16 ನವೆಂಬರ್ 2010

ಜಗವು ನಿನ್ನ ಪ್ರೀತಿಸದು . !

“ಜಗವು ನಿನ್ನ ಪ್ರೀತಿಸಲಿಲ್ಲವೆಂದು ಹಳಿಯಬೇಡ , ನೀನು ಹೆತ್ತವರಿಗೆ ಮಗುವಾಗಿರಬಹುದು , ಆದರೆ ಜಗಕೆ ನೀನೂ ಒಬ್ಬ ಸ್ಪರ್ಧಿಯೇ. .!”.

ಮೊನ್ನೆ ಮನೆಯ ಕವಾಟಿನಲ್ಲಿ ಅದ್ಯಾವುದೋ ಪುಸ್ತಕ ಹುಡುಕುತ್ತಿದ್ದೆ , ಆಗ ಮಂಕುತಿಮ್ಮನ ಕಗ್ಗದ ಪುಸ್ತಕ ಕೈಗೆ ಸಿಕ್ತು. ಆವತ್ತು ಯಾವಾಗಲೋ ಅದನ್ನು ಖರೀದಿಸಿ ಅರ್ಧ ಓದಿ ಹಾಗೆಯೇ ಇರಿಸಿದ್ದೆ.ಮೊನ್ನೆ ಕೈಗೆ ಪುಸ್ತಕ ಸಿಕ್ಕಿದಾಗ ಸುಮ್ಮನೆ ನಿರಾಯಾಸವಾಗಿ ಓದುತ್ತಾ ಹೋದೆ.ನಿಜಕ್ಕೂ ಇಂದಿಗೆ ಮಂಕುತಿಮ್ಮನ ಕಗ್ಗ ಪ್ರಸ್ತುಕ ಅಂತ ಅನ್ನಿಸಿತು , ಮತ್ತೆ ಓದುತ್ತಾ ಹೋದಾಗ ಇದು ಸಾರ್ವಕಾಲಿಕ ಸತ್ಯ ಅಂತ ನಿರ್ಧರಿಸಿದೆ.


ನಿಮಿಷ ನಿಮಿಷಕ್ಕೆ ಬದಲಾಗುವ ಈ ಸಮಾಜದಲ್ಲಿ ನಾವೂ ಒಬ್ಬ ಸ್ಪರ್ಧಿಯಲ್ಲವೇ ,

ಮೊನ್ನೆ ಮಿತ್ರನೊಬ್ಬ ಹೇಳುತ್ತಲಿದ್ದ , ಆತ ಒಂದು ಉದ್ಯೋಗದಲ್ಲಿದ್ದ. ಆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಂತ ಆ ಯೋಚಿಸುತ್ತದ್ದ. ಅದರ ಬೆನ್ನಿಗೇ ಇನ್ನೊಬ್ಬ ಆತನ ಸಹೋದ್ಯೋಗಿ ರಾಜೀನಾಮೆ ನೀಡಿದ. ಸಂಸ್ಥೆಯು ಖಾಲಿಯಾದ ಹುದ್ದೆಗೆ ಅರ್ಜಿ ಆಹ್ವಾನಿಸಿತು. ಆ ಒಂದು ಹುದ್ದೆಗೆ ಬಂದ ಅರ್ಜಿ ಬರೋಬ್ಬರಿ 280 . .!. ನನ್ನ ಮಿತ್ರನಿಗೇ ಅಚ್ಚರಿಯಾಯಿತಂತೆ. ನನ್ನ ಹುದ್ದೆಯ ಮೇಲೆ 280 ಜನರ ಕಣ್ಣು ಇದೆ. .!. ಹಾಗಿದ್ದರೆ ಈ ಹುದ್ದೆ ಬಿಟ್ಟರೆ ಹೇಗೆ .?. ಸ್ಪರ್ಧಿಸಬೇಕು . . ಗೆಲ್ಲಬೇಕು. ಎಂದು ಆತ ರಾಜೀನಾಮೆ ನಿರ್ಧಾರವನ್ನು ಬಿಟ್ಟನಂತೆ . !. ಹಾಗಾಗಿ ಈ ಜಗದಲ್ಲಿ ನಾವೂ ಒಬ್ಬ ಸ್ಪರ್ಧಿಯಲ್ಲದೆ ಮತ್ತಿನ್ನೇನು .?. ನಾವೊಬ್ಬನಲ್ಲ ನಮ್ಮಂತೆ ಇನ್ನೂ ಹಲವರಿದ್ದಾರೆ. ನಾವೇನೂ ಅಲ್ಲ.

ಇಂತಹದ್ದೇ ನನಗೆ ಖುಷಿಕೊಟ್ಟ ಕಗ್ಗಗಳು ;

“ಅಕ್ಕಿಯಿಂದ ಅನ್ನವನ್ನು ಮಾಡಲು ಮೊದಲು ಕಂಡವನು ಯಾರು ?,ಅಕ್ಷರದಿಂದ ಬರಹವನ್ನು ಆರಂಭಿಸಿದವನು ಯಾರು . .? ಆದರೂ ಎಲ್ಲವೂ ನಾನು ಮಾಡಿದ್ದು ಎನ್ನುವುದರಲ್ಲಿ ಅರ್ಥವೇನಿದೆ . .?”

“ನೀನು ಉದ್ದಾರವಾಗಬೇಕಾದರೆ ಹೆಸರಿನ ಹುಚ್ಚು ಬಿಡು , ಲೋಕದಲ್ಲಿ ಮಗುವಾಗು, ಹಸುವಾಗು, ಗಿಡವಾಗು, ಪೊರಕೆಯಾಗು ಆಗ ನೀನು ಉದ್ದಾರವಾಗುತ್ತಿ.”

“ಭಾವಾವೇಶಕ್ಕೆ ಒಳಗಾಗುವಾಗ ಮನಸ್ಸು ಕುದುರೆಯಾಗಲಿ , ಬುದ್ದಿ ಅದರ ಸವಾರನಾಗಲಿ.ಮನಸ್ಸು - ಬುದ್ದಿ ಎರಡೂ ಸತಿಪತಿಗಳಾಗಲಿ ಆಗ ಜೀವನವು ವಿಜಯಯಾತ್ರೆಯಂತಾಗುತ್ತದೆ”

ಕಾಮೆಂಟ್‌ಗಳಿಲ್ಲ: