27 ಅಕ್ಟೋಬರ್ 2008

ಹಣತೆ ಹಚ್ಚುತ್ತೇನೆ .....




ದೀಪ ಹಚ್ಚುತ್ತೇನೆ ನಾನು.... ದೀಪ ಹಚ್ಚುತ್ತೇನೆ ನಾನು...

ಜಗದ ಕತ್ತಲೆ ಕಳೆಯುತ್ತೇನೆಂಬ ಭ್ರಮೆಯಿಂದಲ್ಲ....

ದೀಪ ಇರುವಷ್ಟು ಕಾಲ ನಾನು ನಿನ್ನ ಮುಖವ.... ನೀನು ನನ್ನ ಮುಖವ ನೋಡಲೆಂದು....

ಇದು ಕೇಳಿದಾಗಲೇ ಮೈಪುಳಕಗೊಳ್ಳುತ್ತದೆ... ಇಲ್ಲಿ ಎಷ್ಟೊಂದು ಅರ್ಥಗಳು... ಈ ಕವಿತೆಯನ್ನು ಬರೆದವರು ಯಾರೆಂದು ನಮಗೆಲ್ಲಾ ಗೊತ್ತೇ ಇದೆ... ನಾನು ಇಲ್ಲಿ ಕೊಂಚ ಅದಕ್ಕೆ ಬಣ್ಣ ಹಚ್ಚಿರಬಹುದು .. ಆದರೆ ರಾಷ್ಟ್ರಕವಿಗಳು ಎಷ್ಟೊಂದು ಅಂದವಾಗಿ ಅಲ್ಲಿ ದಾಖಲಿಸಿದ್ದಾರೆ....

ದೀಪಗಳ ಹಬ್ಬ ಮತ್ತೆ ಬಂದಿದೆ. ಪ್ರತೀ ಬಾರಿಯೂ ಪತ್ರಿಕೆಯಲ್ಲಿ ದೀಪಗಳ ಬಗ್ಗೆ ಬರೆಯುತ್ತಿದ್ದಾತ ಈಗ ಇಲ್ಲಿ ದಾಖಲಿಸಿದ್ದಾನೆ.ಇರಲಿ ಅದಲ್ಲ ವಿಷಯ. ದೀಪಗಳ ಹಬ್ಬದಲ್ಲಿ ಎಷ್ಟೊಂದು ಅರ್ಥವಿದೆ. ರೈತರಿಗೆ ತನಗೆ ಬದುಕು ರೂಪಿಸಲು ಅನುವು ಮಾಡಿಕೊಟ್ಟ ಭೂಮಿಗೆ ಕೃತಜ್ಞತೆ ಸಲ್ಲಿಸುವ ಕಾಲವಾದರೆ ತನ್ನೊಂದಿಗೆ ದುಡಿದವರಿಗೂ ಧನ್ಯತೆಯನ್ನು ಸಮರ್ಪಿಸುವ ಸಂದರ್ಭ. ಹಾಗೆ ನೋಡಿದರೆ ಎಳೆಯ ಮಕ್ಕಳಿಗೆ ಪಟಾಕಿ ಸಿಡಿಸುವ ಹಬ್ಬ , ಹುಡುಗರಿಗೆ "ತನ್ನವರಿಗೆ" ಕೊಡುಗೆಯನ್ನು ನೀಡುವ ಕಾಲವಾದರೆ, ನವವಿಹಾಹಿತರಿಗೆ ಹೊಸ ಹಬ್ಬದ ಕಾಲ. ಹಿರಿಯರಿಗೆ ಮಾಮೂಲು ಹಬ್ಬ, ಅಜ್ಜಂದಿರಿಗೆ ನೆನಪಿನ ಹಬ್ಬ..... ಹೀಗೆಯೇ ಹಬ್ಬ ವಿವಿಧ ಮಜಲುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇಂದು ಅವರಿಗೆ ಕಾಣಿಸಿಕೊಣಿಸಿಕೊಂಡ ಹಬ್ಬ ನಾಳೆ ನಮ್ಮದೂ ಆಗಿರುತ್ತದೆ. ಹಾಗಾಗಿ ಇಂದು ಸಂಭ್ರಮಿಸಿದ್ದು ನಾಳೆಗೆ ನೆನಪಾಗಿ ಬಿಡುತ್ತದೆ. ಅದೇ ಅಲ್ಲವೇ ನಮ್ಮ ಬದುಕಿನ ಅನುಕ್ಷಣದ ದೀಪಾವಳಿ.
ದೀಪದ ಹಬ್ಬ ಸುತ್ತಲಿನ ಜನರಿಗೆ ಹೊಸ ಬೆಳಕನ್ನು ಕೊಡುತ್ತದೆ.ಅಲ್ಲೊಂದು ಇಲ್ಲೊಂದು ಹಣತೆಯಲ್ಲ ಪ್ರತಿ ಮನದಲ್ಲಿ , ಪ್ರತಿ ಮನೆಯಲ್ಲಿ ಈ ಹಣತೆ ಬೆಳಗೆಬೇಕು. ಅದು ಪ್ರೀತಿ, ಪ್ರೇಮ, ವಾತ್ಸ್ಯಲ್ಯವನ್ನು ಜೊತೆಗೆ ನಂಬಿಕೆ , ವಿಶ್ವಾಸವನ್ನು ಚೆಲ್ಲುವ ಹಣತೆಯಾಗಿರಬೇಕು. ಆರದ "ನಂದಾದೀಪ"ವಾಗಲಿ... ಅದು ಇನ್ನೊಂದು ಅಷ್ಟು ಹಣತೆ ಬೆಳಗಲು ನೆರವಾಗಲಿ.

ಹಚ್ಚುತ್ತೇನೆ ನಾನು ಹಣತೆಯನ್ನು... ಇನ್ನೊಂದು ಹಣತೆಯಿಂದ...

ಹಚ್ಚುತ್ತೇನೆ ನಾನು ದೀಪವನ್ನು .... ಪ್ರೀತಿಯ ದೀಪವನ್ನು .....

ಎಲ್ಲವೂ ಮತ್ತೆ ಸಿಗುತ್ತದೆ ,.. ಮತ್ತೆ ಉರಿಯುತ್ತದೆ ಎಂಬ ಭ್ರಮೆಯಿಂದಲ್ಲ...

ಉರಿದಯ ದೀಪವನ್ನು ಮತ್ತೆ ಹಚ್ಚೋಣ .... ಮತ್ತೆ ಬೆಳಗೋಣ...


ದೀಪಾವಳಿ ಶುಭ ತರಲಿ....

ಕಾಮೆಂಟ್‌ಗಳಿಲ್ಲ: