22 ಜುಲೈ 2008

ಆರಂಭವಾಗಲಿದೆ ವಿದ್ಯುತ್ ಪ್ರೊಜೆಕ್ಟ್...





ಬಹುಕಾಲ ಸುದ್ದಿಯಲ್ಲಿದ್ದು ನಂತರ ಸದ್ದಿಲ್ಲದೇ ಕುಳಿತಿದ್ದ ಕುಮಾರಧಾರಾ ಜಲ ವಿದ್ಯುತ್ ಯೋಜನೆ ಈಗ ಕಾರ್ಯಗತವಾಗುವ ಎಲ್ಲಾ ಲಕ್ಷಣಗಳು ಕಾಣಿಸಿಕೊಂಡಿವೆ.ಈ ಯೋಜನೆಯ ವಿರೋಧದ ಮೂಲಕ ಸಾರ್ವಜನಿಕ ರಂಗಕ್ಕೆ ಬಂದವರು ಈಗ ಮಂತ್ರಿಯೂ ಆಗಿದ್ದಾರೆ.ಆದರೆ ಇನ್ನು ಈ ಯೋಜನೆ ನಿಲ್ಲುವ ಲಕ್ಷಣಗಳಿಲ್ಲ.ಈ ಯೋಜನೆಗೆ 200 ಕೋಟಿ ರೂ ವೆಚ್ಚ ತಗಲಬಹುದೆಂದು ಅಂದಾಜಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಯಿಲ ಮತ್ತು ಶಾಂತಿಗೋಡು ಗ್ರಾಮಗಳ ನಡುವೆ ಕುಮಾರಧಾರಾ ನದಿಗೆ ವಳಕಡಮ ಎಂಬಲ್ಲಿ ಈ ಪ್ರಾಜೆಕ್ಟ್ ನಿರ್ಮಾಣವಾಗಲಿದೆ.ಭರೋಕ ವಿದ್ಯುತ್ ಕಂಪನಿಯು ತನ್ನ ಮಹತ್ವಾಕಾಂಕ್ಷೆಯ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲಿದೆ.1995 ರಿಂದ ಈ ಪ್ರಾಜೆಕ್ಟ್ ನಿರ್ಮಾಣಕ್ಕಾಗಿ ಹಲವು ಪ್ರಯತ್ನ ನಡೆದಿತ್ತು.ಆದರೆ ಈ ಯೋಜನೆಗೆ ಸಾರ್ವಜನಿಕರಿಂದ ವ್ಯಾಪಕವಾದ ವಿರೋಧ ಕಂಡುಬಂದ ಹಿನ್ನೆಲೆಯಲ್ಲಿ ನಿರ್ಮಾಣ ಕಾರ್ಯ ವಿಳಂಬವಾಗಿತ್ತು.ಸದ್ಯ ಅಲ್ಲೇ ಸಮೀಪದಲ್ಲಿ ಮಿನಿ ಘಟಕವನ್ನು ತಯಾರಿಸಿದ ಬಳಿಕ ಸದ್ಯದಲ್ಲೇ ಇಲ್ಲಿ ತನ್ನ ಕಾರ್ಯವನ್ನು ಆರಂಭಿಸಲಿದೆ. ಈಗಾಗಲೆ ಈ ಯೋಜನೆಯಿಂದ ಮುಳುಗಡೆಯಾಗಲಿರುವ ಉಭಯ ಗ್ರಾಮಗಳ ಸುಮಾರು 14 ಮಂದಿಗೆ ಪರಿಹಾರವನ್ನು ನೀಡಿ ಪ್ರತೀ ಎಕ್ರೆಗೆ 10 ಲಕ್ಷವನ್ನು ನೀಡಿದೆ.ಹಾಗಾಗಿ ಇಲ್ಲಿ ಈಗ ವ್ಯಾಪಕವಾದ ವಿರೀಧ ಕಂಡುಬಂದಿಲ್ಲ.ಮಾತ್ರವಲ್ಲ ಇಂದು ವಿದ್ಯುತ್ ಅನಿವಾರ್ಯವಾದ್ದರಿಂದ ಸಾರ್ವಜನಿಕರು ಈ ಯೋಜನೆಗೆ ಸಹಮತವನ್ನು ವ್ಯಕ್ತಪಡಿಸುತ್ತಾರೆ.ಅಲ್ಲದೆ ಇಲ್ಲಿ ತಯಾರಾಗುವ ಎಲ್ಲಾ ವಿದ್ಯುತ್ ಇದೇ ಊರಿಗೆ ನೀಡುವಂತೆ ಒತ್ತಾಯಿಸುತ್ತಾರೆ.


