21 ಸೆಪ್ಟೆಂಬರ್ 2008

ಕಳಚುವ ಕೊಂಡಿ....



ಜೋರಾಗಿ ಮಳೆ ಬಂತು ರೈನ್ ಕೋಟ್ ಬೇರೆ ಇದ್ದಿರಲಿಲ್ಲ. ಕೆಲಸ ತುರ್ತಾಗಿದ್ದರೂ ಪರಿಚಯಸ್ಥರ ಮನೆಗೆ ಹೋಗಲೇಬೇಕಾಯಿತು.ಅದು ಅಷ್ಟೊಂದು ಶ್ರೀಮಂತರ ಮನೆಯಲ್ಲ.ಬಡತನದಲ್ಲಿರುವ ವೃದ್ಧ ದಂಪತಿಗಳಿರುವ ಮನೆ. ಅವರೊಂದಿಗೆ ಮದುವೆಯಾದ ಮಗಳು ಹಾಗೂ ಅಳಿಯ ವಾಸವಾಗಿದ್ದಾರೆ.ವೃದ್ಧರ ವಯಸ್ಸು ಸುಮಾರು 70 ರಿಂದ 80 ಇರಬಹುದು. ನನಗೆ ಯಾಕೋ ಇನ್ನೊಮ್ಮೆ ಈ ಮನೆ ನೆನಪಾಯಿತು. ಯಾಕೆ ಗೊತ್ತಾ?. ಆ ವೃದ್ದ ದ0ಪತಿಗೆ "ಸುಪುತ್ರ" ಕುಲಸಂಜಾತ , ಕುಲೋದ್ಧಾರಕ, ವಂಶೋದ್ಧಾರಕ ... ಹೀಗೆ ಏನು ಬೇಕಾದರೂ ವಿಶೇಷಣಗಳನ್ನು ಕೊಡಬಲ್ಲ ಏಕೈಕ ಪುತ್ರನಿದ್ದಾನೆ. ಆತನಿಗೆ ಮಾತ್ರಾ ಈ ವ್ರುದ್ಧರ ಬಗ್ಗೆ ಗೊಡವೆಯೇಯಿಲ್ಲ. ಇರುವುದು "ಮಹಾ"ನಗರಿಯಲ್ಲಿ. "ದೊಡ್ಡ" ಉದ್ಯೋಗದಲ್ಲಿ. ಆದರೆ ಹಳ್ಳಿಯಲ್ಲಿ ತಾಯಿ ತಂದೆ ಮಗನ ನಿರೀಕ್ಷೆಯಲ್ಲಿದ್ದಾರೆ, ಫೋನು ನಂಬ್ರದ ಹುಡುಕಾಟದಲ್ಲಿದ್ದಾರೆ, ಹಾಗಿದ್ದರೂ ಆತನ ಬಗ್ಗೆ ಇವರಿಗೆ ಹೆಮ್ಮೆಯಿದೆ...!!!. ಹೆತ್ತವರಿಗೆ ಹೆಗ್ಗಣ ಮುದ್ದು ಅಂದರೆ ಇದೇ ಅಲ್ಲವೇ..?

ಏನು ಗೊತ್ತಾ ವಿಷ್ಯ.?. ನಾನು ಹಾಗೆ ಆ ಮನೆಗೆ ಹೋದಾಗ ವೃದ್ಧರು ಕೇಳಿದ್ದು ನಿನಗೆ "......" ಗೊತ್ತಾ? ". ....." ಅದರ ಕಚೇರಿ ಬೆಂಗಳೂರಿನಲ್ಲಿದೆಯಂತೆ , ಆತ [ಅಂದರೆ ಮಗ] ಆ ಶಾಖೆಯಲ್ಲಿದ್ದಾನಂತೆ ನನ್ನಲ್ಲಿ ಫೋನು ನಂಬ್ರವೂ ಇಲ್ಲ . [ಇವರ ಮನೆಗೆ ಫೋನಿಲ್ಲ].ನಿನಗೆ ಹೇಗಾದ್ರೂ ಮಾಡಿ ಆ ನಂಬ್ರವನ್ನು ಸಂಗ್ರಹ ಮಾಡಿಕೋಡುವೆಯಾ?. ಎಲ್ಲಾದರೂ ನಿನಗೆ ಫೋನಿಗೆ ಸಿಕ್ಕರೆ ಒಂದು ಫೋನು ಮಾಡಬೇಕಂತೆ ಅಂತ ಹೇಳು... ಎಂದು ಹೇಳಿದರು. ಸರಿ.. ಸರಿ ಅಂದೆ. ನನಗೆ ತಿಳಿದಂತೆ ಆ ವೃದ್ಧ ಮಗನ ಓದಿಗೆ ಸಾಲ ಮಾಡಿ ತುಂಬಾ ಖರ್ಚು ಮಾದಿದ್ದರು. ಉಳಿದ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಅಷ್ಟೊಂದು ನೀಡದೆ "ವಂಶೋದ್ಧಾರಕ"ನಿಗೆ ಹೆಚ್ಚು ಓದಿಸಿದರು ,ಅದೂ ಕಷ್ಟ ಪಟ್ಟು . ಹಾಗಾಗೇ ಆತನಿಗೆ ಒಳ್ಳೆಯ ಉದ್ಯೋಗವೂ ಸಿಕ್ಕಿತು. ನಂತರ ಮದುವೆಯೂ ಆಯಿತು. ವಾಸ್ತವ್ಯ ಬದಲೂ ಆಯಿತು. ಆ ಬಳಿಕ ಈಗ ತಂದೆಯೇ ಎಲ್ಲಿರುವೆ ... ಹೇಗಿರುವೆ ಎಂದು ಕೇಳಲೂ ಆಗದ ಸ್ಥಿತಿ... ,ತಂದೆಗೆ ಮಗನೇ..... ಎನ್ನಲಾಗದ ಸ್ಥಿತಿ.... ಅಂದು ಅಷ್ಟು ಕಷ್ಟಪಟ್ಟದ್ದಕ್ಕೆ ಈಗ ವೃದ್ಧರಿಗೆ ಸಿಗುವ "ಪ್ರತಿಫಲ".

ಏನ್ರಿ ಇದು ಸಮಾಜ.?.ಒಂದು ತಂದೆ ಒಂದು ತಾಯಿಯನ್ನು ನೋಡಿಕೊಳ್ಳಲಾಗದವನೂ ಈ ಭೂಮಿಯ ಮೇಲೆ ಇದ್ದಾನಲ್ಲಾ. ಆತ ಎಂತಹ ಮೂರ್ಖ.ಅದೇ ಹಾದಿಯು ಮುಂದೆ ಈತನಿಗೂ ಲಭ್ಯವಾಗಬೆಕು ಆಗ ಮಾತ್ರಾ ತನ್ನ ತಪ್ಪಿನ ಅರಿವಾದೀತು. ಅಲ್ಲಿ A C ಕಚೇರಿಯೊಳಗೆ ಕುಳಿತು ಲಕ್ಷಗಟ್ಟಲೆ ಸಂಪಾದಿಸುವ ಈ "ಮೂರ್ಖ" ಇಲ್ಲಿ ತನ್ನ ತಂದೆ ತಾಯಿ ಹರಕಲು ಮನೆಯಲ್ಲಿ ಪರದಾಡುತ್ತಿರುತಾರಲ್ಲಾ ಆತನಿಗೆ ನಿಜವಾಗಲೂ ಮನುಷ್ಯತ್ವ ಇದೆಯಾ?. ಒಂದು ವೇಳೆ ಅಂದು ಅಷ್ಟು ಓದಿಸದೇ ಇರುತ್ತಿದ್ದರೆ ಇಂದು ಉನ್ನತಿಗೆರುವ ಅವಕಾಶವಿತ್ತಾ?.ಒಂದು ರೀತಿಯಲ್ಲಿ ಓದಿಸಿದ್ದೇ ತಪ್ಪು.

ಇದು ಒಬ್ಬನ ಕತೆಯಾಗಿರದು.ಇಂತಹ ಹಲವಾರು ಪ್ರಕರಣಗಳು ನಮ್ಮ ಮುಂದೆ ಇರಬಹುದು. ಅಲ್ಲಿ ಇಲ್ಲಿ ಸುತ್ತಿದಾಗ ಇಂತಹ ಪ್ರಕರಣಗಳು ನಮ್ಮ ಮುಂದೆ ಕಾಣಸಿಗುತ್ತವೆ ಆಗಿನ ತಕ್ಷಣದ ಅಭಿಪ್ರಾಯವನ್ನು ದಾಖಲಿಸಿಡಬೆಕು ಅಂದುಕೊಂಡಿದ್ದೇನೆ.

1 ಕಾಮೆಂಟ್‌:

Harisha - ಹರೀಶ ಹೇಳಿದರು...

ಈಗ ಇಂಥ ಮಕ್ಕಳೇ ಇರುವುದು ವಿಷಾದನೀಯ...