25 ಸೆಪ್ಟೆಂಬರ್ 2008

ಆಗಾಗ ಬದುಕಿ ಬರುವವರು...!! ಸಮಾಜವ ಹಿಂಡಲು..??




ಇವರೆಲ್ಲಾ ಎಲ್ಲಿದ್ರು ಅಂತ. ಇತ್ತೀಚೆಗೆ ಭೇಟಿ ನೀಡಿದ ಒಬ್ಬ ರಾಜಕೀಯ ಪ್ರಮುಖರು ನಾವು ಇನ್ನೂ ಜೀವ ಇದ್ದೇವೆ ಅಂತ ಒದರಿದರು. ಅವರು ಹಾಗೆ ಹೇಳಲು ಕಾರವೇನು ಗೊತ್ತಾ?. ಇತ್ತೀಚೆಗೆ ಕರಾವಳಿ ಹಾಗೂ ರಾಜ್ಯದಲ್ಲಿ ನಡೆದ ದಾಳಿ ಪ್ರಕರಣ.ಅದನ್ನು ನಾನು ಬಿಡಿಸಿ ಹೇಳಬೇಕೆಂದೇನಿಲ್ಲ. ಅಲ್ಲಾ ಸ್ವಾಮಿ ನೀವು ಬದುಕಿದ್ದೀರಿ ಅಂತ ನಾವು ಅಂದುಕೊಂಡಿರಲೇ ಇಲ್ಲ.ಯಾಕೆಂದ್ರೆ ನೀವು ಜೀವವಾಗೋದೇ ಈಗ ಮಾತ್ರಾ ಅಲ್ವಾ ಅಂತ ಬೀದಿ ಬೀದಿಯಲ್ಲಿ ಜನಮಾತನಾಡಿಕೊಂಡಿದ್ದು ಸತ್ಯ. ಅದು ಯಾಕೆ ಗೊತ್ತಾ?.

ಇದುವರೆಗೆ ಎಲ್ಲೂ ಕಾಣಿಸಿಕೊಳ್ಳದವರೂ ಈಗ ಕಾಣಿಸಿಕೊಂಡಿದ್ದಾರೆ. ಒಂದು ಧರ್ಮದ ಮೇಲೆ ಮತ್ತು ಅವರ ನಂಬಿಕೆಯ ಮೇಲೆ ಅವರ ಆಚರಣೆಯ ಮೇಲೆ, ಅವರ ಶ್ರದ್ಧಾ ಕೆಂದ್ರದ ಮೇಲೆ ದಾಳಿ ಮಾಡುವ ಹಕ್ಕು ಯಾರಿಗೂ ಇಲ್ಲ ಬಿಡಿ. ಹಾಗೆ ಮಾಡಿದ್ದಾರೆ ಎಂದರೆ ಅದು ಪರಮ ತಪ್ಪು. "ಅಲ್ಲಿ" ಲೋಪಗಳು ಉಭಯ ಕಡೆಗಳಿಂದಲೂ ಆಗಿದೆ ಅಂತ ಅಂದುಕೊಳ್ಳೋಣ.ಅಂತಹವರಿಗೆ ಶಿಕ್ಷೆಯಾಗಲೆಬೇಕು. ಅದರಲ್ಲಿ ಎರಡು ಮಾತಿಲ್ಲ.

ಆದರೆ ಇದನ್ನು ಈ ಸಂದರ್ಭವನ್ನು ಸದ್ಬಳಕೆ ಮಾಡಿಕೊಂಡವರು ಯಾರು ಗೊತ್ತಾ?. ರಾಜಕೀಯದ ನಾಯಕರು. ತಮ್ಮ ರಾಜಕೀಯದ ಭವಿಷ್ಯಕ್ಕಾಗಿ ಸಮಾಜದಲ್ಲಿ ಮತ್ತೆ ಮತ್ತೆ ಅಶಾಂತಿಯನ್ನು ಸೃಷ್ಠಿಸಿಕೊಂಡು ತಮ್ಮ ಸ್ಥಾನವನ್ನು ಭದ್ರ ಪಡಿಸುವ ಯತ್ನದಲ್ಲಿ ಇಂದಿಗೂ ತೊಡಗಿಕೊಂಡಿದ್ದಾರೆ. ಅತ್ತ ಓಟ್ ಬ್ಯಾಂಕನ್ನು ಎಲ್ಲಿ ಇನ್ನೊಂದು ಪಕ್ಷ ಕಸಿದು ಬಿಡುತ್ತದೋ ಎಂಬ ಭಯದಿಂದ ಒಂದಲ್ಲ ಎರಡೆರಡು ಬಾರಿ ಪ್ರಾರ್ಥನಾ ಮಂದಿರಗಳಿಗೆ ಭೇಟಿ ಮಾಡಿ ಸಾಂತ್ವನವೇನು.... ಕಣ್ಣೀರೇನು.... ಪತ್ರಿಕಾಗೋಷ್ಠಿಗಳೇನು..., ನಾವು ಬದುಕಿದ್ದೇವೆ ಎಂದು ಏನು ಹೇಳಿಕೆಗಳೇ ಹೇಳಿಕೆಗಳು. ದುರಂತದ ಸಂಗತಿಯೆಂದರೆ ಅವರು ಬದುಕಿರುವುದನ್ನು ಈಗಲ್ಲ ಅಂದೇ ತೋರಿಸಿಕೊಡಬೇಕಿತ್ತು. ನಮ್ಮ ರಾಜ್ಯದಲ್ಲಿ ಕುಡಿಯಲು ಇಂದಿಗೂ ನೀರಿಲ್ಲದ ಊರುಗಳೆಷ್ಟಿಲ್ಲ, ಸಮರ್ಪಕ ರಸ್ತೆಗಳಿಲ್ಲದ ಊರುಗಳು ಎಷ್ಠಿಲ್ಲ?, ಮನೆಗಳಿಲ್ಲದ ಮಂದಿ ಎಷ್ಠಿಲ್ಲ? ಅವರಿಗೆಲ್ಲಾ ಯಾರು ಬದುಕಿರುವವರು ಯಾರು?. ಸರಕಾರ ಆ ಕಡೆ ಕಣ್ಣೆತ್ತಿಯೂ ನೋಡಿಲ್ಲ. ಅಂತಹ ಜನರ ಬಳಿಗೆ ಹೋಗದ ಇಂದಿನ ರಾಜ್ಯ,ಕೇಂದ್ರ ಸರಕಾರವಿರಬಹುದು, ಸರಕಾರದ ಕಮಿಶನ್ಗಳಿರಬಹುದು , ವಿಶೇಷ ತಂಡಗಳಿರಬಹುದು ರಾಜಕೀಯ ನಾಯಕರಿರಬಹುದು ಎಲ್ಲಿದ್ದಾರೆ.. ಎಲ್ಲಿದೆ ಕಮಿಶನ್. ಜನರ ಸಮಸ್ಯೆಗೆ ಸ್ಪಂದಿಸದ ಇಂತಹ ನಾಚಿಕೆಗೇಡಿನ ರಾಜಕಾರಣಗಳು ಅನಗತ್ಯವಾಗಿ ಸಮಾಜದಲ್ಲಿ ಮತ್ತೆ ಮತ್ತೆ ಅಶಾಂತಿಗೆ ಕಾರಣವಾಗುವ ಹೇಳಿಕೆಗಳನ್ನು ನೀಡಿ,. ಅದೇ ಸ್ಥಳಗಳಿಗೆ ಮತ್ತೆ ಮತ್ತೆ ಭೇಟಿ ನೀಡಿ ಜನರ ಮನಸ್ಸನ್ನು ಮತ್ತೆ ಮತ್ತೆ ಘಾಸಿಗೊಳಿಸುವ ಪ್ರಯತ್ನ ನಡೆಸುತ್ತಾರಲ್ಲಾ ಇವರು ಲಜ್ಜೆಗೇಡಿನ ನಾಯಕರು. ದೇಶ ಉದ್ದಾರವಾದೀತಾ???

ಇದು ಹಲವು ದಿನಗಳ ಮನಸ್ಸಿನ ಭಾವನೆಗಳನ್ನು ತಡೆಯಲಾರದೆ ಬರೆಯಬೇಕಾಯಿತು.

ಕಾಮೆಂಟ್‌ಗಳಿಲ್ಲ: