19 ಸೆಪ್ಟೆಂಬರ್ 2010

“ದೇಶದ ರೈತರೆಲ್ಲಾ ಆಹಾರದ ಬಗ್ಗೆ ಚಿಂತಿಸಿದರೆ ಪರಿಹಾರ “




ನಮ್ಮೂರಲ್ಲಿ ಕಿಸಾನ್ ಸಂಘದ ವತಿಯಿಂದ ಬಲರಾಮ ಜಯಂತಿಯನ್ನು ಆಚರಿಸಲಾಗಿತ್ತು. ಕೃಷಿಕರದ್ದೇ ಸಂಘಟನೆಯಾದ ಕಿಸಾನ್ ಸಂಘವು ವಿವಿದ್ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇಡೀ ದೇಶದಾದ್ಯಂತ ಈ ಸಂಘಟನೆ ಇದೆ. ದತ್ತೋಪಂತ್ ಜೀ ಇದರ ಸಂಸ್ಥಾಪಕ.

ಈ ಕಾರ್ಯಕ್ರಮದ ವರದಿ . .

ಶೇಕಡಾ ೭೦ರಷ್ಟು ರೈತರೇ ಇರುವ ಭಾರತದಲ್ಲಿ ಆಹಾರದ ಸಮಸ್ಯೆಯನ್ನು ಎದುರಿಸುವುದು ದೊಡ್ಡ ಸಮಸ್ಯೆಯಾಗದು.ಆದರೆ ಎಂದೂ ಆತಂಕದಲ್ಲಿರುವ ರೈತರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಆಗಬೇಕಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಪ್ರದಾನ ಕಾರ್ಯದರ್ಶಿ ವೆಂಕಟೇಶ್ ಪಣಕನಹಳ್ಳಿ ಹೇಳಿದರು.

ಅವರು ಭಾರತೀಯ ಕಿಸಾನ್ ಸಂಘ ಗುತ್ತಿಗಾರು- ನಾಲ್ಕೂರು ನೇತೃತ್ವದಲ್ಲಿ ಸುಳ್ಯ ತಾಲೂಕು , ಬಾಳಿಲ-ಮುಪ್ಪೇರ್ಯ ಮತ್ತು ಎಣ್ಮೂರು ವಲಯದ ಭಾರತೀಯ ಕಿಸಾನ್ ಸಂಘದ ಸಹಭಾಗಿತ್ವದೊಂದಿಗೆ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಭಾನುವಾರ ನಡೆದ ಬಲರಾಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಮ್ಮ ದೇಶದಲ್ಲಿ ಎಲ್ಲಾ ಕ್ಷೇತ್ರಗಳಿಗೆ ಬೇಕಾದ ಪೂರ್ವ ಸಿದ್ದತೆಗಳು ನಡೆಯುತ್ತದೆ ಆದರೆ ಆಹಾರದ ಸಮಸ್ಯೆ ಎದುರಿಸಲು ಬೇಕಾದ ಪೂರ್ವ ಸಿದ್ದತೆಗಳು ನಡೆಯುವುದಿಲ್ಲ.ರೈತರನ್ನು ಕಡೆಗಣಿಸುವುದೇ ಹೊರತು ಅವರಿಗೆ ಆತ್ಮವಿಶ್ವಾಸ ತುಂಬುವ ಕೆಲಸಗಳು ನಡೆಯುತ್ತಿಲ್ಲ, ಆದರೆ ಕಿಸಾನ್ ಸಂಘವು ಇಂದು ಈ ಕೆಲಸ ಮಾಡುತ್ತಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ ಕೃಷಿಕರು ಸಂಘಟಿತರಾಗಬೇಕು ಎಂದರು.ಇದೇ ವೇಳೆ ಮುಖ್ಯ ಅತಿಥಿಗಳಾಗಿದ್ದ ಕ್ಯಾಂಪ್ಕೋ ನಿರ್ದೇಶಕ ರಾಧಾಕೃಷ್ಣ ಕೋಟೆ ವೈದ್ಯನಾಥನ್ ವರದಿ ಬಗ್ಗೆ ಮಾತನಾಡಿ, ಸಹಕಾರಿ ಸಂಘಗಳ ಬಲವರ್ಧನೆಗಾಗಿ ಈ ವರದಿ ಜಾರಿಗೆ ಬಂದಿದೆ ಆದರೆ ವರದಿ ಜಾರಿ ಹಂತದಲ್ಲಿ ತಿರುಚುವಿಕೆಯ ಕೆಲಸ ನಡೆಯುತ್ತಿದೆ ಇದು ಆಗಬಾರದು ಎಂದ ಅವರು ಸಹಕಾರಿ ಬ್ಯಾಂಕ್‌ಗಳಿಗೆ ಆರ್ಥಿಕ ಬ್ಯಾಂಕ್ ಪ್ರತಿನಿಧಿಗಳ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಕಾನ , ಬಾಣೆ ಮತ್ತು ಕುಮ್ಕಿ ಹಕ್ಕಿನ ಬಗ್ಗೆ ಮಾತನಾಡಿದ ರಾಮಚಂದ್ರ ಭಟ್ ನೆಕ್ಕಿಲ , ವರ್ಗ ಸ್ಥಳಕ್ಕೆ ಪೂರಕವಾಗಿ ಇರುವ ೧೦೦ ಗಜ ಸರಕಾರಿ ಸ್ಥಳವೇ ಕಾನ , ಬಾಣೆಗಳು. ಇತ್ತೀಚೆಗಿನವರೆಗೆ ಈ ಜಾಗಗಳಿಗೆ ಕೃಷಿಕರು ತೆರಿಗೆ ಕಟ್ಟುತ್ತಿದ್ದರು ಇದನ್ನು ಹಿಂದೆ ಪಡೆಯುವ ಹಕ್ಕು ಸರಕಾರಕ್ಕಿಲ್ಲ ಎಂದ ಅವರು ಕೈಗಾರಿಕೆ , ಮನೆ ನಿವೇಶನಗಳಿಗೆ ಭೂಮಿ ನೀಡುವ ಸರಕಾರವು ಕೃಷಿಕರಿಗೆ ಮಾತ್ರಾ ಭೂಮಿ ನೀಡದೇ ಇರುವುದು ವಿಪರ್ಯಾಸ ಎಂದರು.

ವೇದಿಕೆಯಲ್ಲಿ ಭಾರತೀಯ ಕಿಸಾನ್ ಸಂಘ ಗುತ್ತಿಗಾರು- ನಾಲ್ಕೂರು ವಲಯದ ಅಧ್ಯಕ್ಷ ಗಂಗಾಧರ ಭಟ್ ಪುಚ್ಚಪ್ಪಾಡಿ, ಭಾರತೀಯ ಕಿಸಾನ್ ಸಂಘ ಬಾಳಿಲ-ಮುಪ್ಪೇರ್ಯ ಅಧ್ಯಕ್ಷ ಕರ್ವಂಕಲ್ಲು ಗೋಪಾಲಕೃಷ್ಣ ಭಟ್ , ಭಾರತೀಯ ಕಿಸಾನ್ ಸಂಘ ಎಣ್ಮೂರು ವಲಯದ ಅಧ್ಯಕ್ಷ ರಮೇಶ್ ಕೋಟೆ , ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕು ಅಧ್ಯಕ್ಷ ಬಾಲಕೃಷ್ಣ ರೈ ಉಪಸ್ಥಿತರಿದ್ದರು.

ಭಾರತೀಯ ಕಿಸಾನ್ ಸಂಘ ಗುತ್ತಿಗಾರು- ನಾಲ್ಕೂರು ವಲಯದ ಅಧ್ಯಕ್ಷ ಗಂಗಾಧರ ಭಟ್ ಪುಚ್ಚಪ್ಪಾಡಿ ಸ್ವಾಗತಿಸಿದರು. ತಾಲೂಕಿನ ಭಾರತೀಯ ಕಿಸಾನ್ ಸಂಘಗಳ ವರದಿಯನ್ನು ಗೋಪಾಲಕೃಷ್ಣ ಭಟ್ ,ಬಾಳಿಲದ ವರದಿಯನ್ನು ರಾಜಾರಾಮ ಸಿ.ವಿ , ಎಣ್ಮೂರು ವಲಯದ ವರದಿಯನ್ನು ಲೋಕನಾಥ ರೈ ಹಾಗೂ ಗುತ್ತಿಗಾರು ವರದಿಯನ್ನು ಕುಮಾರಸ್ವಾಮಿ ಮೇಲ್ತೋಟ ವಾಚಿಸಿದರು. ಬಿಟ್ಟಿ ನೆಡುನೀಲಂ ನಿರೂಪಿಸಿದ ಕಾರ್ಯಕ್ರಮದಲ್ಲಿ ಭಾರತೀಯ ಕಿಸಾನ್ ಸಂಘ ಗುತ್ತಿಗಾರು- ನಾಲ್ಕೂರು ವಲಯದ ಕೋಶಾಧಿಕಾರಿ ಜತ್ತಪ್ಪ ಗೌಡ ವಂದಿಸಿದರು. sಕಾರ್ಯಕ್ರಮದಲ್ಲಿ ಕೃಷಿ ಯಂತ್ರಗಳ ಪ್ರಾತ್ಯಕ್ಷಿಕೆ ಮತ್ತು ಗುತ್ತಿಗಾರು ಆರೋಗ್ಯ ವೈದ್ಯಾಧಿಕಾರಿ ಡಾ.ನಂದಕುಮಾರ್ ಅವರಿಂದ ಆರೋಗ್ಯ ಮಾಹಿತಿ ಕಾರ್ಯುಕ್ರಮ ನಡೆಯಿತು.

1 ಕಾಮೆಂಟ್‌:

shivu.k ಹೇಳಿದರು...

ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡ ನಿಮಗೆ ಅಭಿನಂದನೆಗಳು.