22 ಸೆಪ್ಟೆಂಬರ್ 2010

ಒಂದು ಸಾಲು . .

ಒಂದು ವಿಚಾರವನ್ನು ಮಾತಾಡೋವಾಗ , ಹೇಳೋವಾಗ ಅದನ್ನು ಪರಾವರ್ಶಿಸಿ ಮಾತಾಡ್ಬೇಕಂತೆ. ಅದನ್ನು ಅನುಸರಿಸೋದು ಕೂಡಾ ಅಗತ್ಯ ಇದೆ.ಅದು ಸತ್ಯ ಅಂತ ಗೊತ್ತಿದ್ದೂ , ಹಾಗಲ್ಲ . . ಹಾಗಲ್ಲ ಅಂತ ಸಮರ್ಥಿಸೋದು ರಾಜಕಾರಣಿಗಳು ಮಾತ್ರಾ.ಈಗೀಗ ಆ ಸಾಲಿಗೆ ಎಲ್ರೂ ಸೇರಿಕೊಂಡಿದಾರೆ ಅಂತ ನನಗನ್ನಿಸಿದೆ.ಅದಕ್ಕೆ ಕಾರಣಗಳೂ ಇದೆ.

ಅಂದ ಹಾಗೆ ನಾನೊಂದು ಸಂಗತಿ ಹೇಳಬೇಕಿದೆ , ಲೋಕದ ಸಂಗತಿಯನ್ನು , ನಾನು ಹೋದಲ್ಲಿ ಕಂಡದ್ದನ್ನು ಮತ್ತು ಸ್ವತ: ಆದ ಅನುಭವವನ್ನು ಇಲ್ಲಿ ದಾಖಲಿಸಿದ್ದೆ.ಅದೆಷ್ಟೋ ಒಳ್ಳೇ ಸಂಗತಿಗಳು ಇತ್ತು ಅಂತ ನನ್ನ ಮಿತ್ರರು ಹೇಳಿದ್ದಾರೆ.ಆದ್ರೆ ಅದ್ಯಾವುದನ್ನೂ ನೋಡದೇ ಇರೋರು.ಈಗಂತೂ ನೋಡಿದ್ದಾರೆ.
ನೋಡಿದ್ದು ಮಾತ್ರವಲ್ಲ ಅಲ್ಲಿ - ಇಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಷ್ಟೂ ಅಲ್ಲ ಅವರಲ್ಲಿ - ಇವರಲ್ಲಿ ಹೇಳಿಸಿದ್ದಾರೆ. ಪರವಾಗಿಲ್ಲ.ಹಾಗಂತೆ . . ಹೀಗಂತೆ ಅಂತಲೂ ಹೇಳಿದಾರೆ. ನಾನು ಆ ಬಗ್ಗೆ ಏನನ್ನೂ ಹೇಳುವುದಿಲ್ಲ. ಯಾಕೆಂದ್ರೆ ಮಾತಾಡೋದೇ ತಪ್ಪಾ ಏನೋ . ?.ಗೊತ್ತಿಲ್ಲ. ಅಷ್ಟಕ್ಕೂ ಕುಂಬಳಕಾಯಿ ಕದ್ದವನ ಹೆಗಲಲ್ಲಿ ಬೂದಿ ಇರುತ್ತಾ. .?.

1 ಕಾಮೆಂಟ್‌:

Nanda Kishor B ಹೇಳಿದರು...

true true.. very true...