03 ಜುಲೈ 2008

ಅರ್ಹತೆಯ ಬದುಕು....??




ನನಗೊಂದು ಪ್ರಶ್ನೆ .ಇದು ಅತ್ಯಂತ ಅಧಿಕ ಪ್ರಸಂಗ ಅಂತ ಕೆಲವರಿಗೆ ಅನ್ನಿಸಬಹುದು ಅಥವಾ ಎಂತಹ ಬಾಲಿಶ ಅನ್ನಿಸಬಹುದು ಅಥವಾ ಇದು ಕಾಮನ್ ಅಂತ ಹೇಳಿಬಿಡಬಹುದು.ಆದರೆ ಇದು ನನ್ನ ಪ್ರಶ್ನೆ ಮತ್ತು ಉತ್ತರ ಹುಡುಕು ಪ್ರಯತ್ನ.

ಮೊನ್ನೆ ಸುಮ್ಮನೆ ಕುಳಿತಿದ್ದಾಗ ಒಬ್ಬರು ಹಿರಿಯರು ಹೇಳುತ್ತಿದ್ದರು ಏಯ್ .. ನೀನು ನನ್ನಿಂದ ಸಣ್ಣವ ನನ್ನ ಕಾಲು ಹಿಡಿಯಬೇಕು ಅಂತ ಬೇರೊಬ್ಬನಲ್ಲಿ ಹೇಳುತ್ತಿದ್ದರು.[ಕಾಲು ಹಿಡಿಯುವುದು ಅಂದರೆ ತಲೆಬಾಗುವುದು ಎಂದರ್ಥ.ಇನ್ನೊಂದು ರೀತಿಯಲ್ಲಿ ಆಶೀರ್ವಾದ]. ಆತ ಏಕೆ ಅಂತ ಕೇಳುತ್ತಿದ್ದರೆ ನೀನು ನನ್ನಿಂದ ಸಣ್ಣವ ಅದಕ್ಕೆ. ದುರದೃಷ್ಟವೆಂಬಂತೆ ಆತನಲ್ಲಿ ಇದ್ದದ್ದು ಆ ಅರ್ಹತೆ ಮಾತ್ರಾ...!!.

ನಿಜವಾಗಲೂ ಹಿರಿಯರ ಆಶೀರ್ವಾದ ಬೇಕು, ನಿಜ. ಆದರೆ ಆತ ಕೇವಲ ಹಿರಿಯ ಎಂಬ ಒಂದೇ ಕಾರಣಕ್ಕೆ ಆತನಿಗೆ ನಮಸ್ಕರಿಸಬೇಕೇ?.ಅವನಲ್ಲೂ ಒಂದು ಅನುಭವ, ಒಂದು ವಿಚಾರ , ಒಂದು ಮಾರ್ಗದರ್ಶಕ ಗುಣ ಇರಬೇಕಲ್ಲ.?ಇಲ್ಲವಾದರೆ ಏಕೆ ಆತನಿಗೆ ನಮಸ್ಕರಿಸಬೆಕು?ಅಗತ್ಯ ಇದೆಯಾ?. ಹಾಗೆ ನೋಡಿದರೆ ಆತ ಹಿರಿಯ ಎಂಬುದನ್ನು ಬಿಟ್ಟರೆ ಅವನಿಂದ ಹೆಚ್ಚು ನಾವು ತಿಳಿದಿರುತ್ತೇವೆ.[ಹಾಗೆಂದು ಅಹಂ ಇರಬಾರದು.].ದುರಂತ ಅದುವೇ, ಇಂದು ಅರ್ಹತೆಯ ಮೇಲೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಮಾತನಾಡುವವರು ನೈತಿಕತೆ ಬಗ್ಗೆ ಹೇಳಿಬಿಡುತ್ತಾರೆ.ಅವರ ಇವರ ತಪ್ಪನ್ನು ಬೊಟ್ಟು ಮಾಡುತ್ತಾರೆ. ತನ್ನ ಅಂತರಾಳವನ್ನೊಮ್ಮೆ , ತನ್ನೊಳಗಿನ ಕಶ್ಮಲಗಳನ್ನು ನೋಡದೇ ಅಲ್ಲಿ ಕಮೆಂಟ್ ಮಾಡುತ್ತಾರೆ.ಆತ ಬಿಡುವ "ಬಡಾಯಿ"ಗಳೆಲ್ಲವೂ ಆತನ ಬದುಕಿನಲ್ಲಿ "ಬಂಡಲ್"ಆಗಿರುತ್ತದೆ. ಹಾಗಾಗಿ ಇಂದು ಸ್ವಲ್ಪ influence ಬೇಕು. ಟ್ಯಾಲೆಂಟ್ ಬೇಡ...,ಸ್ಥಾನ ಬೇಕು....ಆತ್ಮಗೌರವ ಬೇಡ.,.ಗೌರವ ಬೇಕು...... ಹೀಗೆಯೇ ನಡೆಯುತ್ತದೆ ಬದುಕು.... ಇನ್ನೊಬ್ಬರ ತುಳಿಯುತ್ತಾ..... ಹಲುಬುತ್ತಾ..... ಸಾಗುವ ಬದುಕು.
ಇದುವೇ ಇಂದಿನ ಸಮಾಜ.... ಇಂದಿನ ಬದುಕು.....

ಸುಮ್ಮನೆ ಆಲೋಚಿಸಿದ ಶಬ್ದಗಳನ್ನು ಇಲ್ಲಿ ಪೇರಿಸಿಟ್ಟಿದ್ದೇನೆ. ತುಂಬಾ ದಿನಗಳ ನಂತರ ಇಲ್ಲಿ ಕಾಣಿಸಿಕೊಳ್ಳಲು ಕಾರಣವಿದೆ ಅದನ್ನೂ ಈಗಲೆ ಹೇಳಿಬಿಡುತ್ತೇನೆ.

ಇದುವರೆಗೆ ಬರಹ , ಪತ್ರಿಕಾ ಮಾಧ್ಯದಲ್ಲಿ ಕಾಣಿಸಿಕೊಂಡಿದ್ದ ಬರೆಯುತ್ತಿದ್ದ ಈ ಹುಡುಗ ಈಗ ಟಿ ವಿ ಚಾನೆಲ್ ಒಂದರಲ್ಲಿ ಸೇರಿಕೊಂಡಿದ್ದೇ ಈ ವಿಳಂಬಕ್ಕೆ ಕಾರಣ.
ಸದ್ಯ ಸುವರ್ಣ ನ್ಯೂಸ್ ವಾಹಿನಿಯ ಪುತ್ತೂರು ಬಾತ್ಮೀದಾರ.ಪತ್ರಿಕೆಯಿಂದ ಟಿ.ವಿ ಕಡೆಗೆ ತೆರಳಿ ಹೊಸ ಕ್ಷೇತ್ರದ ಅನುಭವ.ನನ್ನ ಮಿತ್ರರನೇಕರು ಅಲ್ಲಿ ಇದ್ದಾರೆ.ಅನುಭವಗಳನ್ನು ಹೇಳುತ್ತಾರೆ.ದಾರಿಗಳನ್ನೂ ತೋರಿಸುತ್ತಾರೆ.ಅವರ ಅನುಭವಗಳು ನನ್ನ ಮುಂದಿನ ದಾರಿಗೆ ಪೆಟ್ರೋಲ್ ಇದ್ದಂತೆ.ಆಗಾಗ ಹಾಕಿಕೊಂಡು, ನಂತರ ಸ್ವಯಂಚಾಲಿತ.....!!!????. ಹೀಗಾಗಿ ಈಗ ಅವರಿಗೆ ವಂದಿಸುತ್ತೇನೆ.

ಆದರೆ ಇಲ್ಲಿ ಮಾತ್ರಾ ಆಗಾಗ ಕಾಣಿಸಿಕೊಳ್ಳುತ್ತಲೆ ಇರುತ್ತೇನೆ.

ಕಾಮೆಂಟ್‌ಗಳಿಲ್ಲ: