22 ಆಗಸ್ಟ್ 2008

ಒಂದು Accident....






ಘಟನೆಗಳು ಹೇಗೆಲ್ಲಾ ನಡೆಯಬಹುದು.?.ಬಹುಶ: ಅದು ಕಲ್ಪನೆಗೂ ನಿಲುಕದ್ದು. ಹಾಗಾಗೆ ಅದು "ಎಕ್ಸಿಡೆಂಡ್..."

ಅಂತದ್ದೆ ಒಂದು ಘಟನೆ ಇಂದು ಬೆಳಗ್ಗೆ ನಡೆಯಿತು.ಅದು ರಾಷ್ಟ್ರೀಯ ಹೆದ್ದಾರಿ 48.ಬಹಳಷ್ಟು ವಾಹನಗಳು ಓಡಾಡುವ ಮಂಗಳೂರು- ಬೆಂಗಳೂರು ರಸ್ತೆ. ಗುಂಡ್ಯದಿಂದ ಮುಂದೆ ನೆಲ್ಯಾಡಿಯಿಂದ ಕೊಂಚ ಹಿಂದೆ ಪೆರಿಯಶಾಂತಿ ಬಳಿಯ ವಾಲ್ತಾಜೆ ಎಂಬ ಪ್ರದೇಶ. ಅಲ್ಲಿ ಒಂದು ಅಪಘಾತ ನಡೆದಿತ್ತು.ಹೇಳುವುದಕ್ಕೆ ಮಾಮೂಲು ಅಪಘಾತ.ಆದರೆ ಅದರಾಚೆಗೆ ಇರುವುದು ಗಂಭೀರದ,ಆತಂಕದ ಸಂಗತಿ.ಕಾರು ಮತ್ತು ಗ್ಯಾಸ್ ಟ್ಯಾಂಕರ ಮಧ್ಯೆ ಅಪಘಾತ ನಡೆದು ಗ್ಯಾಸ್ ಸೋರಿಕೆಯಾಗಿ ಅಲ್ಲಿ ಬೆಂಕಿ ಹತ್ತಿಕೊಂಡು ಉರಿಯುತ್ತಿತ್ತು.ಅದು ಆತಂಕಕ್ಕೆ ಕಾರಣವಾಗಿತ್ತು. ಜನ ಬಂದು ನೋಡುವ ತವಕದಲ್ಲಿದ್ದರು. ಆದರೆ ಸುರಕ್ಷತೆಗಾಗಿ ಅವರನ್ನು ಬಿಡುತ್ತಿರಲಿಲ್ಲ.

ಸುಖ ನಿದ್ರೆಯಲ್ಲಿರುವಾಗಲೇ ಮೊಬೈಲ್ ರಿಂಗಿಣಿಸಿತು.ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ತೆರಳಿದಾಗ ಘಟನೆಯ ನಿಜ ಸ್ವರೂಪ ಸಿಕ್ಕಿತು. ಅಗ್ನಿಶಾಮಕ ದಳವು ಸವಾಲನ್ನು ಕೈಗೆ ತೆಗೆದುಕೊಂಡಿತ್ತು. ಸುಮಾರು 10 ಗಂಟೆಯ ವೇಳೆಗೆ ಅಲ್ಲಿ ನಿಂತಿದ್ದ ಸಿಬ್ಬಂದಿ, ಇನ್ನು ಹೆದರಿಕೆಯಿಲ್ಲ ನೀವು ಹತ್ತಿರಕ್ಕೆ ಹೋಗಬಹುದು. ಸ್ಫೋಟ ಆಗುವ ಸಂಭವವಿಲ್ಲ. ಆದರೆ ರಿಸ್ಕ್ ಇದೆ, ನಿಮಗೆ ಧೈರ್ಯವಿದ್ದರೆ ಹೋಗಿ ಎಂದ. ಕೂಡಲೆ ನಮ್ಮ ಕೈಗೆ ರಿಸ್ಕ್ ತೆಗೆದುಕೊಂಡು ಅಪಘಾತವಾದ ಸ್ಥಳಕ್ಕೆ ಅಂದರೆ ಟ್ಯಾಂಕರ್ ಉರಿಯುತ್ತಿರುವ ಪ್ರದೇಶಕ್ಕೆ ಹೋಗಿ ಚಿತ್ರ ತೆಗೆಯಲಾಯಿತು.

ಅಗ್ನಿ ಶಾಮಕದಳದ ಸಿಬ್ಬಂದಿಗಳು ಅವಿರತವಾದ ಶ್ರಮ ಮೆಚ್ಚುಗೆಗೆ ಪಾತ್ರವಾಯಿತು. ಒಂದು ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಅಲ್ಲಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸುತ್ತಿದ್ದರೆ ಇನ್ನೂ ಹೆಚ್ಚಿನ ಅಪಘಾತ , ಆತಂಕವಾಗುತ್ತಿತ್ತು.ಏಕೆಂದರೆ ಗ್ಯಾಸ್ ಸೋರಿಕೆ ಪರಿಸರದಲ್ಲಾಗುತ್ತಿತ್ತು. ಇದರಿಂದಾಗಿ ಪರಿಸರದಲ್ಲೆಲ್ಲಾ ಗ್ಯಾಸ್ ಹರಡಿ ಎಲ್ಲೋ ಒಂದೆಡೆ ಒಂದು ಕಿಡಿ ಬೆಂಕಿ ಬಿದ್ದರೂ ಊರಿಡೀ ಬೆಂಕಿ ಹಬ್ಬುವ ಸಾಧ್ಯತೆಯಿತ್ತು. ಹಾಗಾಗಿ ಅಲ್ಲಿ ಅಗ್ನಿಶಾಮಕ ದಳದ ಕಾರ್ಯ ಉತ್ತಮವಾಗಿತ್ತು. ಮಾತ್ರವಲ್ಲ ಸಿಬ್ಬಂದಿಗಳು ಅಲ್ಲಿ ಟ್ಯಾಂಕರ್ ಗೆ ನೀರನ್ನು ಹಾಕಿ ಹೊರಗಿನಿಂದ ತಂಪಾಗಿಸುತ್ತಿದ್ದರು.ಇದರಿಂದ ಟ್ಯಾಂಕರ್ ಸ್ಫೋಟವನ್ನು ತಡೆಯಲಾಗಿತ್ತು.ಒಟ್ಟಿನಲ್ಲಿ ಅಗ್ನಿಶಾಮಕ ದಳದ ಅವಿರತ ಶ್ರಮದಿಂದಾಗಿ ಬೆಳಗ್ಗೆ 6 ಗಂಟೆಯಿಂದ ಆರಂಭಗೊಂಡ ಬೆಂಕಿಯ ಜ್ವಾಲೆ ಸಂಜೆ 6 ಗಂಟೆಯ ವೇಳೆಗೆ ಸಂಪೂರ್ಣ ಕಡಿಮೆಗೊಂಡು ಆತಂಕವನ್ನು ದೂರ ಮಾಡಿತು. ಇಂತಹ ಒಂದು ರೋಚಕ ಮತ್ತು ಅಪರೂಪವಾದ ಸುದ್ದಿ ಮಾಡಲು ಖುಷಿಯಾಗಿತ್ತು.

ಆದರೆ ಆ ಸ್ಥಳದಲ್ಲಿರುವ ಪೊಲೀಸರು ಮಾತ್ರಾ ಮನುಷ್ಯತ್ವವಿಲ್ಲದವರಂತೆ ಇರುತ್ತಾರೆ ಎನ್ನುವುದು ಇಂದು ಮತ್ತೊಮ್ಮೆ ಸಾಬೀತಾಗಿತ್ತು. ಅವರು ನಿಜಕ್ಕೂ ಶತ ಮೂರ್ಖರು ಮತ್ತು ಅಹಂ ಭಾವದ ಪರಮಾವಧಿಯ ಪ್ರತಿರೂಪವಾಗಿದ್ದರು. ಇಂತಹ ಸಂದರ್ಭದಲ್ಲಿ ಪೊಲೀಸರು ಜನಸಾಮಾನ್ಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎನ್ನುವುದರ ಪಾಠ ಅವರಿಗೆ ಬೇಕು.


ಕಾಮೆಂಟ್‌ಗಳಿಲ್ಲ: