08 ಜೂನ್ 2008
ಗೃಹಸಚಿವರು ಬಂದರು.....
ಗೃಹ ಸಚಿವ ವಿ ಎಸ್ ಆಚಾರ್ಯ...
ಕುಕೆ ಸುಬ್ರಹ್ಮಣ್ಯಕ್ಕೆ ಭಾನುವಾರದಂದು ಅಂದರೆ ಖಾತೆ ಹಂಚಿಕೆಯಾಗಿ ತಮಗೆ ಜವಾಬ್ದಾರಿ ಸಿಕ್ಕಿದ ಬಳಿಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದರು.
"ಎಲ್ಲಿ ಪ್ರಾಮಾಣಿಕತೆ ,ಸಂಕಲ್ಪ ಶುದ್ಧತೆ ಇರುತ್ತದೋ ಅಲ್ಲಿ ಪರಮಾತ್ಮನ ಅನುಗ್ರಹ ಇರುತ್ತದೆ" ಎಂದು ಆಚಾರ್ಯರ ಮನದಾಳದ ಮಾತನ್ನು ಬಿಚ್ಚಿಟ್ಟ ರೀತಿ.ಹಾಗಾಗಿ ರಾಜ್ಯದ ಬಿ ಜೆ ಪಿ ಸರಕಾರದಲ್ಲಿ ನೀವು ಇದೆರಡನ್ನೂ ಕಾಣ ಬಹುದು ಎನ್ನುತ್ತಾ ಪೀಠಿಕೆಯಿಡುವ ಆಚಾರ್ಯ ಮಾತನಾಡಿದ್ದು ಇಷ್ಟು......
ಪಕ್ಷದ ತೀರ್ಮಾನದಂತೆ ಒದಗಿದ ಗೃಹ ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸುವೆ.ಅಭಿವೃದ್ಧಿಯೇ ನಮ್ಮ ಪ್ರಣಾಳಿಕೆ,ಮುಂದಿನ 5 ವರ್ಷಗಳ ಕಾಲ ಸಮೃದ್ಧಿ - ಸುಖಿ ರಾಜ್ಯ ನಿರ್ಮಾಣ ಮಾಡುವುದರೊಂದಿಗೆ ಎದ್ದು ಕಾಣುವ ಸಕಾರಾತ್ಮಕವಾದ ಬದಲಾವಣೆಯನ್ನು ತರುವುದೇ ನಮ್ಮ ಸಂಕಲ್ಪ ಆ ನಿಟ್ಟಿನಲ್ಲಿ ಸುಗಮ ಆಡಳಿತಕ್ಕೆ ಅಗತ್ಯವಾದ ಕಾನೂನು ಸುವ್ಯವಸ್ಥೆ,ಸೌಹಾರ್ದತೆಯನ್ನು ಕಾಪಾಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು,ಪೊಲೀಸ್ ವ್ಯವಸ್ಥೆಯನ್ನು ಬಲಗೊಳಿಸಿ ಆಧುನೀಕರಣಗೊಳಿಸಲಾಗುವುದು.ಭಯೋತ್ಪಾದನೆ ,ನಕ್ಸಲ್ ಮತ್ತು ಸಮಾಜದಲ್ಲಿ ಶಾಂತಿ ಕದಡುವವರನ್ನು ಸಂಪೂರ್ಣವಾಗಿ ಮಟ್ಟ ಹಾಕಲಾಗುವುದು ಎನ್ನುವ ಮೂಲಕ ಪರೋಕ್ಷವಾಗಿ ಕೆಲ ಸಂಘಟನೆಗಳಿಗೆ ಎಚ್ಚರಿಕೆಯನ್ನು ನೀಡಿದರು.ಬಿ ಜೆ ಪಿಯು ಯಾವುದೇ ಕಾರಣಕ್ಕೂ ಸೇಡಿನ ರಾಜಕಾರಣ ಮಾಡುವುದಿಲ್ಲ ಜನ ಸೇವೆ ಮತ್ತು ಅಭಿವೃದ್ಧಿಯೇ ನಮ್ಮ ಮುಖ್ಯ ಗುರಿ ಎಂದರು. ಮಾಧ್ಯಮ ಮತ್ತು ಜನರ ಮುಂದೆ ಇಡುವ ಎಂಜೆಂಡಾದ ಹೊರತಾಗಿ ಗುಪ್ತವಾದ ಯಾವುದೇ ಎಜೆಂಡಾಗಳು ನಮ್ಮ ಮುಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದೇವಸ್ಥಾನಕ್ಕೆ ಬೇಟಿ ನೀಡುವುದರ ಜೊತೆಗೆ ಸಂಪುಟ ನರಸಿಂಹ ಸ್ವಾಮಿ ಮಠಕ್ಕೂ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