05 ಅಕ್ಟೋಬರ್ 2008

ಬಸ್ ಯಾನ ....




ಬಸ್ ಪ್ರಯಾಣ.ಅನೇಕ ದಿನಗಳ ಬಳಿಕ ಅನುಭವವಾಯಿತು.ಅದರಲ್ಲೂ ಲೋಕಲ್ ಬಸ್ ಗಳಲ್ಲಿ ಪ್ರಯಾಣಿಸುವ ಅನುಭವ ಇದೆಯಲ್ಲ ಅದು ಒಂದು ರೀತಿಯಲ್ಲಿ ಖುಷಿ...ಸುದ್ದಿಯ ಮೂಲ.... ಇನ್ನೊಂದು ರೀತಿಯಲ್ಲಿ ಮಾನಸಿಕ ಕಿರಿ ಕಿರಿ. ನೈಟ್ ಬಸ್ ಗಳ ಪ್ರಯಾಣವಾದರೆ ಹಾಗಲ್ಲ. ರಾತ್ರಿ ಬಸ್ ಹತ್ತಿದರೆ ಬೆಳೆಗ್ಗೆ ಎಲ್ಲಿ ಬೇಕೋ ಅಲ್ಲಿ. ವಾಹನದ ಸದ್ದು ಬಿಟ್ಟರೆ ಮತ್ತೇನೂ ಇಲ್ಲ. ರಾತ್ರಿ ಬಸ್ ಗಳ ಪ್ರಯಾಣದ ಅನುಭವಕ್ಕಿಂತ ಲೋಕಲ್ ಬಸ್ ಪ್ರಯಾಣ ವಿಶಾಲ ಅನುಭವ ನೀಡುತ್ತದೆ.

ನಾನು ಲೋ(ಸ್ಲೋ)ಕಲ್ ಬಸ್ ನಲ್ಲಿ ಪ್ರಯಾಣಿಸದೆ ಅನೇಕ ಸಮಯಗಳಾಗಿತ್ತು.ಅನಿವಾರ್ಯವಾಗಿ ಕೆಲ ದಿನಗಳು ಬಸ್ ನಲ್ಲಿ ಪ್ರಯಾಣಿಸಬೇಕಾದ ಸಂದರ್ಭ ಬಂದಿತ್ತು. ಬಹುಶ: ಕಾಲೇಜು ದಿನಗಳ ಬಳಿಕ ಸ್ಕೂಟರ್ , ಬೈಕ್ , ಕಾರುಗಳಲ್ಲೆ ಪಯಾಣಿಸುತ್ತಿದ್ದ ಸಂದರ್ಭದಲ್ಲಿ ಆಗುತ್ತಿರುವ ಅನುಭವಕ್ಕಿಂತ ಇದು ಎಷ್ಟೋ ಭಿನ್ನ. ಪುತ್ತೂರಿಗೆ ತೆರಳಲು ಹಳ್ಳಿಯಿಂದ ಅಂದರೆ ನಮ್ಮಂತ ದೂರದ ಮಂದಿಗೆ ಬೆಳಗ್ಗೆ 7 ಗಂಟೆಗೆ ಹೊರದಬೇಕು. ಆ ಬಸ್ಸು ಬಿಟ್ತರೆ ಮತ್ತೆ ಬೇರೆ ಬಸ್ಸಿಲ್ಲ.ಹಾಗಾಗಿ 45 ಕಿ ಮೀ ದೂರದ ಪುತ್ತೂರಿಗೆ ಹೋಗಲು ಬೆಳಗ್ಗೆ ಬೆಗನೆ ಎದ್ದು ನಿತ್ಯ ಕರ್ಮವನ್ನು ಮುಗಿಸಿ ಬಸ್ಸಿಗೆ ಹೊರಡಲು ಅನುವಾಗಬೆಕು. ಅಂತೂ ಹೊರಟು ಬಂದಾಗ ಬಸ್ಸು ತಪ್ಪಿತೆಂದರೆ ಮತ್ತೆ 4-5 ಕಿ ಮೀ ದೂರ ಕಾಲ್ನಡಿಗೆ. ಆಗ ಬೈಯುವುದು ಮನೆಯಲ್ಲಿರುವ ಅಮ್ಮನನ್ನ ಅಥವಾ ಇನ್ನಾರನ್ನದರೂ. ಯಾಕೆಂದರೆ ಬೇಗನೆ ಸಿದ್ದ ಪಡಿಸಿಕೊಡಲಿಲ್ಲ, ಈಗ ನಾನು ನಡಿಯುವ ಹಾಗಾಯಿತಲ್ಲಾ ಅಂತ ಕೋಪ.ಒಂದು ವೇಳೆ ಬಸ್ಸು ಸಿಕ್ಕಿತು ಎನ್ನಿ.ಸೋಮವಾರವಾದರಂತೂ ಬಸ್ ರಶ್. ಸೀಟು ಸಿಗಲಾರದು. ಪುತ್ತೂರಿನವರೆಗೂ ಸ್ಟ್ಯಾಂಡಿಂಗ್..!.ಉಳಿದ ದಿನಗಳಲ್ಲಿ ಪರವಾಗಿಲ್ಲ ಎನ್ನುಬಹುದು. ಇಷ್ಟೆಲ್ಲಾ ಆದ ಬಳಿಕ ಪುತ್ತೂರಿಗೆ ತಲಪಿದರೆ. ಮತ್ತೆ ಕೆಲಸದ ಜೊತೆಗೆ ನೆನಪಾಗುವುದು ಸಮಯ. ಸಂಜೆ ಲಾಸ್ಟ್ ಬಸ್ 4.30ಕ್ಕೆ. ಅದಕ್ಕೂ ಮುನ್ನ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಬೇಕು. ನಮಗೆಲ್ಲಾ ಎಲ್ಲಾಗುತ್ತೆ ಹಾಗೆ. ಅಲ್ಲಿ ಒಬ್ಬ ಮಿತ್ರ ಸಿಕ್ಕರೆ ಮಾತು... ಅಂತೂ ಇಂತೂ ಹಾಗೂ ಹೀಗೂ ಸಂಜೆಯಾಗಿ ಬಿಡುತ್ತೆ. ಬಸ್ ಗೆ ಸಮಯವೂ ಆಗಿ ಬಿಡುತ್ತೆ. ಇದು ನಮ್ಮಂಥವರ ಪಾಡಾದರೆ. ಹಳ್ಳಿಗರದ್ದು ಅಂದರೆ ಕೃಷಿಯಲ್ಲಿ ತೊಡಗಿಕೊಂಡಿರುವ ಮಂದಿಯದ್ದು ಹಾಗಲ್ಲ. ಅವರದ್ದು ಪೂರ್ವಯೋಜಿತವಾದ ಕೆಲಸಗಳು.ಇಂಥವಾರ ಪುತ್ತೂರಿಗೆ ಹೋಗುವುದು ಅಂತ ಸಿದ್ದತೆ ಮಾಡಿರುತ್ತಾರೆ. ಅಂದರೆ ಹಳ್ಳಿಯಲ್ಲಿ ದೊಡ್ಡ ಸಿಟಿ ಅಂದರೆ ಪುತ್ತೂರೆ. ಹಾಗಾಗಿ ಮೊದಲೆ ಸಿದ್ದತೆ. ಬೆಳಗ್ಗೆ ಬೇಗನೆ ಹೊರಟು ಅಷ್ಟೂ ಕೆಲಸಗಳನ್ನು ಮಾಡಿಕೊಂಡು ಬರುತ್ತಾರೆ. ನಿಜವಾಗಲೂ ಪುತ್ತೂರಿಗೆ ನಮ್ಮೂರಿಂದ ಇರುವುದು 40 ರಿಂದ 45 ಕಿ ಮೀ. ಕೇವಲ 0.45 ರಿಂದ 1 ಗಂಟೆ ಪ್ರಯಾಣ..!! ಆದರೆ ವಾಹನಗಳ ಓಡಾಟ ಹಾಗೂ ರಸ್ತೆಯ ಕಾರಣದಿಂದಾಗಿ ಇದೆಲ್ಲಾ ಸಮಸ್ಯೆ.

ಇನ್ನು ಬಸ್ ಎಂದರೆ ಅಲ್ಲಿ ಮಾತನಾಡದ ವಿಷಯಗಳಿರುವುದಿಲ್ಲ. ಏನೆಲ್ಲಾ ಚರ್ಚೆಗಳಾಗುತ್ತವೆ. ಅದು ಹಾಗಲ್ಲವಂತೆ .. ಹೀಗಂತೆ... ಅಲ್ಲಿ ಹೀಗೊಂದು ಘಟನೆಯಾಗಿದೆಯಂತೆ... ಏನಂತೆ ಅದು ... ಹೀಗೆಯೆ ಅನೆಕ ಚರ್ಚೆಗಳು ನಡೆಯುತ್ತದೆ. ಕೆಲವೊಮ್ಮೆ ಕಂಡೆಕ್ಟರೊಂದಿಗೆ ಚಿಲ್ಲರೆಗಾಗಿ "ಚಿಲ್ಲರೆ" ಜಗಳ. "ನೋಡಿಕೊಳ್ಳು"ವ ಹಂತಕ್ಕೂ ಬರುತ್ತೆ ಬಿಡಿ. ಇಂತಹ ಹಲವು ಮಜಲುಗಳನ್ನು ದಾಟಿ ನೂರೆಂಟು ಕಡೆ ನಿಲ್ಲುವ ಬಸ್ಸು ಪುತ್ತೂರಿಗೆ ತಲಪುವಾಗ ಬರೊಬ್ಬರಿ 9 ಗಂಟೆ.ಅಂದರೆ ಭರ್ತಿ 2 ತಾಸು ಬಸ್ ಪ್ರಯಾಣ.


ಮತ್ತೆ ಬಸ್ ಯಾನದ ಅದರಲ್ಲೂ ಹಳ್ಳಿಯೊಳಗೆ , ನನ್ನೂರಲ್ಲೇ ಇರುವ , ನನ್ನೂರಿಗೇ ಬರುವ ಅದೇ ಬಾಳುಗೋಡು ಬಸ್ ನಲ್ಲಿ ಪ್ರಯಾಣಿಸುವ ಅನುವವಂತೂ ಖುಷಿಯಾಗಿತ್ತು. ಆದರೆ ಮತ್ತೆ ಮತ್ತೆ ಅಂತಹ ಅವಕಾಶ ಸಿಗದಿರಲಿ ಅಂತ ಮನದೊಳಗೆ ಹೇಳಿಕೊಳ್ಳುತ್ತಿರುತ್ತೇನೆ. ಯಾಕೆಂದರೆ 2 ಗಂಟೆ ಬಸ್ ನಲ್ಲಿ ಕುಳಿತುಕೊಳ್ಳುವುದೇ ಒಂದು ಸಜೆ.

2 ಕಾಮೆಂಟ್‌ಗಳು:

ಹರೀಶ ಮಾಂಬಾಡಿ ಹೇಳಿದರು...

BUSಗೆ ಬಸ್.. ಅನ್ನಬೇಡ ಮಾರಾಯಾ..ಗಮ್ಮತ್ತು ಬೇಕೆಂದರೆ ಬಸ್ಸಿನಲ್ಲೇ ಹೋಗಬೇಕು..

ನಾನು ನಾನೇ.. ಹೇಳಿದರು...

nice :)