22 ಜೂನ್ 2008

ಅವರ ನೋವಿನಲ್ಲಿ......




ಮನುಷ್ಯ ಜನ್ಮವೆ ಹಾಗೆಯೇ ಏನೋ ?. ಇನ್ನೊಬ್ಬರ ಬದುಕಿನಲ್ಲಿ ಮೂಗು ತೂರಿಸಿ ಏನೋ ಒಂದು ಸಂತಸ ಪಡುವ ಹುಂಬತನ. ಆದರೆ ನಿಜವಾಗಲೂ ಅಂತಹವರು ತಮ್ಮ ಬದುಕಿನ ಒಳಗೊಮ್ಮೆ ಇಣುಕಿದಾಗ ಪರಿಸ್ಥಿತಿಯ ಸೂಕ್ಷತೆ ಅರಿವಾಗುತ್ತದೆ.

ದೇಶದಲ್ಲಿ ಅದೇನೋ ಸಮಸ್ಯೆಯಿಂದ ಬಳಲುವವರಿದ್ದಾರೆ,ಆರ್ತರಿದ್ದಾರೆ,ಅನೇಕ ಸಾವುಗಳು ದಿನಂಪ್ರತಿ ಸಂಭವಿಸುತ್ತಲೇ ಇರುತ್ತದೆ.ಇಲ್ಲಿ ಅನೇಕ ಸಾವುಗಳು ಅನ್ಯಾಯವಾಗಿ ನಡೆದುಹೋಗುತ್ತದೆ.ಅಂತಹುದಕ್ಕೆ ಧ್ವನಿಯಾಗುವವರು ಯಾವೊಬ್ಬನೂ ಕಾಣಿಸಿಲಾರ. ಎಲ್ಲೋ ಒಂದು ಅನಗತ್ಯವಾದ ಆ ಸಾವು ಔಚಿತ್ಯವೇ ಆಗಿದ್ದರೂ ಅದು ಇಡೀ ಜಗತ್ತನ್ನು ಕೇಂದ್ರೀಕರಿಸುತ್ತದೆ.ಆದರೆ ಅನೆಕ ಜನ ಅದು ಸರಿ , ... ಸಾವು ನಡೆಯಬೇಕಿತ್ತು ಅಂತ ಒಳಗೊಳಗೇ ಮಾತನಾಡುತ್ತಾರೆ.ಆದರೆ ಸಾಮಾಜಿಕವಾಗಿ ಗದ್ದಲ , ಗಲಭೆಗಳು ನಡೆಯುತ್ತದೆ. ಅನ್ಯಾಯವಾಗಿ ನಡೆದ ಸಾವು ನ್ಯಾಯವಾಗಿಯೂ , ನ್ಯಾಯವಾಗಿ ನಡೆದ ಸಾವು ಅನ್ಯಾಯವಾಗಿಯೂ ಈ ಜಗತ್ತಿನಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿದೆ.ಇದಕ್ಕೆ ಕಾರಣರಾರು?. ಇಂತಹ ಘಟನೆಗಳ ಬಗ್ಗೆ ಇಲ್ಲಿ ಉದಾಹರಿಸಬೇಕಾದ ಅವಶ್ಯಕತೆ ಇದೆ ಎಂದು ನನಗೆ ಅನ್ನಿಸುವುದಿಲ್ಲ.

ಇದರ ಹೊರತಾಗಿ ಸಮಾಜಕ್ಕೆ ಸಂಬಂಧಿಸಿರದ ಖಾಸಗೀ ಬದುಕಿನಲ್ಲಿ ಮೂಗುತೂರಿಸುವ ಔಚಿತ್ಯ ಏನಿದೆ?.ಕುಟುಂಬದ ಒಳಗೆ ಸಾಮಾನ್ಯವಾಗಿ ಇರುವ ಕಲಹಗಳು ಬೀದಿಗೆ ಬರಲು ಕಾರಣ ಮೂರನೆ ಒಬ್ಬ ವ್ಯಕ್ತಿಯ ಕೈವಾಡ ಇದ್ದೇ ಇರುತ್ತದೆ.ಅದಕ್ಕೆ ಕಾರಣಗಳು ಹಲವಾರು. ಹಾಗೆ ಒಂದು ವೇಳೆ ಬೀದಿಗೆ ಬಂದರೆ ಅದು ಉಲ್ಪಣಿಸಿದ ಉದಾಹರಣೆಗಳೇ ಹೆಚ್ಚು. ಕೊನೆಗೆ ಅದರ ಅಂತ್ಯವಾಗುವುದು ಹೇಗೆ ಎಂದು ಈಗ ಗೊತ್ತೇ ಇದೆ. ಒಂದು ವೇಳೆ ಮೂರನೆ ವ್ಯಕ್ತಿಯ ಕೈವಾಡವನ್ನು ಇಡೀ ಸಮಾಜವೇ ಬಹಿರಂಗವಾಗಿಯೇ ಹೇಳಿಕೊಂಡು ತಿರುಗಾಡಿದರೆ ಮತ್ತೆ ಮಾನದ ಪ್ರಶ್ನೆ......!!?. " ಸಾವು "...!!??.

ಹಾಗಾಗಿ ಒಂದು ಕುಟುಂಬದ ಒಳಗೆ ಗಂಡ - ಹೆಂಡತಿ, ಸೇರಿದಂತೆ ಮನೆಯೊಳಗೆ ಸಾಮಾನ್ಯವಾಗಿ ಒಂದು ರೀತಿಯ ಕಲಹ ಇದ್ದೇ ಇರುತ್ತದೆ. ಎಲ್ಲಿ ಇಲ್ಲ ಹೇಳಿ. ಆದರೆ ಅದು ಬೀದಿಗೆ ಬರುವುದು ಅಪರೂಪ. ಕೆಲವೊಮ್ಮೆ ಬಂದರೂ ಶಮನವಾಗುತ್ತದೆ. ಅದಾಗುವ ಮುನ್ನ ಸಮಾಜವು ಛೇ... ಥೂ.... ಎಂದರೆ ಆ ಕುಟುಂಬವಿಡೀ ಬೀದಿಗೆ ಬೀಳುವುದು ಖಚಿತ.ಅದರ ಪರಿಣಾಮ ಇನ್ನೂ ವಿಪರೀತ. ಆ ಸಾಮಾನ್ಯ ವಿಚಾರ ಅದರ ಪಾಡಿಗೆ ಅದಿದ್ದರೆ ಅಲ್ಲೇ ಶಮನವಾಗುತ್ತದೆ.ಮತ್ತೆ ಒಂದಾಗಿ ಕುಟುಂಬದ ನೊಗ ಸುಲಲಿತವಾಗಿ ಸಾಗುತ್ತದೆ.ಅದಕ್ಕೂ ಮುನ್ನ ಜನಕ್ಕೆ ಏಕೆ ಆ ಕುಟುಂಬದ ಬಗ್ಗೆ ಆಸಕ್ತಿ.?. ತಮ್ಮ ಸಂಸಾರದ ನೊಗವನ್ನು ಮೊದಲು ಸರಿ ಪಡಿಸುವ ಚಿಂತನೆ ಏಕೆ ಬರಲ್ಲ ಎಂಬುದೇ ತಿಳಿಯದ ಪ್ರಶ್ನೆ.

ಕಾಮೆಂಟ್‌ಗಳಿಲ್ಲ: