22 ಸೆಪ್ಟೆಂಬರ್ 2008

ಗಣಿ .. ಗನಿ..

ಗಣಿ ಕಾಟ ರಾಜ್ಯದ ಎಲ್ಲೆಲ್ಲೂ ನಡೆಯುತ್ತಿದೆ.ಅಮೂಲ್ಯ ಸಂಪತ್ತುಗಳು ನಾಶವಾಗುತ್ತಿವೆ.ಪರಿಹಾರವೇ ಕಾಣದೆ ದಾರಿ ಕಾಣದಾಗಿದೆ... ಅದಕ್ಕೆ ತಕ್ಕ ನಮ್ಮ ವ್ಯವಸ್ಥೆಗಳು.ಒಬ್ಬ ಉತ್ತಮ ಅಧಿಕಾರಿಯಿದ್ದರೆ ಆತನಿಗೆ ಎತ್ತಂಗಡಿ ಕಾದಿಟ್ಟ ಬುತ್ತಿ.ಯಾವಾಗಬೆಕಾದರೂ ಎಲ್ಲಿಗೆ ಬೇಕಾದರೂ. ಈ ದೇಶ ಹೀಗಾದರೆ ಉದ್ದಾರವಾದಿತಾ ಅಮ್ತ ಮಿತ್ರರೊಂದಿಗೆ ಹರಟುವಾಗ ಅದೆಷ್ಟೋ ಬಾರಿ ಹೇಳಿದ್ದಕ್ಕೆ ಪುಷ್ಟಿ ನೀಡಿದೆ.

ಅತ್ತ ಬಳ್ಳಾರಿಯಲ್ಲಿ ಅವ್ಯಾಹತವಾಗಿ ಗಣಿಗಾರಿಕೆ ನಡೆಯುತ್ತಿದ್ದರೆ ಇತ್ತ ಕರಾವಳಿ ಜಿಲ್ಲೆಯಲ್ಲಿ ಕಲ್ಲಿನ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಅದರಲ್ಲಿ ಬಹುತೇಕವುಗಳು ಅಕ್ರಮವಾಗಿ ನಡೆಸಲಾಗುತ್ತಿದೆ. ಇದನ್ನು ರೈಡ್ ಮಾಡಿದ ದಿಟ್ಟ ಅಧಿಕಾರಿಗಳಿಗೆ ವರ್ಗಾವಣೆ ಕಾದುನಿಂತರೆ ಗಣಿಗಾರಿಕೆಯನ್ನು ನಿಲ್ಲಿಸಬೇಕಾದ ಭೂವಿಜ್ಞಾನ ಇಲಾಖೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದೆ.ಇದಕ್ಕೆ ಒಂದು ಉದಾಹಣೆ ಪುತ್ತೂರು ಸಮೀಪದ ಕಬಕದಲ್ಲಿದೆ. ಈ ಬಗ್ಗೆ ಅಲ್ಲಿಗೆ ಹೋಗಿದ್ದಾಗ ಸಿಕ್ಕ ಮಾಹಿತಿ ಇಲ್ಲಿದೆ

ಯಾವುದೇ ಒಂದು ಬಂಡೆಯನ್ನು ಅಥವಾ ಗಣಿಗಾರಿಕೆ ನಡೆಸಲು ಅಲ್ಲಿ ನುರಿತ ಹಾಗೂ ಅದಕ್ಕೆ ಸಂಬಂಧಿಸಿದ ಇಲಾಖೆಯಿಂದ ತರಬೇತಾದ ಕಾರ್ಮಿಕರೇ ದುಡಿಯಬೇಕು. ಆದರೆ ಅಲ್ಲೆಲ್ಲೂ ಅಂತಹ ಕಾರ್ಮಿಕರು ಕಾಣಿಸುವುದೇಯಿಲ್ಲ.ಮಾತ್ರವಲ್ಲ ಗಣಿ ಮತ್ತು ಭೂವಿಜ್ಞಾನ ಇಲಾಖೆ ಇಂತಹ ಗಣಿಗಾರಿಕೆಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾದಬೇಕು. ಆದರೆ ದುರಂತವೆಂದರೆ ಅಲ್ಲಿಗೆ ಅವರಾರೂ ಬಾರದೆ ಅನುಮತಿ ನೀಡಿರುತ್ತಾರೆ. ಹಾಗೆ ಅನುಮತಿ ನೀಡುವ ಮೊದಲು ಗಣಿಗಾರಿಕೆಯ 200 ಮೀಟರ್ ದುರ ಯಾವುದೇ ಮನೆಗಳು, ರಸ್ತೆಗಳು ,ಶಾಲೆಳನ್ನು ಗಮನಿಸಬೇಕು ಆದರೆ ಇಂದು ಅಂತಹ ಕಾನೂನುಗಳೆಲ್ಲವೂ ಗಾಳಿಗೆ ತೂರಲಾಗಿದೆ. ಇಂತಹುದೇ ಘಟನೆ ಪುತ್ತೂರಿನ ಕಬಕದಲ್ಲಿಒ ನಡೆದಿದೆ. ಅಲ್ಲಿನ ಕಾಯರ್ ಬಳ್ಳಿ ಎಂಬ ಗುಡ್ಡದಲ್ಲಿ ಕಳೆದ 15 ವರ್ಷಗಳಿಂದ ನಿರಂತರವಾಗಿ ಗಣಿಗಾರಿಕೆ ನಡೆಯುತ್ತಿದೆ. ಯಾವೊಬ್ಬ ಅಧಿಕಾರಿಯೂ ಇಲ್ಲಿನ ಮನೆಗಳ ಬಗ್ಗೆ ಗಮನಹರಿಸಿಲ್ಲ. ಇತ್ತೀಚೆಗೆ ಸಾರ್ವಜನಿಕರ ದೂರುಗಳನ್ನು ಗಮನಿಸಿದ ಪುತ್ತೂರು ತಹಶೀಲ್ದಾರರು ಇಂತಹ ಗಣಿಕಾರಿಕೆಗಳ ಪ್ರದೇಶಕ್ಕೆ ದಾಳಿ ನಡೆಸಿದ್ದರು. ಆದರೆ ದಾಳಿ ನಡೆಸಿದ ಬಳಿಕ ರಾಜಕೀಯ ಹಾಗೂ ಹಣ ಬಲದಿಂದ ಮತ್ತೆ ಗಣಿಗಾರಿಕೆಯಲ್ಲಿ ತೊಡಗಿಕೊಂಡಿರುವುದು ವಿಪರ್ಯಾಸ. ತಹಶೀಲ್ದಾರರು ದಾಳಿ ನಡೆಸಿದ ಪರಿಶೀಲಿಸಿದಾಗ ಕೆವಲ 50 ಸೆಂಟ್ಸ್ ಗೆ ಅನುಮತಿ ಪಡೆದು 1.87 ಎಕ್ರೆ ಪ್ರದೇಶದಲ್ಲಿ ಕಲ್ಲಿನ ಗಣಿಗಾರಿಕೆ ಮಾಡುತ್ತಿರುವುದು ಮತ್ತು ಇಂತಹ ಸ್ಫೋಟದಿಂದ ಸಮೀಪದ ಮನೆಗಳಿಗೆ ಹಾನಿಯಾದುದನ್ನು ಗಮನಿಸಿದ ತಹಶೀಲ್ದಾರರು ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಿದ್ದರು. ಹೀಗಾಗಿ ಮತ್ತೆ ಗಣಿ ಇಲಾಖೆಯು ತನಿಖೆ ನಡೆಸಿ ಮುಂದೆ ಪ್ರಬಲ ಸ್ಫೋಟಕ ಬಳಸದೆ ಕಂಟ್ರೋಲ್ಡ್ ಬ್ಲಾಸ್ಟ್ ಮಾಡುವಂತೆ ಗಣಿದಣಿಗಳಿಗೆ ನಿರ್ದೇಶನ ಹಾಗೂ ಅನುಮತಿಯನ್ನೂ ನೀಡಿತು.ಆದರೆ ಸಾಮಾನ್ಯ ಜನರಿಗೆ ಈ ಬ್ಲಾಸ್ಟ್ ಅರ್ಥವಾಗುವುದು ಹೇಗೆ ಎನ್ನುವುದರ ಬಗ್ಗೆ ವಿವರವೇ ಇಲ್ಲ.


ಪುತ್ತೂರಿನ ಕಬಕದ ಸರ್ವೆ ನಂಬ್ರ 26-1A ಯಲ್ಲಿ ಈ ಗಣಿಗಾರಿಕೆಯನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಪಂಚಾಯತ್ ಗೂ ಮಾಹಿತಿಯಿದ್ದರೂ ಜನರ ಮನವಿಗೆ ಸ್ಪಂದಿಸುವ ಗೋಜಿಗೆ ಹೋಗಿಲ್ಲ. ಅದಲ್ಲದೆ ಇಲ್ಲಿನ ಗಣಿಗಾರಿಕೆಯೊಂದಿಗೆ ಕ್ರಶರ್ ಹುಡಿ ಅಣ್ದರೆ ಕಲ್ಲಿನ ಹುಡಿಯನ್ನೂ ಮಾಡಲಾಗುತ್ತದೆ.ಇದರಿಂದ ಅಪರಿಮಿತವಾದ ಕಲ್ಲಿನ ಧೂಳು ಊರಿನ ಸುತ್ತೆಲ್ಲಾ ಹಬ್ಬುತ್ತದೆ.ಕಾನೂನು ಪ್ರಕಾರ ಈ ಕ್ರಶರ್ ತಯಾರಿಕಾ ಘಟಕಕ್ಕೆ ೯ ಮೀಟರ್ ಎತ್ತರದ ಗೋಡೆಯನ್ನೂ ಕಟ್ಟಬೇಕು ಆದರೆ ಅದನ್ನೂ ಗಾಳಿಗೆ ತೂರಲಾಗಿದೆ.ಆದರೆ ಗನಿ ಮತ್ತು ಭೂವಿಜ್ಞಾನ ಇಲಾಖೆಯು 1998 ರಲ್ಲಿ ಹೇಳಿದ ಪ್ರಕಾರ ಕರ್ನಾಟಕ ಉಪ ಖಲಿಜ 94 ರ ನಿಯಮ ಪ್ರಕಾರ ಸ್ಫೋಟಕಗಳನ್ನು ಉಪಯೋಗಿಸದೇ ಕಲ್ಲುಗಣಿಗಳ ಕಾರ್ಯವನ್ನು ಮಾಡಬೇಕಲ್ಲದೆ ಸಾರ್ವಜನಿಕರ ಆಕ್ಷೇಪಣೆಗಳಿದ್ದಲ್ಲಿ ಕಲ್ಲಗಣಿಯನ್ನು ನಿಷೇಧಿಸಬೇಕು ಆದರೆ ಇದೇ ಇಲಾಖೆಯು 2006 ರಲ್ಲಿ ಹೇಳುತ್ತದೆ ಕಲ್ಲುಗಣಿಯನ್ನು ನೆಲಮಿತಿಯಿಂದ 6 ಮೀಟರ್ ಆಳ ಮತ್ತು ಸಾರ್ವಜನಿಕ ರೈಲ್ವೇ ಕಟ್ಟಡಗಳು ಇತ್ಯಾದಿಗಳ ರಚನೆಗಳೊಂದಿಗೆ ಇಲದೇ ಇದ್ದಲ್ಲಿ ಕಲ್ಲುಗಣಿಯನ್ನು ಸ್ಫೋಟಿಸಬಹುದು ಎನ್ನುತ್ತದೆ.ಹೀಗಾಗಿ ಒಂದು ದ್ಚಂದದಲ್ಲಿರುವ್ ಈ ಇಲಾಖೆಯ ಬಗ್ಗೆಯೇ ಸಂಸಯ ಹಿಟ್ಟಿಸುತ್ತದೆ.ಇಂತಹುಗಳ ಮಧ್ಯೆಯೇ ಇಂದಿಗೂ ಕಬಕದಲ್ಲಿ ಸ್ಫೋಟ ನಡೆಸಲಾಗುತ್ತಿದೆ. ಇದರಿಂದಾಗಿ ಇಲ್ಲಿನ ಅನೆಕ ಮನೆಗಳು, ಅಂಗಡಿಗಳ ಗೋಡೆಗಳು ಬಿರುಕು ಬಿಟ್ಟಿವೆ, ಕಲ್ಲಿನ ಧೂಳು ಮನೆಯಲ್ಲೆಲ್ಲಾ ಕಾಣಿಸಿಕೊಳ್ಳುತ್ತಿದೆ, ಮನೆಯಲ್ಲಿರುವ ಮಕ್ಕಳು , ಹೆಂಗಸರು ಈ ಸ್ಫೋಟದ ಸಂದರ್ಭದಲ್ಲಿ ಬೆಚ್ಚಿಬೀಳುತ್ತಾರೆ. ಆದರೂ ಈ ಜನರ ಸಮಸ್ಯೆಯನ್ನು ಕೇಳುವವರೇ ಇಲ್ಲದಂತಾಗಿದೆ. ಈ ಜನರ ಸಮಸ್ಯೆಯನ್ನು ಕೇಳುವ ಅಧಿಕಾರಿಗಳು ಬಂದರೆ ವರ್ಗಾವಣೆ ತಕ್ಷಣವೇ ನಡೆಯುತ್ತದೆ.

ಹಾಗೆಂದು ಇವರ ನಿಲುವು ಇದು...

ಗಣಿಗಾರಿಕೆಯೇ ಬೇಡ ಅಂತಲ್ಲ ಎಲ್ಲವೂ ನಿಯಂತ್ರಣದಲ್ಲಿ ನಡೆಯಲಿ

ಕಾಮೆಂಟ್‌ಗಳಿಲ್ಲ: