19 ಜನವರಿ 2008

ಸುಳ್ಯ ತಾಲೂಕು ಯುವಜನ ಮೇಳ ...





ಶನಿವಾರ ೧೯ ನೇ ತಾರೀಕು ಬೆಳಗ್ಗೆ ೧೧ ಗಂಟೆ ಸಮಯ..

ಸುಳ್ಯ ತಾಲೂಕು ಯುವಜನ ಮೇಳವು ಕೊಲ್ಲಮೊಗ್ರದಲ್ಲಿಉದ್ಘಾಟನೆಗೊಂಡಿತು. .
ಕಾರ್ಯಕ್ರಮವನ್ನು ಸುಳ್ಯ ಮಾಜಿ ಶಾಸಕ ಅಂಗಾರ ಉದ್ಘಾಟಿಸಿ ಯುವಜನ ಮೇಳಗಳ ಮೂಲಕ ಗ್ರಾಮೀಣ ಸಂಸ್ಕೃತಿ ಬೆಳೆಯಬಲ್ಲುದು ಎಂದು ತಮ್ಮದೇ ಎಂದಿನ ಧಾಟಿಯಲ್ಲಿ ಹೇಳಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ತಾ.ಪಂ.ಅಧ್ಯಕ್ಷ ಶಂಕರ್ ಪೆರಾಜೆ ಇದು ಯುವಜನರ ಹಬ್ಬ ಎಂಬುದನ್ನು ವಿವರಿಸಲು ಕೆಲವು ವಿಚಾರಗಳನ್ನು ಹೇಳಲು ಪ್ರಯತ್ನಿಸುತ್ತಿದ್ದರು.

ಮುಖ್ಯ ಅತಿಥಿಗಳಾಗಿ ಕೊಲ್ಲಮೊಗ್ರ ಗ್ರಾ.ಪಂ.ಅಧ್ಯಕ್ಷೆ ಭಾರತಿ ಕಟ್ಟ, ಕೊಲ್ಲಮೊಗ್ರ ಬ್ಯಾಂಕ್ ಅಧ್ಯಕ್ಷ ಸೀತಾರಾಮ ಕೊಪ್ಪಡ್ಕ,ಯುವಜನ ಇಲಾಖೆಯ ಎಂ.ಸಿ.ರಮೇಶ್,ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಪುಟ್ಟಸ್ವಾಮಿ,ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಪ್ರಕಾಶ್ ಕೂಜುಗೋಡು,ಯುವಜನ ಒಕ್ಕೂಟದ ಸ್ಥಾಪಕಾಧ್ಯಕ್ಷ ಶೈಲೇಶ್ ಅಂಬೆಕಲ್,ಕೊಲ್ಲಮೊಗ್ರ ಮಯೂರವಾಹನ ದೇವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣಯ್ಯ ಕಟ್ಟ, ಹರಿಹರ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಶೇಖರ ಕಿರಿಭಾಗ ಭಾಗವಹಿಸಿದ್ದರು.ವೇದಿಕೆಯಲ್ಲಿ ಯುವಜನ ಒಕ್ಕೂಟದ ಅಧ್ಯಕ್ಷ ಹರೀಶ್ ಬೈಕಂಪಾಡಿ,ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ವಿಶ್ವನಾಥ ಕೆ.ಟಿ, ಯುವಜನ ಸೇವಾ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ,ಯುವಜನ ಮೇಳ ಸ್ವಾಗತ ಸಮಿತಿ ಅಧ್ಯಕ್ಷ ಗಿರಿಧರ, ಯುವಜನ ಮೇಳ ಸ್ವಾಗತ ಸಮಿತಿ ಕಾರ್ಯದರ್ಶಿ ಕೃಷ್ಣ ಪ್ರಸಾದ್, ಕಾರ್ಯಾಧ್ಯಕ್ಶ ಹಮೀದ್ ಇಡ್ನೂರ್, ಮೊದಲಾದವರು ಉಪಸ್ಥಿತರಿದ್ದರು.

ಮರುದಿನ ನಡೆದ ಸಮಾರೋಪ ಸಮಾರಂಭದಲ್ಲಿ ಜಿ.ಪಂ ಸದಸ್ಯ ವೆಂಕಟ್ ದಂಬೆಕೋಡಿ ಸಭಾಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾಲೂಕಿನ ೧೩ ಯುವಕ ಮಂಡಲ, ೯ ಯುವತಿ ಮಂಡಲಗಳ ಒಟ್ಟು ೩೦೯ ಮಂದಿ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

೨ ದಿನಗಳ ಒಟ್ಟು ಕಾರ್ಯಕ್ರಮದಲ್ಲಿ ಯುವಕ ಮಂಡಲ ವಿಭಾಗದಲ್ಲಿ ಮಿತ್ರ ಬಳಗ ಕಾಯರ್ತೋಡಿ ಸಮಗ್ರ ಪ್ರಶಸ್ತಿ ಪಡೆದರೆ , ವನಶ್ರೀ ಯುವತಿ ಮಂಡಲ ಯುವತಿ ಮಂಡಲ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದವು.

1 ಕಾಮೆಂಟ್‌:

adarsha - sarpangala ಹೇಳಿದರು...

well done...happy to c some news form my place....nice work..