ಈ ಯೋಜನೆ ೧೯೯೫ ರಲ್ಲಿ ಈ ಊರಿಗೆ ಬಂದಾಗ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಇರಲಿಲ್ಲ. ಆಗ ಸಾರ್ವಜನಿಕರೆಲ್ಲರೂ ಈ ಯೋಜನೆಯನ್ನಿ ವಿರೋಧಿಸಿದ್ದರು.ಈಗಿನ ಸಚಿವೆ ಶೋಭಾ ಕರಂದ್ಲಾಜೆಯವರು ಇದೇ ಊರಿನವರಾದ್ದರಿಂದ ಕುಮಾರಧಾರಾ ನದಿ ಉಳಿಸಿ ಹಾಗೂ ಪವರ್ ಪ್ರಾಜೆಕ್ಟ್ ವಿರೋಧಿ ಸಮಿತಿಯಲ್ಲಿ ಮುಂಚೂಣಿಯಲ್ಲಿದ್ದರು. ಈ ಹೋರಾಟದ ಮೂಲಕ ಅವರು ಸಾರ್ವಜನಿಕವಾಗಿ ಕಂಡುಕೊಂಡರು.ಈಗ ಅವರ ನಿಲುವು ಏನು ಎಂಬುದರ ಬಗ್ಗೆ ಸಾರ್ವಜನಿಕರ ಪ್ರಶ್ನೆಯಾಗಿದೆ. ಆರಂಭದಲ್ಲಿ ಈ ಯೋಜನೆಯ ಲೆಕ್ಕಾಚಾರಗಳನ್ನು ಒಂದೊಂದಾಗಿ ಮುಂದಿಟ್ಟು ಜನರಲ್ಲಿ ಗೊಂದಲ ಹುಟ್ಟಿಸಿತ್ತು. ನಂತರ ವಿವರವಾಗುತ್ತಾ ಹೋದಂತೆ ಪ್ರತಿಭಟನಾ ರೂಪಗಳೂ ನಿಧಾನವಾದವು. ಸದ್ಯದ ಮಾಹಿತಿಯಂತೆ ಕುಮಾರಧಾರಾ ನದಿಗೆ ೩೦೦ ಮೀಟರ್ ಎತ್ತರದಲ್ಲಿ ಅಣೆಕಟ್ಟು ನಿರ್ಮಿಸಿ ನೀರನ್ನು ತಗ್ಗು ಪ್ರದೇಶಕ್ಕೆ ಹಾಯಿಸಿ ಅಲ್ಲಿ ಟರ್ಬೈನ್ ಇರಿಸಿ ಪ್ರತಿದಿನ 10 ರಿಂದ 15 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಆದರೆ ಕೇವಲ ಮಳೆಗಾಲದಲ್ಲಿ ಮಾತ್ರಾ ಈ ಯೋಜನೆ ಚಾಲೂ ಇರುವುದು.


ಇಂದು ರಾಜ್ಯದಾದ್ಯಂತ ವಿದ್ಯುತ್ ಕೊರತೆ ಇರುವುದು ನಿಜ. ಹಾಗಾಗಿ ಅಲ್ಲಲ್ಲಿ ಕಿರುಜಲ ವಿದ್ಯುತ್ ಘಟಕಗಳು ಅನಿವಾರ್ಯ ಕೂಡಾ. ಹಾಗೆ ತಯಾರಿಸುವ ಮಿನಿಘಟಕಗಳ ಸ0ಪೂರ್ಣ ಮಾಹಿತಿಯನ್ನು ಜನಸಾಮಾನ್ಯರಿಗೆ ನೀಡುವ ಜವಾಬ್ದಾರಿ ಕಂಪೆನಿಗಳಿಗೆ. ಮಾತ್ರವಲ್ಲ ಅಲ್ಲಿ ತಯಾರಾಗುವ ವಿದ್ಯುತ್ ಆ ಭಾಗದ ಜನರಿಗೇ ಉಪಯೋಗವಾಗುವಂತೆ ನೋಡಿಕೊಳ್ಳಬೇಕು. ಒಂದು ಹೋರಾಟವನ್ನು ಆರಂಭಿಸಿದ ಬಳಿಕ ಜನರಿಗೆ ಅದರ ಸಂಪೂರ್ಣ ಮಾಹಿತಿಯನ್ನೂ ನೀಡದೆ ಅರ್ಧದಲ್ಲಿ ಜಾರಿಕೊಳ್ಳುವುದು ಸರಿಯಲ್ಲ ಎಂಬ ಮಾತಿನ ನಡುವೆಯೂ ತನ್ನ ಲಾಭವನ್ನು ಮಾತ್ರಾ ನೋಡಿಕೊಳ್ಳಬಾರದು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಕಾಮೆಂಟ್‌ಗಳಿಲ್ಲ: