11 ಅಕ್ಟೋಬರ್ 2008

ತಪ್ಪಿದ ಬದುಕಿಗೆ ಕೊನೆ..???



ಇದು 2008 ರಲ್ಲೂ ಇರುವ ಜ್ವಲಂತ ಸಮಸ್ಯೆ.

ಸರಕಾರ ಯಾವುದೇ ಬರಲಿ , ಯಾರೇ ಮುಖ್ಯಮಂತ್ರಿಗಳಾಗಲಿ, ಏನೇ ಆದರೂ ಕೂಡಾ ಈ ಜನರ ಸಮಸ್ಯೆಗೆ ಪರಿಹಾರವೇ ಇಲ್ಲ. ಅವರ ಅಳಲನ್ನು ಕೇಳುವ ಮಂದಿಯೆ ಇಲ್ಲ. ನಗರದ ಕನಸನ್ನು ಹೊತ್ತ ಈ ಮಂದಿಯ ಪಾಡನ್ನು ನೋಡಿ ನಗರದಲ್ಲೆ ಕುಳಿತಿರುವ ಮಂದಿಗೆ ಅರ್ಥವಾದೀತೇ?.

ಸ್ವಾಮಿ ನಾವು ಯಾವಾಗ "ಮುಂದುವರಿದ"ವರಾಗುವುದು?. ಮುಂದುವರಿದ ದೇಶ ಎಂದರೆ ಈ ಹಳ್ಳೀಗೆ ಸೇತುವೆ ಮಾಡಿದರೆ ಮಾತ್ರಾ ಅಂತ ಅರ್ಥ ಅಲ್ಲ. ಆದರೆ ಈ ಸಮಸ್ಯೆ ಇರುವುದು ಇಂದು ನಿನ್ನೆಯದಲ್ಲ ಯಾವಾಗ ನಾಗರಿಕತೆ ಆರಂಭವಾಯೊತೋ ಅಂದಿನಿಂದ. ಹಾಗಾಗಿ ಈ ಜನರ ಪಾದು ನನಗೆ ಸುದ್ದಿಯೆನಿಸಿತು. ಜಗತ್ತಿಗೆ ಅರಿವಾಗಬೆಕು ಎನ್ನಿಸಿತು.

ಇದು ಬೆಳ್ತಂಗಡಿ ಸಮೀಪದ ನಿಟ್ಟೋಡಿ ಎಂಬ ಊರು.ಎಲ್ಲಾ ಊರುಗಳಂತೆಯೇ ಮಾನವ ಸಂಬಂಧದ ಮೇಲೆ ಪ್ರೀತಿ,ನಂಬಿಕೆಯನ್ನು ಉಳಿಸಿಕೊಂಡಿರುವ ಊರು. ಕಾರಣ, ಸುಮಾರು 50 ವರ್ಶಗಳಿಂದ ದ್ವೀಪವಾಗುತ್ತಿರುವ ಈ ಊರಿಗೆ ಸೇತುವೆಯನ್ನು ನಿರ್ಮಿಸಿಕೊಡುತ್ತೇವೆ ಅಂತ ಜನನಾಯಕರು ಹೇಳುತ್ತಲೇ ಬಂದಿದ್ದರು. ಇದುವರೆಗೆ ಕೈಗೂಡಲಿಲ್ಲ.ಆದರೂ ಅವರ ಮಾತನ್ನು ನಂಬಿದ್ದರು. ಓಟು ಬಂದಾಗ ಅಣ್ಣಾ "ನಮಸ್ಕಾರ" ಎನ್ನುತ್ತಾ ಬರುವ ನಾಯಕರು ಓಟು ಮಗಿದ ಬಳಿಕ ಅಲ್ಲಿಂದಲೇ ನಮಸ್ಕಾರ... ಹಾಗೆನ್ನುತ್ತಾ ತಮ್ಮ ಅಸಹನೆಯನ್ನು ವ್ಯಕ್ತಪಡಿಸುತ್ತಾ ಮಾತಿಗೆ ಆರಂಬಿಸಿತ್ತಾರೆ. ಅಂದು ಇಂದಿರಾ ಗಾಂಧಿ ಕಾಲದಲ್ಲಿ ಒಮ್ಮೆ ಸೇತುವೆಗೆ ಸಿದ್ದತೆ ನಡೆದಿದ್ದಂತೆ ನಂತರ ಅದೆಲ್ಲವೂ ಮಂಗ ಮಾಯ...! ಆ ಬಳಿಕ ಯಾವುದೇ ಕೆಲಸಗಳು ನಡೆದಿಲ್ಲ. . ಈ ಪುಟ್ಟ ಹಳ್ಳಿಯಲ್ಲಿ 4000 ಜನರಿದ್ದಾರೆ. ಎರಡು ನದಿಗಳು ಈ ಹಳ್ಳಿಯನ್ನು ದ್ವೀಪವನ್ನಾಗಿಸುತ್ತದೆ. ಹಾಗಾಗಿ ಇವರಿಗೆ ನದಿ ದಾಟಲು ದೋಣಿಯ ಬದುಕೇ ಗತಿ. ಮಳೆ ಜೋರಾಗಿ ಬಂದರೆ ನದಿಯಲ್ಲಿ ದೋಣಿ ಸಾಗದು. ಹೀಗಾಗಿ ಜೀವಗಳು ಅತ್ತ.. ಇತ್ತ ...ಇದು ಕಳೆದ 50 ವರ್ಷಗಳ ಸಮಸ್ಯೆ. ನಮಗೆ ಯಾವುದೋ ಮೂಲಗಳಿಂದ ಈ ಸಮಸ್ಯೆ ತಿಳಿದಿತ್ತು. ಆದರೆ ಇದುವರೆಗೆ ಯಾವುದೇ ಮಾಧ್ಯಮಗಳು ಈ ಬಗ್ಗೆ ಬೆಳಕು ಚೆಲ್ಲಿರಲಿಲ್ಲ. ಹೀಗಾಗಿ ನಾವು ಹೋದಾಕ್ಷಣ ನಾವೇ ಅವರಿಗೆ ಸೇತುವೆಯನ್ನು ನಿರ್ಮಿಸಿಕೊಡುತ್ತೇವೆ ಎನ್ನುವಷ್ಟರ ಮಟ್ಟಿಗೆ ಜನ ಖುಷಿಯಾದಂತಿತ್ತು.ಹೀಗಾಗಿ ಅವರ ನಿರೀಕ್ಷೆ ಸುಳ್ಳಾಗದಿರಲಿ ಸರಕಾರ ಈ ಬಗ್ಗೆ ಗಮನ ಹರಿಸಲಿ ಅಂತ "ಜೀವವಿರುವ" ಭಗವಂತನಲ್ಲಿ ಪ್ರಾರ್ಥಿಸಿದೆವು.ಕೊನೆಗೊಮ್ಮೆ ಸೇತುವೆ ಬೇಡ ತೂಗುಸೇತುವೆಯಾದರೂ ಆಗಲಿ.

ತಪ್ಪದ ತೆಪ್ಪದ ಬದುಕಿಗೆ ಕೊನೆಯಾಗಲಿ...

ತಪ್ಪಲಿ ಅವರ ದೋಣಿಯ ಬದುಕು...


ನಾಯಿ ಕೂಡಾ ದೋಣಿಗಾಗಿ ಕಾಯುತ್ತಿದೆಯೇ..??

1 ಕಾಮೆಂಟ್‌:

Harisha - ಹರೀಶ ಹೇಳಿದರು...

ನಿಜ, ಯಾವ ಸರ್ಕಾರ ಬಂದರೂ ಜನರ ಬವಣೆ ತಪ್ಪುವುದಿಲ್ಲ