೊಳಗೆ ಸಂಘರ್ಷಕ್ಕೆ ಇದುವೇ ನಾಂದಿಯಾಗಬಲ್ಲುದು ಎಂಬ ಸಂಗತಿ ಈಗ ಗಂಬೀರವಾಗಿ ಚಿಂತಿಸಬೇಕಾದ ಸಂಗತಿ.ಏಕೆಂದರೆ ಇದುವರೆಗೆ ಇಂತಹ ರಾಜಕಾರಣ ನಡೆದಿಲ್ಲ ಅಂತ ಹಿರಿಯರು ಹೇಳುತ್ತಾರೆ.ಆದುದರಿಂದ ಮುಂದಿನ ರಾಜಕೀಯದ ದಾರಿಯಿಂದ ಸಮಾಜದಲ್ಲಿ ಅಶಾಂತಿ ಉಂಟಾಗಬಲ್ಲುದು ಎಂಬ ಸಂದೇಶ ಈಗಲೇ ರವಾನೆಯಾಗುತ್ತಿದೆಯೇ?.

ಕಾಮೆಂಟ್‌ಗಳಿಲ್ಲ: