18 ಜನವರಿ 2008

ಒಂದು ದಾರಿಯ ಕತೆಯಲ್ಲಿ....




೨೦೦೭ ಡಿ.೨೯ ಶನಿವಾರ.ಮಧ್ಯಾಹ್ನ ೨.೩೦ ರ ಸಮಯ.

ಕುಕ್ಕೆ ಸುಬ್ರಹ್ಮಣ್ಯದ ಡಿಗ್ರಿ ಕಾಲೇಜಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭ.

ಪುಸ್ತಕ ಬರೆದವರು ಸುಬ್ರಹ್ಮಣ್ಯದ ಡಿಗ್ರಿ ಕಾಲೇಜಿನ ಉಪನ್ಯಾಸಕ ಎನ್.ಎಸ್.ಗೋವಿಂದ. ಕೃತಿ-"ಒಂದು ದಾರಿಯ ವೃತ್ತಾಂತ.."

ಪುಸ್ತಕವನ್ನು ಬಿಡುಗಡೆಗೊಳಿಸಿದ್ದು ಖ್ಯಾತ ಸಾಹಿತಿ, ಕವಿ ಸುಬ್ರಾಯ ಚೊಕ್ಕಾಡಿ

ಉಪಸ್ಥಿತರಿದ್ದವರು ಮಾಧವ ಗೌಡ ಜಾಕೆ,ಸಾಹಿತಿ ಅನಂತ ನಲ್ಲೂರಾಯ, ಕಾಲೇಜಿನ ಪ್ರಾಂಶುಪಾಲ ದಿನೇಶ್ ಕಾಮತ್,ಉಪನ್ಯಾಸಕ ಮಂಜುನಾಥ್ ಭಟ್.ಈ ಕ್ಷಣಕ್ಕೆ ಸಾಕ್ಷಿಯಾದವರು ಅನೇಕರು.

ಕೃತಿಯ ಬಗ್ಗೆ ಇಷ್ಟು ತಡವಾಗಿ ಬರೆಯಬೇಕಾಯಿತು.ಕೃತಿಯನ್ನು ಸಂಪೂರ್ಣ ಓದಿ ಮುಗಿಸಿದೆ.ಈಗ ಅದೇ ವಿಚಾರಗಳನ್ನು ಮೆಲುಕು ಹಾಕುವುದು ಸಕಾಲಿಕ ಎಂದು ಭಾವಿಸಿದ್ದೇನೆ.

ಇದು ಕೃತಿಯ ವಿಶ್ಲೇಷಣೆಯಲ್ಲ.ನಾನು ಗೋವಿಂದರ ಕೃತಿಯನ್ನು ವಿಶ್ಲೇಷಿಸುವಷುವಷ್ಟು ಬೆಳೆದಿಲ್ಲ ಎಂದು ನನಗೆ ತಿಳಿದಿದೆ.

ಈ ಕೃತಿಯಲ್ಲಿ ಗೋವಿಂದರು, ಸುಮಾರು ೧೦ ವರ್ಷಗಳ ಕಾಲ ವರದಿಗಾರರಾಗಿ ವಿವಿಧ ಪತ್ರಿಕೆಗಳಿಗೆ ಬರೆದ ಲೇಖನಗಳ ಸಂಗ್ರಹವಿದೆ.ಅವರು ಪತ್ರಕರ್ತರಾಗಿದ್ದಾಗಿನ ಅನುಭವವನ್ನು ಹಂಚಿಕೊಂಡಿದ್ದಾರೆ.ಅದು ನಿಜಕ್ಕೂ ಓದಲೇಬೇಕಾದ ವಿಚಾರ ಅಂತ ನನಗೆ ಅನ್ನಿಸಿದೆ.ಉಳಿದ ಲೇಖನಗಳೂ ಉತ್ತಮವಾಗಿದೆ.

ಗೋವಿಂದರು ಬರೆದ ದಾರಿಯಲ್ಲಿ ಒಂದೆಡೆ ತಮ್ಮ ಅನುಭವ ಹೇಳಿಕೊಳ್ಳುತ್ತಾ ಅರೆಕಾಲಿಕ ಸುದ್ದಿಗಾರರೊಬ್ಬರು ಸುದ್ದಿ ಇಲ್ಲದೆ ಸುದ್ದಿ ಮಾಡಿದ ಘಟನೆಯನ್ನು ವಿವರಿಸಿದ್ದು ಹೀಗೆ. ಅಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ದೇಶದ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಬೇಟಿ ನೀಡಿದ ಸಂದರ್ಭದಲ್ಲಿ ದೊಡ್ಡ ಸುದ್ದಿ ಮಾಡಬೇಕೆಂಬ ಹಂಬಲವಿದ್ದ ವರದಿಗಾರ ಮಹಾಶಯರೊಬ್ಬರು ಪ್ರಕಟಿಸಿದ ಸುಳ್ಳು ಸುದ್ದಿ ಹಾಗು ಅದರಿಂದಾಗಿ ಆದ ಆವಾಂತರಗಳು ಮತ್ತೆ ಅದಕ್ಕೆ ಸಚಿನ್ ಮುಂಬಯಿಯಲ್ಲಿ ಸ್ಪಷ್ಟನೆ ನೀಡಿದ್ದು ಇತ್ಯಾದಿಗಳ ಬಗ್ಗೆ ಹೇಳುತ್ತಾ ಏನಾದರೂ ಸುದ್ದಿ ಮಾಡಬೇಕೆಂಬ ಹಪಹಪಿಕೆಯಲ್ಲಿ ಸುದ್ದಿ ಮಾಡಬಾರದು ಎಂದದ್ದು ಅತ್ಯಂತ ಮಾರ್ಮಿಕವಾಗಿತ್ತು.ಅದನ್ನು ನಿಜವಾದ ಪತ್ರತರ್ತರು ಅರಿತುಕೊಳ್ಳಬೇಕೆಗಿದೆ. ಒಬ್ಬ ಪತ್ರಕರ್ತರಾಗಿ ಗೋವಿಂದರು ಅನೇಕ ವಿಚಾರಗಳನ್ನು ಅಲ್ಲಿ ತಿಳಿಸಿದ್ದಾರೆ.ಅದು ಪತ್ರಕರ್ತರಿಗೆ, ಅದರಲ್ಲೂ ಬಿಡಿಸುದ್ದಿಗಾರರಿಗೆ ಸೂಕ್ತವಾಗಿದೆ.

ಹಾಗೇ ಗೋವಿಂದರ ಪುಸ್ತಕ ನೋಡಿ ನನ್ನ ಅನುಭವಕ್ಕೊಂದು ವೇದಿಕೆ ಸಿಕ್ಕಿದೆ. ಕೆಲವು ಪತ್ರಕರ್ತರಿದ್ದಾರೆ ಅವರು ಕೆಲವು ಸೂಕ್ಶ್ಮ ವಿಚಾರಗಳನ್ನು ಇನ್ನೊಬ್ಬ ಪತ್ರಕರ್ತನಿಗೆ ಹೇಳಿ ನಾಳೆಗೆ ಈ ವಿಚಾರ ಬರಲಿ ನಾನೂ ಮಾಡುತ್ತೇನೆ ಎಂದು ನಂಬಿಸಿ ತಾನು ಆ ಸೂಕ್ಶ್ಮ ವಿಚಾರಗಳನ್ನು ಸುದ್ದಿ ಮಾಡದೆ ಎಲ್ಲರ ಮುಂದೆ ಸುಬಗರಾಗುವ ಮಂದಿಯೂ ಇರುತ್ತಾರೆ. ಹಾಗಾಗಿ ಅಂತಹ ಮಂದಿಗೂ ಗೋವಿದರ ಕೃತಿಯಲ್ಲಿ ಉತ್ತರವಿದೆ.

ಒಟ್ಟಿನಲ್ಲಿ ಈ ಪುಸ್ತಕವು ಸಂಗ್ರಹ ಯೋಗ್ಯ.ಪತ್ರಕರ್ತರಾಗಬಯಸುವವರಿಗೆ,ವಿದ್ಯಾರ್ಥಿಗಳಿಗೆ "ದಾರಿ"ಯಾಗಬಲ್ಲುದು.ನನಗಂತೂ ಖುಷಿಯಾಗಿದೆ.

ಪುಸ್ತಕದ ಬೆಲೆ ೮೦ ರೂ.ಒಟ್ಟು ಪುಟಗಳು ೧೯೦.

ಪುಸ್ತಕವನ್ನು ಓದಬಹುದು.....

ಓದಲೇಬೇಕು.......

ಗೋವಿಂದರ ಸಂಪರ್ಕಕ್ಕೆ......
nsgovinda@rediffmail.com


ಕಾಮೆಂಟ್‌ಗಳಿಲ್ಲ: