25 ಡಿಸೆಂಬರ್ 2008

ಜೀವಕ್ಕೆ ಬೆಲೆ ....??



ಇದು ನ್ಯಾಯವೇ....?. ಇಂತಹ ಸಾವಿಗೆ ನ್ಯಾಯವಿದೆಯೇ..?.. ಜೀವಗಳಿಗೆ ಬೆಲೆಯೇ ಇಲ್ಲವೇ...?. ಇಂತಹದ್ದೊಂದು ಪ್ರಶ್ನೆ ನನಗೆ ಕಾಡಲು ಶುರುವಾದದ್ದು ನಿನ್ನೆಯಿಂದ . ಕಾರಣ ಕೇಳಿ....

ಒಂದು ಹೊಸ ಚಿಂತನೆ ನಡೆದಿದೆ.. ಗೋವು ಇಂದು ವಿವಾದದ ವಸ್ತುವಾಗಿದೆ. ಕಾರಣ ಗೊತ್ತೇ ಇದೆ. ಅದನ್ನು ಭಕ್ಷಣೆ ಮಾಡುವುದಕ್ಕಾಗಿ ಕೊಲ್ಲಲಾಗುತ್ತಿದೆ.ಹಾಗಾಗಿ ಇಂದು ವಿವಾದಗಳು ಹೆಚ್ಚಾಗಿವೆ.ಕೆಲವೊಮ್ಮೆ ಅಶಾಂತಿಗೂ ಕಾರಣವಾಗಿದೆ. ಇದನ್ನು ತಡೆಯಲು ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಆದರೆ ಇಲ್ಲೊಂದು ಸಂಘಟನೆ ಹೊಸತೊಂದು ಯೋಚನೆ ನಡೆಸಿದೆ.ಗೋ ಮಾಂಸ ಭಕ್ಷಣೆ ಮಾಡುತ್ತಿರುವುದು ಇಂದು ಅದು ಕಡಿಮೆ ದರದಲ್ಲಿ ಸಿಗುತ್ತದೆ ಎನ್ನುವ ಕಾರಣಕ್ಕಾಗಿ. ಆದರೆ ಅದನ್ನು ಹೆಚ್ಚಾಗಿ ತಿನ್ನುವವರು ಮುಸ್ಲಿಂಮರು , ಹಾಗಾಗಿ ಆ ಮಾಂಸಕ್ಕೆ ಪರ್ಯಾಯವಾಗಿ ಆಡಿನ ಮಾಂಸವನ್ನು ತರಬೇಕು ಎನ್ನುವುದು ಸಂಘಟನೆಯ ಉದ್ದೇಶ. ಆ ಕಾರಣಕ್ಕಾಗಿ ಇಂದು ಕೆಲ ಶರ್ತಗಳ ಮೂಲಕ ಮುಸ್ಲಿಂ ಕುಟುಂಬಗಳಿಗೆ 2 ಆಡನ್ನು ನೀಡುವುದು ಸಂಘಟನೆಯ ಚಿಂತನೆ. ಇದರಿಂದಾಗಿ ಈಗ ಆಡಿನ ಮಾಂಸಕ್ಕೆ 2೦೦ ರೂಗಳವರೆಗೆ ಇದೆ. ಅದು ಕಡಿಮೆಯಾಗಬಹುದು ದನ ತಿನ್ನುವವರೆಲ್ಲಾ ಆಡನ್ನು ತಿನ್ನುತ್ತಾರೆ ಎಂದು ಸಂಘಟಕರು ನಂಬಿದ್ದಾರೆ.ಅಲ್ಲದೆ ಇದಕ್ಕೀಂತಲೂ ಒಂದು ಹೆಜ್ಜೆ ಮುಂದೆ ಬಂದು ಮುಸ್ಲಿಂಮರಿಗೆ ಬರ್ಕತ್ ನಲ್ಲಿ ಆಡನ್ನೇ ತಿಳಿಸಿದ್ದಾರೆ ಹಾಗಾಗಿ ಆಡು ಅವರ ಆಹಾರ ಎನ್ನುತ್ತದೆ ಈ ಸಂಘಟನೆ. ಇದಿಷ್ಟು ವಿಷಯ.

ಗೋವಿಗೆ ಇಂದು ಪೂಜ್ಯ ಭಾವನೆ ಇದೆ ನಿಜ, ಎಲ್ಲರೂ ಅದನ್ನು ಒಪ್ಪಬಹುದು ಅಂತನೇ ಇಟ್ಟುಕೊಳ್ಳೋಣ. ಹಾಗಾಗಿ ಅದನ್ನು ಕೊಲ್ಲಬಾರದು ಎನ್ನುವ ಭಾವನೆ ಇರುವುದೂ ನಿಜವೇ. ಆದರೆ ಇಂದು ಗೋಹತ್ಯೆ ನಿಲ್ಲಬೇಕು ಎನ್ನುವ ಕಾರಣಕ್ಕೆ ಇನ್ನೊಂದು ಪ್ರಾಣಿಯನ್ನು ಬೆಳೆಸುವುದು ಎಷ್ಟು ಸರಿ. ಅದೂ ಒಂದು ಜೀವವಿರುವ ಪ್ರಾಣಿಯಲ್ಲವೇ?. ಅದರಲ್ಲೂ ಔಷಧೀಯ ಗುಣವಿದೆಯಲ್ಲಾ?.ಗೋವು ಪೂಜ್ಯ ಎನ್ನುವ ಒಂದೇ ಕಾರಣಕ್ಕೆ ಅದನ್ನು ಹತ್ಯೆ ಮಾಡಬಾರದು ಎನ್ನುವುದರ ಜೊತೆಗೆ ಇನ್ನೊಂದು ಪ್ರಾಣಿಯ ಹತ್ಯೆಯೂ ಆಗಬಾರದು ಎನ್ನುವ ಬಾವನೆಯನ್ನು ಇಂದು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಗೋಹತ್ಯೆ ನಿಷೇಧಕ್ಕೆ ಸರಿಯಾದ ದಾರಿಯಲ್ಲಿ ಪ್ರಯತ್ನಿಸಬೇಕು.

ಒಂದು ಪ್ರಾಣಿ ಇನ್ನೊಂದು ಪ್ರಾಣಿಯ ಆಹಾರದ ವಸ್ತುವಾಗುವುದು ಪ್ರಕೃತಿ ನಿಯಮ.

ಆದರೆ ಬುದ್ದಿವಂತನಿಗೂ ಜೀವಂತ ಪ್ರಾಣಿ ಆಹಾರಕ್ಕೆ ಬೇಕಾದರೆ ಆತ ಯಾವುದಕ್ಕೆ ಸಮಾನ.? ಈ ಬುದ್ದಿವಂತನಿಗೆ ಬದುಕಲು ಅದುವೇ ಆಗಬೇಕು ಎಂದಿಲ್ಲವಲ್ಲ. ಅದೆಲ್ಲವೂ ಬಾಯಿ ಚಪಲ ಮತ್ತು ನಾಲಗೆಯನ್ನು ತಣಿಸಲು ಎಂಬುದು ನನ್ನ ಚಿಂತನೆ.

ಎಲ್ಲರೂ ಇದನ್ನು ಒಪ್ಪಬೇಕು ಎಂದಿಲ್ಲ.


1 ಕಾಮೆಂಟ್‌:

shivu.k ಹೇಳಿದರು...

ತುಂಬಾ ಗಹನವಾದ ವಿಚಾರವನ್ನು ಬರೆದಿದ್ದೀರಿ..ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ !