14 ಜನವರಿ 2008

ಮೊದಲ ಮಾತು....

ನಲ್ಮೆಯ ನಮಸ್ಕಾರ...

ನನ್ನ ಬಹುದಿನದ ಕಲ್ಪನೆಯು ಮೊಳಕೆಯೊಡೆದಿದೆ.
ಇದನ್ನು ಪೋಷಿಸಿ ಬೆಳೆಸಬೇಕು.ನಾನು ಏನಾದರೂ ಬರೆಯಬೇಕು ಎನ್ನುವ ಒಂದು ಕಿಡಿ ಹೊತ್ತಿದ್ದು ಬಾಳಿಲದಲ್ಲಿ ೯ನೇ ತರಗತಿ ಓದುತ್ತಿದ್ದಾಗ. ಆಗ ನನಗೆ ತಕ್ಷಣ ದೊರೆತ ವೇದಿಕೆ ಶಾಲಾಭಿತ್ತಿಪತ್ರ. ಆ ಬಳಿಕ ಅದೇ ನನ್ನ ಬರಹದ ದಾರಿಗೆ ಮೆಟ್ಟಿಲಾಯಿತು.ಕಾಲೇಜು ದಿನಗಳಲ್ಲೂ ಭಿತ್ತಿಪತ್ರಿಕೆಗೆ ಬರೆದು ಆ ದಿನಗಳ ನಂತರ ಮತ್ತೆ ಪತ್ರಿಕೆಗಳಲ್ಲಿ ಬರೆಯುವ ಹಂಬಲವಿತ್ತು. ಅದಕ್ಕೆ ಸಕಾಲದಲ್ಲಿ ಸೂಕ್ತ ವೇದಿಕೆ ಸಿಕ್ಕಿರಲಿಲ್ಲ. ಆಗ ನನಗೆ ಮೊದಲು ಮಾರ್ಗದರ್ಶನವಿತ್ತವರು "ಕುಂಟಿನಿ ಗೋಪಾಲಣ್ಣ".ಆ ಬಳಿಕ ಪತ್ರಿಕಾ ಬರಹಗಾರನಾಗಿ, ಹವ್ಯಾಸಿ ಪತ್ರಕರ್ತನಾಗಿ ಬೆಳೆಯತೊಡಗಿದಾಗ ಸುಬ್ರಹ್ಮಣ್ಯದಲ್ಲಿ ಎನ್ ಎಸ್ ಗೋವಿಂದ, ಮಂಜುನಾಥ ಭಟ್, ನನ್ನ ಬೆಳವಣಿಗೆಗೆ ಸಹಕರಿಸಿದ್ದನ್ನು ಮರೆಯಲಾರೆ.

ನನಗೆ ಹೊಸತೊಂದು ಯೋಚಿಸುವ ಹುಚ್ಚು.ಆಗ ಕಾಣಿಸಿದ್ದು ಈ ಬ್ಲಾಗ್.ಮಧ್ಯರಾತ್ರಿಯವರೆಗೆ ಹುಡುಕಾಡಿದಾಗ ಸಿಕ್ಕಿದ್ದು "ಕುಂಟಿನಿ" ಬ್ಲಾಗ್,"ಹೊಳ್ಳರ" ಬ್ಲಾಗ್...... ಹೀಗೇ ..ಸಂಪರ್ಕಕ್ಕೆ ಸಿಕ್ಕಿದ್ದು ಕುಂಟಿನಿಯವರು.ಸುಬ್ರಹ್ಮಣ್ಯದ ವೆಂಕಟೇಶ್ ಅವರಿಂದ ಬ್ಲಾಗ್ ಬಗ್ಗೆ ಮಾಹಿತಿ ಪಡೆದು ರಚಿಸುವ ಮಾರ್ಗ ಕಂಡುಕೊಡೆ.ಕುಂಟಿನಿಯವರು ಅದಕ್ಕೆ ಕನ್ನಡದಲ್ಲಿ ಬರೆಯುವ ವಿಧಾನ ತಿಳಿಸಿದರು. ಮಂಜುನಾಥ ಭಟ್ "ಏನಾದರೂ ಮಾಡುತ್ತಲೇ ಇರುತ್ತಿಯ..." ಅಂದರು. ಗೋವಿಂದ " ಬ್ಲಾಗ್ ಮಾಡು .. ಮಾಡು " ಅಂದರು. ಮನೆಯಲ್ಲಿ "ರಾತ್ರಿ ಏಷ್ಟೋತ್ತಿರುತ್ತಿ" ಎಂದು ದಬಾಯಿಸಿದರು ಪ್ರೀತಿಯಿಂದ.... ಹೀಗೆ ಎಲ್ಲರ ಸಹಕಾರ,ಸಲಹೆಗಳು ನನಗೆ ಖುಷಿಕೊಟ್ಟಿತು.

ನಾನು ಬರಹಗಾರನಾಗಿ ಮೂಡಲು ನನ್ನ ಬರಹಗಳಿಗೆ ವೇದಿಕೆಯನ್ನು ಒದಗಿಸಿದ ಸುಳ್ಯದ ಪಯಸ್ವಿನಿ ಪತ್ರಿಕೆಗೂ , ಸುದ್ದಿಬಿಡುಗಡೆ ಪತ್ರಿಕೆಗೂ ನಾನು ಸದಾ ಋಣಿ. ನನಗೆ ಸಲಹೆ ಸೂಚನೆಗಳನ್ನಿತ್ತ ಸುಳ್ಯದ ನನ್ನೆಲ್ಲಾ ಪತ್ರಕರ್ತ ಮಿತ್ರರಿಗೆ ನನ್ನ ಹೃದಯಾಂತರಾಳದ ವಂದನೆಗಳು.ಪ್ರಸ್ತುತ ನನಗೆ ಅವಕಾಶ ಕಲ್ಪಿಸಿದ "ಹೊಸದಿಗಂತ"ಕ್ಕೂ ನಾನು ಋಣಿ.

ಈಗ ಇನ್ನೊಂದು ಮಜಲುನ್ನು ಕಂಡಿದ್ದೇನೆ ಅನುಭವವು ನಮ್ಮನ್ನು ಪರಿಪೂರ್ಣವಾಗಿಸುತ್ತವೆ ಎಂದು ನಂಬಿದವ ನಾನು.
ಈಗ ದಾರಿ ವಿಶಾಲವಾಗಿದೆ................. ಬದುಕಿನಲ್ಲಿ ಸಾಧಿಸುವುದು ಇನ್ನೂಯಿದೆ... ಅದಕ್ಕೆಲ್ಲಾ ಇದು ಸಹಕರಿಸ್ಬಬುದಲ್ವೇ...!? . ಇದರಲ್ಲಿ ಕಂಡ ಸತ್ಯಗಳ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ...
ಅಲ್ಲಿಯವರೆಗೆ... ನಮಸ್ಕಾರ....

ಕಾಮೆಂಟ್‌ಗಳಿಲ್ಲ: