07 ಜುಲೈ 2008

ಒಂದು ಪ್ರಕರಣ ಹಿಂದೆ.....

ಇದು ಅತ್ಯಂತ ಭಯಾನಕ ಮತ್ತು ಭೀಭತ್ಸ ಕೃತ್ಯ ಎಂಬುದರಲ್ಲಿ ಎರಡು ಮಾತಿಲ್ಲ.ಅದನ್ನು ಭೇದಿಸಿದ ಪೊಲೀಸರದು ವಿಳಂಬ ತಂತ್ರ.ಅವರ ಕಾರ್ಯಕ್ಕೆ ಶ್ಲಾಘಿಸ ಬೇಕಾಗಿಲ್ಲ.ಅಲ್ಲಿ ಇದ್ದದ್ದು ಸಾರ್ವಜನಿಕರ ಕಾಳಜಿ ಮತ್ತು ಮಾನವೀಯತೆ.ಅದು ಅಲ್ಲಿ ಮಾತ್ರಾ ಸಾಧ್ಯವೆನೋ..?

ಅದು ಬಡ ಮುಸ್ಲಿಂ ಕುಟುಂಬ.ಮಡಿಕೇರಿಯ ಭಾಗಮಂಡಲದ ಸಮೀಪದ ಅಯ್ಯಂಗೇರಿಯಲ್ಲಿ ವಾಸವಾಗಿತ್ತು.ಹೆಸರು ಮೊಯ್ಡು.ಅಲ್ಲಿ ಇಲ್ಲಿ ಕೂಲಿ ನಾಲಿ ಮಾಡಿ ಪತ್ನಿ ಆಯಿಷಾ ಹಾಗೂ ಒಂದು ಹೆಣ್ಣು ಸಫಿಯಾ ಮತ್ತು 3 ಗಂಡು ಮಕ್ಕಳೊಂದಿಗೆ ಸುಖೀ ಸಂಸಾರ ಸಾಗಿಸುತ್ತಿದ್ದರು.ಆದರೆ ಇತ್ತೀಚಿನ 1 ವರ್ಷದಿಂದ ಈ ಕುಟುಂಬಕ್ಕೆ ನೆಮ್ಮದಿಯೇ ಇಲ್ಲ.ಕಾರಣ ಕಳೆದ ಒಂದೂವರೆ ವರ್ಷದಿಂದ ಅವರ ಮಗಳು ಸಫಿಯಾ ನಾಪತ್ತೆಯಾಗಿದ್ದಾಳೆ.ವರ್ಷ ಇನ್ನೂ 12 ದಾಟಿರಲಿಲ್ಲ.

ಬಡ ಕುಟುಂಬದ ಈ ಮನೆಯ ಯಜಮಾನ ಮೊಯ್ದು ಅವರಿಗೆ ತಮ್ಮ ಮಕ್ಕಳು ವಿದ್ಯಾವಂತರಾಗಬೆಕು ಎನ್ನುವ ಬಯಕೆ.ಆದರೆ ಕೈಯಲ್ಲಿ ಕಾಸಿಲ್ಲ ಅಂತೂ ಹಿರಿಯ ಮಗಳು ಸಫಿಯಾಳನ್ನು ಕೊಂಚ ಓದಿಸಿದ.ಮುಂದೆ ತಲೆಯಮೇಲೆ ಕೈ ಹೊತ್ತು ಮಗಳ ಮತ್ತು ಉಳಿದ ಮಕ್ಕಳ ಓದಿನ ಬಗ್ಗೆ ಚಿಂತೆ ನಡೆಸುತ್ತಿದ್ದ. ಇದೇ ಸಂದರ್ಭದಲ್ಲಿ ಸುಮಾರು 2004ರ ವೇಳೆಗೆ ತನ್ನ ನಿಕಟವರ್ತಿ ದೂರದ ಸಂಬಂದಿ ಮಹಮ್ಮದ್ ಎಂಬವರ ಮೂಲಕ ಕಾಸರಗೋಡು ಸಮೀಪದ ಮಾಸ್ತಿಕುಂಡಿನಲ್ಲಿರುವ ಗುತ್ತಿಗೆದಾರ ಹಂಸಾರ ಮನೆಗೆ ಮನೆಕೆಲಸಕ್ಕೆಂದು ಸೇರಿಸಲಾಯಿತು.ಆದರೆ ಮನೆಯವರಾರಿಗೂ ಇದರಲ್ಲಿ ಸಮಾಧಾನವಿರಲಿಲ್ಲ.ತನ್ನ ಮಗಳನ್ನು ಓದಿಸಬೇಕು ಎಂಬ ಅಚಲವಾದ ನಿರ್ಧಾರ ಮೊಯ್ದು ಮತ್ತು ಆಯಿಷಾರಿಗಿತ್ತು.ಆಗ ನೀವೇನು ಗಾಬರಿಯಾಗಬೆಡಿ.ಇಲ್ಲಿ ನನ್ನ ಮಗಳನ್ನು ನೋಡಿಕೊಳ್ಳಲು ಮಾತ್ರಾ ಬೇರೇನೂ ಕೆಲಸವಿಲ್ಲ.ಶಾಲೆಗೆ ನಾನೇ ಕಳುಹಿದುತ್ತೇನೆ ಎಂದು ಹಂಸ ಮೊಯ್ದು ಕುಟುಂಬವನ್ನು ಸಮಾಧಾನ ಪಡಿಸುತ್ತಾನೆ. ಈ ಮಾತಿಗೆ ಮೊಯ್ದು ದಂಪತಿಗಳಿಗೂ ಸಂತಸವಾಯಿತು,ಒಬ್ಬಳು ಮಗಳ ಓದಿಗೆ ದಾರಿಯಾಯಿತಲ್ಲಾ ಅಂತ ಕೊಂಚ ನಿರಾಳರಾಗಿ ಬಿಟ್ಟರು.ಆದರೆ ಬಹುಶ: ಅವರು ಎಡವಿದ್ದು ಇಲ್ಲೆ ಎಂಬ ಅಂಶ ಅವರಿಗೆ ಅಂದು ಅರಿಗಾಗಿರಲಿಲ್ಲ.ಈಗ ಈ ಪ್ರಕರಣ ನಡೆದ ಬಳಿಕ ಕೊರಗುತ್ತಿದ್ದಾರೆ ಮೊಯ್ದು ಕುಟುಂಬಸ್ಥರು.ಈ ಹಂಸಾ ಮೂಲತ: ಕಾಸರಗೋಡಿನ ಮಾಸ್ತಿಕೋಡಿನವನು.ಇಲ್ಲಿ ಮನೆ ಆಸ್ತಿ ಎಲ್ಲಾ ಇದ್ದರೂ ಈತ ತನ್ನ ಪತ್ನಿಯೊಂದಿಗೆ ಗೋವಾದಲ್ಲಿ ಗುತ್ತಿಗೆ ಇನ್ನಿತರ ಕೆಲಸಗಳನ್ನು ನಿರ್ವಹಿಸುತ್ತಿದ್ದ.ಅಲ್ಲಿ ತನ್ನ ಮಗುವನ್ನು ನೋಡಿಕೊಳ್ಳಲು ಹುಡುಗಿಯೊಬ್ಬಳ ಅನಿವಾರ್ಯತೆ ಬಂದಿದ್ದರಿಂದ ತನ್ನದೇ ಜಾತಿಯ ಬಾಲಕಿಯೊಬ್ಬಳನ್ನು ಹುಡುಕುತ್ತಿದ್ದ.ಆ ವೇಳೆಗೆ ಸಫಿಯಾ ಮದ್ಯವರ್ತಿಯ ಮೂಲಕ ಸಿಕ್ಕಿದ್ದಳು.ನಂತರ ಅವಳನ್ನು ಹಂಸಾ ಗೋವಾಕ್ಕೆ ಕರೆದುಕೊಂಡು ಹೋಗಿದ್ದ.ಆಗಾಗ ಊರಿಗೂ ಬರುತ್ತಿದ್ದ.

2 ವರ್ಷಗಳ ಕಾಲ ಚೆನ್ನಾಗೆ ಇದ್ದ ಸಫಿಯಾ ತನ್ನ ಮನೆಯವರೊಂದಿಗೆ ಮಾತನಾಡಿಕೊಂಡು , ಮೊಯ್ದು ತನ್ನ ಮಗಳನ್ನು ಆಗಾಗ ನೋಡಿಕೊಳ್ಳುತ್ತಲೂ ಇದ್ದರು. ಹಂಸನ ಮನೆಯಲ್ಲೂ ಅಂತಹ ಯಾವುದೇ ದೂರುಗಳೂ ಇದ್ದಿರಲಿಲ್ಲ. ಆದರೆ 2006 ಡಿಸೆಂಬರ್ 20 ರಂದು ಬೆಳಗ್ಗೆ ಮಾಸ್ತಿಕುಂಡಿನ ಮನೆಯಿಂದ ಸಫಿಯಾ ನಾಪತ್ತೆಯಾಗಿದ್ದಾಳೆ ಎಂಬ ಮಾಹಿತಿ ಯಾವಾಗ ಮೊಯ್ದು ದಂಪತಿಗಳಿಗೆ ತಲಪಿತೋ ಅಂದಿನಿಂದ ನೆಮ್ಮದಿ ಕಳಕೊಂಡು ಬಿಟ್ಟರು. ಈ ನಾಪತ್ತೆ ಪ್ರಕರಣದ ಮುನ್ನಾದಿನ ಹಂಸ ಕುಟುಂಬ ಗೋವಾಕ್ಕೆ ತೆರಳಿತ್ತು ಎಂಬ ಅಂಶ ನಂತರ ಬೆಳಕಿಗೆ ಬಂತು.ಈ ನಡುವೆ ಹಂಸಾ ಮೊಯ್ದು ಅವರಿಗೆ ದೂರವಾಣಿ ಮೂಲಕ ನಿಮ್ಮ ಮಗಳನ್ನು ಕರೆದುಕೊಂಡು ಹೋಗಲು ಬನ್ನಿ ಅಂತ ಡಿಸೆಂಬರ್ 20ರಂದು ಬೆಳಗ್ಗೆ ಹೇಳಿದ್ದ.ಆದರೆ ಮಧ್ಯಾಹ್ನದ ವೇಳೆಗೆ ನಾಪತ್ತೆಯಾಗಿರುವ ವಿಚಾರವನ್ನೂ ಹೇಳಿದ.ಹಾಗಾಗಿ ಗೊಂದಲಗಳು ಹುಟ್ಟಿಕೊಂಡವು. ಆ ನಂತರ ಗೋವಾದ ಮನೆಮಾಲೀಕನಲ್ಲಿ ವಿಚಾರಿಸಿದಾಗ ಡಿ.19ರ ರಾತ್ರಿ ಸಫಿಯಾಳೊಂದಿಗೆ ಈ ಕುಟುಂಬ ತೆರಳಿದೆ ಎಂಬ ಅಂಶ ಬೆಳಕಿಗೆ ಬಂದಿತು.ಹಾಗಾಗಿ ಆರಂಭದಲ್ಲಿ ಆದೂರು ಪೊಲೀಸ್ ಥಾಣೆಗೆ ದೂರು ನೀಡಲಾಯಿತು.ತನ್ನ ಮಗಳು ನಾಪತ್ತೆಯಾಗಿದ್ದಾಳೆ ಎಂದು ಸ್ಮೊಯ್ದು ದೂರು ನೀಡಿದರು.ಇದೆಲ್ಲಾ ನಡೆದದ್ದು ಡಿಸೆಂಬರ್ 2006 ರಲ್ಲಿ.ನಂತರ ಏನೆ ತನಿಖೆ ನಡೆದರೂ ಅದು ಪ್ರಗತಿ ಕಾಣಲಿಲ್ಲ.ಈ ನಡುವೆ ಸಫಿಯಾ ತಾಯಿ ಆಯಿಷಾ ಮಗಳನ್ನು ಹುಡುಕಿ ಕೊಡುವಂತೆ ಹೇಬಿಯಸ್ ಕ್ಲಾಪರ್ಸ್ ಅರ್ಜಿಯನ್ನೂ ಸಲ್ಲಿದರು.ಆದರೂ ಪ್ರಯೋಜನವಾಗಿಲ್ಲ.ಈ ನಡುವೆ ಗೋವಾದಿಂದ ಹಂಸಾ ಮರುಳುತ್ತಿರುವ ವೇಳೆ ಪೊಲೀಸ್ ಇಲಾಖಾ ಗೇಟ್ ಒಂದರಲ್ಲಿ ನೊಂದಾಯಿಸಿದ ಪ್ರಕಾರ ಕಾರಿನಲ್ಲಿ ಒಂದು ಚಿಕ್ಕ ಮಗು ಸೇರಿ ೩3ಜನ ಇದ್ದರು ಎಂಬ ಅಂಶ ಬೆಳಕಿಗೆ ಬಂದ ಕಾರಣ ಸಫಿಯಾ ಗೋವಾದಲ್ಲೇ ಕಾಣೆಯಾಗಿದ್ದಾಳೆ ಎಂಬುದು ಪೋಲೀಸರಿಗೂ ಅನುಮಾನ ಕಾಡಿತ್ತು. ಆದರೆ ಪೊಲೀಸ್ ತನಿಖೆ ಮುಂದುವರಿಯುತ್ತಿರಲಿಲ್ಲ.

ಸುಮಾರು ಒಂದೂವರೆ ವರ್ಷಗಳ ಬಳಿಕವೂ ವಿವಿಧ ಹೋರಾಟ ಮನವಿಗಳ ನಂತರವೂ ಯಾವುದೇ ಸುಳಿವು ದೊರೆಯದೇ ಇದ್ದಾಗ ನ್ಯಾಯಕ್ಕಾಗಿ ಸಾರ್ವಜನಿಕರು ಪಣತೊಟ್ಟರು.ಕ್ರಿಯಾ ಸಮಿತಿಯೊಂದನ್ನು ರಚಿಸಿಕೊಂಡು ಮೊಯ್ದು ಪರ ಹೋರಾಟಕ್ಕೆ ನಿಂತರು.ಸಫಿಯಾಳನ್ನು ಪತ್ತೆ ಮಾಡುವಂತೆ ಆಗ್ರಹಿಸಿ ಕಾಸರಗೋಡಿನಲ್ಲಿ ಅನಿರ್ದಿಷ್ಠಾವಧಿ ಧರಣಿ ನಡೆಯಿತು.ನಿರಂತರ 82 ದಿನಗಳ ಕಾಲ ಪ್ರತೀದಿನ 2 ಜನರಂತೆ ಉಪವಾಸ ನಡೆಯಿತು.ಕೇರಳ ರಾಜ್ಯದಾದ್ಯಂತ ಸಫಿಯಾ ಪತ್ತೆಗೆ ಆಗ್ರಹಿಸಿ ಹೋರಾಟ ಸಮಿತಿ ರಚೆನೆಯಾಯಿತು.ಕೇರಳದಾದ್ಯಂತ ಪ್ರತಿಭಟನೆ ನಡೆಯಿತು.ಸರಕಾರಕ್ಕೂ ಚುರುಕು ಮುಟ್ಟಿತು.ತಕ್ಷಣವೇ ಸರಕಾರವು ಈ ಪ್ರಕರಣ ಪತ್ತೆಗೆ ಅಪರಾಧ ಪತ್ತೆ ದಳಕ್ಕೆ ವರ್ಗಾಯಿಸಿತು.

ಈದಾದ 2 ದಿನದಲ್ಲಿ ಹಂಸನನ್ನು ಮತ್ತು ಆತನ ಪತ್ನಿಯನ್ನು ಬಂಧಿಸಿ ವಿಚಾರಿಸಿದಾಗ ಸಫಿಯಾಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ ತಕ್ಷಣವೇ ಬಧಿಸಲಾಯಿತು.ನಂತರ ವಿಚಾರಣೆ ನಡೆದಾಗ 2006 ಡಿ.26 ರಂದು ಗೋವಾದ ಫ್ಲಾಟ್ ನಲ್ಲಿ ತಂಗಿರುವಾಗ ಮಧ್ಯಾಹ್ನದ ಭೋಜನಕ್ಕಾಗಿ ಅನ್ನ ತಯಾರಿಸುತ್ತಿದ್ದ ವೇಳೆ ಆಯತಪ್ಪಿ ಗಂಜಿ ಸಫಿಯಾಳ ಮೇಲೆ ಬಿದ್ದು ಗಾಯಗಳಾಯಿತು.ಚಿಕಿತ್ಸೆ ನೀಡಿದರೂ ಕಡಿಮೆಯಾಗಿರಲಿಲ್ಲ.ಆದರೆ ಹೀಗೆ ಗಾಯಗೊಂಡ ಸಫಿಯಾ ಯಾರಿಗೂ ಕಾಣಕೂಡದು ಎಂದು ರೂಮೊಂದರಲ್ಲಿ ಕೂಡಿಹಾಕಿದ್ದರು.ಆದರೆ ಅವಳು ಸಂಜೆಯಾಗಿತ್ತಿದ್ದಂತೆ ತೀವ್ರ ಜ್ವರದಿಂದ ಬಳಲಿತ್ತಿದ್ದಳು ಕೊನೆಯ ಕ್ಷಣದಲ್ಲಿ ಅವಳು ಬದುಕುವ ಲಕ್ಷಣಗಳು ಕಾಣಿಸಿಕೊಳ್ಳಲಿಲ್ಲ.ಹಾಗಾಗಿ ಇನ್ನು ಹೀಗೆಯೇ ಬಿಟ್ಟರೆ ಅಪಾಯವೆಂದು ಅವಳ ಕೈಕಾಲು ,ರುಂಡವನ್ನು ಕಡಿದು ಗೋವಾದ ಅಣೆಕಟ್ಟೆಯೊಂದರ ಬಳಿ ಹೂತು ಹಾಕಿರುವುದಾಗಿ ಹಂಸ ಒಪ್ಪಿಕೊಂಡನು.ಹಾಗಾಗಿ ಮರಿದಿನವೇ ಗೋವಾಕ್ಕೆ ತೆರಳಿ ಎಲುಬುಗಳ ಪರಿಶೀಲನೆ ನಡೆದಿದೆ.

ಈ ನಡುವೆ ಒಂದು ವರ್ಷಗಳ ಕಾಲ ಪ್ರಕರಣ ವಿಳಂಬವಾಗಲು ಆದೂರಿನ ಪೊಲೀಸ್ ಅಧಿಕಾರಿಯೊಬ್ಬರಿಗೆ ಹಣ ನೀಡಿರುವ ವಿಚಾರವು ಬೆಳಕಿಗೆ ಬಂದಿತು.ತಕ್ಷಣವೇ ಆ ಅಧಿಕಾರಿಯನ್ನು ಸರಕಾರವು ವಜಾ ಮಾಡಿದೆ. ಅಪರಾಧ ಪತ್ತೆ ದಳ ಕಾರ್ಯಾಚರಣೆತಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.ಈ ನಡುವೆ ಕೇರಳದ ಅನೆಕ ಸಂಘಟನೆಗಳು ಮೊಯ್ದು ದಂಪತಿಗಳ ಪರ ನಿಂತಿದ್ದರು. ಪ್ರತಿದಿನ ಹೋರಾಟದಲ್ಲಿ ಭಾಗಿಯಾಗುತ್ತಿದ್ದರು.ಅತ್ಯಂತ ಬಡ ಕುಟುಂಬದ ಇವರಿಗೆ ಊರಿನ ಮಂದಿಯು ಸಂಪೂರ್ಣ ಸಹಕಾರ ನೀಡಿದ್ದರು. ಈಗ ಇವರ ಕುಟುಂಬಕ್ಕೆ ನೋವಿನಲ್ಲೂ ಆತನಿಗೆ ಶಿಕ್ಷೆಯಾಗಬೇಕು ಎನ್ನುವ ಆಶಯ ವ್ಯಕ್ತಪಡಿಸುತ್ತಾರೆ.

ಈ ಪ್ರಕರಣದ ವರದಿಯೊಂದನ್ನು ಮಾಡುವ ಸಲುವಾಗಿ ನನಗೆ ಹೋಗಬೇಕಿತ್ತು. ಕಾಸರಗೋಡಿಗೆ ನೇರವಾಗಿ ತೆರಳಿದಾಗ ಅಂದು ಹೋರಾಟ ಸಮಿತಿಯ ಪತ್ರಿಕಾಗೋಷ್ಠಿ ಇತ್ತೆಂದು ತಿಳಿಯಿತು.ತಕ್ಷಣವೇ ಅಲ್ಲಿನ ಪ್ರೆಸ್ ಕ್ಲಬ್ ಹುಡುಕಿ ಹೋರಾಟ ಸಮಿತಿಯ ಸದಸ್ಯರ ದೂರವಾಣಿ ನಂಬರ್ ಪಡೆದು ಮಾತನಾಡಿದೆ.ಪುಣ್ಯಕ್ಕೆ ಅಲ್ಲೇ ಇದ್ದರು.ಮಾತನಾಡಿದಾಗ ಎಲ್ಲಾ ವಿವರಗಳನ್ನು ನೀಡಿದರು.ನಂತರ ಸಫಿಯಾ ತಂದೆ ತಾಯಿಯನ್ನು ಭೇಟಿಯಾಗಬೆಕಾಯಿತು.ಅಲ್ಲಿಂದ ಸುಮಾರು 40 ಕೀ ಮೀ ಮತ್ತೆ ಪ್ರಯಾಣ. ಹಾಗೆ ದಾರಿಯಲ್ಲಿ ಸಾಗಲು ನನಗೆ ಸಾಥಿಯಾದವರು ಹೋರಾಟ ಸಮಿತಿ ಅಧ್ಯಕ್ಷರು. ಅವರಲ್ಲಿ ನಾನು ವಿಚಾರಿಸುತ್ತಾ ಹೋದೆ.ಅವರು ಹೇಳಿದರು ನನಗೆ ಸಫಿಯಾ ತಂದೆ-ತಾಯಿ ಯಾರೂ ಕೂಡಾ ಸಂಬಂಧಿಕರಲ್ಲ.ನನ್ನ ಮಿತ್ರ ಇವರ ವಿಚಾರ ಹೇಳಿದರು.ಮಾನವೀಯ ದೃಷ್ಠಿಯಲ್ಲಿ ಸಹಕರಿಸಿದೆ ಎನ್ನುತ್ತಾರೆ.ಮಾತ್ರವಲ್ಲ ಅವರು ನಡೆಸಿದ 82 ದಿನಗಳ ಪ್ರತಿಭಟನೆಯ ಎಲ್ಲಾ ವಿವರಗಳನ್ನು ಹಾಗೂ ಪತ್ರಿಕೆಗಳ ತುಣುಕುಗಳನ್ನು ತೆಗೆದಿರಿಸಿದ್ದರು.ಹಾಗೆ ಅವರು ತೆಗೆದಿರಿಸಿದ ಪತ್ರಿಕೆಗಳು 2000....!!!.ನನಗೆ ನಿಜಕ್ಕೂ ಅಚ್ಚರಿಯಾಯಿತು.ಮುಂದೆ ಅವರ ಮನೆ ಬಂತು.ನೋಡಿದಾಗ ಸಾಮಾನ್ಯ ಮನೆ.ಸಿರಿವಂತನೇನಲ್ಲ. ಮತ್ತೆ ಆತ ಹೇಳಿದ ಇಂದು ರಾತ್ರಿ ನಾವು ಗೋವಾಗೆ ಹೋಗುವವರಿದ್ದೇವೆ. ಖರ್ಚು?.ಅಂತ ನಾನು ಕೇಳಿದೆ.ಅದು ನಾವು ಸುಮಾರು 15 ಮಂದಿ ಹೋಗುತ್ತೆವೆ ಅವರವರ ಖರ್ಚು ಅವರಿಗೆ.ಸುಮಾರು 500 ರೂ ಬೇಕು ಎಂದು ಹೇಳಿದರು.ಇದೆಲ್ಲವನ್ನೂ ಕೇಳಿ , ನನಗೆ ಬೇಕಾದ ವಿಚಾರವನ್ನು ಸಂಗ್ರಹಿಸಿಕೊಂಡು ನಾನು ಬಂದೆ.ಪ್ರಕರಣದ ತನಿಖೆ ನಡೆಯುತ್ತಿದೆ.

ಇಂತಹ ಅನೇಕ ಸಂಗತಿಗಳು , ನಿಗೂಡ ಕೊಲೆಗಳು , ಬಡವರ ಅಳಲುಗಳು ನಮ್ಮಲ್ಲಿ ಎಷ್ಟು ನಡೆಯುವುದಿಲ್ಲ.ಇಲ್ಲಿ ಒಂದಾದರೂ ಪ್ರತಿಭಟನೆಗಳು ಮಾನವೀಯ ದೃಷ್ಠಿಯ ನೆಲೆಯಲ್ಲಿ ನಡೆದಿದೆಯಾ ಅಂತ ನಾನು ಲೆಕ್ಕ ಹಾಕುತ್ತ ಹಿಂತಿರುಗಿದೆ.ಯಾಕೆಂದರೆ ನನಗೆ ಅಲ್ಲಿ "ನಮ್ಮವರೇ' ಸಹಕರಿಸಿರಲಿಲ್ಲ.ಒಬ್ಬರನ್ನು ಬಿಟ್ಟರೆ...!!!?

ಕಾಮೆಂಟ್‌ಗಳಿಲ್ಲ: