24 ನವೆಂಬರ್ 2010

"ಜಾತೀ"ಯತೆ. . !

* ಒಳಗೆ ಬನ್ನಿ . ., ಆದರೆ . . ನಿಮ್ಮ ಜಾತಿ ಯಾವುದು . .?,

* ಅದೊಂದು ಸರಕಾರೀ ಅರ್ಜಿ ಫಾರ್ಮ್.ಅದರಲ್ಲಿ ನಿಮ್ಮ ಹೆಸರು , ನಿಮ್ಮ ಭಾಷೆ , ನಿಮ್ ರಾಜ್ಯ, ನಿಮ್ಮ ದೇಶ , ನಿಮ್ಮ ರಾಷ್ಟ್ರೀಯತೆ .. . ಇದೆಲ್ಲಾ ಜಾತಕದ ಬಳಿಕ ಕಟ್ಟ ಕಡೆಯ ಪ್ರಶ್ನೆ ನಿಮ್ಮ “ಜಾತಿ . . .”?.

* ಅಬ್ಬಾ . . !. ಅವ ನಮ್ಮವ.. . ! ಇವನ್ಯಾರವ. . ?. ಅವನೇತಕೆ ಇಲ್ಲಿ . . ?

ನಿಮ್ಮದು ಬ್ರಾಹ್ಮಣ ಸಮಾಜವಾದರೆ ಅದಕ್ಕೊಬ್ಬ ಸ್ವಾಮೀಜಿ , ಲಿಂಗಾಯತರಾದರೆ ಅದಕ್ಕೆ ಇನ್ನೊಬ್ಬ , ಗೌಡರಾದರೆ ಅಲ್ಲಿ ಮತ್ತೊಬ್ಬರು . . . . . ಹೀಗೇ ಜಾತಿಗೊಬ್ಬ ಸ್ವಾಮೀಜಿ. ಆ ಜಾತಿಯನ್ನು ಹಿಡಿದಿಟ್ಟುಕೊಳ್ಳುವುದೇ ಆ ಸ್ವಾಮೀಜಿಯ ಕಾಯಕ. ಅಷ್ಟೇ ಅಲ್ಲ , ಆ ಜಾತಿಯೊಳಗೆ ಇನ್ನೂ ಹಲವಾರು ವಿಘಟನೆ. ಯಾವುದರಲ್ಲಿ ಇಲ್ಲ ನೋಡಿ , ಬ್ರಾಹ್ಮಣರೊಳಗೆ ಒಂದಷ್ಟು , ಲಿಂಗಾಯತರಲ್ಲಿ ಇನ್ನೂ ಹಲವಾರು, ಗೌಡರಲ್ಲಿ ಹಲವು ಬಗೆ , ಶೆಟ್ಟರಲ್ಲಿ ಇನ್ನೂ ಒಂದೆರಡು ಪಂಗಡ , ಅದೂ ಅಲ್ಲ ಮುಸಲ್ಮಾನರಲ್ಲಿ , ಕ್ರೈಸ್ತರಲ್ಲೂ ಬಗೆ ಬಗೆ . . !.ಇದೆಕ್ಕೆಲ್ಲಾ ಒಬ್ಬೊಬ್ಬ , ಎರಡೆರಡು ಸ್ವಾಮೀಜಿಗಳು.ಅವರೊಳಗೆ ಪ್ಯಪೋಟಿ . .!. ಒಂದು ಜಾತಿಯನ್ನು ನೋಡಿದರೆ ಇನ್ನೊಂದಕ್ಕೆ ಕಸಿವಿಸಿ , ಆ ಜಾತಿಯೊಳಗೆ ಡಿಶುಂ ಡಿಶುಂ. ಜಾತಿಯ ಹುದ್ದೆಯಲ್ಲಿ ಮೇಲೇರಿದರೆ ಇನ್ನೊಬ್ಬನಿಗೆ ಕೆಂಗಣ್ಣು , ಆಗ ಅಲ್ಲೊಂದು ಹಾವು ಏಟಿ ಆಟ ಶುರು.

ಅಬ್ಬಾ. . . . ! ಏನೆಲ್ಲಾ ಇದೆ,ಇಲ್ಲಿ . . .!

ಹಾಗೊಂದು ವೇಳೆ ನಾವೇನಾದರೂ ಈ ಜಾತಿ ಸಂಘಟನೆಯ ಒತ್ತಡಕ್ಕೆ ಮಣಿಯದೇ ಅಥವಾ ಅವರ ನಿಲುವಿನ ವಿರೋಧ ಹೋದೆವೆಂದರೆ ಇನ್ನು ಕತೆಯೇ ಬೇರೆ. ಆಗ ನಾವು ಮಾತಾಡಿದ್ದೆಲ್ಲಾ ಇಶ್ಯು. ಹೇಳಿದ್ದೆಲ್ಲಾ ಸುದ್ದಿ. ಕೊನೆಗೆ ಆ ಜಾತಿ ಸಂಘಟನೆಯ ಸ್ವಾಮೀಜಿಗೇ ವಿರೋಧ ಎನ್ನುವಷ್ಟು ದೊಡ್ಡ ಸುದ್ದಿಯಾಗುತ್ತದೆ.ಒಂದರ್ಥದಲ್ಲಿ ಆ ಸಂಘಟನೆಯ ಅಡಿಯಾಳಾಗಿರಬೇಕೆಂಬುದು ಅದರ ಒಟ್ಟಾರೆ ಔಟ್‌ಲೈನ್. ಆದರೆ ಕೆಲವೊಮ್ಮೆ ಈ ಜಾತಿ ಸಂಘಟನೆಗಳೇ ಕೆಲವರಿಗೆ ಆಧಾರವಾಗುತ್ತದೆ.ಮೊನ್ನೆ ನೋಡಿ ಮುಖ್ಯಮಂತ್ರಿಗಳಿಗೆ ಆಧಾರವಾದ್ದು ಯಾವುದು?. ಹಾಗೆಯೇ ಅನೇಕರಿಗೆ ಇದೊಂದು ವರವೂ ಆಗಿಬಿಡುತ್ತದೆ.

ನಿಜಾರ್ಥದಲ್ಲಿ ಮನೆಯ ನಾಲ್ಕು ಗೋಡೆಯ ಹೊರಗೆ ಈ ಜಾತಿಯ ಗೋಡೆಯನ್ನು ಕೆಡವಿ ಹಾಕಬೇಕಾಗಿದೆ. ಯಾಕೆಂದರೆ ಈ ಜಾತಿ ಸಂಘಟನೆಗಳು ನಾಲ್ಕು ಗೋಡೆಯ ಹೊರಗಡೆ ಮಾಡಿದ್ದೇನೂ ಇಲ್ಲ. ಮಾಡೋದು ಇಲ್ಲ. ಅದಕ್ಕೊಂದು ಉದಾರಣೆ ಇದೆ. ನಮ್ಮೂರ ಪಕ್ಕದಲ್ಲಿ ಒಬ್ಬ ಯುವಕ ಇತ್ತೀಚೆಗೆ ಕೊಂಚ ಮಾನಸಿಕ ಅಸ್ವಸ್ಥನಾಗಿದ್ದಾನೆ. ಆತ ಈಗ ಪ್ರತಿದಿನ ಬೆಳಗ್ಗೆ ೭ ಗಂಟೆಗೆ ಪೇಟೆಗೆ ಬರುತ್ತಾನೆ.ದಿನವಿಡೀ ಪೇಟೆಯಲ್ಲಿ ಮೇಲೆ ಕೆಳಗೆ ಹೋಗುತ್ತಲೇ ಇರುತ್ತಾನೆ.ಸಿಕ್ಕಸಿಕ್ಕವರಲ್ಲಿ ಬೀಡಿ ಕೇಳುತ್ತಾನೆ.ರಾತ್ರಿಯಾದರೆ ಮತ್ತೆ ಮನೆಗೆ ಹೋಗುತ್ತಾನೆ ಇಲ್ಲವಾದರೆ ಅಲ್ಲೇ ಎಲ್ಲಾದರೂ ಇರುತ್ತಾನೆ.ಪೇಟೆಗೆ ಬರೋವರೆಲ್ಲಾ ಆತನನ್ನು ನೋಡಿಕೊಂಡು ಛೇ . . ! ಅಂತ ಮರುಕಪಡುತ್ತಾರೆ. ಇತ್ತೀಚೆಗೊಬ್ಬರು ಹೇಳಿದರು , ನಿಮ್ಮ ಜಾತಿಯವರು ಯಾರೂ ಇಲ್ಲವಾ?. ಅಂತ. ಆದರೂ ಜಾತಿ ಮುಖಂಡರು ನೋಡಿಲ್ಲ. ಪಾಪ ಆ ಯುವಕನ ಮನೆಯಲ್ಲಿರೋ ಆತನ ಹೆಂಡತಿಗೆ ವಿವಿದ ಜವಾಬ್ದಾರಿಗಳು. ನಾನೇನು ಮಾಡಲಿ ಅಂತ ಆ ಹೆಂಗಸು ಗೋಗರೆಯುತ್ತದೆ. ಆದರೆ ಯಾವೊಬ್ಬ ಜಾತಿ ಲೀಡರ್ ಆ ಮನೆಗೆ ಬೇಟಿ ಕೊಟ್ಟು ಪರಿಸ್ಥಿತಿ ಹೇಗಿದೆ, ನಾವೇನು ಮಾಡ್ಬೇಕು ಅಂತ ವಿಚಾರಿಸಿಲ್ಲ. ಆತ ದಿನವೂ ಹಾಗೆ ಪೇಟೆಗೆ ಬರುತ್ತಿದ್ದಾನೆ.ಇತ್ತೀಚೆಗೆ ನಾನೊಬ್ಬ ಕ್ರೈಸ್ತ ಮುಖಂಡರನ್ನು ಭೇಟಿಯಾಗಿ ನಮ್ಮೂರಿನ ಈ ಯುವಕನ ಬಗ್ಗೆ ಹೇಳಿದ್ದೆ.ಅವರು ತಕ್ಷಣವೇ ಒಪ್ಪಿಕೊಂಡರು. ಆ ನಂತರ ಹೇಳಿದರು , ನಮ್ಮ ಜಾತಿ ಬೇರೆ ಆ ಹುಡುಗನ ಜಾತಿ ಬೇರೆ.ಒಂದು ವೇಳೆ ನಾವೆಲ್ಲಾದರೂ ಚಿಕಿತ್ಸೆ ಕೊಡಿಸಿದರೆ ಅದೇ ಒಂದು ಇಶ್ಯು ಆದ್ರೆ..? ಸ್ವಲ್ಪ ದಿನ ನೋಡೋಣ ಅಂದ್ರು. ಹೀಗಾಗಿ ನಮ್ಮ ಪ್ರಯತ್ನ ಠುಸ್. ಆದ್ರೂ ನಿರೀಕ್ಷೆ ಠುಸ್ ಆಗಿಲ್ಲ.ಕಾದು ನೋಡಬೇಕು.ಇನ್ನು ನಾನೊಬ್ಬನೇ ಚಿಕಿತ್ಸೆ ನೀಡುವಷ್ಟು ಶ್ರೀಮಂತನಲ್ಲ.

ಹಾಗಾಗಲ್ಲ ಎಂದು ಧೈರ್ಯವಾಗಿ ಹೇಳಲು ನನಗೆ ಆಗಿಲ್ಲ.ಯಾಕೆಂದರೆ ನಾಳೆ ಇಡೀ ಜಾತಿ ಎದ್ದು ನಿಂತರೆ?. ಆ ಹುಡುಗನಿಗೆ ಚಿಕಿತ್ಸೆ ಆರಂಭವಾದ ಮೇಲೆ ಲಬೋ ಲಬೋ ಎಂದು ಈ ಮೌನವಾಗಿದ್ದವರೆಲ್ಲಾ ಎದ್ದು ನಿಂತರೆ?. ಹೀಗಾಗಿ ಸದ್ಯ ಸುಮ್ಮನಿದ್ದಾರೆ. ಹೀಗೇ ಮುಂದುವರಿದು ಆ ಹುಡುಗನ ಭವಿಷ್ಯವೇ ಕಮರಿ ಹೋಗಲಿರುವುದಂತೂ ಸತ್ಯ. ಇದು ಜಾತಿ ಎಫೆಕ್ಟ್ . . !.ಮನೆ ಮನೆಯಿಂದ ಚಂದಾ , ವಿವಿದ ರೀತಿಯ ಕಲೆಕ್ಷನ್ ಮಾಡುವ ಈ ಜಾತಿ ಸಂಘಟನೆಗಳು ಆ ಮನೆಗೆ ಸಂಕಷ್ಠ ಬಂದಾಗ ಸ್ಪಂದಿಸಬೇಡವೇ?.

ಇದೆಲ್ಲಾ ಜಾತಿ ಎಫೆಕ್ಟ್ . . . .!.

ಕಾಮೆಂಟ್‌ಗಳಿಲ್ಲ: