06 ಮೇ 2008

ಚುನಾವಣಾ "ಕಣ್ಣೀರು".....!!




ಚುನಾವಣಾ ಕಣ ಸಿದ್ಧವಾಗಿದೆ.ಕಣ್ಣೀರ ಕೋಡಿಗಳು ಹರಿದಿವೆ.ಜನರನ್ನು ಮರುಳು ಮಾಡುವ ತಂತ್ರಗಳು ನಡೆಯುತ್ತಿದೆ.ಜನ ನಂಬುತ್ತಾರೋ.... ಮತ್ತೆ ಮೋಸ ಹೋಗುತ್ತಾರೋ.... ಫಲಿತಾಂಶದ ನಂತರವೇ ತಿಳಿಯಬೇಕಷ್ಟೆ.

ಇತ್ತೀಚೆಗೆ ಒಂದು ಟ್ರೆಂಡ್ ಶುರುವಾಗಿದೆ.ಜನರೆದುರು ಅಳುವುದು.ಅವರು ಹೀಗೆ ಮಾಡಿದರು,ನನ್ನ ಕಾರ್ಯಕರ್ತ ದೇವರೇ ನೀವೇ ಅವರಿಗೆ ಪಾಠ ಕಲಿಸಿ ಎಂದೆಲ್ಲಾ ಹೇಳುವುದುಂಟು..... ಜನ ಮರುಳಾಗುತ್ತಾರೆ ಅಂತ ರಾಜಕಾರಣಿ ಅಂದುಕೊಂಡು ಬಿಡುತ್ತಾನೆ.ಆದರೆ ಈಗ ಜನರು ಬುದ್ಧಿವಂತರಾಗಿದ್ದಾರೆ. ಹಾಗಿರುವ "ಮೊಸಳೆ" ಕಣ್ಣೀರಿನ ಮಂದಿಗೇ ಸರಿಯಾದ ಪಾಠ ಕಲಿಸುತ್ತಾರೆ.

ಗಮನಿಸಿ ನೋಡೋಣ...

ಒಂದು ಪಕ್ಷ ರೈತರಿಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದರೆ ಇನ್ನೊಂದು ಪಕ್ಷ ನಾವು 24 ಗಂಟೆ ವಿದ್ಯುತ್ ನೀಡುತ್ತೇವೆ ಎನ್ನುತ್ತಾರೆ.ಮತ್ತೊಂದು ಪಕ್ಷ ನಾವು ಗ್ಯಾಸ್,ಸ್ಟವ್ ನೀಡುತ್ತೇವೆ ಎನ್ನುತ್ತಾರೆ.ಹಾಗಿದ್ರೆ ನಿಜವಾಗಲೂ ಇದೊಂದು ಸ್ಫರ್ದೆಯೇ?.ಜನರನ್ನು ಮರುಳು ಮಾಡುವ ತಂತ್ರವಲ್ಲವೇ?.ಈಗಿನ ಪರಿಸ್ಥಿತಿ ನೋಡಿದರೆ ಉಚಿತ ವಿದ್ಯುತ್ ನೀಡಲು ಸಾಧ್ಯವೇ.ಹಾಗಿರುವ ಉಚಿತಗಳು ರೈತರಿಗೆ ಬೇಕೇ?..ಅವು ಯಾವತ್ತೂ ಬೇಡ.ಇರುವಷ್ಟು ವಿದ್ಯುತ್ ಗುಣಮಟ್ಟದ್ದು ನೀಡಲಿ.ಗ್ಯಾಸ್ ಸಮರ್ಪಕವಾಗಿ ಸಿಗುವಂತಾಗಲಿ.ಪುಕ್ಕಟೆ ಯಾವುದೂ ಅಗತ್ಯವಿಲ್ಲ.ಅಷ್ಟು ಬಡವರು ನಮ್ಮಲ್ಲಿಲ್ಲ.ಗುಜರಾತ್ ಮಾದರಿಯಾನ್ನಾಗಿಸುವವರು ಅಂತಹ ಪುಕ್ಕಟೆಯನ್ನು ನೀಡುವುದರ ಬದಲು ಗುಣಮಟ್ಟದ್ದನ್ನು ನೀಡಲಿ.

ಇತ್ತೀಚೆಗೆ ಟಿ.ವಿ ಸಂದರ್ಶನದಲ್ಲಿ ಸಂದರ್ಶನಕಾರರು [ಸುವರ್ಣದಲ್ಲಿ ಶಶಿಧರ ಭಟ್] ರಾಜ್ಯದ ಜನಪ್ರತಿನಿಧಿಯೋರ್ವರಲ್ಲಿ ಪ್ರಶ್ನಿಸಿದರು ನಿಮ್ಮ ಚುನಾವಣಾ ಪ್ರನಾಳಿಕೆಯಲ್ಲಿ ಯಾವುದಾದರೂ ಈ ರಾಜ್ಯದ ಜನರ ಬದುಕನ್ನು ಎತ್ತರಕ್ಕೇರಿಸಬಲ್ಲ ಅಂಶಗಳಿವೆಯಾ? ಎಂದು ಕೇಳಿದಾಗ,ಜನಪ್ರತಿನಿಧಿ ಹೇಳಿದ್ದು ಹೌದು ಇದೆ ಅದು ಬೆಂಗಳೂರಿನ ಸಮಗ್ರ ಅಭಿವೃಧಿಗೆ ಸಾವಿರ [ಲೆಕ್ಕಕ್ಕೆ ನಿಲುಕದ್ದು] ಕೋಟಿ ರೂ ಮೀಸಲಿಡಲಾಗಿದೆ ಎಂದರು......!!. ಇಡೀ ರಾಜ್ಯದ ಜನರ ಬದುಕನ್ನು ಎತ್ತರಕ್ಕೇರಿಸುವುದು ಬೆಂಗಳೂರು ಮಾತ್ರವೇ?.ಹಳ್ಳಿಗಳ ಅಭಿವೃಧಿ ಯಾವಾಗ?.ಇದು ಕನಸೇ?.ಇಂತಹ ಹತ್ತಾರು ಪ್ರಶ್ನೆಗಳು ಮೂಡುತ್ತವೆ.ಇದಕ್ಕೆಲ್ಲಾ ಪರಿಹಾರ ಏನು?.

ಎಲ್ಲಾ ಕ್ಷೇತ್ರಗಳತ್ತ ಗಮನಹರಿಸುವ ಸರಕಾರ ಬರಲಿ.... ರಾಜ್ಯದಲ್ಲಿ ಏಕೈಕ ಪಕ್ಷ ತನ್ನ ಬಲದಿಂದ ಸರಕಾರ ನಡೆಸುವಂತಾಗಲಿ, ಆಡಳಿತಕ್ಕೆ ಬರಲಿ.... ಹೊಸ ಸರಕಾರವಿರಲಿ..... ಬದಲಾವಣೆಯಿರಲಿ...... ಇದೊಂದೇ ಪರಿಹಾರ.....

ಕಾಮೆಂಟ್‌ಗಳಿಲ್ಲ: