18 ಆಗಸ್ಟ್ 2008

ಹೀಗೊಬ್ಬ ಅಜ್ಜ...



ಕ್ಯಾಮಾರ ಕಂಡರೆ ಯಾರು ತಾನೆ ಎಲರ್ಟ್ ಆಗಲ್ಲ ಹೇಳಿ.ನಾಳೆ ಪೇಪರಲ್ಲಿ ಟೀವಿಯಲ್ಲಿ ಬರತ್ತೆ ಅಂತ ಹೇಳಿ ಮುಂದೆ ಬರುತ್ತಾರೆ.ಅಂತಹುದೇ ಒಂದು ಘಟನೆ ನಡೆಯಿತು. ಆತ 94ರ ಮುದುಕ ಅವನ ಬಳಿಗೆ ಒಂದು ವರದಿಯನ್ನು ಮಾಡುವುದಕ್ಕಾಗಿ ತೆರಳಿದ್ದೆವು. ಆತ ಯೋಗಿ, ಸಾಧು ಅಂತಲ್ಲೇ ನಮಗೆ ಬಂದ ಮಾಹಿತಿ ಆದರೆ ೯೪ರ ಮುದುಕನಿಗೂ ಕ್ಯಾಮಾರ ಕಂಡಾಗ ಯೋಗಿ ಅಂತ ಅನ್ನಿಸಲೇ ಇಲ್ಲ. ಪಕ್ಕಾ ರಾಜಕಾರಣಿಗಳ ಥರಾನೇ ಫೋಸು ನೀಡಿದ. ಬಟ್ಟೆ ಬೇರೆ ಹಾಕಿಕೊಂಡ. ಮುಂದೆ ನೋಡಿ....

ಹೊಟ್ಟೆ ಹೊರೆಯಲು ವಿವಿಧ ಅವತಾರಗಳನ್ನು ಮಾಡುವುದು ನೋಡಿದ್ದೇವೆ. ಅದಕ್ಕಾಗಿ ಜನರನ್ನು ಮೋಸಗೊಳಿಸಲೂ ಸಿದ್ಧರಿರುತ್ತಾರೆ. ಆದರೆ ಇಲ್ಲೊಬ್ಬ ಅಜ್ಜ ಹೊಟ್ಟೆ ಹೊರೆಯಲು ಆಧ್ಯಾತ್ಮದ ಮೊರೆ ಹೋಗಿದ್ದಾರೆ. ಓಂ ನಮ: ಶಿವಾಯ ಅವರ ಮಂತ್ರ.ಹತ್ತಿರದ ಮಠ ನೀಡುವ ಆಹಾರವೇ ಜೀವನೋಪಾಯಕ್ಕೆ ದಾರಿ. ಇದು ಒಂದೆರಡು ವರ್ಷದ ಪುರಾಣವಲ್ಲ ಬರೊಬ್ಬರಿ ೬೪ ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಗತಿ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯಲ್ಲಿರುವ ಅಗ್ರಹಾರ ದೇವಸ್ಥಾನದಲ್ಲಿರುವ ಕುಮಾರಸ್ವಾಮಿ ಎಂಬ 94 ವೃದ್ಧನ ಕತೆ. ಅಗ್ರಹಾರದಲ್ಲಿ ಹಿರಿಯ ಸ್ವಾಮೀಜಿಗಳ ಬೃಂದಾವನವೂ ಇದೆ. ಅಲ್ಲೇ ಸನಿಹದಲ್ಲಿ ವಾಸವಾಗಿರುವ ವ್ಯಕ್ತಿಯೇ ಕುಮಾರಸ್ವಾಮಿ.ಇವರು ಮೂಲತ: ಕೇರಳದ ಕೊಚ್ಚಿ ಪ್ರದೇಶದವರು. ತಮ್ಮ 16 ನೇ ವಯಸ್ಸಿನಲ್ಲಿ ಮನೆಯನ್ನು ತೊರೆದು ಪಳನಿ ದೇವಾಲಯಕ್ಕೆ ಏಕಾಂಗಿಯಾಗಿ ತೆರಳಿದರು. ಅಲ್ಲಿದ ನೇಪಾಳಕ್ಕೆ ಹೋದರು. ಬಳಿಕ ಅಲ್ಲಿ ಯುದ್ಧ ಶುರುವಾದಾಗಾ ಹೊರಟೆ ಎನ್ನುವ ಕುಮಾಸ್ವಾಮಿ ನಂತರ ಬಂದದ್ದು ಕೊಲ್ಲೂರು ಅಲ್ಲಿಂದ ಮುಂದಿನ ಪಯಣವೇ ಸುಬ್ರಹ್ಮಣ್ಯದ ಅಗ್ರಹಾರ ದೇವಸ್ಥಾನ. ಸುಬ್ರಹ್ಮಣಕ್ಕೆ ಬಂದು ಇಂದಿಗೆ 64 ವರ್ಷಗಳಾದವು ಎನ್ನುವ ಈ ಅಜ್ಜ ನನಗೆ ಮನೆಗೆ ಹೋಗಲು ಮನಸ್ಸಿಲ್ಲ ಇಲ್ಲೇ ವಾಸವಾಗಿರುತ್ತೇನೆ ಎನ್ನುತ್ತಾನೆ. ಬೆಳಗ್ಗೆ ಎದ್ದು ದೇವರಿಗೆ ಹೂ ತುಳಸಿಯನ್ನು ಸಂಗ್ರಹಿಸಿದ ಬಳಿಕ ಅಲ್ಲಿ ಹಾಗೂ ಸನಿಹದ ಮನೆಯಲ್ಲಿ ಸಿಗುವ ಒಂದಿಷ್ಟು ಕೂಳನ್ನು ಪಡೆಯುತ್ತಾರೆ.ನಂತರ ಓಂ ನಮ: ಶಿವಾಯ ಜಪ ಮಾಡುತ್ತಾರೆ.

ಈ ಅಜ್ಜ ಸೂರಿನ ಎಲ್ಲರಿಗೂ ಪರಿಚಿತ. ಈ ಅಜ್ಜನ ಬಗ್ಗೆ ಆಧ್ಯಾತ್ಮಿಕ ಜನರನ್ನು ಕೇಳಿದರೆ ಮನುಷ್ಯನಿಗೆ 5 ಕೋಶಗಳು ಅನ್ನಮಯ , ಪ್ರಾಣಮಯ, ಜ್ಞಾನಮಯ, ಹೀಗೆ ಕೋಶಗಳು ಎಲ್ಲರಿಗೂ ಲಭ್ಯವಾಗುತ್ತದೆ. ಆದರೆ ಈ ಅಜ್ಜನಿಗೆ 5 ನೇ ಕೋಶ ಅಂದರೆ ಆನಂದಮಯ ಪ್ರಾಪ್ತಿಯಾಗಿದೆ ಎನ್ನುತ್ತಾರೆ. ಆದರೆ ನಿಜ ಸಂಗತಿಯನ್ನು ಏನು ಎಂಬುದರ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ.ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಇಲ್ಲಿ ಆಧ್ಯಾತ್ಮದ ವೈಬ್ರೇಶನ್ ಇದೆ ಹಾಗಾಗಿ ಈ ಅಜ್ಜನಿಗೆ ಏನೋ ಒಂದು ಸಿದ್ಧಿಸಿದೆ ಅಂತ ಹೇಳುತ್ತಾರೆ. ನಿಜಕ್ಕೂ ಸಿದ್ಧಿಸಿದೆಯೋ ಅಂತ ಗೊತ್ತಿಲ್ಲ.

ಅಂತೂ ಕಳೆದ 64 ವರ್ಷಗಳಿಂದ ಇಲ್ಲೇ ವಾಸವಾಗಿರುವ ಈತನ ಮುಂದೆ ನಮ್ಮ ಕ್ಯಾಮಾರಾವು ಬೆಳಕು ಚೆಲ್ಲಬೇಕಿತ್ತಾ ಅಂತ ಮತ್ತೆ ಅನ್ನಿಸಿತು. ಆದರೆ ಇನ್ನೊಂದು ರೀತಿಯಲ್ಲಿ ಬೇಕು ಅಂತಲೂ ಅನಿಸಿತು.ಜನ ಹೇಗೆಲ್ಲಾ ಮೊಸ ಮಾಡಿ ತಮ್ಮ ಜೀವನೋಪಾಯವನ್ನು ಕಂಡುಕೊಳ್ಳುತ್ತಾರೆ. ಕುಳಿತಲ್ಲಿಗೇ ಹೊಟ್ಟೆ ಹೊರೆಯುತ್ತಾರೆ. ಇದು ಜಗತ್ತಿಗೆ ಅರಿವಾಗಬೇಕು. ಆದರೆ ನಾವು ಯಾವಾಗ ಸ್ವಾಮಿ ಇಂತಹ ಮೋಸಗಳಿಂದ ಹೊರಬರೋದು. ಅಲ್ಲಾ ಜನಾ ಇನ್ನು ಕೂಡಾ ಅದು ಯಾವುದೋ ಸಿದ್ದಿ ಅಂತೆಲ್ಲಾ ನಂಬಿಕೊಂಡು ಅವರನ್ನು "ಪೂಜೆ" ಮಾಡುತ್ತಾರಲ್ಲಾ ಎನಿದು ಅವಸ್ಥೆ?.

ಕಾಮೆಂಟ್‌ಗಳಿಲ್ಲ: