19 ಡಿಸೆಂಬರ್ 2008

ನೀ ನಿಲ್ಲದೆ ....



ನೀ ನಿಲ್ಲದೆ .... ಮನಸೆಲ್ಲಾ ಕಲ್ಲಾಗಿದೆ.... ಇದು ಹಾಡಿನ ಒಂದು ಸಾಲು... ಆದರೆ ಇದೇನು ನನ್ನ ವಿಷಾದ ಗೀತೆಯಲ್ಲ...

ಮೊನ್ನೆ ಹುಣ್ಣಿಮೆಯ ರಾತ್ರಿ.ಮನೆಯ ಅಂಗಳಕ್ಕೆ ಇಳಿದಾಗ ಬಾನಿನಲ್ಲಿ ಚಂದಿರ ಚಿತ್ತಾರವನ್ನು ಬಿಡಿಸಿಟ್ಟಿದ್ದ.ಮೋಡಗಳ ಸಂದಿನಲ್ಲಿ ಕಣ್ಣರೆಪ್ಪೆ ಮಿಟುಕಿಸುವಂತೆ ಆಗೊಮ್ಮೆ ಈಗೊಮ್ಮೆ ಕಾಣುತ್ತಲಿದ್ದ.ನಕ್ಷತ್ರಗಳು ಮೋಡದ ಒಳಗೆ ಅತ್ತಿಂದಿತ್ತ ಓಡಾಡುತ್ತಿದ್ದ್ವು. ನಾನು ನಿಜ ಹೇಳಬೇಕೆಂದರೆ ಚಿಕ್ಕವನಿದ್ದಾಗ ಚಂದಿರನನ್ನು ನೋಡಿದ್ದು ಬಿಟ್ಟರೆ ಚಂದಿರನನ್ನು ಸೂಕ್ಷವಾಗಿ ಅದರಲ್ಲೇ ಲೀನವಾಗಿ ಚಂದಿರನಂಗಳಕ್ಕೆ ಇಳಿದದ್ದಿಲ್ಲ. ಆದರೆ ಮೊನ್ನೆ ಏನೆನೆನಿತೋ ಏನೋ ಅಂಗಳಕ್ಕೆ ಇಳಿದಾಗ ಚಂದಿರನ ಬೆಳಕು ಕಂಡಿತು. ಆ ಪ್ರಕಾಶವನ್ನೇ ದಿಟ್ಟಿಸಿ ನೋಡಬೇಕು ಎನಿಸಿತು.ತೋಟಕ್ಕೆ ಇಳಿಯದೆ ವಾರಗಳೇ ಕಳೆದಿತ್ತು.ಹಾಗಾಗಿ ರನ್ ಅಂಗಳಕ್ಕೆ ಇಳಿಯಲು ಮನಸ್ಸು ರೆಡಿಯಾಗಿತ್ತು. ಪ್ರತಿದಿನ ರಾತ್ರಿ ಕಂಪ್ಯೂಟರ್ ಪರದೆಯ ಮುಂದೆ ಗಂಟಗಟ್ಟಲೆ ಕುಳಿತು ಹುಡುಕಾಡುವುದು ಮತ್ತು ಕೆಲಸದ ದಾರಿಗೆ ರೂಪು ಕೊಡುವುದರಲ್ಲೇ ಮಗ್ನನಾದಾಗಿ ಗಂಟೆ ನೋಡುವ ಹೊತ್ತಿಗೆ ೧೧ ಕಳೆದಿರುತ್ತದೆ ಹಾಗಾಗಿ ಅಂದು ಯಾವುದೇ ಲೆಕ್ಕಾಚಾರವಿಲ್ಲದೆ ಸುಮ್ಮನೆ ಮನೆಯಂಗಳದಲ್ಲಿ ಆಗಸಕ್ಕೆ ನೋಡುತ್ತಾ ನಿಂತಿದ್ದಂತೆ ಒಮ್ಮೆ ಶುಭ್ರ ಆಗಸದಲ್ಲಿ ಹೊಳೆಯುವ ಚಂದಿರ ಇನ್ನೊಮ್ಮೆ ಮೋಡಗಳೆಂಬ ಮೋಡಗಳು ಚಂದಿರನ ಪ್ರಕಾಶಕ್ಕೆ ಅಡ್ಡ ಬರುತ್ತಿತ್ತು. ನಕ್ಷತ್ರಗಳು ಬಲುದೂರ ಸಾಗುತ್ತಿದ್ದವು. ಆಗ ಸೊಯ್ ಎಂಬ ಚಳಿಗಾಳಿ ಸುತ್ತಲೂ ಬೀಸುತ್ತಲಿತ್ತು. ಮನಸ್ಸು ಎಲ್ಲೋ ದೇಹವೆಲ್ಲೂ ಸುತ್ತುತ್ತಾ ಆ ಚಂದಿರನ ಪ್ರಕಾಶದ ಭ್ರಮೆಯಲ್ಲಿ ತೇಲುತ್ತಲೇ ಇತ್ತು. ಮನಸ್ಸಿಗೆ ಆಹ್ಲಾದ ಒದಗುತ್ತಿತ್ತು. ಆಗ ದೂರದಲ್ಲಿ ಎಲ್ಲೋ ಕರ್ಕಶವಾದ ಸದ್ದು , ನಾಯಿಯ ಕೂಗಿನ ಸದ್ದು, ಮರದಿಂದ ನೀರ ಹನಿ ಬೀಳುವ ಟಪ್ ಸದ್ದು ಎಲ್ಲವೂ ಸೂಕ್ಷ ಮನಸ್ಸಿನ ಒಳಗೆ ಕೇಳಲಾರಂಭಿಸಿತು.ಜಾಗೃತವಾದ ಮನಸ್ಸು ಆ ಕಡೆಗೂ ಹಮನಹರಿಸಿತು. ಸದ್ದುಗಳು ಹತ್ತಿರ ಹತ್ತಿರವಾದಂತೆ ಅನಿಸತೊಡಗಿತು..... ಅದೇನು ಅನ್ನುವ ಕುತೂಹಲ ಬರತೊಡಗಿತು. ಆಗ ಆ ಸತ್ಯದ ಅನ್ವೇಷಣೆಯಲ್ಲಿ ಸಿಕ್ಕಿದ್ದು ಅಂತಹ ಸದ್ದುಗಳೆಲ್ಲವೂ ನಮ್ಮ ಭ್ರಮೆಯಲ್ಲ ಸತ್ಯವೂ ಅಲ್ಲ ನಂಬುವಂತಹುದೂ ಅಲ್ಲ. ಆದರೆ ಅದರ ಬಗ್ಗೆ ನಿಗಾ ಇರಬೇಕು.ಅದೆಲ್ಲವೂ ಪ್ರಕಾಶದ ಹಿಂದಿರುವ ಮೋಡಗಳು. ಆ ಮೋಡಗಳು ಪಕ್ಕದಲ್ಲಿರುವ ನಕ್ಷತ್ರಗಳನ್ನು ಓಡಿಸುತ್ತಾ ಸಾಗುತ್ತದೆ. ಇದೆಲ್ಲವನ್ನೂ ಸಮಾಜದೊಂದಿಗೆ ಸಮೀಕರಿಸುತ್ತಾ ಸಾಗಿದಾಗ ರಾತ್ರಿ ಪಂಪ್ ಚಾಲೂ ಮಾಡುವ ಹೊತ್ತು ಬಂದಿತ್ತು. ಆಗ ರಾತ್ರಿ ಗಂಟೆ ೧೨. ಪಂಪ್ ಚಾಲೂ ಮಾಡಿ ಬಂದು ಹಾಸಿಗೆ ಬಿಡಿಸುವ ವೇಳೆಗೆ ನಿದ್ರೆಯು ಕಣ್ಣನ್ನು ಆವರಿಸಿತ್ತು.

ಇದೆಲ್ಲವೂ ಇಂದಿನ ಸಮಾಜದಲ್ಲಿ ಕಾಣುತ್ತೇವೆ ನಾವು?. ಚಂದಿರ , ಅವನ ಪ್ರಕಾಶ , ಆ ಪ್ರಕಾಶವನ್ನು ಅಡ್ಡಗಟ್ಟುವ ಮೋಡಗಳು, ಓಡುವ ನಕ್ಷತ್ರಗಳು, ಮತ್ತೆ ಬೆಳಕು ಕಾಣುವ ಚಂದಿರ ಹತ್ತಿರ ಕಾಣುವ ನಕ್ಷತ್ರಗಳು.... ಇದೆಲ್ಲವೂ ನಿಜವಾ?. ಅಷ್ಟಕ್ಕೂ ಚಂದಿರನೇ ಪರಾವಲಂಬಿಯಲ್ವೇ?. ಆತನು ಬೆಳಕು ನೀಡುವುದು ಸೂರ್ಯನಿಂದ ತಾನೆ?.

ಅದಕ್ಕಾಗಿ ನೀ ನಿಲ್ಲದೆ ಮನಸಿಲ್ಲ... ಮನಸೇ ಎಲ್ಲಾ

ಎಲ್ಲವೂ ಗೋಜಲು.... ಗೋಜಲು....

3 ಕಾಮೆಂಟ್‌ಗಳು:

shivu.k ಹೇಳಿದರು...

ಆಹಾ ! ಫೋಟೋ ಚೆನ್ನಾಗಿದೆ. ಮತ್ತು ಅದಕ್ಕೆ ತಕ್ಕಂತ ಬರಹ ಚೆನ್ನಾಗಿದೆ. "ನೀ ನಿಲ್ಲದೆ.... ಮನಸೆಲ್ಲ ಕಲ್ಲಾಗಿದೆ.. ಅದನ್ನು ಬಳಸಿಕೊಂಡಿರುವ ರೀತಿ ಚೆನ್ನಾಗಿದೆ. ಅದರ ಬಗ್ಗೆ ನಿಮ್ಮ ಅನಿಸಿಕೆ ನನಗಿಷ್ಟವಾಯಿತು.

ಹರೀಶ ಮಾಂಬಾಡಿ ಹೇಳಿದರು...

chennagide.

gondala bega parihaara kanali

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಧನ್ಯವಾದಗಳು ಶಿವು ಹಾಗೂ ಹರೀಶ್ ಮಾಂಬಾಡಿಯವರಿಗೆ...