02 ಫೆಬ್ರವರಿ 2009

Love U ಸುತ್ತ.. ..



ಅದು ಕಾಲೇಜು.ಈಗ ವಿವಾದದ ಕೇಂದ್ರ ಬಿಂದು.ಇದೇನು ಹೊಸದು ಅಂತ ಯೋಚಿಸುವ ಮುನ್ನವೇ ಒಂದು ಪೀಠಿಕೆ...

I Love You ಎನ್ನುವ 3 ಅಕ್ಷರ ಇಂದು 12 ಜನರ ಬಂಧನಕ್ಕೆ ಕಾರಣವಾಗಿದೆ.ಇನ್ನೂ 5 ಜನರ ಬಂಧನಕ್ಕೆ ರೆಡಿಯಾಗಿದೆ.ಅಬ್ಬಾ ಅದೇನು ಶಕ್ತಿಯೋ ಆ ಶಬ್ದಕ್ಕೆ. ಸುಮಾರು 20 ಜನರ ಬಂಧನಕ್ಕೆ ಕಾರಣವಾದ್ದು ಲವ್ ಯು ಶಬ್ದ... ಅಂತ ಕೇಳುತ್ತಿರುವಂತೆಯೇ ತಿಳಿದದ್ದು ಅವನು ಇವಳಿಗೆ ಹೇಳಿದ್ದು... ಮುಂದೆ ಕೇಳಿದರೆ , ಅವನು ಬೇರೆ... ಇವಳು ಬೇರೆ.. ಜಾತಿಯಲ್ಲ... ಮುಂದೆ ಬನ್ನಿ ಅದು ಕೋಮು.... ಈಗ ಅರಿವಾಗಬಹುದು ಮೊದಲಿನ 3 ಅಕ್ಷರಗಳು ಇವರಿಬ್ಬರೊಳಗೆ ಹರಿದಾಡಿದರೆ ಏನಾಗಬಹುದೆಂದು... ಅದೇ ಆಗಿದೆ ಈ ಶಾಲೆ ಕಂ ಕಾಲೇಜಿನಲ್ಲಿ.... ಇಂದು ಇಡೀ ತಾಲೂಕಿನಲ್ಲಿ ರಾದ್ದಾಂತಕ್ಕೆ ಕಾರಣವಾಗಿದೆ... ಅಶಾಂತಿ ಭೀತಿ ಎದುರಾಗಿದೆ...

ಒಂದು ಕಾಲೇಜು ಮತ್ತು ಅದಕ್ಕೆ ಹೊಂದಿಕೊಂಡಿರುವ ಪ್ರೌಢಶಾಲೆ. ಅವನು PUC . ಇವಳು 9 ನೇತರಗತಿ. ಸಹಜವಾಗಿಯೇ ಮಕ್ಕಳೊಂದಿಗೆ ಊಟ ಮಾಡಿ ತಟ್ಟೆ ತೊಳೆಯಲು ನೀರಿನ ಟ್ಯಾಂಕ್ ಬಳಿ ಬರುತ್ತಾರೆ ಅಲ್ಲಿ ಅವನು I Love You ಅಂತಾನೆ ಇವಳು ಇಲ್ಲ ಅಂತಾಳೆ... ವಿಷಯ ಶಾಲಾ , ಕಾಲೇಜು ಮಕ್ಕಳಿಗೆ ತಲಪುತ್ತದೆ , ಅವನು ಬೇರೆ .... ಇವಳು ಬೇರೆ ಕೋಮು.. ಹಾಗಾಗಿ ಶಾಲೆಯ ಮಕ್ಕಳೊಳಗೆ ಜಗಳವಾಗುತ್ತದೆ. ವಿಷಯ ಹೊರಗೆ ಹೋಗುತ್ತದೆ.ಮರುದಿನ ಕಾಲೇಜಿನಲ್ಲಿ ಜನ ಸೇರುತ್ತಾರೆ.. ಹೊಡೆದಾಟ ಆಗುತ್ತದೆ.. ರಾಜಕೀಯ ಬಣ್ಣ ಪಡೆಯುತ್ತದೆ ತಾಲೂಕಿಗೆ ಪ್ರಸಾರವಾಗುತ್ತದೆ.. ಒಂದು ದೊಡ್ಡ ಪ್ರಕರಣವಾಗುತ್ತದೆ... ಆದರೆ ಕಾಲೆಜಿನ ವರ್ಗ ಈ ಪ್ರಕರಣವನ್ನು ಸುಖಾಂತ್ಯಗೊಳಿಸಬಹುದಿತ್ತು ಅದು ಈ ವಿಷಯವನ್ನು ನಿರ್ಲಕ್ಷ್ಯ ಮಾಡಿತ್ತು.ಹಾಗಾಗಿ ಆ ವಿಷಯಕ್ಕೆ ಹೊರಗಿನವರು ಅಂದರೆ ಕಾಲೇಜಿಗೆ ಹೊರಗಿನವರು ಪ್ರವೇಶಿಸಿದರು... ದೊಡ್ಡ ಸುದ್ದಿಯೇ ಆಯಿತು.. ಬಂಧನವಾಯಿತು.. ಇನ್ನೂ ಬಂಧನಕ್ಕೆ ಬಾಕಿ ಉಳಿದಿದೆ....

ಈಗ ವಿಷಯದ ಹಿಂದೆ ಸೂಕ್ಷ್ಮವಾಗಿ ಹೋದಾಗ , ಇನ್ನೂ ಮೀಸೆ ಬಾರದ ಹುಡುಗರು , LOVE ಎನ್ನುವ ಪದಕ್ಕೆ ಸರಿಯಾದ ಅರ್ಥವನ್ನೇ ಕಂಡುಕೊಳ್ಳದ ಹುಡುಗಿ , ನಿರ್ಲಕ್ಷ್ಯ ವಹಿಸಿದ ಕಾಲೇಜು , ರಂಜನೆಯ ಸುದ್ದಿಯನ್ನೇ ಬಯಸುತ್ತಿದ್ದ ಮತ್ತು ಟಾರ್ಗೆಟ್ ಹಾಕಿಕೊಂಡಿದ್ದ ಮಾಧ್ಯಮಗಳು.. ಇಡೀ ವಿಷಯ ತಿರುವು ನೀಡಿತು.. ಇಂದು ನಮ್ಮ ಸರಕಾರ ಇಲಾಖೆಗಳು ಮಲಗಿ ನಿರ್ದಿಸುತ್ತಿವೆ ಎನ್ನುವುದಕ್ಕೆ ಇದೊಂದು ಒಳ್ಳೆಯ ಉದಾಹರಣೆ. ಈ ಪ್ರಕರಣ ಇಡೀ ಶಾಲಾ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಬಹುದು ಎನ್ನುವ ಚಿಂತನೆಯನ್ನೇ ಮಾಡದೆ ಪ್ರಕರಣದ ವಿಚಾರಣೆಯನ್ನೇ ಮಾಡಿಲ್ಲ. ಸಾರ್ವಜನಿಕರಲ್ಲಿ ಮನವಿಯನ್ನೂ ಮಾಡಿಲ್ಲ .. ಅದು ಅದರ ಪಾಡಿಗೆ ಇದೆ .. ವಿದ್ಯಾರ್ಥಿಗಳು ದಿನಕ್ಕೊಂದು ಕತೆ ಹೇಳುತ್ತಾರೆ.

ಅಲ್ಲ ನಮ್ಮ ವ್ಯವಸ್ಥೆ ಏಕೆ ಹೀಗೆ ಎನ್ನುವುದಕ್ಕೆ ಉತ್ತರವೇ ಇಲ್ಲ ಬಿಡಿ.ನಮ್ಮ ನಾಯರು ಎನಿಸಿಕೊಂಡವರಿಗೂ ಅರಿವು ಬೇಡವೇ. ಒಂದು ಶಾಲೆಯಲ್ಲಿ ಕೋಮು ಭಾವನೆಯನ್ನು ಹುಟ್ಟು ಹಾಕಿದರೆ , ಅಲ್ಲಿ ಆ ಭಾವನೆಯ ಬೀಜ ಬಿತ್ತಿದರೆ ಅದು ಮುಂದೆ ಹೆಮ್ಮರವಾಗಬಹುದು ಎನ್ನುವ ಅರಿವು ಬೇಡವೇ.ಕೇವಲ ಮತಾಂಧರಾಗುವುದು ಎಷ್ಟು ಸರಿ ಅಂತ ಯಾರಲ್ಲಿ ಕೇಳುವುದು?. ಬಹುಶ; ನಾಯಕರುಗಳಿಗೆ ಪಕ್ಷಗಳಿಗೆ ಇಂದು ಓಟು ಬೇಕು ಅದಕ್ಕಾಗಿ ಶಾಲೆಯೊಳಗೂ ಹೊಕ್ಕಿ ಅಲ್ಲಿ ಹುಳಿ ಹಿಂಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ ,ತಾಲೂಕಿನಲ್ಲಿ ವಿಷಯ ಹರಡುತ್ತಾರೆ , ಎನ್ನುವುದಕ್ಕೆ ಇದು ಒಂದು ಸಾಕ್ಷಿ ಅಂತ ಅನಿಸುತ್ತದೆ.

ಅಲ್ಲ ಆ ಮಕ್ಕಳ ಮನಸ್ಸಿನಲ್ಲಿ ವಿಷಬೀಜವ ಬಿತ್ತುವ ಪ್ರಯತ್ನ 2 ಕಡೆಯಿಂದಲೂ ಆಗುತ್ತದೆ ಇಂದು Love you ಒಂದು ಕಾರಣವಾದರೆ ಅದರ ಹಿಂದೆಯೇ ಹೋದರೆ ಅಂತಹ ಹಲವು ಸಂಗತಿಗಳು ಹೊಸ ಹೊಸತು ಸಿಗುತ್ತದೆ. ಹಾಗಾಗಿ ಇಂದು Love You ಅಲ್ಲ Love Allಎಂಬುದನ್ನು ಹೇಳಿಕೊಡುವ ಪ್ರಯತ್ನ ಮಾಡೋಣ....

2 ಕಾಮೆಂಟ್‌ಗಳು:

shivu.k ಹೇಳಿದರು...

ಮಹೇಶಣ್ಣ,

ಕೆಲವೊಮ್ಮೆ ಕ್ಷುಲ್ಲುಕ ಕಾರಣಗಳು ಎಷ್ಟು ಅತಿರೇಖಕ್ಕೆ ಹೋಗುತ್ತವೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ ಸಮೇತ ವಿವರಿಸಿದ್ದೀರಿ....

NiTiN Muttige ಹೇಳಿದರು...

chennagide.. ella artha maadikondare adeshtu chenna?