26 ಜನವರಿ 2008

ರಾಮ - ರಾಮಾಯಣ - ಸೇತುಸಮುದ್ರಂ





ಹೇ ರಾಮ್....

ಎಷ್ಟೆಲ್ಲಾ ವಿವಾದಗಳು ನಡೆದು ಹೋಯಿತು.ನಿಜವಾಗಲೂ ಬೇಕಿತ್ತಾ?.ಐತಿಹಾಸಿಕ ಸತ್ಯವೊಂದನ್ನು ತಿರುಚುವ ಪ್ರಯತ್ನ ನಡೆಯಬೇಕಿತ್ತಾ?.
ಭಾವನಾತ್ಮಕ ಮನಸ್ಸುಗಳಂತೂ ಹೋರಾಡಿದವು... ಕೆಲವರು ಮೌನವಾಗಿ ಪ್ರತಿಭಟಿಸಿದರು.ನಮ್ಮ ದೇಶದ ರಾಜಕೀಯ ಮುಖಂಡರು ಅದಕ್ಕೆ ಏನೆಲ್ಲಾ ವ್ಯಾಖ್ಯಾನ ನೀಡಿದರು.ಅದರಲ್ಲೂ ರಾಜಕೀಯ ಹುಡುಕಿದರು.ಇದೆಲ್ಲಾ ನಡೆದ ಬಳಿಕ ಶ್ರೀಲಂಕಾದಿಂದ ಒಂದು ನಿಜವಾದ ಸತ್ಯವು ಮತ್ತೊಮ್ಮೆ ಜಗಜ್ಜಾಹೀರಾಯಿತು... "ರಾಮಾಯಣ ಸುಳ್ಳಲ್ಲ ನಮ್ಮಲ್ಲಿ ಅದಕ್ಕೆ ಬೇಕಾದ ಪುರಾವೆಗಳಿವೆ.. ೫೦ ಕ್ಕೂ ಹೆಚ್ಚು ತಾಣಗಳಲ್ಲಿ ರಾಮಾಯಣದ ಐತಿಹ್ಯವಿದೆ." ಎಂದಿತು.ನಮ್ಮ ಪೂರ್ಣಕಾಲಿಕ ಸತ್ಯಗಳನ್ನು "ಅವರಿಂದಲೇ" ನಂಬುವವರಲ್ಲ್ವೇ..ನಾವು.?.

ನಮ್ಮಲ್ಲಿ ಇಷ್ಟೆಲ್ಲಾ ವಿವಾದಗಳು ನಡೆಯುತ್ತಿದ್ದಾಗಲೂ 'ಶ್ರೀಲಂಕಾ'ದಿಂದ ಏಕೆ ಪ್ರಿತಿಕ್ರಿಯೆ ಇಲ್ಲ ಅಂತ ನಾನಂತೂ ಯೋಚಿಸುತ್ತಲೇ ಇದ್ದೆ.ಅಲ್ಲೇನಾದರೂ ಪುರಾವೆ ಇರಬಹುದಾ ಸತ್ಯ ಕಟು ಸತ್ಯವಾದರೇ ಚೆನ್ನ ಅಂತ ಧ್ಯಾನಿಸುತ್ತಿದ್ದೆ.ಈಗ ನನ್ನ ಯೋಚನೆಯ ದಾರಿಯಲ್ಲಿ "ಕುರುಹು"ಗಳು ಪತ್ತೆಯಾಗಿವೆ. ಖುಷಿಯಾಗ್ತಿದೆ.

"ಸೇತು ಸಮುದ್ರಂ" ಹೆಸರು ಕೇಳಿದಾಗಲೇ ಅಷ್ಟೋಂದು ವಿವಾದಗಳು ಮನಸ್ಸಿನ ಪಟಲದಲ್ಲಿ ಹಾದು ಹೋಯಿತು.ಈಗ ಮತ್ತೆ ಅದನ್ನೇ ಕೆದಕುವ ಅಗತ್ಯವಿಲ್ಲ.ಆದರೂ ಒಂದು ವಿಚಾರ .ಇತ್ತೀಚೆಗೆ ನನ್ನ ಮಿತ್ರ ಹೇಳುತ್ತಿದ್ದ "ಸೇತು ಸಮುದ್ರಂ ಯೋಜನೆ ಏಕೆ ಗೊತ್ತಾ? ತಮಿಳ್ನಾಡಿನ ಮಂತ್ರಿಯೊಬ್ಬರಿಗೆ ಹಡಗುಗಳಿವೆ ಪ್ರಸ್ತುತ ಅವುಗಳೆಲ್ಲಾ ಸುತ್ತು ಬಳಸಿ ಬರುತ್ತಿದೆ ....ಅದು ಸಲೀಸಾಗಿ ಬರಲು ಈ ಯೋಜನೆ ಹಮ್ಮಿಕೊಳ್ಳಲಾಗಿದೆ..."ಎಂದು ವಿವರಿಸುತ್ತಲೇ ಇದ್ದ. ನನಗೆ ದಿಗಿಲಾಯಿತು..

ಸ್ವಂತ ಹಿತಕ್ಕಾಗಿ ರಾಷ್ಟ್ರೀಯ ಸ್ಮಾರಕವೊಂದನ್ನು ಬಲಿ ತೆಗೆದುಕೊಳ್ಳುತ್ತಾರಾ?ಅದಕ್ಕೊಂದು ಅಭಿವೃದ್ಧಿಯ ಚಿಂತನೆ-ಕಲ್ಪನೆ ಬೇರೆ.ಬೇಡ ಆ ಬಗ್ಗೆ ಮತ್ತೆ ಚರ್ಚಿಸುವ ಮನಸ್ಸು ನನಗೀಗಿಲ್ಲ.

ಶ್ರೀಲಂಕಾ ಸರಕಾರವು ಮೊನ್ನೆ ಮೊನ್ನೆ ಹೇಳಿತು ರಾಮಾಯಣ ಒಂದು ಕಾಲ್ಪನಿಕ ಕಥೆಯಲ್ಲ ಅದೊಂದು ಐತಿಹಾಸಿಕ ಸತ್ಯ.ಅದನ್ನು ಸಾರುವ ಕುರುಹುಗಳು,ಸಾಕ್ಷ್ಯಗಳು ಶ್ರೀಲಂಕಾದಲ್ಲಿದೆ ರಾವಣನ ಆಸ್ಥಾನ,ಪುಷ್ಪಕ ವಿಮಾನದ ನಿಲ್ದಾಣ,ಲಂಕಾದಹನದಿಂದ ಕರಕಲಾದ ಮಣ್ಣು, ....ಹೀಗೆ ಅನೇಕ ಸಂಗತಿಗಳನ್ನು ಅದು ಬಹಿರಂಗಪಡಿಸಿತು.ಅಷ್ಟೇ ಅಲ್ಲ ತಾಣಗಳ ಭೇಟಿಗೆ ವಿಶೇಷ ಪ್ಯಾಕೇಜ್ ಘೋಷಿಸಿತು.

ಮತ್ತೆ ವಿವರಿಸುತ್ತಿದ್ದ ಶ್ರೀಲಂಕಾ ಸರಕಾರ "ರಾಮಾಯಣ"ವು ಸಿಂಹಳೀಯರಿಗೂ ಪವಿತ್ರ.ಅದೊಂದು ಸತ್ಯ ಎಂದು ಕರೆಯಿತು.ಇಡೀ ದೇಶದ ಜನತೆಯ ಪರವಾಗಿ.ನಮಗೆ ಇದಕ್ಕಿಂತ ದೊಡ್ಡ ಮುಖಭಂಗ ಬೇಕಾ?.ದುರಂತ ಎಂದರೆ ,ನಮ್ಮಲ್ಲಿ ಹಾಗೆ ಹೇಳಬೇಕಾದ ಬದಲು ರಾಮ ಎಲ್ಲಿ ಇಂಜಿನಿಯರಿಂಗ್ ಓದಿದ್ದು ಎಂದು ಪ್ರಶ್ನಿಸುತ್ತೇವೆ..?.ಎಂಜಿನಿಯರಿಂಗ್ ಓದಿದವರು ಮಾತ್ರಾ ಸೇತುವೆ ಕಟ್ಟುತ್ತಾರೆಂಬ ಭ್ರಮೆಯಲ್ಲಿದ್ದವರೇ ನಮ್ಮ ಮುಖಂಡರಾಗಿ ಬರುತ್ತಾರಲ್ಲ ಅದು ಕೂಡಾ ನಮ್ಮ ದುರಂತವಲ್ಲದೆ ಮತ್ತಿನ್ನೇನು?

ಆದರೆ ಸಿಂಹಳೀಯರು ಬಿಡಿ ಇಡೀ ಜಗತ್ತೇ ನಮ್ಮ "ರಾಮಾಯಣ"ವನ್ನು ಒಪ್ಪಿತ್ತು.ನಾಸಾ ಅದಕ್ಕೊಂದು ಪುರಾವೆಯನ್ನು ನೀಡಿತು.ಬಳಿಕ ವಿವಾದಕ್ಕಾಗಿ ನಮ್ಮ ಶ್ರಮವನ್ನು ಬಳಸಿಕೊಳ್ಳಬೇಡಿ ಎಂದು ಸ್ಪಷ್ಟವಾಗಿ ಹೇಳಿತ್ತು.ಹಾಗಾಗಿ ನಾಸಾದಂತಹ ಸಂಶೋಧನಾ ತಂಡಕ್ಕೆ ತಮ್ಮ ಸಂಶೋಧನೆಯಲ್ಲಿ ಸತ್ಯದ ಬಗ್ಗೆ ನಿಖರತೆಯಿತ್ತು.ಆದರೆ ನಮ್ಮ ಮಂದಿಯ ಕಣ್ಣಲ್ಲಿ ರಾಮ-ರಾಮಯಣ ಕಂಡದ್ದು ರಾಜಕೀಯ ದೃಷ್ಟಿಯಿಂದ....

ಒಟ್ಟಿನಲ್ಲಿ ಈಗ ಶ್ರೀಲಂಕಾದ ಹೊಸ ಹಾಗು ಸತ್ಯದ ಬಯಲಾಗಿದೆ.ಇನ್ನು ನಮ್ಮ ರಾಜಕೀಯ ನಾಯಕರ ಪ್ರತಿಕ್ರಿಯೆ ಹೇಗಿದೆ ಕಾದು ನೋಡಬೇಕಾಗಿದೆ. ಈಗಾಗಲೇ ಈ ಹೇಳಿಕೆ ಬರುತ್ತಿದ್ದಂತೆಯೇ ಅಂದು ಸೇತುಸಮುದ್ರಂ ಬೆಂಬಲಿಸಿದವರು "ಡ್ರಾಪ್" ಬಗ್ಗೆ ಮಾತನಾಡಿದ್ದಾರೆ.ಮುಂದೇನೋ ಗೊತ್ತಿಲ್ಲ...

ದೇಶದ ಅಷ್ಟೂ ಮಂದಿ ನಡೆಸಿದ ಹೋರಾಟಕ್ಕೆ ಶ್ರೀಲಂಕಾದಿಂದ ತಾತ್ವಿಕವಾದ ನೆಲೆ ಸಿಕ್ಕಿದೆ.ಇನ್ನು ಈ ನೆಲೆಯನ್ನು ಭದ್ರಪಡಿಸುವ ಕೆಲಸ ಆಗಬೇಕು.ಆದರೆ ನಾವು ಇನ್ನೂ MNC ಶೈಲಿಯಲ್ಲೇ ಚಿಂತಿಸುತ್ತಿದ್ದರೆ ಹೇಗೆ?.ಸ್ವಲ್ಪ ನಮ್ಮ ತನ,ಸ್ವಂತಿಕೆಯಲ್ಲಿ ಆಲೋಚಿಸೋಣ , ಭಾರತೀಯ ದೃಷ್ಟಿಯಿಂದಲೂ ರಾಮ-ರಾಮಾಯಣದ ಬಗ್ಗೆ ಏಕೆ ಚಿಂತಿಸಬಾರದು..? "ಅವರು" ಹೇಳುವುದನ್ನೇ ಏಕೆ ಒಪ್ಪಿಕೊಳ್ಳಬೇಕು ನಮ್ಮಲ್ಲೂ ಚಿಂತನೆಗಳಿಲ್ವಾ.. ನಮಗೂ ಬೆಲೆ ಇಲ್ವಾ..? ಚಿಂತಿಸಿ ನೋಡೋಣ... ಉತ್ತರ ಸಿಗುತ್ತಾ ನೋಡೋಣ......

ಶ್ರೀಲಂಕಾ ಸರಕಾರ ಹೇಳಿದ ರಾಮಯಣದ ಪುರಾವೆಗಳು:

- ರಾಮ ,ಸೀತೆ, ರಾವಣರ ಕುರುಹು
- ಲಂಕಾದಹನದಿಂದ ಕರಕಲಾದ ಮಣ್ಣು
- ಪುಷ್ಪಕ ವಿಮಾದ ನಿಲ್ದಾಣ
- ರಾವಣನ ಗುಡಿ
- ರಾಮಾಯಣದ ರಣರಂಗದ ಕುರುಹು
- ಹೀಗೆ ೫೦ ವಿವಿಧ ಪ್ರದೇಶಗಳು.


ಹರೇ ರಾಮ.....

ಕಾಮೆಂಟ್‌ಗಳಿಲ್ಲ: